ಈ ವರ್ಷ ಶಾಲೆ ಇಲ್ಲ; ಹೆಚ್ಚಿದ ಪೋಷಕರ ಜವಾಬ್ದಾರಿ


Team Udayavani, Nov 25, 2020, 6:10 AM IST

ಈ ವರ್ಷ ಶಾಲೆ ಇಲ್ಲ; ಹೆಚ್ಚಿದ ಪೋಷಕರ ಜವಾಬ್ದಾರಿ

ಕೋವಿಡ್‌ ಸಂಕಷ್ಟದ ಈ ಸಮಯದಲ್ಲಿ ಶಾಲೆಗಳನ್ನು ಆರಂಭಿಸುವ ವಿಚಾರದಲ್ಲಿ ಮೂಡಿದ್ದ ಗೊಂದಲಕ್ಕೆ ಈಗ ತೆರೆಬಿದ್ದಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ತರಗತಿಗಳನ್ನು ಡಿ.31ರವರೆಗೆ ಆರಂಭಿಸುವುದಿಲ್ಲ ಎಂದು ಸರಕಾರ ಘೋಷಿಸಿದೆ.

“”ಈ ವರ್ಷ ಶಾಲೆ ಇಲ್ಲ” ಅನ್ನುವ ಕಾರಣದಿಂದಲೇ ಪೋಷಕರ ಮತ್ತು ಶಾಲೆಗಳ (ಆ ಮೂಲಕ ಶಿಕ್ಷಕರ) ಜವಾಬ್ದಾರಿ ಹೆಚ್ಚಾಗಲಿದೆ. ಶಾಲೆ- ಕಾಲೇಜುಗಳು ತೆರೆಯುವುದಿಲ್ಲ ಅನ್ನುವ ನಿರ್ಧಾರದ ಪರಿಣಾಮವಾಗಿ, ಮಕ್ಕಳು ಇಡೀ ದಿನ ಮನೆಯಲ್ಲಿಯೇ ಉಳಿಯುವಂತಾಗಿದೆ. ಇಷ್ಟು ದಿನ, ಮೊಬೈಲ್‌ ಮುಟ್ಟಬೇಡಿ ಎಂದು ಆದೇಶಿಸುತ್ತಿದ್ದ ಪೋಷಕರು, ಇದೀಗ ಆನ್‌ಲೈನ್‌ ಕ್ಲಾಸ್‌ ನಡೆಯಲಿದೆ ಎಂಬ ಕಾರಣಕ್ಕೆ ತಾವೇ ಮುಂದಾಗಿ ಮಕ್ಕಳಿಗೆ ಮೊಬೈಲ್‌ ಕೊಡಬೇಕಾಗಿದೆ.

ಇದು ಸಂಪೂರ್ಣವಾಗಿ ಹೊಸ ರೀತಿಯ ಕಲಿಕೆ ಹಾಗೂ ಜೀವನಶೈಲಿ ಎನ್ನುವುದು ನಿರ್ವಿವಾದ. ಕೋವಿಡ್‌ ಕಾರಣದಿಂದಾಗಿ ಶಿಕ್ಷಣ ಹಾಗೂ ಸಾಮಾಜಿಕ ಸ್ತರದಲ್ಲಿ ಎದುರಾಗಿರುವ ಈ ಅಗಾಧ ಬದಲಾವಣೆಯ ನಿಜ ಪರಿಣಾಮವನ್ನು, ಆ ಪರಿಣಾಮದ ವ್ಯಾಪ್ತಿಯನ್ನು ಅಳೆಯುವಲ್ಲಿ ಇನ್ನೂ ಸಮಯ ಹಿಡಿಯಲಿದೆಯಾದರೂ, ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ.

ಯಾವುದೇ ಬದಲಾವಣೆಯೂ ಆರಂಭಿಕ ಸಮಯದಲ್ಲಿ ಕಷ್ಟಕರವಾಗಿಯೇ ಇರುತ್ತದೆ. ಅದು ತನ್ನೊಂದಿಗೆ ಹೊಸ ಸವಾಲುಗಳನ್ನೂ ಹೊತ್ತು ತರುತ್ತದೆ. ಈಗ ಮಕ್ಕಳು ಮನೆ ಯಲ್ಲೇ ಇರುವುದರಿಂದ ದಿನಗಳೆಯುವುದೂ ಅವರಿಗೆ ಸಮಸ್ಯೆಯಾಗಿದೆ. ಹೆಚ್ಚಿನ ಮಕ್ಕಳು, ಆನ್‌ ಲೈನ್‌ ತರಗತಿಯ ಕಾರಣಕ್ಕೆ ಈಗ ಸ್ವಂತ ಮೊಬೈಲ್‌ ಹೊಂದಿದ್ದಾರೆ. ಮಾತ್ರವಲ್ಲ; ಮೊಬೈಲ್‌ಗೆ ಇನ್ನಿಲ್ಲದಂತೆ ಅಂಟಿಕೊಳ್ಳಲಾರಂಭಿಸಿದ್ದಾರೆ ಎನ್ನುವುದು ಬಹುತೇಕ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅವರ ನಿದ್ರೆಯ ಅವಧಿಯಲ್ಲಿ, ಭಾವನೆಗಳಲ್ಲಿ ಏರುಪೇರಾಗುತ್ತಿದೆ ಎನ್ನುತ್ತಾರೆ ಪರಿಣತರು. 24 ಗಂಟೆಯೂ ಮನೆಯಲ್ಲೇ ಇರಬೇಕಾದ್ದರಿಂದ, ಒಂಟಿತನ, ಖನ್ನತೆಯ ಲಕ್ಷಣಗಳೂ ಅವರನ್ನು ಕಾಡುತ್ತಿವೆ. ಹಾಗಂತ, ಮಕ್ಕಳಿಂದ ಮೊಬೈಲ್‌ ಕಿತ್ತುಕೊಳ್ಳುವ ಅಥವಾ ಅವರನ್ನು ಶಿಕ್ಷಿಸುವ ಅಗತ್ಯವಿಲ್ಲ. ಮೊಬೈಲ್‌ ಬಳೆಕೆಯಲ್ಲಿ ಮಿತಿಯಿರಲಿ ಎಂಬುದನ್ನು ಅವರಿಗೆ ಅರ್ಥವಾಗುವ ಹಾಗೆ ಸೌಮ್ಯ ಮಾತುಗಳಲ್ಲಿ ಹೇಳಬೇಕು. ಇನ್ನೂ ಪೋಷಕರಿಗೂ ಸಹ ಮಕ್ಕಳ ಜತೆಗೆ ಸಮಯ ಕಳೆಯುವ ಅಪೂರ್ವ ಅವಕಾಶವೀಗ ಸಿಕ್ಕಿದೆ. ಬಿಡುವು ಸಿಕ್ಕಾಗೆಲ್ಲ ಮಕ್ಕಳೊಂದಿಗೆ ಮಾತುಕತೆಯ ಮೂಲಕ ಅವರ ಆತಂಕ, ಅನುಮಾನಗಳನ್ನು ಪರಿಹರಿಸಲು ಶ್ರಮಿಸುವಂತಾಗಲಿ.

ಹಳ್ಳಿಗಳಲ್ಲಿ ಇರುವ ಮಕ್ಕಳಿಗೇನೋ ಆಟವಾಡಲು ಸ್ಥಳಾವಕಾಶವಿರುತ್ತದೆ. ಆದರೆ ನಗರಗಳಲ್ಲಿ ಇರುವ ಮಕ್ಕಳಿಗೆ ಅಂಥ ಅವಕಾಶ ಸಿಗದೇ ಅವರು ಮೊಬೈಲ್‌ ದಾಸರಾಗಿಬಿಡುವ ಅಪಾಯ ಹೆಚ್ಚಾಗಿದೆ. ಈ ಸೂಕ್ಷ¾ವನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಮನೆಯಲ್ಲಿಯೇ ಇರುವ ಸಂದರ್ಭದಲ್ಲಿ ದಿನದ ವೇಳಾಪಟ್ಟಿ ಹೇಗಿದ್ದರೆ ಚೆಂದ ಎಂದು ( ಮಕ್ಕಳಿಂದಲೇ ಅಂಥದೊಂದು ಪಟ್ಟಿ ರೆಡಿ ಮಾಡಿಸುವುದು ಜಾಣತನ) ಒಂದು ಪಟ್ಟಿ ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಈ ಬದಲಾವಣೆಯ ಅನಿವಾರ್ಯತೆಯನ್ನು ಅವರಿಗೆ ಮನದಟ್ಟು ಮಾಡಿಸುವುದಕ್ಕೆ ಗಮನ ಕೊಡುವುದು ಮುಖ್ಯ.

ಟಾಪ್ ನ್ಯೂಸ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

7-rbi

Editorial: ರೆಪೊ ದರದಲ್ಲಿ ಯಥಾಸ್ಥಿತಿ: ಆರ್‌ಬಿಐ ಜಾಣ್ಮೆಯ ನಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.