ಸಮಾನ ಶುಲ್ಕ ಮಾತ್ರವಲ್ಲ, ಮಹಿಳಾ ಕ್ರಿಕೆಟ್‌ ಪಂದ್ಯಗಳೂ ಹೆಚ್ಚಾಗಬೇಕು


Team Udayavani, Oct 28, 2022, 6:20 AM IST

ಸಮಾನ ಶುಲ್ಕ ಮಾತ್ರವಲ್ಲ, ಮಹಿಳಾ ಕ್ರಿಕೆಟ್‌ ಪಂದ್ಯಗಳೂ ಹೆಚ್ಚಾಗಬೇಕು

ಗುರುವಾರ ಬೆಳಗ್ಗೆ ಭಾರತೀಯ ಮಹಿಳಾ ಕ್ರಿಕೆಟ್‌ ವಲಯಕ್ಕೆ ಅತ್ಯಂತ ಸಮಾಧಾನದ ಸುದ್ದಿಯೊಂದು ಲಭಿಸಿತು. ಅದನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಪ್ರಕಟಿಸಿದರು. ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟಿಗರಿಗೆ ಇನ್ನು ಮುಂದೆ ಪ್ರತೀ ಪಂದ್ಯಕ್ಕೂ ಪುರುಷರಿಗೆ ನೀಡುವಷ್ಟೇ ಶುಲ್ಕ ನೀಡಲಾಗುತ್ತದೆ. ಈ ರೀತಿಯ ಸಮಾನತೆಯನ್ನು ತರುವುದು ನನ್ನ ಕನಸಾಗಿತ್ತು, ಅದಕ್ಕೆ ನೆರವು ನೀಡಿರುವ ಎಲ್ಲರಿಗೂ ಧನ್ಯವಾದ ಎಂದು ಜಯ್‌ ಶಾ ಹೇಳಿಕೊಂಡಿದ್ದಾರೆ. ಇದು ಮಹಿಳೆಯರಿಗೆ ಒಂದು ಹಂತದ ಸಮಾಧಾನ ನೀಡಿದೆ. ಇದನ್ನು ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಕೂಡ ಹೊಗಳಿದ್ದಾರೆ.

ಇದುವರೆಗೆ ಪುರುಷರಿಗೆ ಪ್ರತೀ ಪಂದ್ಯದ ಶುಲ್ಕವಾಗಿ (ಟೆಸ್ಟ್‌ 15, ಏಕದಿನ 6, ಟಿ20 3 ಲಕ್ಷ ರೂ.) ಭಾರೀ ಮೊತ್ತವನ್ನು ನೀಡಲಾಗುತ್ತಿತ್ತು. ಮಹಿಳೆಯರಿಗೆ ಸಿಗುತ್ತಿದ್ದದ್ದು ಟೆಸ್ಟ್‌ಗೆ 2.5, ಏಕದಿನ ಮತ್ತು

ಟಿ20 ತಲಾ 1 ಲಕ್ಷ ರೂ. ಮಾತ್ರ. ಇನ್ನು ಮುಂದೆ ಈ ವ್ಯತ್ಯಾಸ ಇಲ್ಲವಾಗಲಿದೆ. ಆದರೆ ವಿಷಯ ಇಲ್ಲಿಗೇ ಮುಗಿದಿಲ್ಲ. ವಾಸ್ತವದಲ್ಲಿ ಮಹಿಳೆಯರು ವರ್ಷದಲ್ಲಿ ಆಡುವ ಕ್ರಿಕೆಟ್‌ ಪಂದ್ಯಗಳ ಸಂಖ್ಯೆ ಬಹಳ ಕಡಿಮೆ! ಪುರುಷರು ವರ್ಷಪೂರ್ತಿ ಅತಿಯಾಗಿ ಕ್ರಿಕೆಟ್‌ ಆಡುತ್ತಾರೆ. ಸಣ್ಣ ಅವಕಾಶ ಸಿಕ್ಕರೂ ಬಿಸಿಸಿಐ ಯಾವುದೋ ಕ್ರಿಕೆಟ್‌ ಸರಣಿಯನ್ನು ಹಮ್ಮಿಕೊಳ್ಳುತ್ತದೆ. ಅದೇ ಉತ್ಸಾಹವನ್ನು ಮಹಿಳೆಯರ ವಿಚಾರದಲ್ಲಿ ಬಿಸಿಸಿಐ ತೋರಿಲ್ಲ. ಮಹಿಳೆಯರು ಆಡುವ ಪಂದ್ಯ ಜಾಸ್ತಿಯಾದರೆ ಮಾತ್ರ ಅವರಿಗೆ ಸಿಗುವ ಶುಲ್ಕವೂ ಹೆಚ್ಚುತ್ತದೆ!

ಕೊರೊನಾ ಆರಂಭವಾದ ಮೇಲೆ ಮಹಿಳೆಯರಿಗೆ ಆಡಲು ಸಿಕ್ಕ ಕೂಟಗಳೇ ಕಡಿಮೆ. ಈಗೊಂದು ವರ್ಷದಿಂದ ಮಹಿಳಾ ಕ್ರಿಕೆಟ್‌ ಸ್ವಲ್ಪ ಜಾಸ್ತಿಯಾಗಿದ್ದರೂ ಹೇಳಿಕೊಳ್ಳುವಷ್ಟೇನಲ್ಲ. 2008ರಲ್ಲಿ ಐಪಿಎಲ್‌ ಆರಂಭವಾದರೂ ಇಲ್ಲಿಯವರೆಗೆ ಮಹಿಳಾ ಐಪಿಎಲ್‌ ನಡೆದಿರಲಿಲ್ಲ. ಅಂತೂ ಮುಂದಿನ ವರ್ಷದಿಂದ ಅದು ಆರಂಭವಾಗಲಿದೆ. ಟೆಸ್ಟ್‌ ಪಂದ್ಯಗಳಂತೂ ತೀರಾ ಕಡಿಮೆ ಎಂದೇ ಹೇಳಬೇಕು.

ಇನ್ನು ಮುಖ್ಯವಾಗಿ ಆಗಬೇಕಾಗಿರುವ ವಿಷಯವೊಂದಿದೆ. ಅದು ಸಾಧ್ಯವಾಗಬೇಕಾದರೆ ದೇಶದಲ್ಲಿ ಮಹಿಳಾ ಕ್ರಿಕೆಟ್‌ ಜನಪ್ರಿಯಗೊಳ್ಳಬೇಕು. ಈಗ ಬಿಸಿಸಿಐ ಪಂದ್ಯದ ಶುಲ್ಕದಲ್ಲಿ ಮಾತ್ರ ಸಮಾನತೆ ತಂದಿದೆ. ನಿಜವಾಗಲೂ ಸಮಾನತೆ ಬರಬೇಕಾಗಿರುವುದು ವಾರ್ಷಿಕ ವೇತನದಲ್ಲಿ! ಬಿಸಿಸಿಐ ಕೇಂದ್ರೀಯ ಗುತ್ತಿಗೆ ವ್ಯವಸ್ಥೆಯನ್ನು ಹೊಂದಿದೆ. ಅದನ್ನು ಹೊಂದಿದವರಿಗೆ ವಾರ್ಷಿಕ ವೇತನವನ್ನು ನಿಗದಿ ಮಾಡಿದೆ. ಪುರುಷರಿಗೆ ಎ+, ಎ, ಬಿ,ಸಿ ಎಂಬ ದರ್ಜೆಗಳನ್ನು ಮಾಡಿ, ಆ ದರ್ಜೆಯಲ್ಲಿ ಆಟಗಾರರಿಗೆ ಸ್ಥಾನ ನೀಡುತ್ತದೆ. ಈ ಲೆಕ್ಕಾಚಾರದಲ್ಲಿ ಕ್ರಮವಾಗಿ 7, 5, 3, 1 ಕೋಟಿ ರೂ.ಗಳನ್ನು ವೇತನವಾಗಿ ನೀಡುತ್ತದೆ. ಮಹಿಳೆಯರಿಗೆ ಮೂರು ದರ್ಜೆಯಿದೆ. ಇಲ್ಲಿ ಕ್ರಮವಾಗಿ 50, 30, 10 ಲಕ್ಷ ರೂ.ಗಳನ್ನು ನೀಡಲಾಗುತ್ತದೆ!

ಇಲ್ಲಿರುವ ಅಗಾಧ ವ್ಯತ್ಯಾಸವನ್ನು ಗಮನಿಸಿ. ಇದನ್ನು ಸರಿಮಾಡಬೇಕಾದರೆ ಸ್ವತಃ ಬಿಸಿಸಿಐಗೂ ಕಷ್ಟವಿದೆ. ಕಾರಣ ಮಹಿಳಾ ಕ್ರಿಕೆಟ್‌ಗೆ ಇಲ್ಲದ ಜನಪ್ರಿಯತೆ. ಆದರೆ ಇದನ್ನು ಸರಿ ಮಾಡುವ ಹೊಣೆಯೂ ಬಿಸಿಸಿಐಯದ್ದೇ, ಇದಕ್ಕೆ ಐಸಿಸಿ ಕೂಡ ಕೈಜೋಡಿಸಿ ಮಹಿಳಾ ಕ್ರಿಕೆಟನ್ನು ಜನಪ್ರಿಯ ಮಾಡಿದರೆ ಪರಿಸ್ಥಿತಿ ಬದಲಾಗಲಿದೆ.

ಟಾಪ್ ನ್ಯೂಸ್

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

7-rbi

Editorial: ರೆಪೊ ದರದಲ್ಲಿ ಯಥಾಸ್ಥಿತಿ: ಆರ್‌ಬಿಐ ಜಾಣ್ಮೆಯ ನಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.