ಪಾಕಿಸ್ಥಾನ‌ಕ್ಕೆ ಈ ಬುದ್ಧಿ ಮೊದಲೇ ಬರಬೇಕಿತ್ತು


Team Udayavani, Jan 18, 2023, 6:00 AM IST

ಪಾಕಿಸ್ಥಾನ‌ಕ್ಕೆ ಈ ಬುದ್ಧಿ ಮೊದಲೇ ಬರಬೇಕಿತ್ತು

ಸ್ವಾತಂತ್ರ್ಯಾಅನಂತರದಲ್ಲಿ ಭಾರತದೊಂದಿಗೆ ಮೂರು ಯುದ್ಧಗಳನ್ನು ಮಾಡಿದ್ದೇವೆ. ನಮ್ಮ ತಪ್ಪು ನಮಗೆ ಅರಿವಾಗಿದೆ. ಯುದ್ಧಗಳಿಂದ ನಾವು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಹೀಗಾಗಿ, ಭಾರತದೊಂದಿಗೆ ಶಾಂತಿಯುತ ಸಂಬಂಧಕ್ಕೆ ಪ್ರಯತ್ನಿಸುತ್ತೇನೆ ಎಂದು ಪಾಕಿಸ್ಥಾನ‌ದ ಪ್ರಧಾನಿ ಶಹಭಾಜ್‌ ಷರೀಫ್ ಅರಬಿಕ್‌ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಒಂದು ಲೆಕ್ಕಾಚಾರದಲ್ಲಿ ನೋಡಿದರೆ, ಪಾಕಿಸ್ಥಾನ‌ದ ಪ್ರಧಾನಿಯೊಬ್ಬರಿಂದ ಇಂಥ ಪಶ್ಚಾತ್ತಾಪದ ಮಾತುಗಳು ಕೇಳಿಬಂದದ್ದು ಕಡಿಮೆಯೇ. ಏಕೆಂದರೆ, ನಾವು ಈ ಹಿಂದೆ ಮಾಡಿದ್ದು ತಪ್ಪಾಯಿತು, ಸರಿ ಪಡಿಸಿ ಕೊಂಡು ಹೋಗುತ್ತೇವೆ ಎಂದು ಹೇಳುವುದು ಪಾಕಿಸ್ಥಾನ‌ದಲ್ಲಿ ಅಪರಾಧವೇ.

ಸದ್ಯ ಈ ಹೇಳಿಕೆಗಳನ್ನು ಅವಲೋಕಿಸುವುದಾದರೆ, ಪಾಕಿಸ್ಥಾನ‌ಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಂತೆ ತೋರುತ್ತಿದೆ. ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನ ಹೆಚ್ಚು ಕಡಿಮೆ ಒಬ್ಬಂಟಿಯಾಗಿದೆ. ಚೀನಾ ಮತ್ತು ಟರ್ಕಿಯಂಥ ದೇಶಗಳು ಬಿಟ್ಟರೆ, ಪಾಕಿಸ್ಥಾನ‌ದ ಪರವಾಗಿ ನಿಲ್ಲುವ ದೇಶಗಳ ಸಂಖ್ಯೆ ಬಹುತೇಕ ಕಡಿಮೆ ಇದೆ. ಅಲ್ಲದೆ, ಈಗ ಚೀನಾ ಕೊರೊನಾ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಅಲ್ಲಿನ ಆರ್ಥಿಕತೆಯೂ ಕುಸಿಯುವ ಹಂತದಲ್ಲಿದೆ. ಚೀನಾದಿಂದ ಒಂದೊಂದೇ ಕಂಪೆನಿಗಳು ಹೊರಗೆ ಕಾಲಿಡುತ್ತಿವೆ. ಇಂಥ ಹೊತ್ತಿನಲ್ಲಿ ಚೀನಾಗೆ ತನ್ನ ಕ್ಷೇಮಕ್ಕಿಂತ ಹೊರಗಿನವರ ಕ್ಷೇಮದ ಬಗ್ಗೆ ತಲೆಕೆಡಿಸಿಕೊಳ್ಳುವುದು ದೂರದ ಮಾತು.

ಪಾಕಿಸ್ಥಾನ‌ದಲ್ಲಿ ಇಂದು ಆರ್ಥಿಕ ಸ್ಥಿತಿಯೂ ಚೆನ್ನಾಗಿಲ್ಲ. ಹಿಂದಿನಿಂದಲೂ ಪಾಕಿಸ್ಥಾನ‌ಕ್ಕೆ ಹಣದ ಕೊರತೆಯಾದಾಗೆಲ್ಲಾ ಅಮೆರಿಕದ ಬಳಿ ಹೋಗಿ ಹಣ ಪಡೆದುಕೊಂಡು ಬರುತ್ತಿತ್ತು. ಹೀಗಾಗಿ, ಕಷ್ಟನಷ್ಟಗಳು ಹೆಚ್ಚು ಗೊತ್ತಾಗುತ್ತಿರಲಿಲ್ಲ. ಈಗ ಅಮೆರಿಕದ ಸಹಾಯ ಹಸ್ತ ನಿಂತಿದೆ. ಜತೆಗೆ ವಿಶ್ವಬ್ಯಾಂಕ್‌, ಜಾಗತಿಕ ಹಣಕಾಸು ನಿಧಿಯಂಥ ಹಣಕಾಸು ಸಂಸ್ಥೆಗಳೂ ಪಾಕಿಸ್ಥಾನ‌ಕ್ಕೆ ಸಾಲ ನೀಡುತ್ತಿಲ್ಲ. ಅತ್ತ ಅರಬ್‌ ದೊರೆಗಳೂ ಪಾಕಿಸ್ಥಾನ‌ದ ವರ್ತನೆಯಿಂದ ಬೇಸತ್ತು ದಿನದಿಂದ ದಿನಕ್ಕೆ ದೂರವಾಗುತ್ತಿವೆ. ಚೀನಾ ಸಹಾಯ ಮಾಡಿದರೂ, ಅದು ಷರತ್ತಿಗೆ ಒಳಪಟ್ಟಿದೆ.

ಇದಕ್ಕಿಂತ ಹೆಚ್ಚಾಗಿ ಅತ್ತ ತಾಲಿಬಾನ್‌ ಕಾಟವೂ ಜೋರಾಗಿದೆ. ತೆಹ್ರಿಕ್‌ ಇ ತಾಲಿಬಾನ್‌ ಪಾಕಿಸ್ಥಾನ್‌(ಟಿಟಿಪಿ) ಸಂಘಟನೆ ಪಾಕಿಸ್ಥಾನ ಸೇನೆ ಜತೆಗಿನ ಕದನಾ ವಿರಾಮ ಒಪ್ಪಂದವನ್ನು ಮುರಿದುಕೊಂಡಿದ್ದು, ನೇರವಾಗಿ ಸಮರ ಸಾರಿದೆ. ಆಂತರಿಕವಾಗಿ ಈ ಬೆಳವಣಿಗೆ ಪಾಕ್‌ ಸೇನೆಗೂ ತಲೆನೋವು ತಂದಿದೆ. ಅಂದರೆ ತಾಲಿಬಾನ್‌ಗಳ ಕೈ ಮೇಲಾಗುವುದು. ಅಂದರೆ ಆಫ‌^ನ್‌ ತಾಲಿಬಾನಿಗಳು ಹೆಚ್ಚು ಶಕ್ತಿಯುತರಾಗುತ್ತಿದ್ದಾರೆ ಎಂದರ್ಥ.

ಇದರ ಮಧ್ಯೆಯೇ ಪಾಕಿಸ್ಥಾನ‌ದ ವಿದೇಶಿ ವಿನಿಮಯ ನಿಧಿ ಸಂಗ್ರಹ 10 ಬಿಲಿಯನ್‌ ಅಮೆರಿಕ್‌ ಡಾಲರ್‌ಗೆ ಇಳಿಕೆಯಾಗಿದೆ. ಆಮದು ಮತ್ತು ರಫ್ತು ಪ್ರಕ್ರಿಯೆಗಳು ಹೆಚ್ಚು ಕಡಿಮೆ ಸ್ಥಗಿತವಾಗಿವೆ. ಇಂಥ ಹೊತ್ತಿನಲ್ಲಿ ಅನಿವಾರ್ಯವಾಗಿ ಪಾಕಿಸ್ಥಾನ‌ ಭಾರತದೊಂದಿಗೆ ಶಾಂತಿಮಾತುಕತೆಗೆ ಕುಳಿತುಕೊಳ್ಳಬೇಕಾದ ಸಂದಿಗ್ಧ ಸ್ಥಿತಿಗೆ ಬಂದಿದೆ.

ಆದರೆ, ಪಾಕಿಸ್ಥಾನ‌ದ ಶಾಂತಿ ಮಾತುಕತೆ ಪ್ರಸ್ತಾಪವನ್ನು ನಂಬಬಹುದೇ? ಅಲ್ಲಿನ ರಾಜಕಾರಣಿಗಳಿಗೆ ನಿಜವಾಗಿಯೂ ಅಧಿಕಾರವಿದೆಯೇ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತವೆ. ಈ ಹಿಂದಿನಿಂದಲೂ ಪಾಕ್‌ನ ಯಾವುದೇ ಪ್ರಧಾನಿ ಭಾರತದೊಂದಿಗೆ ಶಾಂತಿ ಮಾತುಕತೆಗೆ ಮುಂದಾಗಿದ್ದಾಗಲೂ, ಅವರನ್ನು ಸೇನೆ ಅಧಿಕಾರದಿಂದ ಕೆಳಗಿಳಿಸಿತ್ತು. ಈಗಲೂ ಸೇನೆಯ ಕೈಬೊಂಬೆಯಂತಿರುವ ಶಾಭಾಜ್‌ ಷರೀಫ್ರನ್ನು ನಂಬಲು ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.