ಚರ್ಚೆ ನಡೆಯಲಿ,ಕದನ ಬೇಡ 


Team Udayavani, Nov 13, 2017, 10:23 AM IST

258.jpg

ಬೆಳಗಾವಿಯಲ್ಲಿ ಸೋಮವಾರದಿಂದ ತೊಡಗಿ ಹತ್ತು ದಿನಗಳ ಪರ್ಯಂತ ನಡೆಯಲಿರುವ ಚಳಿಗಾಲ ಅಧಿವೇಶನ ಯಾವ ರೀತಿ ಇರಬಹುದು ಎನ್ನುವುದರ ಒಂದು ಅಂದಾಜು ಈಗಾಗಲೇ ಸಿಕ್ಕಿದೆ. ಎಲ್ಲ ಅಧಿವೇಶನಗಳಂತೆ ಈ ಅಧಿವೇಶನವೂ ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ಕದನಕ್ಕೆ ವೇದಿಕೆಯಾಗುವ ಸಾಧ್ಯತೆಯೇ ಹೆಚ್ಚು. ಇತ್ತೀಚೆಗಿನ ವರ್ಷಗಳಲ್ಲಿ ಅಧಿವೇಶನಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಸುವ ಪರಂಪರೆಯೇ ಕಣ್ಮರೆಯಾಗಿದೆ. ಸರಕಾರವನ್ನು ವಿಪಕ್ಷದವರು ದೂರುವುದು ಮತ್ತು ಸರಕಾರ ಅದಕ್ಕೆ ತಿರುಗೇಟು ನೀಡುವುದು ಇಷ್ಟಕ್ಕೆ ಸೀಮಿತಗೊಂಡಿರುವ ಅಧಿವೇಶನದಲ್ಲಿ ಕೆಲವೊಂದು ಮಸೂದೆಗಳು ಅಂಗೀಕಾರಗೊಂಡರೆ 

ಅದೇ ಸಾಧನೆ ಎಂಬ ಪರಿಸ್ಥಿತಿಯಿದೆ. ಇದು ಬರೀ ಕರ್ನಾಟಕ ಎಂದು ಮಾತ್ರವಲ್ಲ ಯಾವುದೇ ರಾಜ್ಯದ ಮತ್ತು ಸಂಸತ್ತಿನ ಇಂದಿನ ಅಧಿವೇಶನದ ಸ್ವರೂಪ. ವಿದ್ವತ್‌ ಭರಿತವಾದ ಚರ್ಚೆಗಳನ್ನು ಈಗಿನ ಜನಪ್ರತಿನಿಧಿಗಳಿಂದ ನಿರೀಕ್ಷಿಸುವುದು ಮೂರ್ಖತನವಾದೀತು. ಜನಪ್ರತಿನಿಧಿಗಳು ಸದನದ ಹೊರಗೆ ಮಾಡುವ ಆರೋಪಗಳನ್ನೇ ಸದನದ ಒಳಗೂ ಮಾಡುತ್ತಾರೆ. ಯಾರಿಗೂ ಜನರಿಗೆ ಉಪಯೋಗವಾಗುವಂತಹ ವಿಷಯಗಳ ಮೇಲೆ ಚರ್ಚೆ ನಡೆಸಬೇಕೆಂಬ ಕಾಳಜಿ ಇಲ್ಲ. ಒಟ್ಟಾರೆಯಾಗಿ ಪರಸ್ಪರರ ಕಾಲೆಳೆದು ಬೀಳಿಸಿ ಗೆದ್ದೆವು ಎಂದು ಬೀಗುವುದರಲ್ಲೇ ತೃಪ್ತಿ. ಹೀಗಾಗಿ ಅಧಿವೇಶನ ಎಂದರೆ ಮಾತಿನ ಚಕಮಕಿ, ಸಭಾಧ್ಯಧ್ಯಕ್ಷರ ಪೀಠದೆದುರು ಜಮಾಯಿಸಿ ಘೋಷಣೆಗಳನ್ನು ಕೂಗುವುದು ಮತ್ತು ಕಡೆಗೆ ಸಭಾತ್ಯಾಗ ಮಾಡುವುದು ಇಷ್ಟೇ ಆಗಿದೆ.

ಬೆಳಗಾವಿ ಅಧಿವೇಶನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಈ ಅವಧಿಯಲ್ಲಿ ಬೆಳಗಾವಿಯಲ್ಲಿ ನಡೆಸುತ್ತಿರುವ ಚಳಿಗಾಲದ 

ಕೊನೆಯ ಅಧಿವೇಶನ ಎನ್ನುವ ಕಾರಣಕ್ಕೆ ಮಾತ್ರವಲ್ಲದೆ ಇನ್ನೂ ಹಲವು ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿದೆ. ಮೌಡ್ಯ ನಿಷೇಧ ಕಾಯಿದೆ, ಬಡ್ತಿ ಮೀಸಲಿಗೆ ಸಂಬಂಧಪಟ್ಟಿರುವ ಸುಗ್ರೀವಾಜ್ಞೆ ಬದಲಿಗೆ ವಿಧೇಯಕ, ಪ್ರಾಣಿ ಹಿಂಸೆ ತಡೆ ಮಸೂದೆ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಮಂಡನೆಯಾಗ ಲಿವೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿಯಿರು ವುದರಿಂದ ಈ ಪೈಕಿ ಕೆಲವು ಮಸೂದೆಗಳನ್ನಾದರೂ ಅಂಗೀಕರಿಸಿಕೊಂಡು ಶಾಸನ ರೂಪದಲ್ಲಿ ಜಾರಿಗೆ ತರಲು ಸರಕಾರ ಪ್ರಯತ್ನಿಸಲಿದೆ. ಆದರೆ ಈ ಪೈಕಿ ಮೌಡ್ಯ ನಿಷೇಧ ಮತ್ತು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಮಸೂದೆ ಈಗಾಗಲೇ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ಇಂತಹ ಮಹತ್ವದ ಮಸೂದೆಗಳ ಕುರಿತು ಗಹನವಾದ ಚರ್ಚೆಯಾಗುವುದು ಅಗತ್ಯ. ಇನ್ನುಳಿದಂತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ, ಬಿಜೆಪಿ ಸರಕಾರದ ಅವಧಿಯಲ್ಲಾಗಿರುವ ವಿದ್ಯುತ್‌ ಖರೀದಿ ಹಗರಣದ ಮೇಲಿನ ಸದನ ಸಮಿತಿ ವರದಿ, ತೀವ್ರ ವಿವಾದಕ್ಕೀಡಾಗಿರುವ ಟಿಪ್ಪು ಜಯಂತಿ ಆಚರಣೆ, ಬೇಲೆಕೇರಿ ಕಬ್ಬಿಣ ರಫ್ತು ಹಗರಣದ ಎಸ್‌ಐಟಿ ತನಿಖೆ ಸೇರಿದಂತೆ ಹಲವು ವಿವಾದಾತ್ಮಕ ವಿಷಯಗಳಿವೆ.
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಿದ ಬಳಿಕ ಸಚಿವ ಜಾರ್ಜ್‌ ವಿರುದ್ಧ ಎಫ್ಐಆರ್‌ ದಾಖಲಾಗಿರುವುದು ಈ ಅಧಿವೇಶನದಲ್ಲಿ ಸರಕಾರ ಮತ್ತು ವಿಪಕ್ಷಗಳ ನಡುವೆ ದೊಡ್ಡ ಮಟ್ಟದಲ್ಲಿ ವಾಗ್ವಾದ ನಡೆಯುವ ಸಾಧ್ಯತೆಯಿದೆ. ಜಾರ್ಜ್‌ ರಾಜೀನಾಮೆಗೆ ಒತ್ತಾಯಿಸುವುದೇ ತನ್ನ ಪ್ರಮುಖ ಅಜೆಂಡಾ ಎಂದು ಬಿಜೆಪಿ ಈಗಾಗಲೇ ಸ್ಪಷ್ಟಪಡಿಸಿದೆ. ಇದೇ ವೇಳೆ ಯಾವ ಕಾರಣಕ್ಕೂ ಜಾರ್ಜ್‌ ರಾಜೀನಾಮೆ ನೀಡುವುದಿಲ್ಲ ಎಂದು ಸರಕಾರ ಹೇಳುತ್ತಿದೆ. ಮೊದಲ ದಿನವೇ ಈ ವಿಷಯ ಸದನದಲ್ಲಿ ಕಿಡಿಯೆಬ್ಬಿಸಿದರೂ ಆಶ್ಚರ್ಯವಿಲ್ಲ. ಸದ್ಯಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಇದು ಪ್ರತಿಷ್ಠೆಯ ವಿಷಯ. ಗದ್ದಲ ಇಡೀ ಅದಿವೇಶನವನ್ನೇ ಆಪೋಶನ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಮೂರೂ ಪಕ್ಷಗಳು ಅಧಿವೇಶನದಲ್ಲಿ ಪರಸ್ಪರರ ಮೇಲೆ ದಾಳಿ ಮಾಡಲು ಹತ್ತಾರು ಶಸ್ತ್ರಗಳನ್ನು ಸಜ್ಜಾಗಿಟ್ಟುಕೊಂಡಿವೆ. ಈ ಪೈಕಿ ಹೆಚ್ಚಿನವುಗಳು ಪರಸ್ಪರರ ಮೇಲಿರುವ ಆರೋಪಗಳು ಮತ್ತು ಹಗರಣಗಳು ಮಾತ್ರ. ರಾಜ್ಯದ ಸಮಸ್ಯೆ ಮತ್ತು ಅಭಿವೃದ್ಧಿಗೆ  ಸಂಬಂಧಿಸಿದ ವಿಚಾರಗಳಿಗೆ ಯಾರೂ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎನ್ನುವುದು ವಿಷಾದನೀಯ.

ಅಧಿವೇಶನಕ್ಕೆ ಹಾಜರಾಗಲು ಜನಪ್ರತಿನಿಧಿಗಳಿಗೆ ವಿಶೇಷವಾದ ಆಸಕ್ತಿ ಇಲ್ಲ ಎನ್ನುವುದು ಕಳೆದ ನಾಲ್ಕು  ವರ್ಷಗಳ ಅಂಕಿಅಂಶಗಳಿಂದ ತಿಳಿಯು ತ್ತದೆ. 2013ರಿಂದೀಚೆಗೆ ಬರೀ ಮೂವರು ಶಾಸಕರು ಮಾತ್ರ ಅಧಿವೇಶನದಲ್ಲಿ ಶೇ. 100 ಹಾಜರಾತಿ ಹೊಂದಿದ್ದಾರೆ. ಅಧಿವೇಶನಗಳಿಗೆ ಶಾಸಕರ ಹಾಜರಾತಿ ಯನ್ನು ಹೆಚ್ಚಿಸಲು ಉಭಯ ಸದನಗಳ ಸಭಾಪತಿಗಳು ಹಲವು ಕ್ರಮಗಳು ಕೈಗೊಂಡಿದ್ದರೂ ಫ‌ಲಿತಾಂಶ ಮಾತ್ರ ಆಶಾದಾಯಕವಾಗಿಲ್ಲ. ಬೆಳಗ್ಗೆ ಮತ್ತು ಸಂಜೆ ಹಾಜರಿ ಪುಸ್ತಕಕ್ಕೆ ಸಹಿ ಹಾಕುವುದನ್ನು ಕಡ್ಡಾಯಗೊಳಿಸಿದರೂ ಹಜರಾತಿ ಸುಧಾರಣೆಯಾಗಿಲ್ಲ. ಕಡ್ಡಾಯ ಹಾಜರಾತಿಗೆ ಕಾನೂನು ರಚಿಸಲು ಅವಕಾಶವಿಲ್ಲ. ಆದರೆ ಎಲ್ಲ ಪಕ್ಷಗಳು ತಮ್ಮ ಶಾಸಕರು ಅಧಿವೇಶನದಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಬಹುದು. ಸದನದಲ್ಲಿ ಕದನ ಬೇಡ ಚರ್ಚೆಯಾಗಲಿ ಎನ್ನುವುದು ಜನತೆಯ ಬಯಕೆ. ಜನಪ್ರತಿನಿಧಿಗಳಿಗೆ ಇದು ಅರ್ಥವಾದೀತೆ?

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.