ತ್ಯಾಜ್ಯ ವಿಲೇಯ ದಿವ್ಯ ನಿರ್ಲಕ್ಷ್ಯ


Team Udayavani, Apr 19, 2017, 10:54 AM IST

19-SPORTS-8.jpg

ಕೈಗಾರಿಕೆಗಳಲ್ಲಿ ತಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆ. ನೂರಾರು ನೀತಿ ನಿಯಮಗಳಿದ್ದರೂ ಸಾಮಾನ್ಯವಾಗಿ ಕಾರ್ಖಾನೆಗಳು ಇದನ್ನು ಪಾಲಿಸುವ ಗೋಜಿಗೆ ಹೋಗುವುದಿಲ್ಲ. ಬೀದಿಯಿಂದ ಕಸ ಎತ್ತುವುದಷ್ಟೇ ಸ್ವತ್ಛ ಭಾರತವಲ್ಲ, ಪರಿಣಾಮಕಾರಿ ತ್ಯಾಜ್ಯ ವಿಲೇವಾರಿಯೂ ಇದರ ಭಾಗ ಎಂಬುದು ನಮಗೆ ಯಾವಾಗ ಅರ್ಥವಾಗುತ್ತದೆ?

ಮೈಸೂರಿನ ಶಾದನಹಳ್ಳಿಯಲ್ಲಿ 14 ವರ್ಷದ ಬಾಲಕ ವಿಚಿತ್ರ ರೀತಿಯಲ್ಲಿ ಭೂಮಿಯಿಂದ ಎದ್ದ ತಾಪಕ್ಕೆ ಬಲಿಯಾಗಿರುವ ಘಟನೆ ಕೈಗಾರಿಕೋದ್ಯಮಗಳು ಎಷ್ಟು ಬೇಜವಾಬ್ದಾರಿಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ. ಈ ಸ್ಥಳದಲ್ಲಿ 110 ಡಿಗ್ರಿ ಸೆಲಿÏಯಸ್‌ ತಾಪಮಾನವಿರುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ. ಇದು ನೀರಿನ ಕುದಿಯುವ ಬಿಂದುವಿಗಿಂತಲೂ ಹೆಚ್ಚಿನ ಉಷ್ಣತೆ. ಮನುಷ್ಯರನ್ನು ಸುಡಲು ಧಾರಾಳ ಸಾಕು. ವಿಪಧಿರ್ಯಾಧಿಸವೆಂದರೆ ಈ ಪರಿಸರ ಕುದಿಧಿಯುವ ಕುಲುಮೆಯಾಗಿದೆ ಎನ್ನುವುದು ಸರಕಾರಿ ಇಲಾಖೆಗಳ ಗಮನಕ್ಕೆ ಬರಲು ದುರಂತವೊಂದು ಸಂಭವಿಸಬೇಕಾಯಿತು. ಬಾಲಕ ಬಲಿಧಿಯಾದ ಬೆನ್ನಿಗೆ ಮಾಲಿನ್ಯ, ಭೂಗರ್ಭ, ಗಣಿ, ಪರಿಸರ, ಪೊಲೀಸ್‌, ವಿಧಿವಿಜ್ಞಾನ  ಎಂದು ಸಕಲ ಸರಕಾರಿ ಇಲಾಖೆಗಳು ಇತ್ತ ಧಾವಿಸಿ ತನಿಖೆ ನಡೆಸುತ್ತಿವೆ. ಬೆಂಗಳೂರಿನಲ್ಲಿ ಕೆರೆ ಹೊತ್ತಿ ಉರಿದ ವಿಸ್ಮಯವನ್ನು ನೋಡಿದ ಜನರು  ಧರೆಯೇ  ಹೊತ್ತಿ ಉರಿಯುತ್ತಿರುವ ವಿಚಿತ್ರಕ್ಕೆ ಸಾಕ್ಷಿಯಾಗುತ್ತಿದ್ದಾರೆ. 

ಟಯರು, ರಾಸಾಯನಿಕಗಳು ಎಂದು ವಿವಿಧ ವಸ್ತುಗಳನ್ನು ಉತ್ಪಾಧಿದಿಧಿಸುವ 1000ಕ್ಕೂ ಹೆಚ್ಚು ಕಾರ್ಖಾನೆಗಳಿರುವ  ನಗರದ ಹೊರ ವಲಯದ ಮೇಟಗಳ್ಳಿ ಔದ್ಯೋಧಿಗಿಕ ವಲಯದ ಸಮೀಪವೇ ಈ ಘಟನೆ ಸಂಭವಿಸಿದೆ. ಜನವಸತಿಯಿಂದ ಸುಮಾರು 3 ಕಿ. ಮೀ. ದೂರದಲ್ಲಿರುವ ಈ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕಾರ್ಖಾನೆಗಳು ತಮ್ಮ ತ್ಯಾಜ್ಯ ತಂದು ಸುರಿಯುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈಗ ಒಣಗಿರುವ ವರುಣಾ ನಾಲೆ ಪಕ್ಕದಲ್ಲೇ ಇದೆ ಈ ತ್ಯಾಜ್ಯ ಗುಂಡಿ. ವರುಣಾ ನಾಲೆಯ ಇನ್ನೊಂದು ಬದಿಯಲ್ಲಿ ಆರ್‌ಬಿಐಯ ನೋಟು ಮುದ್ರಣಾಲಯವಿದೆ. ಘಟನೆ ಸಂಭವಿಸಿರುವ ಸ್ಥಳ  ಓರ್ವ ರೈತನಿಗೆ ಸೇರಿದ ಖಾಸಗಿ ಜಮೀನು. ಇಲ್ಲಿ ಸುಮಾರು 20 ಗುಂಟೆ ವ್ಯಾಪ್ತಿಯಲ್ಲಿರುವ ಕುರುಚಲು ಗಿಡಗಳು ಮತ್ತು ಮರಗಳು ಸುಟ್ಟು ಹೋಗಿದ್ದರೂ ಇದು ಅಪಾಯಕಾರಿ ಸ್ಥಳ ಎಂಬುದು ಅರಿವಿಗೆ ಬರಲು ರವಿವಾರದ ದುರ್ಘ‌ಟನೆ ನಡೆಯಬೇಕಾಯಿತು ಅನ್ನುವುದು ವಿಷಾದನೀಯ. 

ಘಟನೆ ಸಂಭವಿಸಿದ ಬೆನ್ನಿಗೆ ಜೆಡಿಎಸ್‌ ಮತ್ತು ಆಪ್‌, ಆರ್‌ಬಿಐ ಸುರಿದ ರಾಸಾಯನಿಕ ತ್ಯಾಜ್ಯದಿಂದ ನಡೆದ ದುರಂತ ಎಂದು ಆರೋಪಿಸಿವೆ. ಮುಕ್ತ ಜಾಗದಲ್ಲಿ ಸುರಿದ ಯಾವ ರಾಸಾಯನಿಕ ಪ್ರಕೃತಿಯಲ್ಲಿರುವ ಅನಿಲಗಳ ಜತೆಗೆ ವರ್ತಿಸಿ ಉಷ್ಣವನ್ನು ಬಿಡುಗಡೆ ಮಾಡಿದೆ ಎಂಬುದನ್ನು ಅಷ್ಟು ಕ್ಷಿಪ್ರವಾಗಿ ಪರೀಕ್ಷಿಸಿ ಅವರಿಗೆ ತಿಳಿಸಿದವರ್ಯಾರೋ! ಇದು ಘಟನೆಗೆ ರಾಜಕೀಯ ಬಣ್ಣ ಹಚ್ಚುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ತಜ್ಞರು ಹೇಳುವ ಪ್ರಕಾರ ಸೋಡಿಯಂ ಮೆಟಾಲಿಕ್‌ ಎಂಬ ರಾಸಾಯನಿಕ ತೆರೆದ ಸ್ಥಳದಲ್ಲಿ ಇದ್ದರೆ ಆಮ್ಲಜನಕ ಮತ್ತು ತೇವಾಂಶದ ಸಂಪರ್ಕದಿಂದ ಬಿಸಿಯಾಗುತ್ತದೆ. ಇದು ಕೂಡ ಒಂದು ಊಹೆ ಮಾತ್ರ. ನಿಖರ ಕಾರಣ ಏನು ಎನ್ನುವುದು ವೈಜ್ಞಾನಿಕ ಪರೀಕ್ಷೆಯ ಬಳಿಕ ತಿಳಿಯಬಹುದು. ಅದಕ್ಕೂ ಮೊದಲೇ ಯಾರ ಮೇಲಾದರೂ ಗೂಬೆ ಕೂರಿಸುವುದು ಸರಿಯಲ್ಲ. ಇದು ಒಂದು ಸಂಸ್ಥೆಯ ತಪ್ಪು ಎನ್ನುವುದಕ್ಕಿಂತ ಒಟ್ಟು ವ್ಯವಸ್ಥೆಯ ವೈಫ‌ಲ್ಯ ಎಂದರೆ ಹೆಚ್ಚು ಸರಿಯಾಗುತ್ತದೆ. 

ಕೈಗಾರೀಕರಣದಲ್ಲಿ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆ. ಇದಕ್ಕಾಗಿ ನೂರಾರು ನೀತಿ ನಿಯಮಗಳಿದ್ದರೂ ಸಾಮಾನ್ಯವಾಗಿ ಕಾರ್ಖಾನೆಗಳು ಇದನ್ನು ಪಾಲಿಸುವ ಗೋಜಿಗೆ ಹೋಗುವುದಿಲ್ಲ. ಲಂಚ ಮತ್ತು ವಶೀಲಿಬಾಜಿಯಿಂದ ಇಲ್ಲಿ ಎಲ್ಲವೂ ನಡೆಯುತ್ತದೆ. ಅಧಿಕಾರಿಗಳು ಕಾನೂನು ತಮ್ಮ ಕಣ್ಣೆದುರೇ ಉಲ್ಲಂಘನೆಯಾಗುತ್ತಿದ್ದರೂ ತಡೆಯುವ ಗೋಜಿಗೆ ಹೋಗುವುದಿಲ್ಲ. ಇಂತಹ ಏನಾದರೊಂದು ದುರಂತ ಸಂಭವಿಸಿದಾಗಲಷ್ಟೇ ಎಚ್ಚೆತ್ತ ನಾಟವಾಡುತ್ತಾರೆ. ಆಸ್ಪತ್ರೆ, ಕಾರ್ಖಾನೆಗಳು, ಹೊಟೇಲ್‌, ಮಳಿಗೆಗಳ ತ್ಯಾಜ್ಯಗಳು ಎಗ್ಗಿಲ್ಲದೆ ನದಿ, ಹಳ್ಳ ಸೇರಿ ಇನ್ನಿಲ್ಲದ ಅನಾಹುತಗಳನ್ನುಂಟು ಮಾಡುತ್ತಿವೆ. ಬರೀ ಬೀದಿಯಲ್ಲಿರುವ ಕಸ ಎತ್ತುವುದು ಮಾತ್ರ ಸ್ವತ್ಛ ಭಾರತವಲ್ಲ. ಪರಿಣಾಮಕಾರಿ ತ್ಯಾಜ್ಯ ವಿಲೇವಾರಿಯೂ ಇದರ ವ್ಯಾಪ್ತಿಗೆ ಬರುತ್ತದೆ ಎನ್ನುವುದು ನಮ್ಮನ್ನಾಳುವವರಿಗೆ ಯಾವಾಗ ಅರ್ಥವಾಗುತ್ತದೆ?

ಟಾಪ್ ನ್ಯೂಸ್

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.