ಕಾಫಿ ಡೇ ಶುರು ಮಾಡಿದ ಕಥೆ…


Team Udayavani, Jul 31, 2019, 11:06 AM IST

EDITORIAL-..

1996ರಲ್ಲಿ ಬ್ರಿಗೇಡ್‌ ರೋಡ್‌ನ‌ಲ್ಲಿ ಮೊದಲ ಔಟ್‌ಲೆಟ್‌ ಆರಂಭಿಸಿದ್ದ ಕಾಫಿಡೇ ನಾಲ್ಕಾರುವರ್ಷಗಳಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿತ್ತು. ಆದರೆ ಅದರ ಜೊತೆಗೇ ಸಾಲದ ಹೊರೆಯೂ ಇತ್ತು. ಸ್ವಲ್ಪ ಮಟ್ಟಿಗೆ ಸಾಲದ ಹೊರೆ ಕಡಿಮೆ ಮಾಡಿಕೊಳ್ಳುವುದು ಮತ್ತು ತನ್ನ ಪಾಲಿನ ಹೂಡಿಕೆ ಹೊರೆ ಕಡಿಮೆ ಮಾಡಿಕೊಳ್ಳುವ ದೃಷ್ಟಿಯಿಂದ 2015ರಲ್ಲಿ ಷೇರು ಮಾರುಕಟ್ಟೆಗೆ ಕಾಲಿಡಲು ಸಿದ್ದಾರ್ಥ ನಿರ್ಧರಿಸಿದ್ದರು.ಆಗ ಸಿಎನ್‌ಬಿಸಿ ಸುದ್ದಿ ವಾಹಿನಿಗೆ ಸಿದ್ಧಾರ್ಥ ನೀಡಿದ ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ..

  • ಕಾಫಿ ಬೆಳೆಗಾರರ ಕುಟುಂಬದ ವ್ಯಕ್ತಿಯೊಬ್ಬರು ಕಾಫಿ ಕೆಫೆಯನ್ನು ಆರಂಭಿಸಲು ಉತ್ತೇಜಿಸಿದ ಅಂಶ ಯಾವುದು?:

ನನ್ನ ಕುಟುಂಬ 1870ರಿಂದಲೇ ಕಾಫಿ ಬೆಳೆಯುತ್ತಿತ್ತು. ಹೀಗಾಗಿ ನನಗೆ ಕಾಫಿ ತೋಟದ ಬಗ್ಗೆ ಸ್ವಲ್ಪ ತಿಳಿವಳಿಕೆ ಇತ್ತು. ರಜೆ ಇದ್ದಾಗಲೆಲ್ಲ ನಾನು ಕಾಫಿ ತೋಟದಲ್ಲೇ ಸಮಯ ಕಳೆಯುತ್ತಿದ್ದೆ. ನಾನು ಮುಂಬೈನಲ್ಲಿ ರಿಸರ್ಚ್‌ ಮಾಡುತ್ತಿರುವಾಗ 1985ರಿಂದ ಹಿಂದೆ 15 ವರ್ಷಗಳವರೆಗಿನ ಸರಕುಗಳ ಬೆಲೆಯನ್ನು ಅಧ್ಯಯನ ಮಾಡುತ್ತಿದ್ದೆ. ಅಂತಾರಾಷ್ಟ್ರೀಯ ಕಾಫಿ ಬೆಳೆಗಾರರು ಒಂದು ಪೌಂಡ್‌ ಕಾಫಿಗೆ 1.20 ಡಾಲರ್‌ ಗಳಿಸುತ್ತಿದ್ದರು. ಆದರೆ ಭಾರತದ ಬೆಳೆಗಾರರು ಕೇವಲ 35 ಸೆಂಟ್‌ ಅಂದರೆ 0.35 ಡಾಲರ್‌ ಗಳಿಸುತ್ತಿದ್ದರು ಎಂಬುದು ನನಗೆ ತಿಳಿಯಿತು. ಆಗ ಕಾಫಿ ಖರೀದಿ ಮಾಡುವ ಹಕ್ಕು ಕೇವಲ ಕಾಫಿ ಮಂಡಳಿಗೆ ಮಾತ್ರ ಇತ್ತು. ರೈತರು ಕಾಫಿ ಮಂಡಳಿಗೆ ಕಾಫಿ ಮಾರಿದ ನಂತರ ಕಾಫಿ ಮಂಡಳಿ ಅದನ್ನು ನಂತರ 2-3 ವರ್ಷಗಳಲ್ಲಿ ಮಾರಾಟ ಮಾಡುತ್ತಿತ್ತು. ಅದರ ಹಣ ಕಾಫಿ ಬೆಳೆಗಾರರಿಗೆ ಸಿಗಲೂ 2-3 ವರ್ಷಗಳು ಬೇಕಾಗುತ್ತಿದ್ದವು. 1985-90ರಲ್ಲಿ ನಾನು ಸ್ಟಾಕ್‌ ಮಾರ್ಕೆಟ್‌ನಲ್ಲಿ ಭಾರಿ ಹಣ ಗಳಿಸಿದೆ. ಈ ಹಣದಿಂದ ನಾನು ಆಸ್ತಿ ಖರೀದಿಸಿದ್ದೆ. ಒಂದು ದಿನ ಮಾರುಕಟ್ಟೆ ಮುಕ್ತವಾಗುತ್ತದೆ ಹಾಗೂ ಭಾರತೀಯ ಬೆಳೆಗಾರರೂ 1.20 ಡಾಲರ್‌ ಗಳಿಸುತ್ತಾರೆ ಎಂಬ ವಿಶ್ವಾಸ ನನಗಿತ್ತು. 1993 ರಲ್ಲಿ ನಮ್ಮ ಅಸೋಸಿಯೇಶನ್‌ನ ಕೆಲವರು ಹಣಕಾಸು ಸಚಿವರಾಗಿದ್ದ ಮನಮೋಹನ ಸಿಂಗ್‌ರನ್ನು ಭೇಟಿ ಮಾಡಿದ್ದೆವು.

ಆಗ ಕಾಫಿ ಮಾರುಕಟ್ಟೆ ಮುಕ್ತಗೊಳಿಸುವಂತೆ ಆಗ್ರಹಿಸಿದೆವು. ಅವರು ಈ ನಮ್ಮ ಬೇಡಿಕೆಗೆ ಇಲ್ಲ ಎನ್ನಲಿಲ್ಲ. ಬದಲಿಗೆ ಯಾಕೆ ನೀವು ಮೊದಲೇ ಈ ವಿಚಾರವನ್ನು ನಮ್ಮ ಗಮನಕ್ಕೆ ತರಲಿಲ್ಲ ಎಂದರು. ಅದೇ ದಿನ ನನ್ನ ಕಾಫಿ ಡೇ ಹುಟ್ಟಿತ್ತು.

  • ನಿಮಗೆ ಅಸ್ತಿತ್ವದ ಪ್ರಶ್ನೆ ಕಾಡಿದ್ದರಿಂದ ರಿಟೇಲ್‌ ವಹಿವಾಟಿಗೆ ಇಳಿದಿರಾ?:

ಕಾಫಿ ಮಾರುಕಟ್ಟೆಯನ್ನು ಉದಾರೀಕರಣಗೊಳಿಸಿದ ನಂತರ 1993ರಲ್ಲಿ ನಾವು ಕಾμ ವಹಿವಾಟು ಆರಂಭಿಸಿದೆವು. 1995ರ ವೇಳೆಗೆ ಭಾರತದ ಅತಿದೊಡ್ಡ ರಫ್ತುದಾರರಾಗಿ ಹೊರಹೊಮ್ಮಿದ್ದೆವು. 2 ವರ್ಷಗಳಲ್ಲಿ ದೇಶದ ಅತಿದೊಡ್ಡ ರಫ್ತುದಾರ, ವಹಿವಾಟುದಾರನಾಗುವುದು ಅತ್ಯಂತ ಸುಲಭ. ಮುಂದೊಂದು ದಿನ ದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆ ಭಾರತಕ್ಕೆ ಬಂದು ನನ್ನನ್ನು ಓಡಿಸುತ್ತದೆ ಎಂಬುದು ತಿಳಿಯಿತು. ಹೀಗಾಗಿ ನಾನು ರಿಟೇಲ್‌ ವಹಿವಾಟಿಗೆ 1995-96 ರಲ್ಲಿ ಇಳಿದೆ. ಆಗ ನನ್ನ ಸಹೋದ್ಯೋಗಿಗೆ, ನಾನು ಒಂದು ಸ್ಟೋರ್‌ ತೆರೆಯಬೇಕು ಎಂದು ಹೇಳಿದೆ.

  • ಅವರು ಬೇಡ ಎಂದರೇ?: ಬೇಡ.ಯಾಕೆಂದರೆ ಸದ್ಯ ಕಾಫಿಯನ್ನು 5 ರೂ.ಗೆ ಕೊಡುತ್ತಿದ್ದಾರೆ. ನೀವು ಎಷ್ಟು ದರದಲ್ಲಿ ಮಾರುತ್ತೀರಿ? ಎಂದು ಕೇಳಿದರು. 25 ರೂ.ಗೆ ಮಾರುತ್ತೇನೆ ಎಂದು ನಾನು ಹೇಳಿದೆ. ಯಾರು ನಿಮ್ಮ ಸ್ಟೋರ್‌ಗೆ ಕಾಕುಡಿಯಲು ಬರುತ್ತಾರೆ ಎಂದು ನನ್ನನ್ನು ಪ್ರಶ್ನಿಸಿದ್ದರು.
  • ಪ್ರತಿಸ್ಪರ್ಧೆಯಿಂದ ನಿಮ್ಮ ವಹಿವಾಟಿನಲ್ಲಿ ಬದಲಾವಣೆ ಆಯಿತೇ?: 1996ರಲ್ಲಿ ನಾವು ಕೆಫೆ ಶುರು ಮಾಡಿದಾಗ 500-600 ಚದರಡಿಗಿಂತ ದೊಡ್ಡ ಸ್ಥಳವನ್ನು ಬಾಡಿಗೆಗೆ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದೆವು. ಆದರೆ ಈಗ 1 ಸಾವಿರದಿಂದ 1500ಚದರಡಿ ಸ್ಥಳವನ್ನು ತೆಗೆದುಕೊಳ್ಳುತ್ತಿದ್ದೇವೆ. ಈಗ ಅಂತಹ ಸಣ್ಣ ಸ್ಟೋರ್‌ಗಳನ್ನು ಮುಚ್ಚಿ ದೊಡ್ಡ ಸ್ಥಳಗಳಿಗೆ ಶಿಫ್ಟ್ ಆಗುತ್ತಿದ್ದೇವೆ.

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.