ಲಸಿಕೆಯ ಸುತ್ತಮುತ್ತ ಪ್ರಯತ್ನ ಫ‌ಲಿಸಲಿ


Team Udayavani, Jul 17, 2020, 8:10 AM IST

ಲಸಿಕೆಯ ಸುತ್ತಮುತ್ತ ಪ್ರಯತ್ನ ಫ‌ಲಿಸಲಿ

ಕೋವಿಡ್ ಹಾವಳಿ ನಿಲ್ಲುವ ಸೂಚನೆಯಂತೂ ಸಿಗುತ್ತಿಲ್ಲ. ಭಾರತದಲ್ಲಂತೂ ನಿತ್ಯ ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿರುವುದು, ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ. ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿರುವ ಭಾರ ತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3.35 ಲಕ್ಷದಷ್ಟಿದೆ. ಇನ್ನೊಂದೆಡೆ ಅಮೆರಿಕ ದಲ್ಲಂತೂ ತಿಂಗಳುಗಳು ಕಳೆದರೂ ಸೋಂಕಿನ ವೇಗ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಈಗಾಗಲೇ ಆ ದೇಶದಲ್ಲಿ 1 ಲಕ್ಷ 40 ಸಾವಿರಕ್ಕೂ ಅಧಿಕ ಜನ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಎರಡನೇ ಹಾಟ್‌ಸ್ಪಾಟ್‌ ಬ್ರೆಜಿಲ್‌ನಲ್ಲೂ ಪರಿಸ್ಥಿತಿ ವಿಷಮಿಸು ತ್ತಲೇ ಇದೆ. ಇನ್ನು ಈ ಹಿಂದೆ ಕೋವಿಡ್ ಮುಕ್ತವೆಂದು ಕರೆದುಕೊಂಡಿದ್ದ ರಾಷ್ಟ್ರಗಳಲ್ಲೂ ವೈರಸ್‌ ಮತ್ತೆ ಹರಡಲು ಆರಂಭಿಸಿದೆ.

ಈ ಕಾರಣಕ್ಕಾಗಿಯೇ, ಈ ರೋಗವನ್ನು ಬೇರುಮಟ್ಟದಲ್ಲಿ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಅನೇಕ ರಾಷ್ಟ್ರಗಳು ಮುನ್ನಡೆಯುತ್ತಿವೆ. ಕೋವಿಡ್‌ ವಿರುದ್ಧದ ಲಸಿಕೆ ಅಭಿವೃದ್ಧಿಗಾಗಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹಗಲುರಾತ್ರಿ ಪ್ರಯೋಗಗಳು ನಡೆದಿವೆ. ಗಮನಾರ್ಹ ಸಂಗತಿ ಎಂದರೆ, ಭಾರತದಲ್ಲೂ ದೇಶೀಯ ವಾಗಿ ಅಭಿವೃದ್ಧಿಪಡಿಸಲಾದ ಲಸಿಕೆಯ ಮಾನವ ಕ್ಲಿನಿಕಲ್‌ ಪ್ರಯೋಗ ನಡೆದಿದೆ ಎನ್ನುವುದು. ಇದು ಯಶಸ್ವಿಯಾಗಲಿ ಎಂಬ ನಿರೀಕ್ಷೆ ದೇಶವಾಸಿಗಳದ್ದಾಗಿದೆ.

ಇಲ್ಲಿ ಹೇಳಲೇಬೇಕಾದ ಸಂಗತಿಯೆಂದರೆ ಭಾರತ ಕೋವಿಡ್‌ ವಿರುದ್ಧದ ಲಸಿಕೆಯ ಸಂಶೋಧನೆಯಲ್ಲಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಉತ್ಪಾದನೆಯಲ್ಲೂ ಮಹತ್ತರ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿ ರುವುದು. ಇಂದು ಜಗತ್ತಿನ 70 ಪ್ರತಿಶತ ಲಸಿಕೆಗಳು (ವಿವಿಧ ರೋಗಗಳಿಗಾಗಿ) ಭಾರತದಿಂದಲೇ ರಫ್ತಾಗಿರುವುವು. ಈ ಕಾರಣಕ್ಕಾಗಿಯೇ ಭಾರತವೆಂದಷ್ಟೇ ಅಲ್ಲ, ಕೊರೊನಾ ವಿರುದ್ಧ ಲಸಿಕೆ ಕಂಡುಹಿಡಿಯುವಲ್ಲಿ ಅನ್ಯ ದೇಶಗಳು ಸಫ‌ಲವಾ ದರೂ ತ್ವರಿತ ಹಾಗೂ ಬೃಹತ್‌ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಜಗತ್ತು ಭಾರತವನ್ನು ಅವಲಂಬಿಸಬಹುದು. ಈಗಾಗಲೇ ಕೋವಿಡ್‌ ವಿರುದ್ಧ ಲಸಿಕೆ ಸಂಶೋಧಿಸುತ್ತಿರುವ ವಿದೇಶಗಳ ಸಂಶೋಧನ ಸಂಸ್ಥೆಗಳು ಸಹ ಉತ್ಪಾದನೆಯ ವಿಚಾರದಲ್ಲಿ ಭಾರತದ ಕಂಪೆನಿಗಳೊಂದಿಗೆ ಒಪ್ಪಂದಗಳನ್ನೂ ಮಾಡಿಕೊಂಡಿವೆ.

ಈ ವಿಚಾರವಾಗಿ ಕೆಲವು ತಿಂಗಳುಗಳ ಹಿಂದೆ ಇಂಟರ್‌ ನ್ಯಾಶನಲ್‌ ವ್ಯಾಕ್ಸಿನ್‌ ಇನ್‌ಸ್ಟಿ ಟ್ಯೂಟ್‌ನ ನಿರ್ದೇಶಕ, ಪ್ರಖ್ಯಾತ ವಿಜ್ಞಾನಿ ಡಾ| ಜಿರೋಮ್‌ ಕಿಮ್‌ ಭಾರತವು ಕೋವಿಡ್‌ ವಿರುದ್ಧದ ವ್ಯಾಕ್ಸಿನ್‌ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಹೇಳಿದ್ದರು. ಈಗ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್‌ ಗೇಟ್ಸ್‌ ಸಹ ಇದೇ ಧಾಟಿಯಲ್ಲೇ ಮಾತನಾಡಿದ್ದಾರೆ.

ಭಾರತದ ಫಾರ್ಮಾ ಕಂಪೆನಿಗಳು ಈಗಾಗಲೇ ಇಡೀ ಜಗತ್ತಿಗೆ ಔಷಧಗಳನ್ನು ಪೂರೈಸುತ್ತಿವೆ. ಮುಂದಿನ ದಿನಗಳಲ್ಲಿ ಭಾರತದ ಫಾರ್ಮಾ ಉದ್ಯಮಗಳು ಜಗತ್ತಿಗೆ ಲಸಿಕೆಗಳನ್ನು ಪೂರೈಸುವ (ಕೋವಿಡ್‌ ವಿರುದ್ಧದ) ಆಶಾಭಾವನೆ ಇದೆ ಎಂದಿದ್ದಾರೆ ಗೇಟ್ಸ್‌. ಒಟ್ಟಿನಲ್ಲಿ ದೇಶ ಮತ್ತು ಜಗತ್ತು ಈ ಕೊರೊನಾ ವೈರಸ್‌ನಿಂದ ಆದಷ್ಟು ಬೇಗ ಮುಕ್ತವಾಗಲಿ, ಸಂಶೋಧನ ಕ್ಷೇತ್ರದ ಪ್ರಯತ್ನಗಳು ಸಫ‌ಲವಾಗಲಿ ಎಂದು ಆಶಿಸೋಣ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.