ಇನ್ನಿಲ್ಲವಾದ ಶ್ರೇಷ್ಠ ರಾಜಕೀಯ ಪರಂಪರೆಯ ಕೊಂಡಿ


Team Udayavani, Aug 8, 2019, 5:12 AM IST

30

ಸಮರ್ಥ ಆಡಳಿತಗಾರ್ತಿ, ಉತ್ತಮ ವಾಗ್ಮಿ, ವಿನಮ್ರ ನಾಯಕಿ ಹೀಗೆ ಸುಷ್ಮಾ ಸ್ವರಾಜ್‌ ಅವರನ್ನು ಅನೇಕ ಗುಣ ವಿಶೇಷಣಗಳಿಂದ ಹೊಗಳಬಹುದು. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿದ್ದದ್ದು ಅವರ ಮಾನವೀಯ ಅಂತಃಕರಣ. ಈ ಅಂತಃಕರಣದಿಂದಾಗಿಯೇ ಅವರು ಜನಮಾನಸದಲ್ಲಿ ಅಮ್ಮನ ಸ್ಥಾನಕ್ಕೇರಿದ್ದಾರೆ. ದೇಶದ ಮೊದಲ ಪೂರ್ಣ ಪ್ರಮಾಣದ ವಿದೇಶಾಂಗ ಸಚಿವರು ಎಂಬ ಹಿರಿಮೆಯೊಂದಿಗೆ ಆ ಹುದ್ದೆಯನ್ನು ಅಲಂಕರಿಸಿದ ಸುಷ್ಮಾ ತಾನು ಆ ಸ್ಥಾನಕ್ಕೆ ಯೋಗ್ಯ ಆಯ್ಕೆ ಎಂಬುದನ್ನು ಐದು ವರ್ಷದ ಅಧಿಕಾರ ವಧಿಯಲ್ಲಿ ತೋರಿಸಿಕೊಟ್ಟಿದ್ದರು. ಗಣ್ಯರು ಅಗಲಿದಾಗ ತುಂಬಲಾರದ ನಷ್ಟ ಎಂದು ವರ್ಣಿಸುವುದು ಒಂದು ಔಪಚಾರಿಕತೆಯಾಗಿದ್ದರೂ ಸುಷ್ಮಾ ಅಗಲಿಕೆ ಮಾತ್ರ ದೇಶಕ್ಕೆ ನಿಜವಾಗಿಯೂ ಭಾರೀ ನಷ್ಟವೇ ಸರಿ.

ರಾಜಕೀಯ ಮತ್ತು ಪರಿವಾರವನ್ನು ಪ್ರತ್ಯೇಕವಾಗಿಯೇ ಇರಿಸಿಕೊಂಡ ನಾಯಕರ ಸಾಲಿಗೆ ಸೇರಿದವರು ಸುಷ್ಮಾ. ರಾಜ್ಯ-ಕೇಂದ್ರದಲ್ಲಿ ಸಚಿವೆ, ಮುಖ್ಯಮಂತ್ರಿ, ವಿಪಕ್ಷ ನಾಯಕಿಯಾಗಿ ಹೀಗೆ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರೂ ಎಂದಿಗೂ ಅಧಿಕಾರ ವ್ಯಾಪ್ತಿಯ ಮೇಲೆ ಕುಟುಂಬದ ನೆರಳು ಕೂಡಾ ಬೀಳದಂತೆ ನೋಡಿಕೊಂಡರು. ಕೈ ಬಾಯಿ ಸ್ವಚ್ಛ ವಾಗಿಟ್ಟು ಕೊಂಡು, ಅಧಿಕಾರದ ಭ್ರಮೆ ತಲೆಗೇರಿಸಿಕೊಳ್ಳದೆ ಸುಮಾರು ಐದು ದಶಕದ ರಾಜಕೀಯ ಪಯಣವನ್ನು ನಡೆಸಿದರು.

ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿಯಾದ ಮೊದಲ ಮಹಿಳೆ, ಮೊದಲ ವಿಪಕ್ಷ ನಾಯಕಿ ಸೇರಿದಂತೆ ಹಲವು ಪ್ರಥಮಗಳ ಉಪಾಧಿಗೆ ಸುಷ್ಮಾ ಪಾತ್ರರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ರಾಜಕೀಯ ಕ್ಷೇತ್ರ ಪ್ರವೇಶಿಸಿ ಹಂತಹಂತವಾಗಿ ಮೇಲೇರಿ ವಿದೇಶಾಂಗ ಸಚಿವೆಯ ಉನ್ನತ ಹುದ್ದೆ ಅಲಂಕರಿಸಿದವರು. ಹರ್ಯಾಣದ ಸಚಿವೆ, ದಿಲ್ಲಿಯ ಮುಖ್ಯಮಂತ್ರಿ, ಲೋಕಸಭೆಯಲ್ಲಿ ವಿಪಕ್ಷ ನಾಯಕಿ ಹೀಗೆ ಅವರ ಸುದೀರ್ಘ‌ ರಾಜಕೀಯ ಪಯಣಕ್ಕೆ ಅನೇಕ ಆಯಾಮಗಳುಂಟು. ನಿಭಾಯಿಸಿದ ಪ್ರತಿ ಹುದ್ದೆಯಲ್ಲೂ ತನ್ನದೇ ಛಾಪು ಮೂಡಿಸುವುದು ಅವರ ವೈಶಿಷ್ಟ್ಯವಾಗಿತ್ತು. ಅದರಲ್ಲೂ ವಿದೇ ಶಾಂಗ ಸಚಿವೆಯಾಗಿ ಅವರು ಮಾಡಿದ ಕೆಲಸಗಳನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ. ವಿದೇಶಾಂಗ ಇಲಾಖೆ ಮತ್ತು ಅದರ ಸಚಿವರೆಂದರೆ ಜನಸಾಮಾನ್ಯರ ಜೊತೆಗೆ ಯಾವ ಸಂಪರ್ಕವೂ ಇಲ್ಲದವರು. ಅವರೇ ನಿದ್ದರೂ ದೇಶಕ್ಕಾಗಮಿಸುವ ವಿದೇಶಿ ಗಣ್ಯರಿಗೆ ಹಸ್ತಲಾಘವ ನೀಡುವುದು, ವಿದೇಶ ಪ್ರಯಾಣ ಮಾಡುವುದು ಮತ್ತು ವಿದೇಶಾಂಗ ನೀತಿಗೆ ಸಂಬಂಧಪಟ್ಟಂತೆ ಮಾತನಾಡುವವರು ಎಂಬ ಸಾರ್ವತ್ರಿಕ ಗ್ರಹಿಕೆಯನ್ನು ಸುಳ್ಳು ಮಾಡಿದವರು ಸುಷ್ಮಾ ಸ್ವರಾಜ್‌. ವಿದೇಶಾಂಗ ಇಲಾಖೆಯನ್ನು ಜನಸಾಮಾನ್ಯರ ಬಳಿಗೊಯ್ದ ಕೀರ್ತಿ ಅವರಿಗೆ ಸಲ್ಲಬೇಕು.

ಬರೀ ಒಂದು ಟ್ವೀಟ್ನಿಂದ ದೇಶದ ವಿದೇಶಾಂಗ ಸಚಿವರನ್ನು ಸಂಪರ್ಕಿಸಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದರು. ವಿದೇಶಗಳಲ್ಲಿದ್ದ ಭಾರತೀಯರು ಸಂಕಷ್ಟದ ಸಮಯದಲ್ಲಿ ಟ್ವೀಟ್ ಮೂಲಕ ಸುಷ್ಮಾ ನೆರವು ಪಡೆದು ಪಾರಾದ ಪ್ರಕರಣಗಳು ಅನೇಕ ಇವೆ. ಎಲ್ಲಿಯೇ ಇದ್ದರೂ ಒಂದು ಟ್ವೀಟ್ ನಮ್ಮನ್ನು ರಕ್ಷಿಸಬಹುದು ಎಂಬ ಸುರಕ್ಷತೆಯ ಭಾವನೆಯನ್ನು ಜನರಲ್ಲಿ ಮೂಡಿಸಿದ್ದು ಸುಷ್ಮಾರ ಬಹುದೊಡ್ಡ ಕೊಡುಗೆ. ಬಳಿಕ ಅನೇಕ ಸಚಿವರು ಈ ಮಾದರಿಯನ್ನು ಅನುಕರಿಸಿದ್ದಾರೆ. ಆರೋಗ್ಯ ಹದಗೆಟ್ಟು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವಾಗಲೂ ನೆರವು ಕೋರಿ ಬಂದ ಟ್ವೀಟ್‌ಗೆ ತಕ್ಷಣ ಪ್ರತಿಸ್ಪಂದಿಸುವಷ್ಟು ಬದ್ಧತೆ ಅವರು ಹೊಂದಿದ್ದರು.

ನರೇಂದ್ರ ಮೋದಿ ಸರಕಾರದ ವಿದೇಶಾಂಗ ನೀತಿಗಳನ್ನು ಯಶಸ್ವಿಯಾಗಿ ಅನುಷ್ಠಾನಿಸಿದ ಹಿರಿಮೆ ಅವರಿಗೆ ಸಲ್ಲಬೇಕು. ಸರ್ಜಿಕಲ್ ಸ್ಟ್ರೈಕ್‌, ಬಾಲಾಕೋಟ್ ದಾಳಿ, ಡೋಕ್ಲಾಂ ಬಿಕ್ಕಟ್ಟು ಮತ್ತಿತರ ಕಠಿಣ ಸಂದರ್ಭಗಳಲ್ಲಿ ರಾಜತಾಂತ್ರಿಕತೆಯನ್ನು ಸಮರ್ಥವಾಗಿ ನಿಭಾಯಿಸಿದವರು ಅವರು. ಭಯೋತ್ಪಾದನೆ ಮತ್ತು ಮಾತುಕತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ಥಾನಕ್ಕೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟದ್ದು ಅವರ ರಾಜತಾಂತ್ರಿಕ ಕೌಶಲಕ್ಕೊಂದು ಉದಾಹರಣೆ.

ಪ್ರಾಯವಾಗಿ, ಅನಾರೋಗ್ಯ ಪೀಡಿತರಾಗಿ ಓಡಾಡಲೂ ಸಾಧ್ಯವಾಗ ದಿದ್ದರೂ ಅಧಿಕಾರ ಚಪಲ ಬಿಡದ ಅನೇಕ ರಾಜಕಾರಣಿಗಳನ್ನು ನೋಡುವಾಗ ಜನರಿಗೆ ಜುಗುಪ್ಸೆ ಉಂಟಾಗುತ್ತದೆ. ಆದರೆ ಸುಷ್ಮಾ ಈ ವಿಚಾರದಲ್ಲೂ ಮಾದರಿಯಾದರು. ಓರ್ವ ಯಶಸ್ವಿ ಸಚಿವೆಗೆ ಇನ್ನೊಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಕಷ್ಟವೇನೂ ಆಗಿರಲಿಲ್ಲ. ಓಡಾಡಲು ಸಾಧ್ಯವಾಗದಿದ್ದರೆ ಪಕ್ಷವೇ ಅವರನ್ನು ಗೆಲ್ಲಿಸುವ ಹೊಣೆಯನ್ನೂ ವಹಿಸಿಕೊಳ್ಳಲು ತಯಾರಿತ್ತು. ಆದರೆ ಸಾರ್ವಜನಿಕ ಬದುಕಿಗೆ ಪರಿಪೂರ್ಣ ನ್ಯಾಯ ಸಲ್ಲಿಸುವ ದೈಹಿಕ ಕ್ಷಮತೆ ತನ್ನಲ್ಲಿ ಇಲ್ಲ ಎಂದು ಅರಿವಾದ ಕೂಡಲೇ ಸುಷ್ಮಾ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಬಲವಾದ ಒತ್ತಡವನ್ನು ನಯವಾಗಿಯೇ ತಿರಸ್ಕರಿಸಿದರು. ಪ್ರಸ್ತುತ ರಾಜಕಾರಣದಲ್ಲಿ ಕಂಡುಬರುವ ವಿರಳ ನಿದರ್ಶನವಿದು. ದೇಶದ ಹೊಸ ಪೀಳಿಗೆಯ ರಾಜಕಾರಣಿಗಳಿಗೆ ಸುಷ್ಮಾ ಮಾದರಿಯಾಗುವ ವ್ಯಕ್ತಿತ್ವ. ಸುಷ್ಮಾ ಅಗಲಿಕೆಯಿಂದ ಶ್ರೇಷ್ಠ ರಾಜಕೀಯ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಿದೆ.

ಟಾಪ್ ನ್ಯೂಸ್

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.