ಸಾರಿಗೆ ನೌಕರರ ಪ್ರತಿಭಟನೆ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು


Team Udayavani, Dec 12, 2020, 6:10 AM IST

ಸಾರಿಗೆ ನೌಕರರ ಪ್ರತಿಭಟನೆ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು

ಸಾರಿಗೆ ನೌಕರರ ದಿಢೀರ್‌ ಮುಷ್ಕರ ಇಡೀ ದಿನ ರಾಜ್ಯದ ಸಂಚಾರ ವ್ಯವಸ್ಥೆಯನ್ನು ಏರುಪೇರು ಮಾಡಿದೆ. ಈ ಮಧ್ಯೆ ನೌಕರರ ಮನವೊಲಿಸುವಲ್ಲಿ ಸರ್ಕಾರ ವಿಫ‌ಲವಾದ ಹಿನ್ನೆಲೆಯಲ್ಲಿ ಇದು ಸತತ ಎರಡನೇ ದಿನವೂ ಮುಂದುವರಿಯುವ ಸ್ಪಷ್ಟ ಸೂಚನೆ ಗಳಿವೆ. ಪೊಲೀಸ್‌ ಇಲಾಖೆಯಂತೆ ಅಗತ್ಯ ಸೇವೆಗಳಲ್ಲಿ ಬರುವ ತಮ್ಮನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎನ್ನುವ ಬೇಡಿಕೆ ನ್ಯಾಯ ಯುತ ವಾಗಿರಬಹುದು. ಆದರೆ, ಯಾವುದೇ ಮುನ್ಸೂಚನೆ ಇಲ್ಲದೆ ಸೇವೆ ಸ್ಥಗಿತಗೊಳಿಸಿದ್ದರಿಂದ ಜನರಿಗೆ ಅದರಲ್ಲೂ ಶ್ರಮಿಕ ವರ್ಗಕ್ಕೆ ಇದರಿಂದ ಹೆಚ್ಚು ತೊಂದರೆ ಆಗಿದೆ.

ಮುಷ್ಕರ ನಿರತರು ಮುಂಚಿತವಾಗಿ ಈ ಬಗ್ಗೆ ಸೂಚನೆ ನೀಡಬಹುದಿತ್ತು. ಅಥವಾ ಸರ್ಕಾರವೇ ಹೋರಾಟದ ತೀವ್ರತೆ ಅರಿತು ಮಾತುಕತೆಗೆ ಕರೆದು, ಭರವಸೆ ನೀಡಬಹುದಿತ್ತು. ಅಷ್ಟಕ್ಕೂ ಹಿಂದಿನ ದಿನವೇ ಕಾಲ್ನಡಿಗೆ ಜಾಥಾ ಮೂಲಕ ಸಾರಿಗೆ ನೌಕರರು ಸುಳಿವು ನೀಡಿದ್ದರು. ಗುಪ್ತಚರ ಇಲಾಖೆ ಮೂಲಕವೂ ಮಾಹಿತಿ ಲಭ್ಯವಾಗಿರುತ್ತದೆ. ಆದರೂ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿದಂತಿದೆ. ವಿಚಿತ್ರವೆಂದರೆ ಮುಷ್ಕರದಿಂದ ಅಂತರ ಕಾಯ್ದುಕೊಂಡ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿ, ಹೋರಾಟ ಕೈಬಿಡಲು ಮನವಿ ಮಾಡಿತು.

ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಸಾರಿಗೆ ನೌಕರರ ಬೇಡಿಕೆ ಮೊದಲಿನಿಂದಲೂ ಇದೆ. ಆದರೆ, ನಿಯಮದಲ್ಲಿ ಅವಕಾಶ ಇಲ್ಲದ ಈ ಆಸೆ ಚಿಗು ರೊಡೆದಿದ್ದು 2018ರ ವಿಧಾನಸಭಾ ಚುನಾವಣೆ ವೇಳೆ. ಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಇಂತಹದ್ದೊಂದು ಭರವಸೆ ನೀಡಿದ್ದರು. ನಂತರ ಈ ಹೋರಾಟ ಗಟ್ಟಿಗೊಳ್ಳಲು ಕಾರಣವಾಗಿದ್ದು ಸ್ವತಃ ಸಾರಿಗೆ ನಿಗಮಗಳ ಧೋರಣೆ ಎಂದರೆ ತಪ್ಪಾಗದು. ಮೊದಲಿನಿಂದಲೂ ಮೇಲಧಿ ಕಾರಿಗಳ ಕಿರುಕುಳ, ಟಾರ್ಗೆಟ್‌ ಪೂರೈಸುವ ಒತ್ತಡ, ಅಮಾನತು ಭಯದಲ್ಲೇ ಕೆಲಸ ಮಾಡುವ ಅನಿವಾರ್ಯ ಸ್ಥಿತಿ ಇದೆ. ಈ ಮಧ್ಯೆ ಕೊರೊನಾ ತಂದ ಅಭದ್ರತೆ, ಕೇಂದ್ರ ಸರ್ಕಾರವು ಪರ್ಮಿಟ್‌ ವಿಚಾರದಲ್ಲಿ ಕೈಗೊಳ್ಳುತ್ತಿರುವ ಉದಾರೀಕರಣ ನೀತಿಗಳು, ನಿಗಮಗಳಲ್ಲಿ ಖಾಸಗೀಕರಣದ ವಾಸನೆಯಂತಹ ಕ್ರಮಗಳು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ದನಿಯನ್ನು ಗಟ್ಟಿಗೊಳಿಸಿತು.

ಒಬ್ಬ ಸಾಮಾನ್ಯ ದ್ವಿತೀಯ ದರ್ಜೆ ಸಹಾಯಕನಿಗೆ ಹೋಲಿಸಿದರೆ ಚಾಲಕ ಕಂ ನಿರ್ವಾಹಕನ ಮೂಲವೇತನ ನಾಲ್ಕೈದು ಸಾವಿರ ರೂ. ಕಡಿಮೆ ಇರುತ್ತದೆ. ಸೇವಾ ಭದ್ರತೆಯೂ ಇರುವುದಿಲ್ಲ. ನಿವೃತ್ತಿಯಾದಾಗ ಅಂತಿಮ ಅಭ್ಯರ್ಥನ (ಫೈನಲ್‌ ಸೆಟಲ್‌ಮೆಂಟ್‌) ಕೂಡ ಸರಿಯಾಗಿ ಆಗುವುದಿಲ್ಲ. ಬ್ಯಾಂಕ್‌ಗಳಲ್ಲಿ ಈ ಸಾರಿಗೆ ಸಿಬ್ಬಂದಿಗೆ ವೈಯ  ಕ್ತಿಕ ಸಾಲ ಕೂಡ ಹುಟ್ಟದ ಸ್ಥಿತಿ ಇದೆ ಎಂಬುದು ಸಾರಿಗೆ ನೌಕರರ ಅಳಲು. ಹಾಗಂತ, ಸರ್ಕಾರಿ ನೌಕರರನ್ನಾಗಿ ಘೋಷಿಸುವುದು ಕೂಡ ಅಷ್ಟು ಸುಲಭವಿಲ್ಲ. ಸಾರಿಗೆ ನಿಗ ಮವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ನಿಯಮದಲ್ಲಿ ಇದಕ್ಕೆ ಅವ ಕಾಶವೂ ಇಲ್ಲ. ಒಂದು ವೇಳೆ ಹೋರಾಟಕ್ಕೆ ಮಣಿದು ತಿದ್ದುಪಡಿ ಮಾಡಿ ಅವಕಾಶ ನೀಡಿ ದರೆ, ಸಾರಿಗೆ ನೌಕರರ ವೇತನ ಪಾವತಿ ಹೊಣೆ ಸರ್ಕಾರ ಹೊರಬೇಕಾಗುತ್ತದೆ. ಅಲ್ಲದೆ, ಸಮಾನ ವೇತನ ಮತ್ತಿತರ ಸೌಲಭ್ಯಗಳಿಂದ ನೂರಾರು ಕೋಟಿ ರೂ. ಹೊರೆ ಆಗುತ್ತದೆ. ಸದ್ಯದ ಸ್ಥಿತಿಯಲ್ಲಿ ಇದು ಕಷ್ಟ. ಅಷ್ಟೇ ಅಲ್ಲ, ಉಳಿದ ನಿಗಮ-ಮಂಡಳಿಗಳೂ ಇಂತಹದ್ದೇ ಬೇಡಿಕೆ ಇಡಬಹುದು. ಆಗ ಇಕ್ಕಟ್ಟಿಗೆ ಸಿಲುಕಲಿದೆ ಎಂಬುದು ಸರ್ಕಾರದ ವಾದ.

ಅದೇನೇ ಇರಲಿ, ಸರ್ಕಾರ-ಸಾರಿಗೆ ನೌಕರರ ನಡುವಿನ ಗುದ್ದಾಟದಲ್ಲಿ ಯಾವಾ ಗಲೂ ಗುರಿಯಾಗುವವರು ಸಾಮಾನ್ಯ ಜನ. ಇದನ್ನು ಗಮನದಲ್ಲಿ ಇಟ್ಟು ಕೊಂಡು ಸರ್ಕಾ ರವು ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ಅಗತ್ಯವಿದೆ. ಸರ್ಕಾರಿ ನೌಕರ ರನ್ನಾಗಿ ಪರಿಗಣಿಸಬೇಕು. ಇದು ಅಸಾಧ್ಯ ವಾದರೆ, ನಿಯಮಗಳಲ್ಲಿ ಮತ್ತಷ್ಟು ನೌಕರರ ಸ್ನೇಹಿ ಅಂಶಗಳನ್ನು ಸೇರಿಸಿ, ಭರವಸೆ ಮೂಡಿಸುವ ಕೆಲಸ ಆಗಬೇಕು. ಕೊರೊನಾ ಮತ್ತು ಅದರಿಂದ ಜಾರಿಯಾದ ಸುದೀರ್ಘ‌ ಲಾಕ್‌ಡೌನ್‌ನಿಂದ ಈಗಷ್ಟೇ ನಿಗ ಮಗಳು ಚೇತರಿಕೆ ಕಾಣುತ್ತಿವೆ. ಈ ಮಧ್ಯೆ ಮುಷ್ಕರಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿವೆ.

ಟಾಪ್ ನ್ಯೂಸ್

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.