ಬಾಂಗ್ಲಾ ಕಿರಿಯರ ದುರ್ವರ್ತನೆ : ಕ್ರೀಡಾಸ್ಫೂರ್ತಿ ಮುಖ್ಯ


Team Udayavani, Feb 11, 2020, 6:57 AM IST

bangladesh

ದಕ್ಷಿಣ ಆಫ್ರಿಕದಲ್ಲಿ ನಡೆದ ಅಂಡರ್‌-19 ವರ್ಲ್ಡ್ಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಪಂದ್ಯ ಮುಗಿದ ಬಳಿಕ ಸಂಭವಿಸಿದ ಘಟನೆ ಕ್ರೀಡಾಸ್ಫೂರ್ತಿಗೆ ವ್ಯತಿರಿಕ್ತವಾಗಿತ್ತು. ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಪಂದ್ಯದಲ್ಲಿ ಭಾರತವನ್ನು 3 ವಿಕೆಟ್‌ಗಳಿಂದ ಸೋಲಿಸಿ ಕಪ್‌ ಎತ್ತಿಕೊಳ್ಳುವಲ್ಲಿ ಬಾಂಗ್ಲಾದೇಶದ ಕಿರಿಯರು ಯಶಸ್ವಿಯಾದರು. ಇದು ಬಾಂಗ್ಲಾದೇಶಕ್ಕೆ ಯಾವುದೇ ಮಟ್ಟದಲ್ಲಿ ಸಿಗುತ್ತಿರುವ ಮೊದಲ ವಿಶ್ವಕಪ್‌. ಸಹಜವಾಗಿಯೇ ಕ್ರಿಕೆಟಿಗರು ವಿಪರೀತ ರೋಮಾಂಚನಗೊಂಡಿದ್ದರು. ಆದರೆ ಈ ಉನ್ಮಾದದಲ್ಲಿ ಅವರು ವರ್ತಿಸಿದ ರೀತಿ ಮಾತ್ರ ಕ್ರಿಕೆಟ್‌ ಆಟದ ಉದಯೋನ್ಮುಖ ಪ್ರತಿಭೆಗಳಿಗೆ ತಕ್ಕುದಾಗಿ ಇರಲಿಲ್ಲ.

ಮಳೆಬಾಧಿತ ಪಂದ್ಯದಲ್ಲಿ ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ಬಾಂಗ್ಲಾಕ್ಕೆ ಗೆಲುವು ಒಲಿಯಿತು. ಈ ಒಂದು ಗೆಲುವಿಗೆ ಆ ತಂಡ ಅರ್ಹವೂ ಆಗಿತ್ತು. ಈ ಮೂಲಕ ಅಂಡರ್‌-19ನಲ್ಲಿ ಸತತ ಐದನೇ ಸಲ ಕಪ್‌ ಗೆಲ್ಲುವ ಭಾರತದ ನಾಗಾಲೋಟಕ್ಕೆ ಬ್ರೇಕ್‌ ಹಾಕಿತು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಭಾರತ 10 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದ ಹಿನ್ನೆಲೆಯಲ್ಲಿ ಹೇಳುವುದಾದರೆ ಬಲಿಷ್ಠ ಭಾರತ ತಂಡವನ್ನು ಸೋಲಿಸುವಲ್ಲಿ ಬಾಂಗ್ಲಾದ ಕಿರಿಯರು ತೋರಿಸಿದ ಕೆಚ್ಚೆದೆ ಅಭಿನಂದನಾರ್ಹವೇ. ಏಷ್ಯಾದ ಇನ್ನೊಂದು ಬಲಿಷ್ಠ ತಂಡವಾಗಿ ಹೊರಹೊಮ್ಮುವ ಎಲ್ಲ ಅರ್ಹತೆಗಳು ಬಾಂಗ್ಲಾಕ್ಕಿದೆ. ಪುಟ್ಟ ರಾಷ್ಟ್ರದಲ್ಲಿ ಕ್ರಿಕೆಟ್‌ಗೆ ಉತ್ತಮ ಭವಿಷ್ಯವಿದೆ ಎಂದು ಕಿರಿಯರು ತೋರಿಸಿಕೊಟ್ಟಿದ್ದಾರೆ.

ಆದರೆ ಕೂಟದುದ್ದಕ್ಕೂ ಅವರು ತೋರಿಸಿದ ಅದ್ಭುತ ಸಾಧನೆಯನ್ನು ಅವರ ಈ ಒಂದು ಕ್ಷಣದ ವರ್ತನೆ ನಗಣ್ಯವಾಗಿಸಿತು. ಎಲ್ಲ ಬಣ್ಣವನ್ನು ಮಸಿನುಂಗಿತು ಎಂಬಂತೆ ಗೆಲುವಿನ ಉನ್ಮಾದದಲ್ಲಿ ಮಾಡಿದ ಯಡವಟ್ಟು ಬಾಂಗ್ಲಾದ ಕಿರಿಯರ ಬಗ್ಗೆ ಕ್ರಿಕೆಟ್‌ ಜಗತ್ತು ಹೊಂದಿದ್ದ ಭಾವನೆಯನ್ನು ಬದಲಾಯಿಸಿದೆ. ಗೆಲುವಿನ ಸಂಭ್ರಮಾಚಾರಣೆಯಲ್ಲಿದ್ದ ಬಾಂಗ್ಲಾ ಕಿರಿಯರು, ಭಾರತ ತಂಡದವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇದನ್ನು ಭಾರತೀಯರು ವಿರೋಧಿಸಿದಾಗ ಉಭಯ ತಂಡಗಳ ನಡುವೆ ಮೈದಾನದಲ್ಲೇ ನೂಕಾಟ-ತಳ್ಳಾಟ ನಡೆದು ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇದಷ್ಟೇ ಅಲ್ಲದೇ, ಪಂದ್ಯದ ವೇಳೆಯಲ್ಲೂ ಭಾರತೀಯ ಕ್ರಿಕೆಟಿಗರೆಡೆಗೆ ಬಾಂಗ್ಲಾದೇಶಿ ಆಟಗಾರರು ಅನವಶ್ಯಕವಾಗಿ ಅಗ್ರೆಸಿವ್‌ ವರ್ತನೆ ತೋರಿಸಿದರು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕಿರಿಯರ ತಂಡದ ಈ ವರ್ತನೆ ಬಾಂಗ್ಲಾದೇಶದ ಹಿರಿಯರ ತಂಡದ ಪ್ರತಿರೂಪದಂತಿರುವುದು. ಮೊದಲಿನಿಂದಲೂ ಬಾಂಗ್ಲಾದೇಶ ತಂಡ ತನ್ನ ದುರ್ವರ್ತನೆಗಳಿಂದಲೇ ಕುಖ್ಯಾತಿ ಪಡೆದಿದೆ. ಗೆಲುವು ಸನ್ನಿಹಿತವಾದಂತೆಯೇ ಎದುರಾಳಿ ತಂಡವನ್ನು ಅದು ಕೆಣಕುವ ರೀತಿ ನಿಜಕ್ಕೂ ಅಸಹ್ಯ ಹುಟ್ಟಿಸುವಂತಿರುತ್ತದೆ. ಶ್ರೀಲಂಕಾದಲ್ಲಿ ನಡೆದ ನಿಧಾಸ್‌ ಟ್ರೋಫಿಯಲ್ಲಿ ಶ್ರೀಲಂಕನ್‌ ಟೀಂ ಅನ್ನು ಸೋಲಿಸಿ ಬಾಂಗ್ಲಾದೇಶ ಮಾಡಿದ ನಾಗಿನ್‌(ಹಾವಿನಂತೆ) ಡ್ಯಾನ್ಸ್‌ ಎಷ್ಟು ಟೀಕೆಗೊಳಗಾಯಿತೆಂದರೆ, ಈಗ ಆ ರೀತಿಯ ಸಂಭ್ರಮಾಚರಣೆಯನ್ನೇ ಆ ತಂಡ ಕೈ ಬಿಟ್ಟಿದೆ. ಅದರಲ್ಲೂ ಭಾರತದ ವಿರುದ್ಧದ ಪಂದ್ಯಗಳ ವೇಳೆಯಂತೂ ಬಾಂಗ್ಲಾದೇಶಿ ಕ್ರೀಡಾಭಿಮಾನಿಗಳ, ಪತ್ರಿಕೆಗಳ ಹಾಗೂ ಆಟಗಾರರ ವರ್ತನೆ ಹದ್ದು ಮೀರುತ್ತದೆ.

ಇದೀಗ ಐಸಿಸಿ ಈ ಕ್ರಿಕೆಟಿಗರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಆದರೆ ಇದರಿಂದ ಕಳಂಕವೇನೂ ತೊಡೆದು ಹೋಗುವುದಿಲ್ಲ . ಬಾಂಗ್ಲಾ ನಾಯಕ ಅಕºರ್‌ ಅಲಿಯೇನೋ ತನ್ನ ತಂಡದ ದುರ್ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಆದರೆ ಆಟಗಾರರು ಗೆಲುವಿನ ಸಂಭ್ರಮದಲ್ಲಿ ಭಾವನಾತ್ಮಕವಾಗಿ ಉನ್ಮತ್ತರಾಗಿದ್ದರು. ಹೀಗಾಗಿ ಅವರಿಂದ ಈ ಪ್ರಮಾದ ಸಂಭವಿಸಿದೆ ಎಂಬ ಅವರ ಸಮಾಜಾಯಿಷಿ ಒಪ್ಪತಕ್ಕದ್ದಲ್ಲ. ಇಂಥ ಸಂದರ್ಭದಲ್ಲಿ ಕ್ರಿಕೆಟ್‌ ಕೋಚ್‌ಗಳ ಜವಾಬ್ದಾರಿ ದೊಡ್ಡದು.

ಇವರೆಲ್ಲ ಇನ್ನೂ ಹದಿಹರೆಯದ ಹುಡುಗರು. ಅವರನ್ನು ಆಟದಲ್ಲಿ ಮಾತ್ರ ಪಳಗಿಸುವುದಲ್ಲ. ಮೈದಾನದಲ್ಲಿ ಯಾವ ರೀತಿ ವರ್ತಿಸಬೇಕೆಂಬುದನ್ನೂ ಕಲಿಸಿಕೊಡಬೇಕು. ಆಟದ ಆವೇಶದಲ್ಲಿ ಹುಡುಗರು ತಟ್ಟನೆ ಕೆರಳುವುದು ಸಾಮಾನ್ಯ. ಯಾವ ಪರಿಸ್ಥಿತಿಯಲ್ಲೂ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳದಿರುವುದು ಹೇಗೆ ಎನ್ನುವುದು ಕೂಡ ಕೋಚಿಂಗ್‌ನ ಅಂಗವಾಗಿರಬೇಕು.

ಸೋಲು-ಗೆಲುವು ಯಾವುದೇ ಆಟದ ಅವಿಭಾಜ್ಯ ಅಂಗವಾಗಿರುತ್ತದೆ. ಕೆಲವು ಪಂದ್ಯಗಳಲ್ಲಿ ಗೆಲ್ಲಬಹುದು, ಕೆಲವು ಪಂದ್ಯಗಳಲ್ಲಿ ಸೋಲಬಹುದು. ಗೆದ್ದಾಗ ವಿಪರೀತ ಬೀಗದೆ ಸೋತಾಗ ವಿಪರೀತ ಕುಗ್ಗದೆ ಸಮಚಿತ್ತವನ್ನು ಕಾಪಾಡಿಕೊಳ್ಳುವವನೇ ನಿಜವಾಗಿ ಕ್ರೀಡಾಪಟು ಎಂದೆನಿಸಿಕೊಳ್ಳುತ್ತಾನೆ ಹಾಗೂ ಇದುವೇ ನಿಜವಾದ ಕ್ರೀಡಾಸ್ಫೂರ್ತಿ. ಸಚಿನ್‌ ತೆಂಡುಲ್ಕರ್‌, ಮಹೇಂದ್ರ ಸಿಂಗ್‌ ಧೋನಿ, ವಿಲ್ಲಿಯಮ್ಸನ್‌ ಮುಂತಾದ ಕ್ರಿಕೆಟಿಗರು ಯಾವ ಒತ್ತಡದ ಪರಿಸ್ಥಿಯಲ್ಲೂ ತಾಳ್ಮೆ ಕಳೆದುಕೊಳ್ಳದ ಶಾಂತಚಿತ್ತದ ವರ್ತನೆಯಿಂದಾಗಿ ಕ್ರಿಕೆಟ್‌ ಲೋಕದಲ್ಲಿ ಎತ್ತರಕ್ಕೇರಿದವರು. ಕಿರಿಯರು ಇಂಥ ಹಿರಿಯ ಕ್ರಿಕೆಟಿಗರಿಂದ ಕಲಿಯುವುದು ಸಾಕಷ್ಟಿದೆ.

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.