ಸೆಲೆಬ್ರಿಟಿಗಳಿಗೆ ಪಾಠವಾಗಲಿ ; ಹಾರ್ದಿಕ್‌-ರಾಹುಲ್‌ ಹಗುರ ಹೇಳಿಕೆ


Team Udayavani, Jan 12, 2019, 12:30 AM IST

hardik-pandya-kl-rahul-bcci.jpg

ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ನಡೆಸಿಕೊಡುವ ಕಾಫಿ ವಿದ್‌ ಕರಣ್‌ ಎಂಬ ರಿಯಾಲಿಟಿ ಶೋದಲ್ಲಿ ಯುವ ಕ್ರಿಕೆಟಿಗರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ. ಎಲ್‌. ರಾಹುಲ್‌ ಮಹಿಳೆಯರ ಕುರಿತಾಗಿ ನೀಡಿರುವ ಅಸಭ್ಯ ಹೇಳಿಕೆಗಳು ಈಗ ಭಾರೀ ವಿವಾದಕ್ಕೊಳಗಾಗಿದೆ. ಸ್ವತಃ ಬಿಸಿಸಿಐ ಮತ್ತು ಕ್ರಿಕೆಟ್‌ ತಂಡ ಇವರ ಹೇಳಿಕೆಗಳಿಂದ ಮುಜುಗರಕ್ಕೀಡಾಗಿವೆ. ನಾಯಕ ವಿರಾಟ್‌ ಕೊಹ್ಲಿ ಕ್ರಿಕೆಟಿಗರ ಹೇಳಿಕೆ ತಂಡದ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿ ಈ ವಿವಾದದಿಂದ ಮೆಲ್ಲನೆ ಜಾರಿಕೊಂಡಿದ್ದಾರೆ. ಹಾರ್ದಿಕ್‌ ಮತ್ತು ರಾಹುಲ್‌ ಅಮಾನತಿನ ಶಿಕ್ಷೆಗೂ ಗುರಿಯಾಗಿದ್ದಾರೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ನಡವಳಿಕೆಯೂ ಉನ್ನತವಾಗಿರಬೇಕೆಂಬುದನ್ನು ಈ ಕ್ರಿಕೆಟಿಗರು ಮರೆತದ್ದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ. 

ಕ್ರಿಕೆಟಿಗರನ್ನು , ಸಿನೇಮಾದವರನ್ನು ನಮ್ಮ ಸಮಾಜ ತುಸು ಹೆಚ್ಚೇ ಅನುಕರಿಸುತ್ತದೆ. ಅವರಿಗೆ ಅಪಾರ ಅಭಿಮಾನಿಗಳಿರುತ್ತಾರೆ. ಅದರಲ್ಲೂ ಯುವಜನತೆ ಅವರನ್ನು ಮಾದರಿ ಎಂದು ಒಪ್ಪಿಕೊಂಡಿರುತ್ತದೆ. ಇಂಥ ವ್ಯಕ್ತಿಗಳು ತಮ್ಮ ಮಾತು ಮತ್ತು ಕೃತಿಗಳಲ್ಲಿ ಮಾದರಿಯಾಗಿದ್ದರೆ ಅವರನ್ನು ಆರಾಧಿಸುವವರಿಗೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಆದರೆ ಸೆಲೆಬ್ರಿಟಿಗಳ ವಿಚಾರದಲ್ಲಿ ಎಲ್ಲ ಸಂದರ್ಭದಲ್ಲೂ ಈ ಮಾತನ್ನು ಹೇಳುವಂತಿಲ್ಲ. ಅನೇಕ ಸೆಲೆಬ್ರಿಟಿಗಳು ತುಂಬ ಕ್ಷುಲ್ಲಕವಾಗಿ ವರ್ತಿಸಿ ಟೀಕೆಗಳಿಗೂ, ನಗೆಪಾಟಲಿಗೂ ಈಡಾಗುತ್ತಿರುವುದನ್ನು ಆಗಾಗ ನೋಡುತ್ತಿರುತ್ತೇವೆ. ಇದೀಗ ರಾಹುಲ್‌ ಮತ್ತು ಹಾರ್ದಿಕ್‌ ಕೂಡಾ ದೇಶ ತಮ್ಮ ಮೇಲಿಟ್ಟ ಅಭಿಮಾನವನ್ನು ಬರೀ ಒಂದು ಹೇಳಿಕೆಯಿಂದಾಗಿ ಕಳೆದುಕೊಂಡಿದ್ದಾರೆ. 

ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದೇನೂ ಬಹಳ ದೊಡ್ಡ ಸಾಧನೆಯಲ್ಲ. ಅದರಲ್ಲಾಡಿದ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇಲ್ಲ ಎನ್ನುವ ವಾದ ಸರಿ. ರಿಯಾಲಿಟಿ ಶೋಗಳ ಹಿಂದಿನ ವಾಸ್ತವ ಏನು ಎಂದು ತಿಳಿದಿರುವವರು ಅವುಗಳನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅದರಲ್ಲೂ ಕಾಫಿ ವಿದ್‌ ಕರಣ್‌ನಂಥ ಕೆಲವು ಶೋಗಳು ಟಿಆರ್‌ಪಿ ಏರಿಸಿಕೊಳ್ಳುವ ಉದ್ದೇಶದಿಂದ ತೀರಾ ವೈಯಕ್ತಿಕ ವಿಚಾರಗಳನ್ನು ಕೆದಕುತ್ತವೆ. ದುರದೃಷ್ಟವೆಂದರೆ ಒಂದು ವರ್ಗದ ಪ್ರೇಕ್ಷಕರಿಗೆ ಇಂಥ ವಿಚಾರಗಳೇ ಹೆಚ್ಚು ಇಷ್ಟವಾಗುತ್ತವೆ. ದೇಶದಲ್ಲಿ ಇಂಥ ಪ್ರೇಕ್ಷಕರ ಸಂಖ್ಯೆಯೂ ಬಹಳ ದೊಡ್ಡದಿದೆ. ಅಗ್ಗದ ಮನರಂಜನೆಯಿಂದ ಬೇಗನೆ ಜನಪ್ರಿಯತೆ ಸಿಗುತ್ತದೆ ಎನ್ನುವ ಸೂತ್ರವೇ ಈ ಮಾದರಿಯ ರಿಯಾಲಿಟಿ ಶೋಗಳ ಯಶಸ್ಸಿನ ಮರ್ಮ. 

ಕಾಫಿ ವಿದ್‌ ಕರಣ್‌ ಈ ಸೂತ್ರವನ್ನು ತುಸು ಹೆಚ್ಚೇ ಅವಲಂಬಿಸಿದೆ. ಕರಣ್‌ ಜೋಹರ್‌ ಕೇಳುವ ಹೆಚ್ಚಿನ ಪ್ರಶ್ನೆಗಳು ಖಾಸಗಿ ವಿಚಾರಗಳಿಗೆ ಸಂಬಂಧಿಸಿರುತ್ತವೆ. ಅದರಲ್ಲೂ ಲೈಂಗಿಕ ಸಂಬಂಧದಂಥ ನಾಲ್ಕು ಗೋಡೆಗಳ ನಡುವಿನ ತೀರಾ ಖಾಸಗಿ ವಿಷಯಗಳನ್ನು ಟಿವಿ ಪರದೆಯ ಮೇಲೆ ಬಹಿರಂಗವಾಗಿ ಹೇಳಿಕೊಳ್ಳಲು ಪ್ರಚೋದಿಸುವುದು ಆರೋಗ್ಯಕರ ಕಾರ್ಯಕ್ರಮವಲ್ಲ. ಸೆಲೆಬ್ರಿಟಿಗಳ ಖಾಸಗಿ ವಿಚಾರಗಳನ್ನು ತಿಳಿದುಕೊಂಡು ವೀಕ್ಷಕರಿಗಾಗುವ ಲಾಭವಾದರೂ ಏನು? ಇಷ್ಟರ ತನಕ ಯಾರೂ ಈ ರಿಯಾಲಿಟಿ ಶೋ ವಿರುದ್ಧ ಕೇಸ್‌ ದಾಖಲಿಸದಿರುವುದೇ ಆಶ್ಚರ್ಯವುಂಟು ಮಾಡುತ್ತಿದೆ. 

ರಾಹುಲ್‌ ಮತ್ತು ಹಾರ್ದಿಕ್‌ ಪ್ರತಿಭಾವಂತ ಕ್ರಿಕೆಟಿಗರು ಎನ್ನುವುದರಲ್ಲಿ ಸಂಶಯವಿಲ್ಲ. ಇಬ್ಬರೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ತೋರಿಸಿದ್ದಾರೆ. ಇಬ್ಬರೂ ಲಕ್ಷಗಟ್ಟಲೆ ಅಭಿಮಾನಿಗಳನ್ನೂ ಹೊಂದಿದ್ದಾರೆ. ಇನ್ನೂ ಹುಡುಗು ಬುದ್ಧಿ , ತಿಳಿಯದೆ ಏನೋ ಮಾತನಾಡಿ ಬಿಟ್ಟಿದ್ದಾರೆ ಎಂದು ಅವರ ಪರವಾಗಿ ಅನುಕಂಪ ವ್ಯಕ್ತಪಡಿಸುವವರೂ ಸಾಕಷ್ಟು ಮಂದಿ ಇದ್ದಾರೆ. ಇದು ನಿಜವಾಗಿರಲೂಬಹುದು. ಆದರೆ ಸೆಕ್ಸ್‌ ನಂಥ ಖಾಸಗಿ ಪ್ರಶ್ನೆಗಳು ಎದುರಾದಾಗ ಅವುಗಳಿಗೆ ಉತ್ತರಿಸದೇ ಇರುವ ಅಥವಾ ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡಿ ಎನ್ನುವಷ್ಟು ಬುದ್ಧಿವಂತಿಕೆಯನ್ನು ಅವರು ತೋರಿಸಬಹುದಿತ್ತು. ಇದರ ಬದಲಾಗಿ ಈ ಪ್ರಶ್ನೆಗಳಿಗೆ ಹೆಮ್ಮೆಯಿಂದ ಉತ್ತರ ನೀಡಿದ್ದನ್ನು ಅಮಾಯಕತೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. 

ಹಾಗೆಂದು ಈ ಒಂದು ಘಟನೆಯಿಂದ ಈ ಇಬ್ಬರ ಕ್ರಿಕೆಟ್‌ ಬದುಕಿಗೆ ಹಾನಿಯಾಗಬಾರದು. ಈ ನೆಲೆಯಲ್ಲೇ ಬಿಸಿಸಿಐ ಲಘು ಶಿಕ್ಷೆ ವಿಧಿಸಿದೆ ಎನ್ನುವುದನ್ನು ಗಮನಿಸಬೇಕು. ಹೀಗಾಗಿ, ಶಿಕ್ಷೆ ಪ್ರಮಾಣ ಲಘುವಾಯಿತೆಂಬ ಕಾರಣಕ್ಕೆ, ತಪ್ಪು ಕೂಡ ಚಿಕ್ಕದ್ದು ಎಂದು ಭಾವಿಸಬೇಕಿಲ್ಲ. ರಾಜಕಾರಣಿಗಳು, ಸಿನೆಮಾ ತಾರೆಯರು, ಕ್ರೀಡಾಪಟುಗಳಿಗೆ ಅವರ ಪ್ರತಿ ನಡೆ-ನುಡಿಯನ್ನು ಗಂಭೀರವಾಗಿ ಗಮನಿಸುವ ಲಕ್ಷಾಂತರ ಅಭಿಮಾನಿಗಳಿರುತ್ತಾರೆ. ಹೀಗಾಗಿ ಪ್ರೌಢಿಮೆಯಿಂದ ವರ್ತಿಸುವ ಜವಾಬ್ದಾರಿ ಅವರ ಮೇಲಿರುತ್ತದೆ. ಆದರೂ ಪದೇ ಪದೆ ಇಂಥ ತಪ್ಪುಗಳು ಆಗುತ್ತಲೇ ಇರುತ್ತವೆ.  ಇನ್ನು ಮುಂದಾದರೂ ಸಾರ್ವಜನಿಕವಾಗಿ ಮಾತನಾಡುವಾಗ ತುಸು ಎಚ್ಚರಿಕೆ ವಹಿಸಬೇಕು ಎಂಬ ಪಾಠವನ್ನು ಕ್ರೀಡಾಪಟುಗಳೂ ಸೇರಿದಂತೆ ಉಳಿದ ಸೆಲೆಬ್ರಿಟಿಗಳು ಕಲಿತುಕೊಳ್ಳಬೇಕು. 

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.