ತೈಲ ಆಮದು ಕಗ್ಗಂಟನ್ನು ಬಿಡಿಸುವುದೆಂತು?

Oil Delivery Issues

Team Udayavani, Apr 26, 2019, 5:55 AM IST

36

ಇರಾನ್‌ನಿಂದ ಕಚ್ಚಾ ತೈಲ ಆಮದು ವಿಷಯದಲ್ಲಿ ಅಮೆರಿಕ ಅನೇಕ ದೇಶಗಳಿಗೆ ನಿರ್ಬಂಧ ಸಡಿಲಿಕೆ ಮಾಡಿತ್ತು. ಈಗ ಮೇ 2ನೇ ತಾರೀಕು ನಿರ್ಬಂಧ ಮತ್ತೆ ಜಾರಿಗೆ ಬರಲಿದ್ದು, ಭಾರತವೀಗ ಕಚ್ಚಾ ತೈಲ ಆಮದಿಗೆ ಬೇರೆ ರಾಷ್ಟ್ರಗಳತ್ತ ನೋಡುತ್ತಿದೆ. ಒಂದು ವೇಳೆ ಅದೇನಾದರೂ ಇರಾನ್‌ನಿಂದ ತೈಲ ಆಮದು ಮಾಡುವುದನ್ನು ಮುಂದುವರಿಸಿತೆಂದರೆ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಭಾರತದ ಒಟ್ಟು ತೈಲ ಆಮದಿನಲ್ಲಿ ಇರಾನ್‌ನ ಪಾಲು 10 ಪ್ರತಿಶತದಷ್ಟಿತ್ತು. ಹೀಗಾಗಿ ಸದ್ಯದ ವಿದ್ಯಮಾನವೆಲ್ಲ ಭಾರತದ ಪಾಲಿಗೆ ಸಂಕಷ್ಟ ತಂದೊಡ್ಡಿದೆ ಎನ್ನುವುದಂತೂ ನಿಜ. ಇವೆಲ್ಲದರಿಂದಾಗಿ ಪೆಟ್ರೋಲ್-ಡೀಸೆಲ್ನ ಬೆಲೆಯಲ್ಲಿ ಏರಿಕೆಯಾಗುತ್ತದಾ? ಆಮದು ದರಗಳು ಹೆಚ್ಚಾಗಿ ಖಜಾನೆಗೆ ಹೊರೆಯಾಗುತ್ತದಾ? ಸುಧಾರಿಸಿಕೊಳ್ಳುತ್ತಿರುವ ರೂಪಾಯಿಗೆ ಪೆಟ್ಟು ಬೀಳಬಹುದೇ ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿವೆ.

ಒಂದು ರೀತಿಯಲ್ಲಿ ಈ ಸಂಕಷ್ಟಗಳಿಗೆ ಅಮೆರಿಕವೇ ಕಾರಣ ಎನ್ನಬಹುದು. ಏಕೆಂದರೆ ಭಾರತ ಯಾವ ರಾಷ್ಟ್ರಗಳೊಂದಿಗೆ ದೀರ್ಘ‌ಕಾಲದಿಂದ ತೈಲ ವ್ಯವಹಾರ ನಡೆಸಿದೆಯೋ ಆ ರಾಷ್ಟ್ರಗಳೊಂದಿಗೆ ಈಗ ಅಮೆರಿಕ ತಿಕ್ಕಾಟಕ್ಕೆ ಇಳಿದಿದೆ. ಇರಾನ್‌ ಅಷ್ಟೇ ಅಲ್ಲದೆ, ವೆನಿಜುವೆಲಾ ಕೂಡ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಮೂರು ತಿಂಗಳಿಂದ ಅಮೆರಿಕ ವೆನುಜುವೆಲಾದ ಆಡಳಿತವನ್ನು ಕೆಳಕ್ಕುರುಳಿಸಿ ತನ್ನ ಕೈಗೊಂಬೆಯನ್ನು ಕುರ್ಚಿಯಲ್ಲಿ ಕೂರಿಸುವ ಪ್ರಯತ್ನದಲ್ಲಿ ತೊಡಗಿದೆ. ಈ ಸಮಯದಲ್ಲಿ ವೆನಿಜುವೆಲಾದೊಂದಿಗೂ ಭಾರತದ ತೈಲ ಆಮದು ಅಜಮಾಸು ನಿಂತೇ ಹೋಗಿದೆ. ಅನೇಕ ತೈಲ ರಿಫೈನರಿಗಳು ವೆನಿಜುವೆಲಾದಿಂದ ತೈಲ ಆಮದನ್ನು ನಿಲ್ಲಿಸಿವೆ. ಸಹಜವಾಗಿಯೇ, ಅಮೆರಿಕ ‘ಭಾರತದ ಈ ಸಹಯೋಗದಿಂದ ನಮಗೆ ಖುಷಿಯಾಗಿದೆ’ ಎನ್ನುತ್ತಿದೆ!

ಶತ್ರುರಾಷ್ಟ್ರಗಳನ್ನು ಹತ್ತಿಕ್ಕಲು ಅಮೆರಿಕ ಅನುಸರಿಸುವ ಈ ರೀತಿಯ ರಣತಂತ್ರಗಳಿಂದಾಗಿ ಭಾರತವಷ್ಟೇ ಅಲ್ಲ, ದೇಶದ ಅನೇಕ ರಾಷ್ಟ್ರಗಳು ಪರದಾಡುತ್ತಲೇ ಇವೆ. ಅನೇಕ ದೇಶಗಳ ಇಂಧನ ಅಗತ್ಯಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇರಾನ್‌ ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸಬೇಕು, ನಿಲ್ಲಿಸಿದರೆ ಅದರ ಮೇಲೆ ವಿಧಿಸಲಾಗಿರುವ ಆರ್ಥಿಕ ಪ್ರತಿಬಂಧಗಳನ್ನು ಸರಿಸಲಾಗುವುದು ಎಂದು 2015ರಲ್ಲಿ ಒಪ್ಪಂದವಾಗಿತ್ತು. ಈ ಕರಾರು ಬರಾಕ್‌ ಒಬಾಮ ಅವರ ಆಡಳಿತಾವಧಿಯಲ್ಲಿ ಆಗಿತ್ತು. ಆದರೆ ಕಳೆದ ವರ್ಷ ಡೊನಾಲ್ಡ್ ಟ್ರಂಪ್‌, ಇರಾನ್‌ ಒಪ್ಪಂದದ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ ಆರ್ಥಿಕ ಮತ್ತು ವ್ಯಾವಹಾರಿಕ ನಿರ್ಬಂಧಗಳನ್ನು ಹೇರಿಬಿಟ್ಟರು. ಆ ದೇಶದ ಅರ್ಥ್ಯವ್ಯವಸ್ಥೆಯನ್ನು ದುರ್ಬಲಗೊಳಿಸಲು ಟ್ರಂಪ್‌ ತೈಲ ಆಮದಿನ ಮೇಲೆ ನಿರ್ಬಂಧ ಹೇರಲು ಮುಂದಾದರು. ಇದೇ ವೇಳೆಯಲ್ಲೇ ಅನೇಕ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿದ್ದರಿಂದ, ಭಾರತ, ಚೀನ, ಜಪಾನ್‌, ಟರ್ಕಿ, ಇಟಲಿ, ದಕ್ಷಿಣ ಕೊರಿಯಾ ಮತ್ತು ತೈವಾನ್‌ಗೆ ತೈಲ ಆಮದು ಮಾಡಿಕೊಳ್ಳಲು 6 ತಿಂಗಳ ‘ವಿನಾಯಿತಿ’ ನೀಡಿದ್ದರು. ಈಗ ಈ ಅವಧಿ ಮೇ ತಿಂಗಳಿಗೆ ಮುಗಿಯುತ್ತಿದೆ. ಅಚ್ಚರಿಯ ಸಂಗತಿಯೆಂದರೆ, ಅವಧಿ ಮುಗಿದ ಮೇಲೂ ಯಾವುದಾದರೂ ರಾಷ್ಟ್ರ ಇರಾನ್‌ನೊಂದಿಗೆ ತೈಲ ವ್ಯಾಪಾರ ನಡೆಸಿದರೆ ಅದರ ವಿರುದ್ಧ ಕ್ರಮ ಜರುಗಿಸುವುದಾಗಿ ಟ್ರಂಪ್‌ ಬಹಿರಂಗವಾಗಿಯೇ ಬೆದರಿಕೆ ಒಡ್ಡುತ್ತಿದ್ದಾರೆ. ಅಮೆರಿಕದ ಈ ವರ್ತನೆಯನ್ನು ಎಲ್ಲಾ ರಾಷ್ಟ್ರಗಳೂ ಅನಿವಾರ್ಯವಾಗಿ ಸಹಿಸಿಕೊಳ್ಳುತ್ತಿವೆ.

ಇಲ್ಲಿ ಪ್ರಶ್ನೆ ಏನೆಂದರೆ, ಈಗ ಭಾರತವೇನು ಮಾಡಬೇಕು ಎನ್ನುವುದು. ಭಾರತವು ಇರಾನ್‌ನ ಮೂರನೇ ಅತಿದೊಡ್ಡ ತೈಲ ಖರೀದಿದಾರ ರಾಷ್ಟ್ರ. ಅದಕ್ಕಿಂತಲೂ ಹೆಚ್ಚಾಗಿ ರೂಪಾಯಿಯಲ್ಲೂ ಅದರೊಂದಿಗೆ ವ್ಯವಹರಿಸುತ್ತದೆ. ಭಾರತದ ಒಟ್ಟು ತೈಲ ಆಮದಿನಲ್ಲಿ ಇರಾನ್‌ ಮತ್ತು ವೆನಿಜುವೆಲಾದ ಒಟ್ಟು ತೈಲ ಪ್ರಮಾಣವೇ 18 ಪ್ರತಿಶತ. ಹೀಗಿರುವಾಗ, ಈಗ ಎದುರಾಗುವ ಕೊರತೆಯನ್ನು ನೀಗಿಸುವುದು ಹೇಗೆ ಮಾಡಿಕೊಳ್ಳುವುದು? ಇವೆಲ್ಲದರಿಂದಾಗಿ ಭಾರತವೀಗ ಸೌದಿ ಅರೇಬಿಯಾ, ಯುಎಇ, ಮೆಕ್ಸಿಕೋ, ಬ್ರೆಜಿಲ್, ಕೊಲಂಬಿಯಾ ಸೇರಿದಂತೆ ಇತರೆ ಪರ್ಯಾಯ ರಾಷ್ಟ್ರಗಳತ್ತ ದೃಷ್ಟಿ ಹರಿಸಿದೆ.

ಇನ್ನೊಂದು ಸಂಗತಿ ಏನೆಂದರೆ, ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್‌ನೊಂದಿಗೆ ಖಡಾಖಂಡಿತವಾಗಿ ಸಂಬಂಧವನ್ನು ಕಡಿದುಕೊಳ್ಳಲೂ ಭಾರತಕ್ಕೆ ಸಾಧ್ಯವಿಲ್ಲ. ಇರಾನ್‌ ಅನೇಕ ವರ್ಷಗಳಿಂದ ಭಾರತದ ಮಿತ್ರ ರಾಷ್ಟ್ರವಾಗಿದ್ದು, ಎರಡೂ ರಾಷ್ಟ್ರಗಳು ಚಬಹಾರ್‌ ಬಂದರು ಯೋಜನೆಯಲ್ಲಿ ಜೊತೆಯಾಗಿ ನಿಂತಿವೆ. ಒಟ್ಟಲ್ಲಿ ಅತ್ತ ಇರಾನ್‌ ಅನ್ನೂ ದೂರತಳ್ಳದೆ, ಇತ್ತ ಅಮೆರಿಕವನ್ನೂ ಎದುರುಹಾಕಿಕೊಳ್ಳದೆ, ಇನ್ನೊಂದೆಡೆ ಭಾರತದ ಆರ್ಥಿಕತೆಗೂ ಹೊರೆಯಾಗದಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಸವಾಲು ಭಾರತದ ಎದುರಿಗೆ ಇದೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.