ಪಾಕ್‌ಗೆ ನಡುಕ ಹುಟ್ಟಿಸಿದ ಟ್ರಂಪ್‌ ನಿರ್ಧಾರ:  ಭಾರತಕ್ಕೆ ಪ್ರಯೋಜನ


Team Udayavani, Jan 3, 2018, 1:04 PM IST

03-34.jpg

ಅಭಿವೃದ್ಧಿ ಮತ್ತು ಭದ್ರತೆಗೆ ನೀಡುತ್ತಿದ್ದ ಕೋಟಿಗಟ್ಟಲೆ ಡಾಲರ್‌ ನೆರವನ್ನು ಪಾಕಿಸ್ಥಾನ ಭಯೋತ್ಪಾದನೆ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂದು ತಡವಾಗಿ ಯಾದರೂ ಅಮೆರಿಕಕ್ಕೆ ಜ್ಞಾನೋದಯವಾಗಿರುವುದು ಭಾರತದ ಪಾಲಿಗೆ ಶುಭಸೂಚನೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಪಾಕಿಸ್ಥಾನದ ಮೇಲೆ ಹರಿಹಾಯ್ದಿರುವ ರೀತಿಯನ್ನು ನೋಡಿದರೆ ಮುಂದಿನ ದಿನಗಳು ಪಾಕ್‌ ಪಾಲಿಗೆ ದುಸ್ತರವಾಗುವ ಸಾಧ್ಯತೆ ಕಾಣಿಸುತ್ತದೆ. 15 ವರ್ಷಗಳಲ್ಲಿ ಪಾಕಿಸ್ಥಾನಕ್ಕೆ ಅಮೆರಿಕ 2.14 ಲಕ್ಷ ಕೋ. ರೂ. ನೆರವು ನೀಡಿದೆ. ಆದರೆ ಪ್ರತಿಯಾಗಿ ಪಾಕ್‌ ಕೊಟ್ಟಿರುವುದು ಬರೀ ಸುಳ್ಳು ಮತ್ತು ವಂಚನೆ ಯನ್ನು. ಅಪಾ^ನಿಸ್ಥಾನದಲ್ಲಿ ನಾವು ಉಗ್ರರ ವಿರುದ್ಧ ಹೋರಾಡುತ್ತಿದ್ದರೆ ಅದೇ ಉಗ್ರರಿಗೆ ಪಾಕ್‌ ಸಹಾಯ ಮಾಡಿ ನಮ್ಮ ವಿರುದ್ಧ ಎತ್ತಿಕಟ್ಟುತ್ತಿದೆ ಎಂದು ಧೂರ್ತ ಪಾಕ್‌ನ ಜನ್ಮ ಜಾಲಾಡಿದ್ದಾರೆ ಟ್ರಂಪ್‌. ಈ ಮಾತಿನಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ. ಒಂದು ವೇಳೆ ಅಮೆರಿಕ ಹಾಗೂ ಇನ್ನಿತರ ಶಕ್ತ ರಾಷ್ಟ್ರಗಳು 1947ರಿಂದೀಚೆಗೆ ನೀಡಿರುವ ಆರ್ಥಿಕ ನೆರವುಗಳನ್ನು ಪಾಕಿಸ್ಥಾನ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡಿದ್ದರೆ ಆ ದೇಶ ಇಂದು ಕನಿಷ್ಠ ಭಾರತಕ್ಕೆ ಸರಿಸಮಾನವಾಗಿಯಾದರೂ ನಿಲ್ಲಬೇಕಿತ್ತು. ಆದರೆ ಉಗ್ರವಾದಕ್ಕೆ ಕುಮ್ಮಕ್ಕು ನೀಡುವ ಕುಟಿಲ ನೀತಿಯನ್ನು ಅನುಸರಿಸಿದ ಕಾರಣ ಸಕಲ ಉಗ್ರ ಸಂಘಟ ನೆಗಳು ತವರು ನೆಲವಾಗಿ ಬದಲಾಗಿದೆ. ಸಿಕ್ಕಿದ ಅಂತರಾಷ್ಟ್ರೀಯ ನೆರವು ಗಳನ್ನೆಲ್ಲ ಉಗ್ರವಾದವನ್ನು ಪೋಷಿಸಲು ಬಳಸಿದ ಪರಿಣಾಮವಾಗಿ ಪಾಕ್‌ ಈಗಲೂ ಜಗತ್ತಿನ ದರಿದ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಪಾಕಿನಲ್ಲಿ ಈಗಲೂ ಹುಲುಸಾಗಿ ಏನಾದರೂ ಬೆಳೆಯು ತ್ತಿದ್ದರೆ ಅದು ಭಯೋತ್ಪಾದನೆ ಮಾತ್ರ. 

ಪಾಕಿಸ್ಥಾನವನ್ನು ಅಮೆರಿಕ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಮತ್ತು ನೆರವು ತಡೆ ಹಿಡಿಯುವುದು ಇದು ಮೊದಲೇ ನಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ಕಠಿಣ ಕ್ರಮ ಕೈಗೊಂಡಾಗಲೆಲ್ಲ ಪಾಕಿಸ್ಥಾನ ಹೇಗಾದರೂ ಮಾಡಿ ಪೂಸಿ ಹೊಡೆದು ನೆರವಿನ ನಿಧಿಯನ್ನು ಪಡೆದು ಕೊಳ್ಳುವಲ್ಲಿ ಸಫ‌ಲವಾಗುತ್ತಿತ್ತು. ಆದರೆ ಟ್ರಂಪ್‌ ಅಧ್ಯಕ್ಷರಾದ ಬಳಿಕ ಪಾಕ್‌ ಪಾಲಿಗೆ ಸಂಕಷ್ಟದ ದಿನಗಳು ಶುರು ವಾಗಿವೆ. ಭಾರತದ ಪರ ತುಸು ಹೆಚ್ಚೇ ಒಲವು ಹೊಂದಿರುವ ಟ್ರಂಪ್‌ ಪದೇ ಪದೇ ಪಾಕ್‌ಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಸಲ ಟ್ರಂಪ್‌ ಇಷ್ಟು ಕಠಿಣವಾಗಲು ಭಾರತ ಪ್ರೀತಿಗಿಂತಲೂ ಚೀನ ಒಡ್ಡುತ್ತಿರುವ ಸವಾಲು ಕಾರಣ. ಪಾಕ್‌ ಮೂಲಕ ಹಾದು ಹೋಗುವ ಚೀನಾ-ಪಾಕ್‌ ಆರ್ಥಿಕ ಕಾರಿಡಾರ್‌ ಭಾರತದ ಪಾಲಿಗೆ ಮಾತ್ರವಲ್ಲದೆ ಅಮೆರಿಕ ಪಾಲಿಗೂ ಬೆದರಿಕೆಯಾಗಿ ಪರಿಣಮಿಸಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಈ ಕಾರಿಡಾರ್‌ಗೆ ಭಾರತ ಈಗಾಗಲೇ ಪ್ರಬಲ ವಿರೋಧ ವ್ಯಕ್ತ¤ಪಡಿಸಿದೆ. ಈ ಯೋಜನೆ ಕಾರ್ಯಗತಗೊಂಡದ್ದೇ ಆದರೆ ಚೀನಕ್ಕೆ ನೇರವಾಗಿ ಅರಬಿ ಸಮುದ್ರ ಪ್ರವೇಶಿಸಲು ಸಾಧ್ಯವಾಗುತ್ತದೆ. ಅಮೆರಿಕಕ್ಕೆ ಕಳವಳವಿರುವುದು ಈ ಕಾರಣಕ್ಕೆ. ಹೀಗಾಗಿ ಪಾಕ್‌ ಆಟವನ್ನು ಮಟ್ಟ ಹಾಕಲು ದೊಡ್ಡಣ್ಣ ಅವಕಾಶ ಎದುರು ನೋಡುತ್ತಿದೆ. ಇದೇ ಕಾರಣದಿಂದ ಟ್ರಂಪ್‌ ಹರಿಹಾಯ್ದ ಬೆನ್ನಲ್ಲೇ ಪಾಕ್‌ ಬೆಂಬಲಕ್ಕೆ ಚೀನ ಧಾವಿಸಿ ಬಂದಿದೆ. 

15,000 ಕೋ. ರೂ. ನೆರವು ಎನ್ನುವುದು ಪಾಕ್‌ ಪಾಲಿಗೆ ದೊಡ್ಡ ಮೊತ್ತವೇ. ಈ ಸಲ ಟ್ರಂಪ್‌ ನಿರ್ಧಾರ ಪಾಕ್‌ ಸರಕಾರಕ್ಕೆ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಬುಧವಾರ ಸರಕಾರ ಉನ್ನತ ಮಟ್ಟದ ಸಭೆ ಕರೆದಿರುವುದೇ ಇದಕ್ಕೆ ಸಾಕ್ಷಿ. ತಾನು ಭಯೋತ್ಪಾದನೆಯನ್ನು ಬೆಂಬಲಿಸುತ್ತಿಲ್ಲ, ಬದಲಾಗಿ ಭಯೋತ್ಪಾದನೆ ನಿಗ್ರಹಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಪಾಕ್‌ ಹೇಳಿದರೆ ಉಳಿದವರು ಬಿಡಿ ಪಾಕಿಸ್ಥಾನದವರೇ ನಂಬಲು ತಯಾರಿಲ್ಲ. ಭಯೋತ್ಪಾ ದನೆಯ ಮೂಲಕ ಭಾರತಕ್ಕೆ ಇನ್ನಿಲ್ಲದ ಕಾಟ ಕೊಟ್ಟು ಕಾಶ್ಮೀರವನ್ನು ಕಿತ್ತುಕೊಳ್ಳುವುದೇ ಪಾಕಿನ ಮುಖ್ಯ ಕಾರ್ಯತಂತ್ರ. ಹೀಗಾಗಿ ಜಾಗತಿಕ ಭಯೋತ್ಪಾದಕರೆಂದೇ ಘೋಷಿತರಾಗಿರುವ ಹಾಫಿಜ್‌ ಸಯೀದ್‌, ಅಜರ್‌ ಮೆಹಮೂದ್‌ನಂತಹ ಕಡು ಪಾತಕಿಗಳು ಮುಕ್ತವಾಗಿ ಓಡಾಡಿಕೊಂಡು ಸಭೆಗಳನ್ನು ನಡೆಸುತ್ತಿದ್ದರೂ ಅಲ್ಲಿನ ಸರಕಾರ ಅವರನ್ನು ಹಿಡಿದು ಜೈಲಿಗೆ ತಳ್ಳುವ ಬದಲಾಗಿ ಪರೋಕ್ಷವಾಗಿ ಸಕಲ ಸಹಾಯಗಳನ್ನು ಮಾಡುತ್ತಿದೆ. ನೇರ ಯುದ್ಧ ಮಾಡಿ ಜಯಿಸಲು ಆಗುವುದಿಲ್ಲ ಎಂದು ಅರಿವಿರುವುದರಿಂದ ಭಯೋತ್ಪಾದಕರನ್ನು ಛೂ ಬಿಡುವುದು ಪಾಕಿನ ರಣಹೇಡಿ ತಂತ್ರ. ಇದಕ್ಕೆಲ್ಲ ಅಮೆರಿಕ ಸೇರಿದಂತೆ ಹಲವು ದೇಶಗಳು ಕೊಡುತ್ತಿದ್ದ ಹಣ ಬಳಕೆಯಾಗು ತ್ತಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ತಳೆದಿರುವ ಬಿಗು ನಿಲುವಿನಿಂದ ಭಾರತಕ್ಕೆ ಪ್ರಯೋಜನವಿದೆ. ಟ್ರಂಪ್‌ ಪರಮ ತಿಕ್ಕಲನಾಗಿದ್ದರೂ ಪಾಕಿಸ್ಥಾನದ ಸಂದರ್ಭ ದಲ್ಲಿ ಈ ತಿಕ್ಕಲುತನದಿಂದ ನಮಗೆ ಲಾಭವೇ ಇದೆ.

ಟಾಪ್ ನ್ಯೂಸ್

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.