ಅಫ್ಘಾನಿಸ್ಥಾನದಲ್ಲಿ ಆದಷ್ಟು ಬೇಗನೇ ಶಾಂತಿ ನೆಲೆಸಲಿ


Team Udayavani, Aug 18, 2021, 6:00 AM IST

ಅಫ್ಘಾನಿಸ್ಥಾನದಲ್ಲಿ ಆದಷ್ಟು ಬೇಗನೇ ಶಾಂತಿ ನೆಲೆಸಲಿ

ಎಲ್ಲವೂ ನಾಟಕೀಯವೆಂಬಂತೆ ಕಳೆದ 10 ದಿನಗಳಲ್ಲೇ ಇಡೀ ಅಫ್ಘಾನಿಸ್ಥಾನ ದೇಶ ತಾಲಿಬಾನಿಗರ ಕಪಿಮುಷ್ಠಿಗೆ ಸಿಲುಕಿದೆ. ಅತ್ತ ಅಮೆರಿಕ ಸೇನೆ ಅಫ್ಘಾನಿಸ್ಥಾನದಿಂದ ಹೊರಹೋಗುವ ನಿರ್ಧಾರ ಮಾಡುತ್ತಿದ್ದಂತೆ, ತಮ್ಮ ಬಾಹುಗಳನ್ನು ಇನ್ನಷ್ಟು ವಿಸ್ತಾರ ಮಾಡಿಕೊಂಡ ತಾಲಿಬಾನ್‌ ಉಗ್ರರು, 10 ದಿನಗಳಲ್ಲಿ ಅಫ್ಘಾನಿಸ್ಥಾನದ ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಸಾಗಿ ಕಡೆಗೆ ಕಾಬೂಲ್‌ ಅನ್ನು ವಶಕ್ಕೆ  ತೆಗೆದುಕೊಂಡಿದ್ದಾರೆ.

ಈಗಷ್ಟೇ ಅಫ್ಘಾನಿಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗರು, ಕೊಂಚ ಬದಲಾಗಿದ್ದೇವೆ ಎಂದು ತೋರಿಸಲು ಯತ್ನಿಸುತ್ತಿ ದ್ದಾರೆ. ಹಿಂದೆ ಇದ್ದಂತೆ ಈಗ ನಾವಿಲ್ಲ. ಬದಲಾಗಿದ್ದೇವೆ, ಮಹಿಳೆಯರನ್ನು ಸಂತ್ರಸ್ತರ ರೀತಿ ನೋಡುವುದಿಲ್ಲ. ಅವರಿಗೂ ನಮ್ಮ ಸರಕಾರದಲ್ಲಿ ಸ್ಥಾನ ಕೊಡುತ್ತೇವೆ ಎಂಬ ರೀತಿಯ ಮಾತುಗಳನ್ನಾಡಿದ್ದಾರೆ. ಆದರೆ ತಮ್ಮ ಮಾತಿಗೆ ಎಷ್ಟು ಬದ್ಧರಾಗುತ್ತಾರೆ ಎನ್ನುವುದರ ಮೇಲೆ ಮುಂದಿನ ಎಲ್ಲ ಬೆಳವಣಿಗೆಗಳು ನಿಂತಿವೆ. ತಾಲಿಬಾನ್ನರ ಹುಟ್ಟು ಮತ್ತು ಅವರ ಈವರೆಗಿನ ನಡವಳಿಕೆಯನ್ನು  ನೋಡಿದರೆ ಸಹಜ­ವಾಗಿಯೇ ಇಂಥದ್ದೊಂದು ಆತಂಕ, ಭೀತಿ ವ್ಯಕ್ತವಾಗುತ್ತದೆ.

ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ತಾಲಿಬಾನ್‌ ಸರಕಾರದ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ಚೀನ, ಪಾಕಿಸ್ಥಾನ, ರಷ್ಯಾ, ಟರ್ಕಿ ದೇಶಗಳು ತಾಲಿಬಾನ್‌ ನೇತೃತ್ವದ ಸರಕಾರದ ಜತೆ ಕೆಲಸ ಮಾಡುವ ಇರಾದೆಯನ್ನೂ ವ್ಯಕ್ತಪಡಿಸಿವೆ. ಹಿಂದಿನ ಘನಿ ಸರಕಾರಕ್ಕಿಂತ ತಾಲಿಬಾನ್‌ ಆಡಳಿತವೇ ಉತ್ತಮ ಎಂಬರ್ಥದ ಹೇಳಿಕೆ ನೀಡುವ ಮೂಲಕ ರಷ್ಯಾ ದೇಶ, ಅಮೆರಿಕದ ವಿರುದ್ಧದ ನಿಲುವನ್ನು ಖಚಿತಪಡಿಸಿದೆ. ಮುಂದಿನ ದಿನಗಳಲ್ಲಿ  ಅಮೆರಿಕ ಸಾಮ್ರಾಜ್ಯಶಾಹಿ ವಿರುದ್ಧ ಈ ದೇಶಗಳು ಒಂದಾಗುವ ಲಕ್ಷಣವನ್ನು ಅಫ್ಘಾನಿಸ್ಥಾನದ ಬೆಳವಣಿಗೆಗಳು ಸ್ಪಷ್ಟಪಡಿಸುತ್ತಿವೆ.  ಹಾಗೆಯೇ ಉಳಿದ ದೇಶಗಳೂ ಈ ರೀತಿಯೇ ಅಫ್ಘಾನಿಸ್ಥಾನದ ತಾಲಿಬಾನ್‌ ಸರಕಾರದ ಜತೆ ಕೆಲಸ ಮಾಡಬೇಕಾದ ಪ್ರಮೇಯ ಬಂದರೂ ಬರಬಹುದು.

ಇದರ ನಡುವೆಯೇ, ಈ ಹಿಂದೆ ಅಫ್ಘಾನಿಸ್ಥಾನದ ಜತೆಗೆ ಮಧುರ ಬಾಂಧವ್ಯ ಇಟ್ಟುಕೊಂಡಿದ್ದ ಭಾರತ ಈಗ ಅತ್ಯಂತ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ. ಪಾಕಿಸ್ಥಾನ ಮತ್ತು ಚೀನ ಜತೆಗೂಡಿ ತಾಲಿಬಾನಿಗೆ ಬೆಂಬಲ ನೀಡಿರುವ ಈ ಸಂದರ್ಭದಲ್ಲಿ ಭಾರತ ತನ್ನ ಭೌಗೋಳಿಕ ರಣತಾಂತ್ರಿಕ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅಫ್ಘಾನ್ನರಿಗೆ ಇ-ವೀಸಾ ಪ್ರಕಟಿಸುವ ಮೂಲಕ ಭಾರತ ಮೊದಲ ರಾಜತಾಂತ್ರಿಕ ಹೆಜ್ಜೆಯನ್ನು ಇಟ್ಟಿದೆ.

ಇಡೀ ಜಗತ್ತಿನ ಆಶಯವೊಂದೇ. ಯಾವುದೇ ಕಾರಣಕ್ಕೂ  ಅಫ್ಘಾನಿಸ್ಥಾನದಲ್ಲಿ ಮತ್ತೆ ರಕ್ತ ಹರಿಯಬಾರದು. ತಾಲಿಬಾನ್‌ ಉಗ್ರರು ತಮ್ಮ ಹಿಂಸಾತ್ಮಕ ಮಾರ್ಗ ಬಿಡಬೇಕು. ಈ ರೀತಿ ಬಾಳುತ್ತಾರೆಯೇ ಎಂಬುದನ್ನು ಕಾದು ನೋಡುವುದಷ್ಟೇ ಜಗತ್ತಿನ ಕೆಲಸವಾಗಿದೆ. ಅಫ್ಘಾನಿಸ್ಥಾನ ಮತಾಂಧ ಶಕ್ತಿಗಳ ಕಪಿಮುಷ್ಟಿಯಿಂದ ಹೊರಬಂದು ಇತರೆ ಪ್ರಜಾಸತ್ತಾತ್ಮಕ ರಾಷ್ಟ್ರಗಳ ದಾರಿ ಹಿಡಿದರೆ ಮಾತ್ರ ಅದನ್ನು ನಂಬಬಹುದು.

ಆದರೆ ಇದು ತಾಲಿಬಾನ್‌ ಜೈಶ್‌ ಎ ಮೊಹಮ್ಮದ್‌, ಅಲ್‌ ಕಾಯಿದಾ, ಐಸಿಸ್‌ ಸೇರಿದಂತೆ ಇತರ ಉಗ್ರ ಸಂಘಟನೆಗಳ ಜತೆ ಹೇಗೆ ವ್ಯವಹರಿಸಲಿದೆ ಎಂಬುದರ ಮೇಲೆ ನಿಂತಿದೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.