ನೈಜ ಉದ್ದೇಶ ಮರೆಗೆ ವಿವಾದಕ್ಕೊಳಗಾದ ಬಂದ್‌


Team Udayavani, Jan 24, 2018, 1:18 PM IST

24-25.jpg

ಮಹದಾಯಿ ವಿವಾದ ಇತ್ಯರ್ಥಪಡಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಹತ್ತು ದಿನಗಳ ಅಂತರದಲ್ಲಿ ನಡೆಯಲಿರುವ ಎರಡು ಬಂದ್‌ಗಳೇ ಈಗ ವಿವಾದಕ್ಕೊಳಗಾಗಿವೆ. ಜ. 25ರಂದು ರಾಜ್ಯ ಬಂದ್‌ ಮತ್ತು ಫೆ. 4ರಂದು ಬೆಂಗಳೂರು ಬಂದ್‌ ನಡೆಸಲು ಕೆಲವು ಸಂಘಟನೆಗಳು ಕರೆ ನೀಡಿವೆ. ಬಂದ್‌ನ ಮುಂಚೂಣಿಯಲ್ಲಿರುವುದು ಹೋರಾಟಗಾರ ವಾಟಾಳ್‌ ನಾಗರಾಜ್‌. ಉ. ಕರ್ನಾಟಕದ ಲಕ್ಷಗಟ್ಟಲೆ ಜನರಿಗೆ ಜೀವನಾಧಾರವಾಗಿರುವ ಮಹದಾಯಿ ನೀರು ರಾಜ್ಯಕ್ಕೆ ಹರಿಯಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿ ಈ ಭಾಗದ ಜನರು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈಗ ನಡೆಸಲುದ್ದೇಶಿಸಿರುವ ಎರಡು ಬಂದ್‌ಗಳ ನೈಜ ಉದ್ದೇಶ ಮಹದಾ ಯಿಯೇ ಆಗಿದ್ದರೆ ಗೊಂದಲ ಉಂಟಾಗುತ್ತಿರಲಿಲ್ಲ. ಆದರೆ ಇದರ ಹಿಂದೆ ರಾಜಕೀಯ ಹಿತಾಸಕ್ತಿಗಾಗಿ ಕಾಣದ “ಕೈ’ಗಳು ಚಿತಾವಣೆ ನಡೆಸಿವೆ ಎಂಬ ಅನುಮಾನ ಹುಟ್ಟಿಕೊಂಡಿದೆ.  ಬಿಜೆಪಿಯ ಪರಿವರ್ತನಾ ಯಾತ್ರೆಯ ಕೊನೆಯ ಸಮಾವೇಶ ಜ. 25ರಂದು ಮೈಸೂರಿನಲ್ಲಿ ನಡೆಯಲಿದ್ದು, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಭಾಗವಹಿಸಲಿದ್ದಾರೆ. ಫೆ.4ರಂದು ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಎರಡು ಕಾರ್ಯಕ್ರಮಗಳನ್ನು ವಿಫ‌ಲ ಗೊಳಿಸಲು ಕಾಂಗ್ರೆಸ್‌ ಸಂಘಟನೆಗಳನ್ನು ಎತ್ತಿಕಟ್ಟಿ ಬಂದ್‌ ನಡೆಸುತ್ತಿದೆ ಎನ್ನುವುದು ಬಿಜೆಪಿ ಆರೋಪ. ರಾಜಕೀಯ ಸಂಚಿನ ಸುಳಿವು ಸಿಕ್ಕಿದ ಕಾರಣದಿಂದಲೇ ಬಂದ್‌ ಆಚರಿಸುವವರಲ್ಲೂ ಒಡಕು ಮೂಡಿದೆ. ಈಗಿರುವ ಪ್ರಶ್ನೆ ಮೋದಿ ಬರುವ ಸಂದರ್ಭದಲ್ಲಿ ಬಂದ್‌ ನಡೆಸಿದರೆ ಮಹದಾಯಿ ವಿವಾದ ಇತ್ಯರ್ಥವಾದೀತೇ ಎನ್ನುವುದು. ವಿವಾದ ನ್ಯಾಯಾಧಿಕರಣದ ವಿಚಾರಣೆಯಲ್ಲಿದ್ದು ಇನ್ನು ಕೆಲವೇ ತಿಂಗಳಲ್ಲಿ ತೀರ್ಪು ಹೊರಬೀಳಲಿದೆ. ಯಾವುದೇ ಬಂದ್‌, ಮುಷ್ಕರ ನಡೆಸಿದರೂ ನ್ಯಾಯಾಧಿಕರಣದ ಮೇಲೆ ಪ್ರಭಾವವಾಗುವುದಿಲ್ಲ.  

 ನ್ಯಾಯಾಧಿಕರಣದ ತೀರ್ಪು ಬರುವ ಮೊದಲೇ ಮೋದಿ ವಿವಾದ ಇತ್ಯರ್ಥಪಡಿಸಲು ಮುಂದಾಗುತ್ತಾರೆ ಎಂದು ನಿರೀಕ್ಷಿಸುವುದು ಅಸಾಧ್ಯ. ರಾಜ್ಯದಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿರುವುದರಿಂದ ಮೋದಿ ಕರ್ನಾಟಕ ಪರವಾಗಿ ವಿವಾದ ಇತ್ಯರ್ಥ ಪಡಿಸಲು ಮುಂದಾಗಬಹುದು ಎಂಬ ಲೆಕ್ಕಾಚಾರವೇ ತಪ್ಪು. ಹಾಗೊಂದು ವೇಳೆ ಕರ್ನಾಟಕದ ಪರವಾಗಿ ನಿಂತರೆ ಗೋವಾದಲ್ಲಿರುವ ಅವರ ಪಕ್ಷದ ಸರಕಾರ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಅವರಿಗೆ ಗೊತ್ತಿರುವುದಿಲ್ಲವೆ? ಚುನಾವಣೆಯ ಫ‌ಲಿತಾಂಶಕ್ಕಾಗಿ ಮೋದಿ ಒಂದು ಸರಕಾರವನ್ನು ಕಳೆದುಕೊಳ್ಳಲು ತಯಾರಿರುತ್ತಾರೆಯೇ? ಸದ್ಯದ ಪರಿಸ್ಥಿತಿಯನ್ನು ನೋಡುವಾಗ ಮಹದಾಯಿಗಿಂತಲೂ ಬಿಜೆಪಿಯ ಕಾರ್ಯಕ್ರಮವನ್ನು ವಿಫ‌ಲಗೊಳಿಸುವುದೇ ಎರಡು ಬಂದ್‌ಗಳ ಮುಖ್ಯ ಅಜೆಂಡಾ ಆಗಿರುವಂತೆ ಕಾಣಿಸುತ್ತಿದೆ. ಹಾಗೊಂದು ವೇಳೆ ಬಂದ್‌ನಿಂದ ವಿವಾದ ಇತ್ಯರ್ಥ ವಾಗುವುದಿದ್ದರೆ ಸುಮಾರು ಎರಡು ತಿಂಗಳು ಉತ್ತರ ಕರ್ನಾಟಕ ಹೊತ್ತಿ ಉರಿದಾಗ ಏಕೆ ಇತ್ಯರ್ಥವಾಗಲಿಲ್ಲ? ಎರಡು ವರ್ಷದಲ್ಲಿ ನಡೆದ 11 ಬಂದ್‌ಗಳಿಂದ ಬಗೆಹರಿಯದ ಸಮಸ್ಯೆ ಎರಡು ಬಂದ್‌ಗಳಿಂದ ಬಗೆಹರಿಯಲು ಸಾಧ್ಯವೇ?  ಹಾಗೆಂದು ಜನರು ಬಂದ್‌ ನಡೆಸಬಾರದು ಎಂದಲ್ಲ. ಬಂದ್‌, ಮುಷ್ಕರ ಇವೆಲ್ಲ ಆಡಳಿತದ ವಿರುದ್ಧ ತಮಗಿರುವ ಅಸಮಾಧಾನವನ್ನು ಪ್ರಕಟಿಸಲು ಜನರ ಕೈಯಲ್ಲಿರುವ ಪ್ರಬಲ ಅಸ್ತ್ರ. ಕೇರಳ ಹೈಕೋರ್ಟ್‌ ಬಂದ್‌ಗಳನ್ನು ಬಂದ್‌ ಮಾಡಬೇಕೆಂದು ಹೇಳಿದ್ದರೂ ಸುಪ್ರೀಂ ಕೋರ್ಟ್‌ ಪ್ರತಿಭಟಿಸುವ ಹಕ್ಕು ಹತ್ತಿಕ್ಕಬಾರದು ಎಂದು ಅಭಿಪ್ರಾಯಪಟ್ಟಿದೆ. ಆದರೆ ಪದೇ ಪದೇ ಬಂದ್‌ ಆಚರಿಸುವುದರಿಂದ ಆಗುವ ಹಾನಿಯ ಬಗ್ಗೆಯೂ ಅರಿವಿರಬೇಕು. ಪ್ರತಿ ಸಲ ಬಂದ್‌ ನಡೆದಾಗ ಕೋಟಿಗಟ್ಟಲೆ ರೂಪಾಯಿಯ ನಷ್ಟ ಉಂಟಾಗುತ್ತಿದೆ. ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ವಾಹನಗಳನ್ನು ಸುಟ್ಟು, ಅಂಗಡಿಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿ ತೊಂದರೆ ಕೊಟ್ಟು ಮಾಡುವ ಬಂದ್‌ನಿಂದೇನು ಪ್ರಯೋಜನ? ಪ್ರಸ್ತುತ ಬಂದ್‌ ಎನ್ನುವುದು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಉಳಿದ ಪಕ್ಷಗಳು ಬಳಸುವ ಒಂದು ಪ್ರಬಲ ಅಸ್ತ್ರ. ಇಂದು ಅದು ಕಾಂಗ್ರೆಸ್‌ ಆಗಿರಬಹುದು. ನಾಳೆ ಬಿಜೆಪಿ ಅಧಿಕಾರಕ್ಕೆ ಬಂದರೂ ಮಾಡುವುದು ಇದನ್ನೆ. ಹೀಗಾಗಿ ಬಂದ್‌ಗೆ ಸಂಬಂಧಿಸಿದಂತೆ ಯಾವ ಪಕ್ಷವನ್ನೂ ನಂಬುವಂತಿಲ್ಲ. 

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqewqewq

Doping: ಶಾಲು ಚೌಧರಿ ದೋಷಮುಕ್ತ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.