ಮಕ್ಕಳ ಮೊಬೈಲ್‌ ಗೀಳು ತಪ್ಪಿಸಲು ಕ್ರಮ ತೆಗೆದುಕೊಳ್ಳಿ


Team Udayavani, Feb 21, 2023, 6:02 AM IST

ಮಕ್ಕಳ ಮೊಬೈಲ್‌ ಗೀಳು ತಪ್ಪಿಸಲು ಕ್ರಮ ತೆಗೆದುಕೊಳ್ಳಿ

ಕೊರೊನಾ ಬಳಿಕ ಮಕ್ಕಳ ವರ್ತನೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲನೇಯದಾಗಿ ಅವರ ಶಾಲಾ ಶಿಕ್ಷಣ ಕ್ರಮವೇ ಬದಲಾದಂತಿದ್ದು, ಇನ್ನೂ ಹಳೆಯ ಪದ್ಧತಿಗೆ ಹೊಂದಿಕೊಳ್ಳಲು  ಒದ್ದಾಡುತ್ತಿದ್ದಾರೆ. ಎರಡನೇಯದಾಗಿ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಅಂಟಿಸಿಕೊಂಡ ಮೊಬೈಲ್‌ ಗೀಳಿನಿಂದ ಹೊರಬರಲಾರದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆ ಪ್ರಕಾರ, ಶೇ.36ರಷ್ಟು ಮಕ್ಕಳು ಮೊಬೈಲ್‌ ಗೀಳಿಗೆ ಸಿಲುಕಿದ್ದಾರೆ. ಅಲ್ಲದೆ ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆಯಿಂದಾಗಿ ಶೇ.18ರಷ್ಟು ಮಕ್ಕಳಲ್ಲಿ ಖಿನ್ನತೆ, ನಿದ್ರಾಹೀನತೆ, ಕಿರಿಕಿರಿ, ಏಕಾಗ್ರತೆ ಕೊರತೆ, ದೈಹಿಕ ಸಮಸ್ಯೆ, ಬೊಜ್ಜು, ದೃಷ್ಟಿ ಸಮಸ್ಯೆ, ನೆನಪಿನ ಶಕ್ತಿ ಕ್ಷೀಣಿಸುವುದು, ನರ ದೌರ್ಬಲ್ಯದಂತಹ ಕಾಯಿಲೆಗಳು ಕಾಣಿಸಿಕೊಂಡಿವೆ.

ಇದಕ್ಕಿಂತ ಆತಂಕಕಾರಿ ಸಂಗತಿ ಎಂದರೆ, ಮೊಬೈಲ್‌ನಲ್ಲಿ ವಿವಿಧ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟು ಅಶ್ಲೀಲ ವೀಡಿಯೋ ವೀಕ್ಷಿಸುವ ಮಕ್ಕಳ ಪ್ರಮಾಣ

ಭಾರೀ ಏರಿಕೆಯಾಗಿದೆ. 13ರಿಂದ 19 ವರ್ಷದ ಶೇ.35ರಷ್ಟು ಮಕ್ಕಳು ಅಶ್ಲೀಲ ಚಿತ್ರ/ವೀಡಿಯೋ ವೀಕ್ಷಿಸುವ ವ್ಯಸನಕ್ಕೊಳಗಾಗಿದ್ದಾರೆ. ಉಳಿದಂತೆ ಶೇ.15ರಷ್ಟು ಮಕ್ಕಳು ಆಗಾಗ ಪೋರ್ನ್ ಸೈಟ್‌ಗಳಿಗೆ ಭೇಟಿ ನೀಡಿ ಹೆಚ್ಚು ಸಮಯ ವೀಕ್ಷಿಸುತ್ತಿದ್ದಾರೆ ಎಂಬುದು ಸಮೀಕ್ಷೆಯ ಮಾಹಿತಿ.

ರಾಷ್ಟ್ರೀಯ ಸಾಧನಾ ಸಮೀಕ್ಷೆ(ಎನ್‌ಎಎಸ್‌) 2021ರ ಪ್ರಕಾರ, ಕರ್ನಾಟಕದಲ್ಲಿ ಶೇ.66ರಿಂದ 76ರಷ್ಟು ಮಕ್ಕಳು ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಈ ಅಭ್ಯಾಸ ಬೆಂಗಳೂರಿನಲ್ಲಿಯೇ ಹೆಚ್ಚಾಗಿದೆ. ಇಲ್ಲಿ ಮೂರನೇ ತರಗತಿಗಿಂತ ಕೆಳಗಿನ ಶೇ.73 ಮಕ್ಕಳಿಗೆ  ಮೊಬೈಲ್‌ ಸಿಗುತ್ತಿದೆ. 5ನೇ ತರಗತಿ ವರೆಗಿನ ಶೇ.79, 8ನೇ ತರಗತಿವರೆಗಿನ ಶೇ.70 ಮತ್ತು 10ನೇ ತರಗತಿವರೆಗಿನ ಶೇ.88ರಷ್ಟು ಮಕ್ಕಳಿಗೆ ಸುಲಭವಾಗಿ ಮೊಬೈಲ್‌ ಸಿಗುತ್ತಿದೆ.

ಲಾಕ್‌ಡೌನ್‌ ವೇಳೆಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮೊಬೈಲ್‌ ಕೊಟ್ಟದ್ದು ಈಗ ಅವರಿಗೇ ಮಾರಕವಾಗಿದೆ. ಇದರಿಂದ ಹೊರಬರುವುದು ಹೇಗೆ ಎಂಬುದು ಪೋಷಕರ ಚಿಂತೆಗೆ ಕಾರಣವಾಗಿದೆ. ಕೆಲವು ಪೋಷಕರು ಈಗಾಗಲೇ ಮಾನಸಿಕ ವೈದ್ಯರನ್ನೂ ಕಂಡು ಬಂದಿದ್ದಾರೆ. ಆದರೂ ಸಮಸ್ಯೆ ಬಗೆಹರಿಯದೇ ಇರುವುದು ಸಮಸ್ಯೆಯ ಗಂಭೀರತೆಯನ್ನು ತೋರುತ್ತಿದೆ.

ಈ ಮೊದಲೇ ಮೊಬೈಲ್‌ ಗೀಳಿನಿಂದ ಆಗುವ ಸಮಸ್ಯೆಗಳನ್ನು ಉಲ್ಲೇಖಿಸಲಾಗಿದೆ. ಇಂಥ ಸಂದರ್ಭದಲ್ಲಿ ಪೋಷಕರ ಪಾತ್ರವೂ ಬಹಳ ಮುಖ್ಯದ್ದಾಗಿದೆ ಎಂದು ಮಾನಸಿಕ ವೈದ್ಯರು ಹೇಳುತ್ತಾರೆ. ಅಂದರೆ ಹೆಚ್ಚು ಮೊಬೈಲ್‌ ನೋಡುತ್ತಾರೆ ಎಂಬ ಸಿಟ್ಟಿನ ಭರದಲ್ಲಿ ಮೊಬೈಲ್‌ ಕಿತ್ತುಕೊಳ್ಳುವುದು, ಬೈಯ್ಯುವುದು, ಹೊಡೆಯುವುದನ್ನು ಮಾಡಿದರೆ ಅವರ ಸ್ಥಿತಿ ಇನ್ನಷ್ಟು ವಿಷಮ ಸ್ಥಿತಿಗೆ ಹೋಗಬಹುದು.

ಹೀಗಾಗಿ ಮೊದಲಿಗೆ ಪೋಷಕರೇ ಮೊಬೈಲ್‌ ಅನ್ನು ಪಕ್ಕಕ್ಕಿಟ್ಟು ಮಕ್ಕಳ ಜತೆ ಹೆಚ್ಚಾಗಿ ಬೆರೆಯಬೇಕು. ಯಾವಾಗ ಸ್ಮಾರ್ಟ್‌ಫೋನ್‌ ಬಳಕೆ ಮಾಡಬೇಕು, ಯಾವಾಗ ಬಳಕೆ ಮಾಡಬಾರದು ಎಂಬ ವಿಷಯದಲ್ಲಿ ಒಂದು ದಿನಚರಿ ಮಾಡಿಕೊಡುವುದು, ಟೈಮ್‌ ಸೆಟ್‌ ಮಾಡಿ ಮೊಬೈಲ್‌ ಕೊಡುವುದು, ಮಲಗುವ ವೇಳೆಯಲ್ಲಿ ಮೊಬೈಲ್‌ ಸಿಗದಿರುವ ರೀತಿಯಲ್ಲಿ ಮಾಡುವುದು, ಮಕ್ಕಳಿಗೆ ಆಮಿಷಕ್ಕಾಗಿ ಮೊಬೈಲ್‌ ಕೊಡುವುದು ಸಲ್ಲದು. ಅವರ ಆಸಕ್ತಿಗಳನ್ನು ಗುರುತಿಸಿ ಅದರ ಬಗ್ಗೆ ಒತ್ತು ನೀಡುವುದನ್ನು ಮಾಡಬೇಕು. ಮೊಬೈಲ್‌ ಬಳಕೆ ಕುರಿತಂತೆ ಮಕ್ಕಳ ಮುಂದೆ ಸುದೀರ್ಘ‌ ಭಾಷಣ ಮಾಡುವುದರಿಂದ ಅವುಗಳ ಮನಸ್ಸಿನಲ್ಲಿ ಯಾವುದೇ ಪರಿಣಾಮ ಬೀರದು ಎಂಬ ಅಂಶವನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು.

ಮಕ್ಕಳ ಆರೋಗ್ಯ ಬಹುಮುಖ್ಯವಾದದ್ದು. ಅವರ‌ ಮನಸ್ಸು ಕೂಡ ಅಷ್ಟೇ ಸೂಕ್ಷ್ಮವಾದದ್ದು. ಇದನ್ನು ಅರಿತುಕೊಂಡು ಪೋಷಕರು ಮುನ್ನಡೆಯಬೇಕು. ಮಕ್ಕಳ ಜತೆ ಚಟುವಟಿಕೆಗಳಲ್ಲಿ ತೊಡಗಬೇಕು. ಮಕ್ಕಳ ಜತೆಗೆ ಪೋಷಕರು ಸೇರಿ ಈ ಸವಾಲಿನಿಂದ ಆಚೆ ಬರುವ ಕೆಲಸ ಮಾಡಬೇಕು.

ಟಾಪ್ ನ್ಯೂಸ್

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

7-rbi

Editorial: ರೆಪೊ ದರದಲ್ಲಿ ಯಥಾಸ್ಥಿತಿ: ಆರ್‌ಬಿಐ ಜಾಣ್ಮೆಯ ನಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.