ಶಾಂಘೈ ಸಮ್ಮೇಳನ: ಭಾರತದ ನಿಲುವು ಸ್ವಾಗತಾರ್ಹ


Team Udayavani, Jun 12, 2018, 6:00 AM IST

x-41.jpg

ಚೀನದ ಖೀಂಗ್ಡಾವೊದಲ್ಲಿ ಜರಗಿದ ಎಂಟು ದೇಶಗಳ ಶಾಂಘೈ ಸಹಕಾರ ಸಂಘಟನೆ ಸಮ್ಮೇಳನದಲ್ಲಿ ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಅಂಕಿತ ಹಾಕಲು ನಿರಾಕರಿಸಿ ಭಾರತ ದಿಟ್ಟತನ ಮೆರೆದಿದೆ. ಸಮ್ಮೇಳನದಲ್ಲಿ ಮಾತನಾಡಿದ ಮೋದಿ ಚೀನದ ಈ ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದಂತೆ ಭಾರತದ ನಿಲುವು ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಸಂಪರ್ಕ ಯೋಜನೆಗಳನ್ನು ಭಾರತ ಬೆಂಬಲಿಸುತ್ತದೆ. ಆದರೆ ಇಂಥ ಯೋಜನೆಗಳು ದೇಶದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಬೇಕು. ಈ ಅಂಶವನ್ನೊಳಗೊಂಡ ಯೋಜನೆಗಳನ್ನು ಮಾತ್ರ ಭಾರತ ಬೆಂಬಲಿಸುತ್ತದೆ ಎನ್ನುವ ಅವರ ಹೇಳಿಕೆಯಲ್ಲಿ ಚೀನಕ್ಕೆ ನೇರವಾದ ಸಂದೇಶವಿದೆ. 

ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಪೂರ್ಣ ಸದಸ್ಯ ರಾಷ್ಟ್ರವಾಗಿ ಭಾಗವಹಿಸಿದ್ದು ಇದೇ ಮೊದಲು. ಜತೆಗೆ ಪಾಕಿಸ್ಥಾನವೂ ಇದೆ. ಉಳಿದ ಎಂಟು ದೇಶಗಳು ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಅಂಕಿತ ಹಾಕಿದರೆ ಭಾರತ ಮಾತ್ರ ಮತ್ತೂಮ್ಮೆ ತಿರಸ್ಕರಿಸಿದೆ. ಅಂತರಾಷ್ಟ್ರೀಯ ಯೋಜನೆಯೊಂದನ್ನು ದೇಶದಲ್ಲಿದ್ದುಕೊಂಡು ವಿರೋಧಿಸುವುದು ಬೇರೆ ಅಂತರಾಷ್ಟ್ರೀಯ ವೇದಿಕೆಯಲ್ಲಿದ್ದುಕೊಂಡು ವಿರೋಧಿಸುವುದು ಬೇರೆ. ದೇಶದಲ್ಲಾದರೆ ಇದಕ್ಕೆ ರಾಜಕೀಯ ಸೇರಿದಂತೆ ಹಲವು ಕಾರಣಗಳನ್ನು ಹೇಳಬಹುದು. ಆದರೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಮಾತನಾಡುವಾಗ ದೇಶದ ಹಿತರಕ್ಷಣೆಯೊಂದೇ ಮುಖ್ಯವಾಗಿರುತ್ತದೆ. 

ಬೆಲ್ಟ್ ಆ್ಯಂಡ್‌ ರೋಡ್‌ ಅಥವಾ ಒನ್‌ ಬೆಲ್ಟ್ ಒನ್‌ ರೋಡ್‌ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಕನಸಿನ ಯೋಜನೆ. ಮಧ್ಯ ಏಶ್ಯಾ, ಯುರೋಪ್‌, ಗಲ್ಫ್ ಮತ್ತು ಆಫ್ರಿಕಾ ಖಂಡಗಳ ದೇಶಗಳ ಜತೆಗೆ ಸಮುದ್ರ ಮತ್ತು ಭೂ ಮಾರ್ಗವಾಗಿ ವ್ಯಾಪಾರ ಸಂಬಂಧ ಬೆಸೆಯುವ ಬೃಹತ್‌ ಯೋಜನೆಯಿದು. 32 ಲಕ್ಷ ಕೋ. ರೂ. ವೆಚ್ಚದ ಈ ಯೋಜನೆಗೆ 80 ದೇಶಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವವನ್ನು ಪಡೆದುಕೊಳ್ಳುವಲ್ಲಿ ಚೀನ ಯಶಸ್ವಿಯಾಗಿದೆ. ಈ ಯೋಜನೆಯ ಒಂದು ರಸ್ತೆ ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುತ್ತಿದೆ ಎನ್ನುವುದೇ ಭಾರತದ ಕಳವಳಕ್ಕೆ ಕಾರಣ. ಚೀನದ ರಸ್ತೆ ಯೋಜನೆ ಈ ಭಾಗದಲ್ಲಿ ಹಾದು ಹೋದರೆ ವಿವಾದಿತ ಭೂಪ್ರದೇಶದ ಮೇಲೆ ಹಕ್ಕು ಸಾಧಿಸಲು ನಮಗೆ ಕಷ್ಟವಾಗಲಿದೆ. ಹೀಗಾಗಿಯೇ 2013ರಲ್ಲಿ ಚೀನ ಈ ಯೋಜನೆಯನ್ನು ಘೋಷಿಸಿದಾಗಲೇ ಭಾರತ ವಿರೋಧ ವ್ಯಕ್ತಪಡಿಸಿತ್ತು. ಇದರ ಹೊರತಾಗಿ ಯೂ ಚೀನ ಯೋಜನೆಯನ್ನು ಮುಂದುವರಿಸುತ್ತಿದೆ. ಇಂತಹ ಸಂದರ್ಭ ದಲ್ಲಿ ಚೀನದ ನೆಲದಲ್ಲಿ ನಿಂತುಕೊಂಡೇ ಯೋಜನೆಗೆ ನಮ್ಮ ವಿರೋಧವಿದೆ ಎಂದು ಹೇಳಿರುವುದು ಕೇಂದ್ರದ ದೃಢ ನಿಲುವನ್ನು ತೋರಿಸುತ್ತದೆ. 

ಒನ್‌ ಬೆಲ್ಟ್ ಒನ್‌ ರೋಡ್‌ ಯೋಜನೆ ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಎಂದಿಗೂ ಅಪಾಯಕಾರಿಯೇ. ಅದಲ್ಲದೆ ಹಿಂದೂ ಮಹಾಸಾಗರದ ಮೇಲಿರುವ ನಮ್ಮ ಪಾರಮ್ಯಕ್ಕೂ ಧಕ್ಕೆಯಾಗಲಿದೆ. ಚೀನ ಸಮುದ್ರ ಮಾರ್ಗದ ಮೇಲೆ ಹೆಚ್ಚೆಚ್ಚು ಹೂಡಿಕೆ ಮಾಡಿದಷ್ಟೂ ನಮ್ಮ ಹಿಡಿತ ಸಡಿಲವಾಗುವ ಅಪಾಯವಿದೆ. ಅಲ್ಲದೆ ಒಟ್ಟಾರೆಯಾಗಿ ಈ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆ ಢಾಳಾಗಿ ಗೋಚರಿಸುತ್ತಿದೆ. ವ್ಯಾಪಾರ ಸಂಬಂಧ ವರ್ಧನೆ ಎಂದು ಚೀನ ಹೇಳುತ್ತಿದ್ದರೂ ಒಳ ಉದ್ದೇಶವೇ ಬೇರೆ. ಹೆಚ್ಚಿನ ದೇಶಗಳನ್ನು ತನ್ನ ವ್ಯಾಪಾರ-ವ್ಯವಹಾರದ ಪಾಲುದಾರನನ್ನಾಗಿ ಮಾಡಿಕೊ ಳ್ಳುವ ಮೂಲಕ ಜಗತ್ತಿನ ದೊಡ್ಡಣ್ಣನಾಗುವ ಉದ್ದೇಶ ಕ್ಸಿ ಜಿನ್‌ಪಿಂಗ್‌ಗಿದೆ. ಕ್ಸಿ ಇತ್ತೀಚೆಗೆ ತನ್ನ ಅಧಿಕಾರವಧಿಯನ್ನು ಆಜೀವಪರ್ಯಂತ ವಿಸ್ತರಿಸಿಕೊಂಡಿ ರುವುದು ಕೂಡಾ ಈ ಒಂದು ಅನುಮಾನಕ್ಕೆ ಇಂಬು ಕೊಡುತ್ತಿದೆ. 

ಇದರ ಹೊರತಾಗಿಯೂ ಖೀಂಗ್ಡಾವೊ ಸಮ್ಮೇಳನ ಚೀನ ಭಾರತದ ದ್ವಿಪಕ್ಷೀಯ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎನ್ನುವುದು ಗಮನಾರ್ಹ ಅಂಶ. ಡೋಕ್ಲಾಂ ಬಿಕ್ಕಟ್ಟಿನ ಬಳಿಕ ಹದಗೆಟ್ಟಿದ್ದ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಸಿಗುವ ಎಲ್ಲ ಅವಕಾಶಗಳನ್ನು ಕೇಂದ್ರ ಸರಕಾರ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಕ್ಸಿ ಜತೆಗೆ ಮೋದಿ ವೈಯಕ್ತಿಕವಾದ ಸೌಹಾರ್ದ ಸಂಬಂಧವನ್ನೂ ಹೊಂದಿದ್ದು ರಾಜತಾಂತ್ರಿಕ ಸಂಬಂಧ ಸುಧಾರಣೆಯಲ್ಲಿ ಇದು ಕೂಡಾ ಪ್ರಮುಖ ಪಾತ್ರ ವಹಿಸಿದೆ. ನಾಲ್ಕು ವರ್ಷಗಳಲ್ಲಿ ಉಭಯ ನಾಯಕರು 14 ಸಲ ಭೇಟಿಯಾಗಿದ್ದಾರೆ ಹಾಗೂ ಈ ವರ್ಷದಲ್ಲೇ ಇನ್ನೆರಡು ಭೇಟಿಗಳು ಸಂಭವಿಸಲಿವೆ. ಇಂಥ ಸಹಕಾರ ಉಭಯ ದೇಶಗಳಿಗೂ ಹಿತವನ್ನುಂಟು ಮಾಡಬಹುದು. 
 

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.