ಜಗತ್ತಿಗೆ ಈಗ ಮತ್ತೊಂದು ಯುದ್ಧದ ಅಗತ್ಯವಿಲ್ಲ


Team Udayavani, Aug 4, 2022, 6:00 AM IST

ಜಗತ್ತಿಗೆ ಈಗ ಮತ್ತೊಂದು ಯುದ್ಧದ ಅಗತ್ಯವಿಲ್ಲ

ಅಮೆರಿಕ ಹೌಸ್‌ನ ಸ್ಪೀಕರ್‌ ನ್ಯಾನ್ಸಿ ಅವರ ತೈವಾನ್‌ ಭೇಟಿ ಭಾರೀ ವಿವಾದ ಪಡೆದುಕೊಂಡಿದ್ದು, ಮತ್ತೊಂದು ಯುದ್ಧದ ಮುನ್ಸೂಚನೆ ತೋರಿಸುತ್ತಿದೆ. ಸದ್ಯ ಜಗತ್ತು ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದಿಂದಾಗಿ ನಲುಗಿ ಹೋಗಿದೆ. ಈಗ ಏನಾದರೂ ತೈವಾನ್‌ ಮೇಲೆ ಚೀನ ಯುದ್ಧ ಸಾರಿದರೆ, ಇಡೀ ವಿಶ್ವದ ಆರ್ಥಿಕತೆ ಮೇಲೇಳಲಾರದಂಥ ಸ್ಥಿತಿಗೆ ಹೋಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ವಿಚಿತ್ರವೆಂದರೆ, ಈಗ ತೈವಾನ್‌ ಚೀನದ ಅಧೀನದಲ್ಲಿಯೇ ಇದ್ದು, ಸ್ವಾಯತ್ತೆಯ ಸರಕಾರ ನಡೆಸುತ್ತಿದೆ. ಚೀನದಲ್ಲಿ ಕಮ್ಯೂನಿಸ್ಟ್‌ ಸರಕಾರವಿದ್ದರೆ, ತೈವಾನ್‌ನಲ್ಲಿ ಪ್ರಜಾಪ್ರಭುತ್ವ ಮಾದರಿ ಸರಕಾರವಿದೆ. ಚೀನಗಿಂತಲೂ ತೈವಾನ್‌ನಲ್ಲಿ ಜನರ ಪರಿಸ್ಥಿತಿ ಉತ್ತಮವಾಗಿದೆ. ಅಲ್ಲದೆ, ತೈವಾನ್‌ ಸ್ವತಂತ್ರವಾಗಿಯೇ ಬೇರೆ ಬೇರೆ ದೇಶಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಕೆಲವು ತಾಂತ್ರಿಕ ಕಂಪೆನಿಗಳು, ತಮ್ಮ ವಸ್ತುಗಳನ್ನು ಜಗತ್ತಿನಾದ್ಯಂತ ರಫ್ತು ಮಾಡುತ್ತಿವೆ.

ಈಗ ಚೀನದ ಕಂಗೆಡಿಸಿರುವ ವಿಚಾರವೆಂದರೆ, ತೈವಾನ್‌ ವಿಚಾರದಲ್ಲಿ ಪದೇ ಪದೆ ಅಮೆರಿಕ ಮೂಗು ತೂರಿಸುತ್ತಿದೆ ಎಂಬುದು. ಅಲ್ಲದೆ, ಯಾವುದೇ ಕಾರಣಕ್ಕೂ ತೈವಾನ್‌ ತನ್ನ ಕೈತಪ್ಪಿ ಹೋಗಬಾರದು ಎಂಬ ನಿಲುವು ಅದರದ್ದು. ಹೀಗಾಗಿಯೇ ಅದು ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳಲು ತಯಾರಾಗಿದೆ.

ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, ಮೊದಲಿನಿಂದಲೂ ತೈವಾನ್‌ ದೇಶ, ಚೀನದ ಕೈಯಿಂದ ಹೊರಗುಳಿಯಲು ಯತ್ನಿಸುತ್ತಲೇ ಇದೆ. ಇತಿಹಾಸವನ್ನು ನೋಡಿದರೆ, ಈ ಎರಡೂ ಭೂಭಾಗಗಳು ಒಂದಾಗಲೇ ಇಲ್ಲ. ಆದರೆ 1971ರಲ್ಲಿ ಚೀನ ಜಾರಿಗೆ ತಂದಿರುವ “ಒನ್‌ ಚೀನ’ ನೀತಿ, ಇತರ ಭೂಭಾಗಗಳ ಮೇಲೆ ಕಣ್ಣು ಹಾಕುವಂತೆ ಮಾಡಿದೆ. ಅಷ್ಟೇ ಅಲ್ಲ, ಟಿಬೆಟ್‌ ಅನ್ನು ಈಗಾಗಲೇ ನುಂಗಿಕೊಂಡಿರುವ ಅದು, ಭಾರತದ ಭೂಭಾಗಗಳ ಮೇಲೂ ಕಣ್ಣು ಹಾಕಿದೆ ಎಂಬುದು ನಗ್ನಸತ್ಯ.

ಇದೆಲ್ಲ ಸಂಗತಿಗಳನ್ನು ಬದಿಗಿಟ್ಟು ನೋಡುವುದಾದರೆ, ಈಗಾಗಲೇ ಚೀನ ಯುದ್ಧಕ್ಕೆ ಸನ್ನದ್ಧವಾಗಿರುವುದು ಕಾಣುತ್ತಿದೆ. ಮಂಗಳವಾರ ರಾತ್ರಿಯೇ, ತೈವಾನ್‌ ಸುತ್ತಲು ತನ್ನ ನೌಕಾದಳದ ಪರೀಕ್ಷೆ ನಡೆಸಿದೆ. ಒಟ್ಟು ಆರು ಸ್ಥಳಗಳಲ್ಲಿ ತನ್ನ ಸೇನೆಯನ್ನು ಸನ್ನದ್ಧವಾಗಿ ನಿಲ್ಲಿಸಿ ಡ್ರಿಲ್‌ ಮಾಡಿದೆ. ಅತ್ತ ಅಮೆರಿಕವೂ ತನ್ನ ನಾಲ್ಕು ಯುದ್ಧ ನೌಕೆಗಳನ್ನು ದಕ್ಷಿಣ ಚೀನ ಸಮುದ್ರದತ್ತ ಕಳುಹಿಸಿದೆ.

ಅಂದರೆ, ಈಗ ಚೀನ ಮತ್ತು ತೈವಾನ್‌ ನಡುವೆ ಯುದ್ಧವಾಗಲಿದೆ ಎಂಬುದಕ್ಕಿಂತ, ಚೀನ ಮತ್ತು ಅಮೆರಿಕ ಮಧ್ಯೆ ಸಮರವಾಗಲಿದೆ ಎಂಬುದೇ ಆತಂಕದ ವಿಚಾರ. ಏಕೆಂದರೆ ಈಗ ಯುದ್ಧ ಶುರುವಾದರೆ, ತೈವಾನ್‌ ಬೆನ್ನ ಹಿಂದೆ ಅಮೆರಿಕ ಮತ್ತದರ ಮಿತ್ರ ದೇಶಗಳು ಕೂಡಿಕೊಳ್ಳ ಲಿವೆ. ಅತ್ತ ಚೀನಗೆ ರಷ್ಯಾ, ಪಾಕಿಸ್ಥಾನದಂಥ ದೇಶಗಳು ಬೆಂಬಲ ಕೊಡಬಹುದು. ಆಗ, ಯುದ್ಧ ಭೀಕರವಾಗುತ್ತದೆ ಎಂಬುದಂತೂ ಸತ್ಯ.

ಆದರೆ ಈಗ ಜಗತ್ತು ಯುದ್ಧ ನೋಡುವ ಸನ್ನಿವೇಶದಲ್ಲಿ ಇಲ್ಲವೇ ಇಲ್ಲ. ಈಗಾಗಲೇ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಿಂದಾಗಿ, ಎಲ್ಲ ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆಗಳು ಹದಗೆಟ್ಟು ಹೋಗಿವೆ. ಬೆಲೆ ಏರಿಕೆ ಗಗನಕ್ಕೇರಿದ್ದು, ಪೆಟ್ರೋಲಿಯಂ ವಸ್ತುಗಳು ದುಬಾರಿಯಾಗಿವೆ. ಇಂಥ ಪರಿಸ್ಥಿತಿಯಲ್ಲಿ ಪ್ರಬಲ ದೇಶಗಳ ಮಧ್ಯೆ ಯುದ್ಧವಾದರೆ, ಜಗತ್ತು ಉಳಿಯುವುದು ಅಸಾಧ್ಯ. ಹೀಗಾಗಿ, ಪರಸ್ಪರ ಮಾತುಕತೆಯಿಂದಲೇ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ.

 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.