ಸಮಸ್ಯೆಯ ಮೂಲಕ್ಕೆ ಕೊಡಲಿಯೇಟು ಹಾಕಬೇಕು


Team Udayavani, Feb 16, 2019, 12:30 AM IST

41.jpg

ಕಾಶ್ಮೀರದ ಅವಂತಿಪೋರಾದಲ್ಲಿ ಗುರುವಾರ ಸಿಆರ್‌ಪಿಎಫ್ ಯೋಧರ ಮೇಲೆ ನಡೆದಿರುವ ಉಗ್ರರ ದಾಳಿ ಇತ್ತೀಚೆಗಿನ ವರ್ಷಗಳಲ್ಲೇ ಅತಿ ಭೀಕರವಾದದ್ದು. ಬಸ್ಸಿನಲ್ಲಿದ್ದ ಎಲ್ಲ ಯೋಧರನ್ನು ಬಲಿತೆಗೆದುಕೊಂಡ ಈ ದಾಳಿ ನಡೆಸಿದ್ದು ಯಾರು ಎಂಬ ಅನುಮಾನ ಉಳಿದಿಲ್ಲ. ಏಕೆಂದರೆ ದಾಳಿ ನಡೆದ ಬೆನ್ನಿಗೆ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಸ್ಥಳೀಯ ಯುವಕನನ್ನು ಬಳಸಿ ಫಿದಾಯಿನ್‌ ದಾಳಿ ನಡೆಸಿರುವುದಾಗಿ ಹೇಳಿದೆ. ವಾಹನಗಳಲ್ಲಿ ಸ್ಫೋಟಕ ತುಂಬಿಸಿ ಢಿಕ್ಕಿ ಹೊಡೆದು ಸ್ಫೋಟಿಸುವ ದಾಳಿ ಭಾರತಕ್ಕೆ ಹೊಸದಲ್ಲವಾದರೂ ಬಹಳ ವರ್ಷಗಳ ಬಳಿಕ ಉಗ್ರರು ಮತ್ತೆ ಹಳೇ ತಂತ್ರವನ್ನು ಉಪಯೋಗಿಸಿರುವುದು ಅಚ್ಚರಿಗೆ ಕಾರಣ. ಇದಕ್ಕೆ ಪ್ರತಿಯಾಗಿ ರಣತಂತ್ರ ರೂಪಿಸಿ ಜಾರಿಗೊಳಿಸಬೇಕಾದುದು ಅಗತ್ಯ. ಉಗ್ರ ದಾಳಿಗೆ ಬಲಿಯಾಗಿರುವ ಯೋಧರಿಗಾಗಿ ದೇಶ ಮಮ್ಮಲ ಮರುಗುತ್ತಿದೆ. ಅದೇ ರೀತಿ ಉಗ್ರ ದಾಳಿಯ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಿದೆ. ಈಗಲೇ ಪಾಕಿಸ್ಥಾನದ ಮೇಲೆ ದಾಳಿ ನಡೆಸಬೇಕೆಂಬುದರಿಂದ ಹಿಡಿದು ಇನ್ನೊಂದು ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಪಾಠ ಕಲಿಸಬೇಕೆಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ. ಆದರೆ ಉಗ್ರರ ನೆಲೆಗಳಿಗೆ ಅವಕಾಶ ನೀಡಿರುವ ಪಾಕಿಸ್ತಾನವನ್ನು ಇಂಥ ಒಂದೇ ನೆಲೆಯಿಂದ ಉತ್ತರ ಕೊಟ್ಟರೆ ಸಾಲದು. ಈ ಸಮಸ್ಯೆಗೆ ಬಹುಸ್ತರೀಯ ನೆಲೆಗಳಲ್ಲೂ ಉತ್ತರ ಹುಡುಕಬೇಕು. ಅದಕ್ಕೆ ವಿವೇಚನಾಯುಕ್ತ ನಡೆ ಅವಶ್ಯ. 

ಪಾಕಿಸ್ಥಾನದಲ್ಲಿ ಸರಕಾರ ಬದಲಾದ ಬಳಿಕ ಉಗ್ರವಾದದತ್ತ ಇರುವ ಧೋರಣೆಯೂ ಬದಲಾದೀತೆಂಬ ಸಣ್ಣ ನಿರೀಕ್ಷೆ ಇತ್ತು. ನಿನ್ನೆಯ ದಾಳಿಯಿಂದಾಗಿ ಅದು ಹುಸಿಯಾಗಿದೆ. ಯಾವ ಸರಕಾರ ಬಂದರೂ ಪಾಕ್‌ನ ಚಾಳಿ ಬದಲಾಗದು ಎನ್ನುವುದು ಸ್ಪಷ್ಟ. ಅಸಲಿಗೆ ಈಗ ಅಲ್ಲಿ ಸರಕಾರ ಹೆಸರಿಗೆ ಮಾತ್ರ ಇದೆ. ನಿಯಂತ್ರಣವೆಲ್ಲಾ ಸೇನೆಯ ಕೈಯಲ್ಲಿದೆ. ಸೇನೆ ಮತ್ತು ಗೂಢಚಾರಿಕೆ ಸಂಸ್ಥೆ ಐಎಸ್‌ಐ ಸೇರಿಯೇ ಜೈಶ್‌ ಉಗ್ರ ಸಂಘಟನೆಯನ್ನು ಬಳಸಿ ಈ ಕೃತ್ಯ ಎಸಗಿದೆ ಎನ್ನುವ ಅಭಿಪ್ರಾಯ ಮೇಲ್ನೋಟಕ್ಕೆ ಕಾಣುವಂಥದ್ದು.  ಅಮೆರಿಕದ ಬೇಹುಪಡೆಯ ಮಾಜಿ ಮುಖ್ಯಸ್ಥರೂ ಈ ಆಯಾಮದತ್ತ ಗಮನ ಸೆಳೆದಿದ್ದಾರೆ.  ದಾಳಿಯ ಹೊಣೆ ಹೊತ್ತ ಜೈಶ್‌ ಉಗ್ರ ಸಂಘಟನೆಯನ್ನು ಪಾಕಿಸ್ಥಾನ 2002ರಲ್ಲಿಯೇ ನಿಷೇಧಿಸಿದೆ. ಆದರೆ ಈ ನಿಷೇಧ ಕಾಗದದಲ್ಲಿ ಮಾತ್ರ ಇದೆ. ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಂಜಾಬ್‌ ಪ್ರಾಂತ್ಯವನ್ನು ನೆಲೆಯಾಗಿ ಮಾಡಿಕೊಂಡು ಪಾಕಿಸ್ಥಾನದಾದ್ಯಂತ ಮುಕ್ತವಾಗಿ ಓಡಾಡುತ್ತ ಸಭೆಗಳನ್ನು ನಡೆಸಿ ಉಗ್ರಗಾಮಿ ಸಂಘಟನೆಗೆ ಸದಸ್ಯರನ್ನು ಸೇರಿಸುತ್ತಿದ್ದಾನೆ. ಸಂಸತ್ತಿನ ಮೇಲಾದ ದಾಳಿಯೂ ಸೇರಿದಂತೆ ಹಲವು ದಾಳಿಗಳನ್ನು ಮಸೂದ್‌ ಎಸಗಿದ್ದಾನೆ. ಆದರೆ ಪಾಕಿಸ್ಥಾನ ಇನ್ನೂ ಅವನ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದು ಭಯೋತ್ಪಾದನೆಯತ್ತ ಆ ದೇಶ ಹೊಂದಿರುವ ದ್ವಿಮುಖ ನೀತಿಗೆ ಸಾಕ್ಷ್ಯ. ದಾಳಿಯ ದಾಖಲೆಗಳನ್ನು ಸಂಗ್ರಹಿಸಿ ಕೊಟ್ಟು ಉಗ್ರನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗೋಗರೆಯುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದು ಮುಂಬಯಿ ದಾಳಿಯಿಂದ ಅನುಭವಕ್ಕೆ ಬಂದಿದೆ. ಹೀಗಾಗಿ ಸರಕಾರ ಅವಂತಿಪೋರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನ ದಾರಿಯನ್ನು ಆಯ್ದುಕೊಳ್ಳುವುದು ಸೂಕ್ತ. ಇದು ಒಂದು ದಾಳಿಗೆ ಎಸಗಿದ ಪ್ರತೀಕಾರವಾಗದೆ ಸಮಸ್ಯೆಯ ಮೂಲಕ್ಕೆ ಕೊಡುವ ಕೊಡಲಿ ಯೇಟಾಗಬೇಕು.  ಭಯೋತ್ಪಾದನೆಗೆ ಸಂಬಂಧಿಸಿದಂತೆ ಅಮೆರಿಕ ಚೀನ ಕ್ರಮ ಕೈಗೊಂಡೀತು ಎಂದು ಕಾಯುವುದರಲ್ಲಿ ಅರ್ಥವಿಲ್ಲ. ಪಕ್ಕದ್ಲಲೇ ಶತ್ರು ಇರು ವಾಗ ದೂರದಿಂದ ಬರುವ ನೆರವಿನ ನಿರೀಕ್ಷೆಯಲ್ಲಿರುವುದಕ್ಕಿಂತ ಶತ್ರುವನ್ನು ಎದುರಿಸಲು ತಯಾರಿ ಮಾಡಿಟ್ಟುಕೊಳ್ಳುವುದು ಸರಿಯಾದ ಕ್ರಮ. ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆ ನಾವು ಎದುರಿಸುವ ಸಮಸ್ಯೆ, ಇದಕ್ಕೆ ನಾವೇ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕಾಗಿ ಅಂತರಾಷ್ಟ್ರೀಯ ವೇದಿಕೆಗಳೂ ಸೇರಿದಂತೆ ಇರುವ ಎಲ್ಲ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. 

ಭದ್ರತಾ ಪಡೆಗಳ ಮೇಲೆ ಪದೇ ಪದೇ ಈ ಮಾದರಿಯ ದಾಳಿಯಾದರೆ ಅದು ಸೇನೆಯ ನೈತಿಕ ಸ್ಥೈರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ ಜನರಲ್ಲೂ ಸೇನೆಗೆ ಸೇರುವುದೇ ಅಸುರಕ್ಷಿತ ಎಂಬ ಭಾವನೆಯನ್ನು ಮೂಡಿಸುವ ಸಾಧ್ಯತೆಯಿದೆ. ತಲೆಮಾರುಗಳಿಗೆ ಈ ಭಾವನೆ ದಾಟುತ್ತಾ ಹೋದರೆ ಪರಿಸ್ಥಿತಿ ಗಂಭೀರವಾಗಬಹುದು. ದೇಶ ವನ್ನು ರಕ್ಷಿಸುವ ಪ್ರತಿಯೊಬ್ಬ ಯೋಧನ ಪ್ರಾಣ ಅತ್ಯಂತ ಅಮೂಲ್ಯವಾದದ್ದು. ಅದೇ ರೀತಿ ದೇಶದ ಹಿತಾಸಕ್ತಿಯೂ ಪರಮೋಚ್ಚವಾದದ್ದು. ಸರಕಾರ ಕೈಗೊಳ್ಳುವ ಯಾವುದೇ ನಿರ್ಧಾರದಲ್ಲಿ ಈ ಎರಡು ಅಂಶಗಳಿಗೂ ಆದ್ಯತೆಯಿರಬೇಕು. ಪಾಕಿಸ್ಥಾನದ ಪರಮಾಪ್ತ ಸ್ಥಾನಮಾನ ರದ್ದುಪಡಿಸಿ ರುವುದು ಈ ನಿಟ್ಟಿನಲ್ಲಿ ಇಟ್ಟಿರುವ ಒಂದು ದೃಢ ನಡೆ. ಮುಂದೆ ಇನ್ನಷ್ಟು ಕಠಿನ ಕ್ರಮಗಳ ಮೂಲಕ ಆ ದೇಶದಿಂದಾಗುತ್ತಿರುವ ಉಪಟಳವನ್ನು ನಿಗ್ರಹಿಸಬೇಕು. ಜತೆಗೆ ನಾಗರಿಕರು, ರಾಜಕೀಯ ಪಕ್ಷಗಳೂ ಒಕ್ಕೊರಲಿನಿಂದ ಯೋಧರನ್ನು ಬೆಂಬಲಿಸಬೇಕು. ಇದು ಈ ಹೊತ್ತಿನ ತುರ್ತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.