ಮೊಬೈಲ್‌ ಮಾದಕ ವ್ಯಸನಕ್ಕಿಂತ ಕಡಿಮೆಯೇನಲ್ಲ: ಆಡಾಡುತ್ತಾ ಅಪಾಯ


Team Udayavani, Aug 2, 2017, 7:34 AM IST

02-ANKAKA-4.jpg

ಯುವ ಜನಾಂಗವನ್ನು ಆಕರ್ಷಿಸಲೆಂದೇ ಆನ್‌ಲೈನ್‌ನಲ್ಲಿ ಕೆಲವು ಅಪಾಯಕಾರಿ ಆಟಗಳು ಸೃಷ್ಟಿಯಾಗಿವೆ. ಬ್ಲೂವೇಲ್‌ ಚಾಲೆಂಜ್‌ ಆಧುನಿಕ ಆವಿಷ್ಕಾರದ ಅಡ್ಡ ಪರಿಣಾಮಕ್ಕೊಂದು ಉದಾಹರಣೆ. 

ಮುಂಬಯಿಯಲ್ಲಿ 14 ವರ್ಷದ ಬಾಲಕನೊಬ್ಬ ಸೋಮವಾರ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಬ್ಲೂವೇಲ್‌ ಚಾಲೆಂಜ್‌ ಅಥವಾ ಬ್ಲೂವೇಲ್‌ ಗೇಮ್‌ ಎಂಬ ಮೊಬೈಲ್‌ ಮೂಲಕ ಆಡುವ ಆನ್‌ಲೈನ್‌ ಆಟ ಕಾರಣ ಎಂದು ತಿಳಿದು ಬಂದ ಬಳಿಕ ಪೋಷಕರು ಗಾಬರಿಯಾಗಿದ್ದಾರೆ. ಸ್ಮಾರ್ಟ್‌ಫೋನ್‌ಗಳು ಈಗ ಹೆಚ್ಚಿನೆಲ್ಲ ಮಕ್ಕಳ ಕೈಗಳಲ್ಲಿವೆ. ಇಂಟರ್‌ನೆಟ್‌ ಡಾಟಾ ಬಹಳ ಅಗ್ಗವಾದ ಬಳಿಕ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆಯೂ ತೀವ್ರವಾಗಿ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಯಕಶ್ಚಿತ್‌ ಮೊಬೈಲ್‌ ಆಟವೊಂದು ಮಕ್ಕಳ ಪ್ರಾಣ ತೆಗೆಯಬಲ್ಲುದು ಎಂದರಿವಾದಾಗ ಪೋಷಕರು ಗಾಬರಿ ಆಗುವುದು ಸಹಜ. ಹದಿಹರೆಯದ ಮನಸ್ಸುಗಳು ಕೆಟ್ಟದ್ದರತ್ತ ಹೆಚ್ಚು ಆಕರ್ಷಿತವಾಗುತ್ತವೆ ಮತ್ತು ಕೆಟ್ಟದ್ದನ್ನೇ ಹೆಚ್ಚು ಸ್ವೀಕರಿಸುತ್ತವೆ. ಇಂತಹ ವರನ್ನು ಆಕರ್ಷಿಸಲೆಂದೇ ಆನ್‌ಲೈನ್‌ನಲ್ಲಿ ಕೆಲವು ಅಪಾಯಕಾರಿ ಆಟಗಳು ಸೃಷ್ಟಿಯಾಗಿವೆ. ಬ್ಲೂವೇಲ್‌ ಚಾಲೆಂಜ್‌ ಈ ಪೈಕಿ ಒಂದು. ಇದು ಆಧುನಿಕ ಆವಿಷ್ಕಾರದ ಅಡ್ಡ ಪರಿಣಾಮಕ್ಕೊಂದು ಉದಾಹರಣೆ. 

ಬ್ಲೂವೇಲ್‌ ಚಾಲೆಂಜ್‌ ಮಾದರಿಯಲ್ಲೇ ಕಳೆದ ವರ್ಷ ಪೋಕೆಮೋನ್‌ ಗೋ ಎಂಬ ಆನ್‌ಲೈನ್‌ ಆಟ ಭಾರೀ ಸುದ್ದಿ ಮಾಡಿತ್ತು. ಪೋಕೆಮೋನ್‌ ಗೋ ಆಡುವ ದೇಶಗಳಲ್ಲಿ ಭಾರತ 4ನೇ ಸ್ಥಾನದಲ್ಲಿತ್ತು. ಈ ಆಟ ಮಾಡಿರುವ ಅನಾಹುತಗಳು ಒಂದೆರಡಲ್ಲ. ಅಮೆರಿಕದಲ್ಲಿ ಬರೀ 10 ದಿನದಲ್ಲಿ ಪೋಕೆಮೋನ್‌ ಗೋ ಆಟದಿಂದಾಗಿ 1.10ಲಕ್ಷಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಯುವಕರು ಪೋಕೆಮೋನ್‌ ಗೋ ಆಡುತ್ತಾ ಸಮುದ್ರದೊಳಗೆ ಪ್ರವೇಶಿಸಿದ್ದರು. ಓಹಿಯೊದಲ್ಲಿ ತರುಣರ ಗುಂಪೊಂದು ಪೋಕೆಮೋನ್‌ ಗೋ ನೀಡಿದ ಚಾಲೆಂಜ್‌ ಹುಡುಕುತ್ತಾ ಅಣು ಸ್ಥಾವರದೊಳಗೆ ಅಕ್ರಮ ಪ್ರವೇಶ ಮಾಡಿದ್ದರು. ಹಲವು ದೇಶಗಳಲ್ಲಿ ಪೋಕೆಮೋನ್‌ ಗೋ ವಿರುದ್ಧ ಪ್ರತಿಭಟನೆ ನಡೆದಿತ್ತು. ಮುಂಬಯಿಯಲ್ಲೂ ಆಟ ಸುದ್ದಿ ಮಾಡಿತ್ತು. ವ್ಯಕ್ತಿಯೊಬ್ಬ ಪೋಕೆಮೋನ್‌ ಗೋ ಆಡುತ್ತಾ ತನ್ನ ದುಬಾರಿ ಕಾರನ್ನು ದಿಢೀರ್‌ ರಸ್ತೆ ಮಧ್ಯೆ ನಿಲ್ಲಿಸಿದಾಗ ಹಿಂಬದಿಯಿಂದ ರಿಕ್ಷಾ ಢಿಕ್ಕಿ ಹೊಡೆದಿತ್ತು. ಇದು ಭಾರತದಲ್ಲಿ ಪೋಕೆಮೋನ್‌ ಗೋ ಆಟದಿಂದಾಗಿ ಸಂಭವಿಸಿದ ಮೊದಲ ಅವಘಡ. ಅನಂತರ ಹಲವು ಸಲ ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆಗಳು ಕಾಣಿಸಿಕೊಂಡ ಬಳಿಕ ಪೊಲೀಸರು ಎಚ್ಚರಿಕೆ ನೀಡಬೇಕಾಯಿತು. ಪೋಕೆಮೋನ್‌ ಗೋ ಕ್ರೇಜ್‌ ಕಡಿಮೆಯಾಗುತ್ತಾ ಬಂದಂತೆ ಇದೀಗ ಹೋದೆಯಾ ಪಿಶಾಚಿ ಎಂದರೆ ಬಂದೆ ಕಿಟಿಕಿಯಲ್ಲಿ ಎಂಬಂತೆ ಅದಕ್ಕಿಂತಲೂ ಅಪಾಯಕಾರಿಯಾದ ಬ್ಲೂವೇಲ್‌ ಚಾಲೆಂಜ್‌ ಕಾಣಿಸಿಕೊಂಡಿದೆ.   ಬ್ಲೂವೇಲ್‌ ಚಾಲೆಂಜ್‌ ರಶ್ಯಾದಲ್ಲಿ ಹುಟ್ಟಿಕೊಂಡ ಪ್ರಾಣ ತೆಗೆಯುವ ಆಟ. ನಾಲ್ಕು ವರ್ಷಗಳ ಹಿಂದೆಯೇ ಈ ಆಟ ಶುರುವಾಗಿದ್ದರೂ ಜನಪ್ರಿಯವಾಗಿರುವುದು ಇತ್ತೀಚೆಗಿನ ಕೆಲ ತಿಂಗಳುಗಳಲ್ಲಿ. ರಶ್ಯಾವೊಂದರಲ್ಲೇ ನೂರಕ್ಕೂ ಹೆಚ್ಚು ಯುವಕರು ಈ ಆಟಕ್ಕೆ ಬಲಿಯಾಗಿದ್ದಾರೆ. ಜಗತ್ತಿನಾದ್ಯಂತ ಸುಮಾರು 300 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತಿವೆ. 50 ದಿನಗಳ ಆಟದಲ್ಲಿ ಕಡೆಯ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ಇರುತ್ತದೆ. ಆಟ ಎಷ್ಟು ಗಾಢವಾಗಿ ಯುವ ಮನಸ್ಸುಗಳನ್ನು ಪ್ರಭಾವಿಸುತ್ತದೆ ಎಂದರೆ ಸಮ್ಮೊಹಿನಿಗೆ ಒಳಗಾದವರಂತೆ ಅವರು ಟಾಸ್ಕ್ಗಳನ್ನು ಮಾಡುತ್ತಾ ಹೋಗುತ್ತಾರೆ. ಆಟ ಶುರು ಮಾಡಿದವನನ್ನು ರಶ್ಯಾ ಪೊಲೀಸರು ಹಿಡಿದು ಜೈಲಿಗಟ್ಟಿದ್ದಾರೆ. ಆದರೆ ಆಟವಿನ್ನೂ ಅಂತರ್ಜಾಲದಲ್ಲಿ ಯುವಕರನ್ನು ಸಾವಿನತ್ತ ಆಹ್ವಾನಿಸುತ್ತಿದೆ. 

ಇಂತಹ ಆಟಗಳನ್ನು ಸೃಷ್ಟಿಸುವುದರ ಹಿಂದೆ ವಿಕೃತ ಆನಂದ ಪಡೆಯುವ ವಿಲಕ್ಷಣ ಮನಃಸ್ಥಿತಿಯಲ್ಲದೆ ಬೇರೇನೂ ಇಲ್ಲ. ಇಂದು ಮುಂಬಯಿಗೆ ಬಂದ ಆಟ ನಾಳೆ ನಮ್ಮ ಮನೆಗೂ ಬರಬಹುದು. ಪೋಷಕರು ತಮ್ಮ ಮಕ್ಕಳ ಆನ್‌ಲೈನ್‌ ಚಟುವಟಿಕೆಗಳ ಮೇಲೆ ಸೂಕ್ಷ್ಮ ಗಮನ ಇರಿಸಿ ಇಂತಹ ಆಟಗಳ ಪ್ರಲೋಭನೆಗೆ ಬಲಿ ಬೀಳದಂತೆ ನೋಡಿಕೊಳ್ಳುವುದೊಂದೇ ದಾರಿ. ಯುವ ಜನತೆ ಹಾದಿ ತಪ್ಪದಂತೆ ನೋಡಿಕೊಳ್ಳುವ ಹೊಣೆ ಸರಕಾರ ಅಥವಾ ಸೈಬರ್‌ ಕ್ರೈಮ್‌ನಂತಹ ಇಲಾಖೆಗಳ ಮೇಲೂ ಇದೆ.

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.