ಚೀನಕ್ಕೆ ಬಿಸಿ ಮುಟ್ಟಿಸುವಲ್ಲಿ ಕ್ವಾಡ್‌ ಯಶಸ್ವಿ


Team Udayavani, May 25, 2022, 6:00 AM IST

ಚೀನಕ್ಕೆ ಬಿಸಿ ಮುಟ್ಟಿಸುವಲ್ಲಿ ಕ್ವಾಡ್‌ ಯಶಸ್ವಿ

ಇಂಡೋ ಪೆಸಿಫಿಕ್‌ ವಲಯದಲ್ಲಿ ಯಾವುದೇ ದೇಶದ ಆಕ್ರಮಣಕಾರಿತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ದಿಟ್ಟ ನಿಲುವಿನೊಂದಿಗೆ ಕ್ವಾಡ್‌ ಶೃಂಗ ಮುಕ್ತಾಯವಾಗಿದ್ದು, ಈ ಮೂಲಕ ಚೀನಗೆ ನೇರ ಎಚ್ಚರಿಕೆ ನೀಡುವಲ್ಲಿ ಇದು ಯಶಸ್ವಿಯಾಗಿದೆ. ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದ ನಡುವೆಯೇ ಈ ಶೃಂಗ ನಡೆದಿದ್ದು, ಜಗತ್ತಿನ ಶಾಂತಿಯ ಬಗ್ಗೆ ವಿಸ್ತೃತ ಚರ್ಚೆಯಾಗಿದೆ. ಹಾಗೆಯೇ ಅಮೆರಿಕ, ಭಾರತ, ಆಸ್ಟ್ರೇಲಿಯ ಮತ್ತು ಜಪಾನ್‌ ದೇಶಗಳು ಪರಸ್ಪರ ಸಹಕಾರದಿಂದ ಮುಂದಡಿ ಇಡಲು ನಿರ್ಧರಿಸಿದ್ದು ಇದೂ ಜಾಗತಿಕವಾಗಿ ನೋಡಿದರೆ ಉತ್ತಮ ಬೆಳವಣಿಗೆಯೇ.

ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನದ ಪಾರಮ್ಯ ಹೆಚ್ಚಾಗುತ್ತಿದೆ ಎಂಬುದನ್ನು ಮನಗಂಡೇ ಈ ಕ್ವಾಡ್‌ ಒಕ್ಕೂಟವನ್ನು ರಚಿಸಲಾಗಿದೆ ಎಂಬುದು ಸತ್ಯ. ಒಂದು ತನ್ನ ಶಸ್ತ್ರಾಸ್ತ್ರ, ಮಗದೊಂದು ಸಾಲ ನೀಡುವ ಭರದಲ್ಲಿ ದೇಶಗಳ ಆಂತರಿಕ ಭದ್ರತೆಗೆ ಮಾರಕವಾಗುವಂಥ ನಡೆಗಳನ್ನು ಚೀನ ಅನುಸರಿಸಿಕೊಂಡು ಬರುತ್ತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ಭಾರತದ ನೆರೆ-ಹೊರೆಯಲ್ಲಿರುವ ದೇಶಗಳು. ಸಾಲ ಕೊಟ್ಟಂತೆ ಮಾಡಿ ಅವುಗಳ ಮೇಲೆ ಹಿಡಿತ ಸಾಧಿಸುವುದು ಚೀನದ ಹೊಸ ವಸಾಹತುಶಾಹಿ ನೀತಿ. ಆದರೆ ಇಂದಿಗೂ ಅದೆಷ್ಟೋ ರಾಷ್ಟ್ರಗಳು ಚೀನದ ಈ ಮುಷ್ಠಿತ್ವದ ಬಗ್ಗೆ ಅರಿವಿಲ್ಲದೆ ಆ ದೇಶ ನೀಡುವ ಹಣದತ್ತ ಕೈಚಾಚುವುದು ದುರದೃಷ್ಟಕರ.

ಇದರ ಜತೆಯಲ್ಲೇ ಚೀನದ ಸನಿಹದಲ್ಲೇ ಇರುವ ತನ್ನದೇ ಭಾಗ ಎಂದು ಹೇಳಿಕೊಳ್ಳುತ್ತಿರುವ ತೈವಾನ್‌ ವಿಚಾರವಾಗಿಯೂ ಕ್ವಾಡ್‌ನಲ್ಲಿ ಪ್ರಸ್ತಾವವಾಗಿದೆ. ಸದ್ಯದಲ್ಲೇ ಚೀನ ಈ ದೇಶದ ಮೇಲೆ ಯುದ್ಧ ಸಾರುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿಯೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಸೋಮವಾರವೇ ತೈವಾನ್‌ ಪರ ನಿಲ್ಲುವುದಾಗಿ ಘೋಷಿಸಿದ್ದಾರೆ. ಒಂದು ವೇಳೆ ತೈವಾನ್‌ ಏನಾದರೂ ಚೀನ ವಶಕ್ಕೆ ಹೋದರೆ ಜಗತ್ತಿಗೆ ಆರ್ಥಿಕವಾಗಿ ಮತ್ತು ರಕ್ಷಣಾತ್ಮಕವಾಗಿಯೂ ದೊಡ್ಡ ಪೆಟ್ಟು ಎಂಬ ವಿಶ್ಲೇಷಣೆಯೂ ಇದೆ.

ಅತ್ತ ರಷ್ಯಾ ಕೂಡ ಉಕ್ರೇನ್‌ ಮೇಲಿನ ದಾಳಿ ನಿಲ್ಲಿಸುತ್ತಿಲ್ಲ. ಇದಾದ ಮೇಲೆಯೂ ಕ್ವಾಡ್‌ ಶೃಂಗ ನಡೆಯುವ ಹೊತ್ತಿಗೇ ಜಪಾನ್‌ ಸಮುದ್ರದ ಮೇಲೆ ಚೀನ ಮತ್ತು ರಷ್ಯಾದ ಯುದ್ಧ ವಿಮಾನಗಳು ಹಾರಾಟ ನಡೆಸಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇಡೀ ಜಗತ್ತೇ ಶಾಂತಿಗಾಗಿ ಅಪೇಕ್ಷೆ ಮಾಡುತ್ತಿರುವಾಗ ಇಂಥ ಘಟನೆಗಳು ಅಡ್ಡಗಾಲು ಇಡುವುದು ಖಂಡಿತ.

ಆದರೆ ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದಂತೆಯೇ ಚೀನ ಕೂಡ ತೈವಾನ್‌ ಮೇಲೆ ದಾಳಿ ಮಾಡುವ ಸಂಭವವಿದೆ. ಒಂದು ವೇಳೆ ದಾಳಿ ನಡೆಸಿದರೆ ಮುಂದೇನಾಗುತ್ತದೆ ಎಂಬುದು ಊಹಿಸುವುದೂ ಅಸಾಧ್ಯ. ಇಂಥ ಸನ್ನಿವೇಶದಲ್ಲಿ ಜಪಾನ್‌ ಸಮುದ್ರದಲ್ಲಿ ರಷ್ಯಾ ಮತ್ತು ಚೀನ ದೇಶಗಳ ಯುದ್ಧ ವಿಮಾನ ಹಾರಾಟ ಸಮರ್ಥನೀಯ ಅಲ್ಲವೇ ಅಲ್ಲ. ಈ ಕ್ವಾಡ್‌ ಶೃಂಗ ಭಾರತದ ಪಾಲಿಗೂ ಪ್ರಮುಖವಾದದ್ದು. ಚೀನದ ಆಕ್ರಮಣಕಾರಿ ಧೋರಣೆಯನ್ನು ಎದುರಿಸಬೇಕಾದರೆ ಇಂಥ ಗಟ್ಟಿಯಾದ ಒಕ್ಕೂಟ ಇರಲೇಬೇಕು. ಇದರ ಜತೆಗೆ ಚೀನ ಪ್ರಾಬಲ್ಯ ತಡೆಗಾಗಿ ಇಂಡೋ ಪೆಸಿಫಿಕ್ಸ್‌ ಎಕನಾಮಿಕ್‌ ಫ್ರೆಮ್‌ವರ್ಕ್‌ಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಕೇವಲ ರಕ್ಷಣಾತ್ಮಕವಾಗಿಯಲ್ಲದೇ ಆರ್ಥಿಕವಾಗಿಯೂ ಸದೃಢರಾದರೆ ಚೀನವನ್ನು ದಿಟ್ಟವಾಗಿಯೇ ಎದುರಿಸಬಹುದು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.