ಕೋವಿಡ್ ಕೋಲಾಹಲದಿಂದಲೂ ಬುದ್ಧಿ ಕಲಿಯದ ಪಾಕಿಸ್ಥಾನ


Team Udayavani, Apr 12, 2020, 11:43 PM IST

ಕೋವಿಡ್ ಕೋಲಾಹಲದಿಂದಲೂ ಬುದ್ಧಿ ಕಲಿಯದ ಪಾಕಿಸ್ಥಾನ

ಈ ಸಮಯದಲ್ಲಿ ಇಡೀ ಪ್ರಪಂಚವೇ ಕೋವಿಡ್ ವಿರುದ್ಧದ ಯುದ್ಧದಲ್ಲಿ ನಿರತವಾಗಿದೆ. ಭಾರತದಂತೆಯೇ, ನೆರೆ ರಾಷ್ಟ್ರ ಪಾಕಿಸ್ಥಾನ ಕೂಡ ಕೋವಿಡ್ ಗ್ರಸ್ತವಾಗಿದೆ. ಆದರೆ ಇಂಥ ಪರಿಸ್ಥಿತಿಯಲ್ಲೂ ಪಾಕಿಸ್ಥಾನ ತನ್ನ ಕೆಟ್ಟ ಚಾಳಿಯನ್ನು ಬಿಡುತ್ತಿಲ್ಲ. ತನ್ನ ದೇಶವಾಸಿಗಳ ಸುರಕ್ಷತೆಗಿಂತಲೂ ಹೆಚ್ಚಾಗಿ ಅದಕ್ಕೆ ಭಾರತಕ್ಕೆ ತೊಂದರೆ ಕೊಡುವುದೇ ಆದ್ಯತೆಯಾಗಿದೆಯೇನೋ. ಇದರ ಪರಿಣಾಮವಾಗಿ, ಗಡಿಯಲ್ಲಿ ಪಾಕಿಸ್ಥಾನದೊಳಗಿಂದ ಉಗ್ರರು ಭಾರತಕ್ಕೆ ನುಸುಳುವ ಪ್ರಯತ್ನ ನಡೆಸುತ್ತಿದ್ದಾರೆ.

ಜಮ್ಮು- ಕಾಶ್ಮೀರದ ಕುಪ್ವಾರಾ ನಿಯಂತ್ರಣ ರೇಖೆಯ ಆ ಬದಿಯಿಂದ ಉಗ್ರರು ನುಸುಳಲು ಪ್ರಯತ್ನಿಸುತ್ತಲೇ ಇದ್ದಾರೆ. ಕಳೆದೊಂದು ವಾರದಿಂದಲೂ ಅವರಿಂದ ಇಂಥದ್ದೊಂದು ಪ್ರಯತ್ನ ನಡೆದೇ ಇತ್ತು. ಕಳೆದ ಶುಕ್ರವಾರವೂ ಕೆಲವು ಉಗ್ರರು ಭಾರತೀಯ ಸೀಮೆಯೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದರು. ಅವರಲ್ಲಿ ನಾಲ್ವರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

ಈಗ ಮತ್ತೆ ದೇಶದೊಳಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದ 5 ಉಗ್ರರನ್ನೂ ಭಾರತೀಯ ಸೇನೆ ಹೊಡೆದುರುಳಿಸಿದೆ. ದುರದೃಷ್ಟವಶಾತ್‌, ಈ ಹೋರಾಟದಲ್ಲಿ ನಮ್ಮ ಐವರು ಸೈನಿಕರು ವೀರಮರಣವಪ್ಪಿದ್ದಾರೆ. ಭಾರತಕ್ಕೆ ತೊಂದರೆ ಕೊಡುವ ಅವಕಾಶವನ್ನು ಪಾಕಿಸ್ಥಾನದ ಸೇನೆ ಮತ್ತು ಸರಕಾರ ಹುಡುಕುತ್ತಲೇ ಇರುತ್ತದೆ.

ಅದರಲ್ಲೂ ಕಾಶ್ಮೀರದಿಂದ ಆರ್ಟಿಕಲ್‌ 370 ತೆಗೆದುಹಾಕಿದ ಅನಂತರದಿಂದಂತೂ ಪಾಕಿಸ್ಥಾನಿ ಸೇನೆ-ಸರ್ಕಾರಕ್ಕೆ ಹುಚ್ಚೇ ಹಿಡಿದಂತಾಗಿದೆ. ಈ ಕಾರಣದಿಂದಲೇ ಉಗ್ರರನ್ನು ನುಗ್ಗಿಸಿ, ಭಾರತದಲ್ಲಿ ಅಸ್ಥಿರತೆ ಉಂಟುಮಾಡಲು ನಿರಂತರ ಪ್ರಯತ್ನಿಸುತ್ತಲೇ ಇವೆ.

ಹಾಗೆಂದು ಪಾಕಿಸ್ಥಾನದ ಕಪಟತನದ ಪ್ರದರ್ಶನ ಹೊಸತೇನೂ ಅಲ್ಲವಾದರೂ, ಈಗ ಕೋವಿಡ್ ನಿಂದ ಅದೂ ಕೂಡ  ಹೈರಾಣಾಗಿದೆ. ಇಂಥ ಹೊತ್ತಲ್ಲಿ ತಮ್ಮ ಜನರೆಡೆಗೆ ವೈದ್ಯಕೀಯ ಸೇವೆಯನ್ನು ಕೊಂಡೊಯ್ಯುವುದಕ್ಕಿಂತ, ಭಾರತಕ್ಕೆ ಉಗ್ರರನ್ನು ಕಳುಹಿಸುವುದರಲ್ಲಿ ನಿರತರಾಗಿರುವುದನ್ನು ನೋಡಿದಾಗ, ಆ ದೇಶದ ಮಾನಸಿಕತೆ ಎಷ್ಟೊಂದು ಹಾಳಾಗಿದೆ, ವಿಷಪೂರಿತವಾಗಿದೆ ಎನ್ನುವುದು ಅರ್ಥವಾಗುತ್ತದೆ.

ಈ ಸಮಯದಲ್ಲಿ ಕಾಶ್ಮೀರ ಸೇರಿದಂತೆ ಭಾರತದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಎಲ್ಲೆಡೆಯೂ ಪೊಲೀಸರು ಮತ್ತು ಸುರಕ್ಷಾ ದಳಗಳ ಕಣ್ಗಾವಲಿದೆ. ಜನರು ಮನೆಯಿಂದ ಹೊರಗೇ ಬರುತ್ತಿಲ್ಲ. ರಸ್ತೆಗಳಲ್ಲಿ ವಾಹನಗಳೂ ಕಾಣಿಸುತ್ತಿಲ್ಲ. ನಮ್ಮ ಸೇನೆಗೆ ಇದರಿಂದಾಗಿ ಗಡಿಭಾಗದತ್ತ ಹದ್ದಿನ ಕಣ್ಣಿಡಲು ಸಾಧ್ಯವಾಗುತ್ತಿದೆ.

ಇದೆಲ್ಲ ಅರಿವಿದ್ದರೂ, ಪಾಕಿಸ್ಥಾನ ಉಗ್ರರನ್ನು ನುಸುಳಿಸಲು ಪ್ರಯತ್ನಿಸುತ್ತಿದೆ ಎಂದರೆ, ಖಂಡಿತ ಇದು ಅದರ ರಣನೀತಿಯಂತೂ ಅಲ್ಲ, ಬದಲಾಗಿ ಅದರ ಹುಚ್ಚಾಟದ ಪರಮಾವಧಿ ಎನ್ನಬೇಕಾಗುತ್ತದೆ. ಒಂದೆಡೆ ಪಾಕಿಸ್ಥಾನದಲ್ಲಿ ಉಗ್ರರನ್ನೆಲ್ಲ ಪೋಷಿಸುತ್ತಾ, ಇನ್ನೊಂದೆಡೆ ಜಾಗತಿಕವಾಗಿ ಶಾಂತಿಯ ನಾಟಕವಾಡುವ ಇಮ್ರಾನ್‌ ಖಾನ್‌ ಸರ್ಕಾರದ ಸಾಮರ್ಥ್ಯಕ್ಕೆ ಕೋವಿಡ್ ವೈರಸ್ ಈಗ ಸವಾಲೆಸೆಯುತ್ತಿದೆ.

ಈ ಸಮಯದಲ್ಲಿ ತನ್ನ ದೇಶವಾಸಿಗಳ ಗಮನವನ್ನು ಬೇರೆಡೆ ಸೆಳೆದು, ತನ್ನ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಇಮ್ರಾನ್‌ ಈಗಲೂ ಕಾಶ್ಮೀರದ ವಿಷಯವನ್ನೇ ಬಡಬಡಿಸುತ್ತಿದ್ದಾರೆ. ಆದರೆ ಕೋವಿಡ್ ಹಾವಳಿಯ ವೇಳೆಯಲ್ಲೂ ಕಾಶ್ಮೀರದ ಬಗ್ಗೆ ಕಟ್ಟುಕಥೆಯನ್ನೇ ಹೇಳುತ್ತಾ ತನ್ನ ಜನರನ್ನು ಹೆಚ್ಚು ದಿನ ಯಾಮಾರಿಸಲು ಸಾಧ್ಯವಿಲ್ಲ ಎಂದು ಪಾಕ್‌ ಸರಕಾರ, ಸೇನೆ ಅರ್ಥಮಾಡಿಕೊಳ್ಳಬೇಕಿದೆ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

7-rbi

Editorial: ರೆಪೊ ದರದಲ್ಲಿ ಯಥಾಸ್ಥಿತಿ: ಆರ್‌ಬಿಐ ಜಾಣ್ಮೆಯ ನಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.