ಪಟಾಕಿ ನಿಷೇಧ ಮೊದಲೇ ನಿರ್ಧರಿಸಬೇಕಿತ್ತು


Team Udayavani, Nov 7, 2020, 6:10 AM IST

ಪಟಾಕಿ ನಿಷೇಧ ಮೊದಲೇ ನಿರ್ಧರಿಸಬೇಕಿತ್ತು

ಸಾಂದರ್ಭಿಕ ಚಿತ್ರ

ಈ ದೀಪಾವಳಿಯಲ್ಲಿ ಪಟಾಕಿ ಬಳಸದಂತೆ ಸೂಚಿಸಿದ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಿದೆ. ರಾಜಸ್ಥಾನ, ದಿಲ್ಲಿ, ಸಿಕ್ಕಿಂ, ಒಡಿಶಾ, ಚಂಡೀಗಢ, ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಮುಂಬಯಿ ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಬಳಕೆಯನ್ನು ನಿಷೇಧಿಸಿದೆ. ಕರ್ನಾಟಕ, ತಮಿಳುನಾಡು, ಪಂಜಾಬ್‌, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಪಟಾಕಿ ಯಾಕೆ ನಿಷೇಧಿಸಬಾರದು ಎಂದು ಪ್ರಶ್ನಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ವಿವರಣೆ ಕೋರಿ ನೋಟಿಸ್‌ ಜಾರಿಗೊಳಿಸಿದೆ. ದಿಲ್ಲಿ ಮತ್ತು ಸುತ್ತಲಿನ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತಡೆಯುವಲ್ಲಿ ಪಟಾಕಿ ನಿಷೇಧ ಸಹಕಾರಿ ಯಾದೀತೆಂಬುದು ಪೀಠದ ಲೆಕ್ಕಾಚಾರ. ನ. 9 ರಂದು ತನ್ನ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ.

ರಾಜ್ಯ ಸರಕಾರದ ನಿರ್ಧಾರಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪಟಾಕಿಯನ್ನು ನಿಷೇಧಿಸುವುದಾದರೆ ಸಂಪೂರ್ಣ ನಿಷೇಧಿಸಿ. ದೀಪಾವಳಿಗೆ ಮಾತ್ರ ನಿಷೇಧಿಸುವುದರಿಂದ ದೀಪಾವಳಿಯನ್ನು ಆಚರಿಸುವ ಹಿಂದೂ ಸಮುದಾಯಕ್ಕೆ ಬೇಸರವಾಗುತ್ತದೆ ಎಂದೂ ಹೇಳಿವೆ. ಆದರೆ ರಾಜ್ಯ ಸರಕಾರ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಮಾಲಿನ್ಯ ಹಾಗೂ ಕೊರೊನಾ ಸೋಂಕು ತಡೆಯುವಲ್ಲಿ ಸರಕಾರದ ನಿರ್ಧಾರ ಸಮರ್ಥನೀಯವಾಗಿದ್ದರೂ ಪಟಾಕಿ ಆಶ್ರಯಿತ ಪರೋಕ್ಷ ಉದ್ಯಮವನ್ನು ಗೊಂದಲಕ್ಕೆ ಸಿಲುಕಿಸಿರುವುದು ಸ್ಪಷ್ಟ.

ಪಟಾಕಿ ನಿಷೇಧ ಸರಿಯೇ ಅಥವಾ ತಪ್ಪೇ ಎನ್ನುವುದರ ಕುರಿತು ಸದ್ಯ ಚರ್ಚೆ ಆರಂಭವಾಗಿದೆ. ನಿಜವಾದ ಚರ್ಚೆ ನಡೆಯಬೇಕಾದದ್ದು ಸರಕಾರದ ದಿಢೀರ್‌ ನಿರ್ಧಾರದ ಬಗ್ಗೆ. ಹಬ್ಬಕ್ಕೆ ಕೇವಲ ಹತ್ತು ದಿನಗಳಿರುವಾಗ ಇಂಥದೊಂದು ತೀರ್ಮಾನ ಪ್ರಕಟಿಸಿದರೆ ಇದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಶ್ರಯಿಸಿರು ವವರಿಗೆ ಬೀಳುವ ಹೊಡೆತ ಸಣ್ಣದಲ್ಲ.

ವಿಶ್ವದಲ್ಲೇ ಅತೀ ಹೆಚ್ಚು ಪಟಾಕಿಯನ್ನು ತಯಾರಿಸುವ ಎರಡನೇ ದೇಶ ಭಾರತ. ತಮಿಳುನಾಡಿನ ಶಿವಕಾಶಿ ಹಾಗೂ ವಿರುಧ್‌ ನಗರದಲ್ಲಿ ದೇಶಕ್ಕೆ ಬೇಕಾದ ಶೇ. 80 ರಷ್ಟು ಪಟಾಕಿಗಳನ್ನು ತಯಾರಿಸಲಾಗುತ್ತಿದೆ. ವಾರ್ಷಿಕ 3 ರಿಂದ 6 ಸಾವಿರ ಕೋಟಿ ರೂ. ಗಳ ವಹಿವಾಟು ನಡೆಯುತ್ತದೆ. ಸುಮಾರು ಐದು ಲಕ್ಷ ಕುಟುಂಬಗಳು ಈ ಉದ್ದಿಮೆಯನ್ನು ನೇರವಾಗಿ ಹಾಗೂ ಪರೋಕ್ಷವಾಗಿ ನಂಬಿ ಕುಳಿತಿವೆ. ಕೆಲವು ವರ್ಷಗಳಿಂದೀಚೆಗೆ ಪಟಾಕಿ ಉದ್ದಿಮೆ ಸಾಕಷ್ಟು ನಷ್ಟ ಅನುಭವಿಸಿತ್ತು. ಚೀನದಿಂದ ಆಮದಾಗುತ್ತಿದ್ದ ಪಟಾಕಿಗಳೂ ಇದಕ್ಕೆ ಕಾರಣವಾಗಿದ್ದವು. ಈ ವರ್ಷ ಚೀನ ಪಟಾಕಿ ಆಮದು ಮಾಡಿಸಿಕೊಳ್ಳುವಂತಿಲ್ಲ. ಹಾಗಾಗಿ ದೇಶಿ ಪಟಾಕಿ ಉದ್ಯಮದಲ್ಲಿ ಹೊಸ ನಿರೀಕ್ಷೆ ಹುಟ್ಟಿತ್ತು. ಕೈಗಾರಿಕೆಯ ಕಷ್ಟ ಇದಾದರೆ, ಹಬ್ಬಕ್ಕೆಂದು ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಸಾವಿರಾರು ಮಂದಿ ವ್ಯಾಪಾರಸ್ಥರು ಈಗಾಗಲೇ ಮುಂಗಡ ಹಣ ನೀಡಿ ಪಟಾಕಿ ಕಾದಿರಿಸಿದ್ದಾರೆ. ಒಂದೆರಡು ದಿನಗಳಲ್ಲಿ ಪಟಾಕಿಯನ್ನು ಸ್ವೀಕರಿಸಬೇಕು ಎನ್ನುತ್ತಿರುವಾಗ ರಾಜ್ಯ ಸರಕಾರ ದಿಢೀರ್‌ ನಿಷೇಧಿಸಿರುವುದು ಈ ವ್ಯಾಪಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಲವು ಉದ್ಯಮಗಳು ನೇರವಾಗಿ ನಮ್ಮ ರಾಜ್ಯಕ್ಕೆ ಸಂಬಂಧಿಸಿ ರುವುದಿಲ್ಲ, ಆದರೆ ಅವುಗಳ ಗ್ರಾಹಕರು ಇರುತ್ತಾರೆ. ಪರೋಕ್ಷ ಉದ್ಯಮಗಳು (ವ್ಯಾಪಾ ರಸ್ಥರು ಇತ್ಯಾದಿ) ಇವರನ್ನು ಆಶ್ರಯಿಸಿರುತ್ತಾರೆ. ಇವರೆಲ್ಲರೂ ಸ್ಥಳೀಯ ಆರ್ಥಿ ಕತೆಯ ಕೊಂಡಿಗಳು. ಇವುಗಳ ಮೇಲಾಗುವ ಪರಿಣಾಮವನ್ನೂ ಗಮನ ದಲ್ಲಿಟ್ಟು ಕೊಂಡು ಸಾಕಷ್ಟು ಮೊದಲೇ ಸರಕಾರ ಇಂಥ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದುದು ಅಗತ್ಯ. ಆಗ ಸ್ಥಳೀಯ ಉದ್ಯಮ, ಉದ್ಯಮಿಗಳಿಗೆ ಆಗುವ ನಷ್ಟವನ್ನು ತಡೆಯಬಹುದು. ಅದೂ ಆಡಳಿತ ನಡೆಸುವವರ ಆದ್ಯ ಕರ್ತವ್ಯ.

ಈ ದೀಪಾವಳಿಯಲ್ಲಿ ಪಟಾಕಿ ಬಳಸದಂತೆ ಸೂಚಿಸಿದ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಿದೆ. ರಾಜಸ್ಥಾನ, ದಿಲ್ಲಿ, ಸಿಕ್ಕಿಂ, ಒಡಿಶಾ, ಚಂಡೀಗಢ, ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಮುಂಬಯಿ ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಬಳಕೆ ಯನ್ನು ನಿಷೇಧಿಸಿದೆ. ಕರ್ನಾಟಕ, ತಮಿಳುನಾಡು, ಪಂಜಾಬ್‌, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಪಟಾಕಿ ಯಾಕೆ ನಿಷೇಧಿಸಬಾರದು ಎಂದು ಪ್ರಶ್ನಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ವಿವರಣೆ ಕೋರಿ ನೋಟಿಸ್‌ ಜಾರಿಗೊಳಿಸಿದೆ. ದಿಲ್ಲಿ ಮತ್ತು ಸುತ್ತಲಿನ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತಡೆಯುವಲ್ಲಿ ಪಟಾಕಿ ನಿಷೇಧ ಸಹಕಾರಿ ಯಾದೀತೆಂಬುದು ಪೀಠದ ಲೆಕ್ಕಾಚಾರ. ನ. 9 ರಂದು ತನ್ನ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆ ಇದೆ.

ರಾಜ್ಯ ಸರಕಾರದ ನಿರ್ಧಾರಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪಟಾಕಿಯನ್ನು ನಿಷೇಧಿಸುವುದಾದರೆ ಸಂಪೂರ್ಣ ನಿಷೇಧಿಸಿ. ದೀಪಾವಳಿಗೆ ಮಾತ್ರ ನಿಷೇಧಿಸುವುದರಿಂದ ದೀಪಾವಳಿಯನ್ನು ಆಚರಿಸುವ ಹಿಂದೂ ಸಮುದಾಯಕ್ಕೆ ಬೇಸರವಾಗುತ್ತದೆ ಎಂದೂ ಹೇಳಿವೆ. ಆದರೆ ರಾಜ್ಯ ಸರಕಾರ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಮಾಲಿನ್ಯ ಹಾಗೂ ಕೊರೊನಾ ಸೋಂಕು ತಡೆಯುವಲ್ಲಿ ಸರಕಾರದ ನಿರ್ಧಾರ ಸಮರ್ಥನೀಯವಾಗಿದ್ದರೂ ಪಟಾಕಿ ಆಶ್ರಯಿತ ಪರೋಕ್ಷ ಉದ್ಯಮವನ್ನು ಗೊಂದಲಕ್ಕೆ ಸಿಲುಕಿಸಿರುವುದು ಸ್ಪಷ್ಟ.

ಪಟಾಕಿ ನಿಷೇಧ ಸರಿಯೇ ಅಥವಾ ತಪ್ಪೇ ಎನ್ನುವುದರ ಕುರಿತು ಸದ್ಯ ಚರ್ಚೆ ಆರಂಭವಾಗಿದೆ. ನಿಜವಾದ ಚರ್ಚೆ ನಡೆಯಬೇಕಾದದ್ದು ಸರಕಾರದ ದಿಢೀರ್‌ ನಿರ್ಧಾರದ ಬಗ್ಗೆ. ಹಬ್ಬಕ್ಕೆ ಕೇವಲ ಹತ್ತು ದಿನಗಳಿರುವಾಗ ಇಂಥದೊಂದು ತೀರ್ಮಾನ ಪ್ರಕಟಿಸಿದರೆ ಇದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಶ್ರಯಿಸಿರು ವವರಿಗೆ ಬೀಳುವ ಹೊಡೆತ ಸಣ್ಣದಲ್ಲ.

ವಿಶ್ವದಲ್ಲೇ ಅತೀ ಹೆಚ್ಚು ಪಟಾಕಿಯನ್ನು ತಯಾರಿಸುವ ಎರಡನೇ ದೇಶ ಭಾರತ. ತಮಿಳುನಾಡಿನ ಶಿವಕಾಶಿ ಹಾಗೂ ವಿರುಧ್‌ ನಗರದಲ್ಲಿ ದೇಶಕ್ಕೆ ಬೇಕಾದ ಶೇ. 80 ರಷ್ಟು ಪಟಾಕಿಗಳನ್ನು ತಯಾರಿಸಲಾಗುತ್ತಿದೆ. ವಾರ್ಷಿಕ 3 ರಿಂದ 6 ಸಾವಿರ ಕೋಟಿ ರೂ. ಗಳ ವಹಿವಾಟು ನಡೆಯುತ್ತದೆ. ಸುಮಾರು ಐದು ಲಕ್ಷ ಕುಟುಂಬಗಳು ಈ ಉದ್ದಿಮೆಯನ್ನು ನೇರವಾಗಿ ಹಾಗೂ ಪರೋಕ್ಷವಾಗಿ ನಂಬಿ ಕುಳಿತಿವೆ. ಕೆಲವು ವರ್ಷಗಳಿಂದೀಚೆಗೆ ಪಟಾಕಿ ಉದ್ದಿಮೆ ಸಾಕಷ್ಟು ನಷ್ಟ ಅನುಭವಿಸಿತ್ತು. ಚೀನದಿಂದ ಆಮದಾಗುತ್ತಿದ್ದ ಪಟಾಕಿಗಳೂ ಇದಕ್ಕೆ ಕಾರಣವಾಗಿದ್ದವು. ಈ ವರ್ಷ ಚೀನ ಪಟಾಕಿ ಆಮದು ಮಾಡಿಸಿಕೊಳ್ಳುವಂತಿಲ್ಲ. ಹಾಗಾಗಿ ದೇಶಿ ಪಟಾಕಿ ಉದ್ಯಮದಲ್ಲಿ ಹೊಸ ನಿರೀಕ್ಷೆ ಹುಟ್ಟಿತ್ತು. ಕೈಗಾರಿಕೆಯ ಕಷ್ಟ ಇದಾದರೆ, ಹಬ್ಬಕ್ಕೆಂದು ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಸಾವಿರಾರು ಮಂದಿ ವ್ಯಾಪಾರಸ್ಥರು ಈಗಾಗಲೇ ಮುಂಗಡ ಹಣ ನೀಡಿ ಪಟಾಕಿ ಕಾದಿರಿಸಿದ್ದಾರೆ. ಒಂದೆರಡು ದಿನಗಳಲ್ಲಿ ಪಟಾಕಿಯನ್ನು ಸ್ವೀಕರಿಸಬೇಕು ಎನ್ನುತ್ತಿರುವಾಗ ರಾಜ್ಯ ಸರಕಾರ ದಿಢೀರ್‌ ನಿಷೇಧಿಸಿರುವುದು ಈ ವ್ಯಾಪಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಲವು ಉದ್ಯಮಗಳು ನೇರವಾಗಿ ನಮ್ಮ ರಾಜ್ಯಕ್ಕೆ ಸಂಬಂಧಿಸಿ ರುವುದಿಲ್ಲ, ಆದರೆ ಅವುಗಳ ಗ್ರಾಹಕರು ಇರುತ್ತಾರೆ. ಪರೋಕ್ಷ ಉದ್ಯಮಗಳು (ವ್ಯಾಪಾ ರಸ್ಥರು ಇತ್ಯಾದಿ) ಇವರನ್ನು ಆಶ್ರಯಿಸಿರುತ್ತಾರೆ. ಇವರೆಲ್ಲರೂ ಸ್ಥಳೀಯ ಆರ್ಥಿ ಕತೆಯ ಕೊಂಡಿಗಳು. ಇವುಗಳ ಮೇಲಾಗುವ ಪರಿಣಾಮವನ್ನೂ ಗಮನ ದಲ್ಲಿಟ್ಟು ಕೊಂಡು ಸಾಕಷ್ಟು ಮೊದಲೇ ಸರಕಾರ ಇಂಥ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದುದು ಅಗತ್ಯ. ಆಗ ಸ್ಥಳೀಯ ಉದ್ಯಮ, ಉದ್ಯಮಿಗಳಿಗೆ ಆಗುವ ನಷ್ಟವನ್ನು ತಡೆಯಬಹುದು. ಅದೂ ಆಡಳಿತ ನಡೆಸುವವರ ಆದ್ಯ ಕರ್ತವ್ಯ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.