ಮಹಾರಾಷ್ಟ್ರದಲ್ಲಿ ಸಿಎಂ ಗದ್ದುಗೆಗೆ ಹಗ್ಗಜಗ್ಗಾಟ, ಜನಾದೇಶಕ್ಕೆ ಎಸಗಿದ ಅಪಚಾರ


Team Udayavani, Nov 11, 2019, 5:08 AM IST

maharastra

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಫ‌ಲಿತಾಂಶ ಪ್ರಕಟವಾಗಿ ಎರಡು ವಾರ ಕಳೆದಿದ್ದರೂ ಇನ್ನೂ ಸರಕಾರ ರಚನೆಯಾಗಿಲ್ಲ. ರಾಜ್ಯದ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಾ ಸಾಗುತ್ತಿದ್ದು, ಯಾರು ಸರಕಾರ ರಚಿಸುತ್ತಾರೆ ಎಂಬ ಕುತೂಹಲವನ್ನು ನಿರಂತರವಾಗಿ ಜಾರಿಯಲ್ಲಿಟ್ಟಿದೆ. ನಿಜಕ್ಕಾದರೆ ಸರಕಾರ ರಚಿಸಲು ಸ್ಪಷ್ಟ ಜನಾದೇಶ ಇರುವುದು ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ. ಆದರೆ ಶಿವಸೇನೆಯ ಕೆಲವು ಬೇಡಿಕೆಗಳಿಂದಾಗಿ ಸರಕಾರ ರಚನೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ರಾಜಕೀಯ ನಾಯಕರೆಲ್ಲ ಅಧಿಕಾರದ ಚೌಕಾಶಿಗಿಳಿದಿರುವುದರಿಂದ ಜನರ ಗೋಳನ್ನು ಕೇಳುವವರಿಲ್ಲದಂತಾಗಿದೆ. ವಿಧಾನಸಭೆಯ ಅವಧಿ ಮುಗಿದಿದ್ದು, ಬಹುಮತ ಇದ್ದರೂ ಸರಕಾರ ರಚಿಸದೆ ಕಾಲಹರಣ ಮಾಡುತ್ತಿರುವುದು ಜನಾದೇಶಕ್ಕೆ ಮಾಡುತ್ತಿರುವ ಅಪಮಾನ ಎನ್ನುವುದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು.

ತನ್ನ ಬೆಂಬಲ ಸಿಗಬೇಕಾದರೆ ಸರಕಾರದಲ್ಲಿ 50:50 ಸೂತ್ರ ಅಳವಡಿಕೆ ಯಾಗಬೇಕು ಎನ್ನುವುದು ಶಿವಸೇನೆಯ ಬೇಡಿಕೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಮೊದಲೇ ಬಿಜೆಪಿ ಜೊತೆ ಈ ಕುರಿತು ಮಾತುಕತೆ ಯಾಗಿತ್ತು ಎನ್ನುವುದು ಪಕ್ಷದ ಅಧ್ಯಕ್ಷ ಉದ್ಧವ ಠಾಕ್ರೆ ತನ್ನ ಬೇಡಿಕೆಗೆ ನೀಡುತ್ತಿರುವ ಸಮರ್ಥನೆ.ಈ ಸೂತ್ರದ ಪ್ರಕಾರ ಮಿತ್ರ ಪಕ್ಷಗಳೆರಡು ಮುಖ್ಯಮಂತ್ರಿ ಪಟ್ಟವನ್ನು ತಲಾ ಎರಡೂವರೆ ವರ್ಷದಂತೆ ಸಮಾನವಾಗಿ ಹಂಚಿ ಕೊಳ್ಳ ಬೇಕಾಗುತ್ತದೆ. ಆದರೆ ಮೈತ್ರಿ ಘೋಷಣೆಯಾಗವಾಗ ಆಗಲಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಾಗಲಿ ಎರಡೂ ಪಕ್ಷಗಳು 50:50 ಸೂತ್ರದ ಬಗ್ಗೆ ಚಕಾರ ಎತ್ತಿರಲಿಲ್ಲ. ಫ‌ಲಿತಾಂಶ ಪ್ರಕಟವಾದ ಬಳಿಕವೇ ಶಿವಸೇನೆ ಕಡೆಯಿಂದ ಈ ಬೇಡಿಕೆ ಕೇಳಿ ಬಂದದ್ದು. ಹೀಗಾಗಿ ಶಿವಸೇನೆಯ ಮಾತಿನ ಮೇಲೆ ಜನರಿಗೆ ಈಗಲೂ ಪೂರ್ಣ ನಂಬಿಕೆಯಿಲ್ಲ. ಒಂದು ವೇಳೆ ಹಾಗೊಂದು ಒಪ್ಪಂದ ಎರಡೂ ಪಕ್ಷಗಳ ನಡುವೆ ಆಗಿದ್ದರೆ ಅದನ್ನು ಜನರಿಂದ ಮುಚ್ಚಿಟ್ಟದ್ದು ಎರಡೂ ಪಕ್ಷಗಳ ತಪ್ಪು. ಪ್ರಚಾರದ ವೇಳೆ ದೇವೇಂದ್ರ ಫ‌ಡ್ನವಿಸ್‌ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬಂತೆ ಬಿಂಬಿಸಿ ಇದೀಗ ಏಕಾಏಕಿ ಮುಖ್ಯಮಂತ್ರಿ ಪಟ್ಟಕ್ಕೆ ಪಾಲುದಾರರು ಇದ್ದಾರೆ ಎನ್ನುವುದು ಜನರ ನಂಬಿಕೆಗೆ ಬಗೆಯುವ ದ್ರೋಹವಾಗುತ್ತದೆ.

ಮೈತ್ರಿಧರ್ಮ ಪಾಲನೆ ವಿಚಾರದಲ್ಲಿ ಶಿವಸೇನೆಯೊಳಗೆ ದ್ವಂದ್ವವಿರುವಂತೆ ಕಾಣಿಸುತ್ತದೆ. ಹಿಂದಿನ ಅವಧಿಯಲ್ಲೂ ಅದು ಅಧಿಕಾರದ ಪಾಲು ದಾರನಾಗಿರುವ ಹೊರತಾಗಿಯೂ ಸರಕಾರದ ತೀವ್ರ ಟೀಕಾಕಾರನಾಗಿತ್ತು. ಪ್ರಧಾನಿ ಮೋದಿಯನ್ನಂತೂ ನಿತ್ಯ ಎಂಬಂತೆ ಟೀಕಿಸುತ್ತಿತ್ತು.ಹಲವು ವಿಚಾರಗಳಲ್ಲಿ ಭಿನ್ನಭಿಪ್ರಾಯಗಳಿದ್ದರೂ ಸರಕಾರದಿಂದ ಹೊರಬರುವ ದಿಟ್ಟತನವನ್ನು ಅದು ತೋರಿಸಲಿಲ್ಲ. ಅನಂತರ ಚುನಾವಣೆ ಘೋಷಣೆಯಾದಾಗ ದಿಢೀರ್‌ ಎಂದು ಅದರ ನಿಲುವು ಮೆತ್ತಗಾಯಿತು. ಜೊತೆಯಾಗಿ ಸ್ಪರ್ಧಿಸಲು ಒಪ್ಪಿ ಇದೀಗ ಮೈತ್ರಿಕೂಟಕ್ಕೆ ಬಹುಮತ ಸಿಕ್ಕಿದರೂ ಸರಕಾರ ರಚಿಸಲು ಅನುವು ಮಾಡಿಕೊಡದಿರುವುದು ಸರಿಯಲ್ಲ.

ಯಾವ ಪಕ್ಷಕ್ಕೂ ಒಂಟಿಯಾಗಿ ಸರಕಾರ ರಚಿಸಲು ಬಹುಮತ ಇಲ್ಲದಿರುವ ಸ್ಥಿತಿಯಲ್ಲಿ ನಾನಾ ತರದ ಮೈತ್ರಿ ಚರ್ಚೆಯಲ್ಲಿದೆ. ಚುನಾವಣಾ ಕಣದಲ್ಲಿ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿ, ತದ್ವಿರುದ್ಧ ಸಿದ್ಧಾಂತಗಳುಳ್ಳ ಪಕ್ಷಗಳು ಒಂದು ವೇಳೆ ಅಧಿಕಾರಕ್ಕಾಗಿ ಕೈಜೋಡಿಸಿದರೆ ಅದು ಪ್ರಜಾ ತಂತ್ರದ ವಿಕಟ ಅಣಕವಾಗುತ್ತದೆ. ಹೀಗೊಂದು ಪ್ರಮಾದವನ್ನು ರಾಜ ಕೀಯ ಪಕ್ಷಗಳು ಎಸಗಿದರೆ ಮತದಾರರ ದೃಷ್ಟಿಯಲ್ಲಿ ಸಣ್ಣವರಾಗಬೇಕಾ ಗುತ್ತದೆ ಎಂಬ ಎಚ್ಚರಿಕೆ ಇರುವುದು ಅಗತ್ಯ.

ಮಹಾರಾಷ್ಟ್ರ ಕೈಗಾರಿಕೋದ್ಯಮದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರ. ಮುಂಬಯಿಗೆ ದೇಶದ ವಾಣಿಜ್ಯ ರಾಜಧಾನಿ ಎಂಬ ಹಿರಿಮೆಯಿದೆ. ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಿನಂತಿರುವ ನಗರವಿದು. ಇಂಥ ರಾಜ್ಯವೊಂದು ಬಹುಕಾಲ ಅರಾಜಕ ಸ್ಥಿತಿಯಲ್ಲಿರುವುದು ಸರಿಯಲ್ಲ. ಯಾರಿಗೂ ಸ್ಪಷ್ಟ ಜನಾದೇಶ ಸಿಕ್ಕಿಲ್ಲ ಎನ್ನುವುದು ನಿಜ. ಹಾಗೆಂದು ಸಿಕ್ಕಿರುವ ಜನಾದೇಶವನ್ನು ತಮ್ಮ ಲಾಲಸೆಗೆ ತಕ್ಕಂತೆ ಬಳಸಿಕೊಳ್ಳುವ ಅಧಿಕಾರ ಪಕ್ಷಗಳಿಗಿಲ್ಲ. ರಾಜ್ಯದ ರಾಜಕೀಯ ವ್ಯವಸ್ಥೆಯನ್ನು ಸ್ಥಿರತೆಗೆ ತರುವುದು ಎಲ್ಲ ಪಕ್ಷಗಳ ಸಮಾನ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಅವುಗಳು ಕಾರ್ಯ ಪ್ರವೃತ್ತವಾಗಬೇಕು.

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.