ಹುಲಿ ಗಣತಿ ವರದಿ: ಶ್ಲಾಘನೀಯ ಸಾಧನೆ


Team Udayavani, Aug 1, 2019, 5:42 AM IST

q-34

ಹುಲಿ ಸಂರಕ್ಷಣೆಯ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ತೀವ್ರ ಜಾಗೃತಿ ವಹಿಸಲಾಗುತ್ತಿದೆ. ಆದರೂ, ಈ ವಿಷಯದಲ್ಲಿ ಸಕಾರಾತ್ಮಕವೆನ್ನುವಂಥ ಸುದ್ದಿಗಳೇನೂ ಹೆಚ್ಚು ಹೊರಹೊಮ್ಮುತ್ತಲೇ ಇರಲಿಲ್ಲ. ಆದರೆ ಈಗ ಹುಲಿಗಳ ಸಂಖ್ಯೆಯ ಮೇಲೆ ಹೊರಬಿದ್ದಿರುವ ಅಂಕಿಅಂಶಗಳು, ಇದೆಲ್ಲ ಇಷ್ಟು ವರ್ಷಗಳ ಪ್ರಯತ್ನಗಳ ಒಟ್ಟು ಸಕಾರಾತ್ಮಕ ಫ‌ಲ ಎಂಬ ಸಂದೇಶವನ್ನು ಕಳುಹಿಸಿವೆ.

ವಿಶ್ವ ಹುಲಿಗಳ ದಿನದಂದು ಪ್ರಧಾನಿ ಮೋದಿಯವರು ಬಿಡುಗಡೆ ಮಾಡಿದ ಹುಲಿ ಗಣತಿ ವರದಿಯು ಭಾರತದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿರುವುದನ್ನು ಸಾರುತ್ತಿದೆ. 2018ರ ಹುಲಿ ಗಣತಿಯ ಪ್ರಕಾರ ಭಾರತದಲ್ಲಿ 2,967 ಹುಲಿಗಳಿದ್ದು, 2006ರಲ್ಲಿದ್ದ 1,411 ಹುಲಿಗಳ ಸಂಖ್ಯೆಗಿಂತ ಇದು ಎರಡು ಪಟ್ಟು ಅಧಿಕ.

‘ಒಂಬತ್ತು ವರ್ಷಗಳ ಹಿಂದೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದ್ದ ವನ್ಯಜೀವಿ ಸಂರಕ್ಷಣೆ ಕುರಿತ ಸಮ್ಮೇಳನದಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮಲ್ಲಿರುವ ಹುಲಿ ಸಂತತಿಯನ್ನು 2022ರೊಳಗೆ ದುಪ್ಪಟ್ಟು ಮಾಡಬೇಕೆಂದು ಕರೆ ನೀಡಲಾಗಿತ್ತು, ಭಾರತವು ಆ ಗಡಿ ಮುಗಿಯಲು ಇನ್ನೂ ನಾಲ್ಕು ವರ್ಷ ಬಾಕಿ ಇರುವಂತೆಯೇ ಗುರಿ ತಲುಪಿದೆ’ ಎಂಬ ಪ್ರಧಾನಿಯ ಮಾತು, ನಿಜಕ್ಕೂ ಹೆಮ್ಮೆಪಡಬೇಕಾದ ವಿಚಾರ.

ಅದರಷ್ಟೇ ಹೆಮ್ಮೆಯ ವಿಚಾರವೆಂದರೆ, ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ ಸಿಕ್ಕಿದೆ ಎನ್ನುವುದು. ಆದಾಗ್ಯೂ, ಹಿಂದಿನ ಎರಡು ಗಣತಿಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು, ಹಾಗೆಂದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿದೆ ಎಂದೇನೂ ಇದರರ್ಥವಲ್ಲ, ಬದಲಾಗಿ ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣ.

2006ರಲ್ಲಿ ಹುಲಿಗಳ ಸಂಖ್ಯೆ ಹದಿನಾಲ್ಕು ನೂರಕ್ಕೆ ಬಂದು ನಿಂತಾಗ ನಿಜಕ್ಕೂ ಕಳವಳ ಉಂಟಾಗಿದ್ದು ಸುಳ್ಳಲ್ಲ. ಆ ಸಮಯದಿಂದಲೇ ಹುಲಿ ಸಂರಕ್ಷಣೆಗಾಗಿ ಅಭಯಾರಣ್ಯಗಳ ವಿಸ್ತರಣೆಯಿಂದ ಹಿಡಿದು, ಅವುಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವಂಥ ಉಪಕ್ರಮಗಳನ್ನು ಜಾರಿಗೆ ತರಲಾಯಿತು. ಇದೆಲ್ಲದರ ಪರಿಣಾಮವಾಗಿ ಇಂದು ಸಂತೋಷದಾಯಕ ಫ‌ಲಿತಾಂಶ ಹೊರಬಂದಿದೆ. ಈ ಬಾರಿ ಹುಲಿಗಳ ಗಣತಿಗೆ 28 ಮಾನದಂಡಗಳನ್ನು ಉಪಯೋಗಿಸಲಾಗಿತ್ತು. ಇನ್ನು 2014ರ ಗಣತಿಯಲ್ಲಿ ಒಂದೂವರೆ ವರ್ಷಕ್ಕೂ ಮೇಲ್ಪಟ್ಟ ಹುಲಿಗಳನ್ನು ಎಣಿಸಲಾಗಿತ್ತು, ಅದೇ 2018ರ ಸರ್ವೇಯಲ್ಲಿ ಒಂದು ವರ್ಷದ ಹುಲಿಗಳನ್ನೂ ಪರಿಗಣಿಸಲಾಗಿದೆ. 2014ರಲ್ಲಿ 692ರಷ್ಟಿದ್ದ ದೇಶದಲ್ಲಿನ ಹುಲಿಗಳ ಸಂರಕ್ಷಿತ ವಲಯಗಳ ಸಂಖ್ಯೆ, 2019ರ ಹೊತ್ತಿಗೆ 860ಕ್ಕೆ ಏರಿದೆ. ಅಲ್ಲದೇ ಹುಲಿಗಳ ಮೀಸಲು ಕೇಂದ್ರಗಳ ಸಂಖ್ಯೆಯು 2014ರಲ್ಲಿ 43ರಷ್ಟಿದ್ದದ್ದು 2019ರ ವೇಳೆಗೆ 100ಕ್ಕೆ ತಲುಪಿದೆ.

ಪರಿಣತರ ಪ್ರಕಾರ ಇದುವರೆಗೂ ಬೇರಾವ ದೇಶದಲ್ಲೂ ಇಷ್ಟೊಂದು ಬೃಹತ್‌ ಸರ್ವೇ ನಡೆದೇ ಇಲ್ಲ.

ಆದಾಗ್ಯೂ ಪ್ರಸಕ್ತ ಅಂಕಿ-ಅಂಶಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿವೆಯಾದರೂ, ಸತ್ಯವೇನೆಂದರೆ, ಈಗಲೂ ಅಪಾಯ ದೂರವಾಗಿಲ್ಲ. ಹುಲಿಗಳ ವಾಸ ಪ್ರದೇಶಗಳಲ್ಲಿ ವಿವಿಧ ರೂಪದಲ್ಲಿ ಮನುಷ್ಯನ ಉಪಸ್ಥಿತಿಯು ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಇದಷ್ಟೇ ಅಲ್ಲದೆ, ಯಾವ ಸುಂದರಬನ್‌ ಪ್ರದೇಶವನ್ನು ಹುಲಿಗಳ ಸ್ವರ್ಗ ಎಂದು ಕರೆಯಲಾಗುತ್ತಿತ್ತೋ ಆ ಪ್ರದೇಶದ ಬಹಳಷ್ಟು ಭಾಗವೂ ಕೂಡ ಸಾಗರದ ಹೊಡೆತಕ್ಕೆ ಮುಳುಗಿ ಹೋಗುವ ಅಪಾಯವೂ ಇದೆ. ಇದೇನಾದರೂ ಆದರೆ ಹೊಸ ಸವಾಲು ಎದುರಾಗಿ ನಿಲ್ಲುತ್ತದೆ. ಆ ಸವಾಲನ್ನು ಸಕ್ಷಮವಾಗಿ ಎದುರಿಸಲು ಭಾರತ ಸಿದ್ಧವಿರಬೇಕಾಗುತ್ತದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.