ಭಾರತ್‌ ಬಾಂಡ್‌ ಎಂಬ ನೂತನ ಇ.ಟಿ.ಎಫ್


Team Udayavani, Dec 16, 2019, 6:59 AM IST

bharath-bond

ಭಾರತ್‌ ಬಾಂಡ್‌ ಎಂಬ ಇ.ಟಿ.ಎಫ್. ಜಾತಿಗೆ ಸೇರಿದ ಮ್ಯೂಚುವಲ್‌ ಫ‌ಂಡು ಕೇವಲ ಸರಕಾರಿ ಸ್ವಾಮ್ಯದ ಕಂಪೆನಿಗಳ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲಿದೆ. ಯಾವ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವುದು ಎನ್ನುವ ಭಯವುಳ್ಳ ಹೂಡಿಕೆದಾರರಿಗೆ ಸರಕಾರದ ಈ ಬಾಂಡು ಒಂದು ರೀತಿಯಲ್ಲಿ ಸಹಕಾರಿ ಆಗಲಿದೆ. ಸರಕಾರವು ಈ ಬಾಂಡನ್ನು ಬಿಡುಗಡೆ ಮಾಡುವ ಕೆಲಸವನ್ನು ಎಡೆಲ್‌ ವೈಸ್‌ ಎಂಬ ಫ‌ಂಡ್‌ ಹೌಸಿಗೆ ನೀಡಿದೆ

ನಮಗೆ ಶೇರು ಗೊತ್ತು; ಅವುಗಳು ಶೇರುಗಟ್ಟೆಯಲ್ಲಿ ಮಾರಾಟವಾಗುತ್ತವೆ. ನಮಗೆ ಮ್ಯೂಚುವಲ್‌ ಫ‌ಂಡ್‌ ಗೊತ್ತು; ಅವುಗಳು ನಮ್ಮೆಲ್ಲರ ದುಡ್ಡನ್ನು ಒಗ್ಗೂಡಿಸಿ ಶೇರು ಅಥವಾ ಸಾಲಪತ್ರಗಳಲ್ಲಿ ಹೂಡುತ್ತವೆ. ಅವುಗಳು ಯಾವುದೇ ಶೇರುಗಟ್ಟೆಯಲ್ಲಿ ಮಾರಾಟವಾಗುವುದಿಲ್ಲ. ದುಡ್ಡು ವಾಪಾಸು ಬೇಕೆಂದರೆ ಮ್ಯೂಚುವಲ್‌ ಫ‌ಂಡುಗಳನ್ನು ವಾಪಾಸು ಫ‌ಂಡ್‌ ಹೌಸುಗಳಿಗೇ ಹಿಂತಿರುಗಿಸಿ ಅವುಗಳ ಮೌಲ್ಯವನ್ನು ಹಿಂಪಡೆದುಕೊಳ್ಳಬೇಕಷ್ಟೆ. ಆದರೆ ಶೇರುಗಟ್ಟೆಯಲ್ಲಿ ಮಾರಾಟವಾಗುವ ಮ್ಯೂಚುವಲ್‌ ಫ‌ಂಡುಗಳೂ ಇಲ್ಲವೇ ಇಲ್ಲ ಎಂದೇನಿಲ್ಲ, ಇವೆ. ಅವುಗಳನ್ನು ಎಕ್ಸ್‌ಚೇಂಜ್‌ ಟ್ರೇಡೆಡ್‌ ಫ‌ಂಡ್‌ ಅಥವಾ ಇ.ಟಿ.ಎಫ್. ಎಂದು ಕರೆಯುತ್ತಾರೆ. ಇ.ಟಿ.ಎಫ್.ನಲ್ಲಿ ಅವಶ್ಯ ಬಿ¨ªಾಗ ಒಂದು ಉತ್ತಮ ಮಾರುಕಟ್ಟೆಯ ಬೆಲೆಯನ್ನು ಪಡೆಯಬಹುದು ಎನ್ನುವುದು ಅದರ ಹಿಂದಿರುವ ತತ್ವ.

ಇದೀಗ ನಮ್ಮ ದೇಶದ ಕ್ಯಾಬಿನೆಟ್‌ ಅಂತಹ ಒಂದು ಇ.ಟಿ.ಎಫ್. ಅನ್ನು ಹೊರತರುವ ನಿರ್ಧಾರ ಕೈಗೊಂಡಿದೆ. ಭಾರತ್‌ ಬಾಂಡ್‌ ಎಂಬ ಹೆಸರುಳ್ಳ ಈ ಇ.ಟಿ.ಎಫ್. ಜಾತಿಗೆ ಸೇರಿದ ಮ್ಯೂಚುವಲ್‌ ಫ‌ಂಡು ಕೇವಲ ಸರಕಾರಿ ಸ್ವಾಮ್ಯದ ಕಂಪೆನಿಗಳ (ಪಬ್ಲಿಕ್‌ ಸೆಕ್ಟರ್‌ ಯುನಿಟ್ಸ್‌) ಸಾಲಪತ್ರಗಳಲ್ಲಿ ಹೂಡಿಕೆ ಮಾಡಲಿದೆ. ಯಾವ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವುದು ಎನ್ನುವ ಭಯವುಳ್ಳ ಹೂಡಿಕೆದಾರರಿಗೆ ಸರಕಾರದ ಈ ಬಾಂಡು ಒಂದು ರೀತಿಯಲ್ಲಿ ಸಹಕಾರಿ ಆಗಲಿದೆ. ಈ ಹಿಂದೆ ಬಂದಿದ್ದ ಭಾರತ್‌-22 ಮತ್ತು ಸಿ.ಪಿ.ಎಸ್‌.ಇ. ಇಟಿಎಫ್ – ಇವೆರಡೂ ಕೂಡಾ ಸರಕಾರಿ ಸ್ವಾಮ್ಯದ ಪಬ್ಲಿಕ್‌ ಸೆಕ್ಟರ್‌ ಕಂಪೆನಿಗಳ ಇಕ್ವಿಟಿ ಅಥವಾ ಶೇರುಗಳಲ್ಲಿ ಹೂಡಿಕೆ ಮಾಡುವಂತವುಗಳು.

ಆದರೆ ಈಗ ಬರುವ ಭಾರತ್‌ ಬಾಂಡುಗಳು ಉತ್ತಮ ರೇಟಿಂಗ್‌ (ಅಅಅ) ಉಳ್ಳ ಉತ್ತಮ ಪಬ್ಲಿಕ್‌ ಸೆಕ್ಟರ್‌ ಕಂಪೆನಿಗಳ ಸಾಲಪತ್ರ (ಡೆಟ್‌)ಗಳಲ್ಲಿ ಹೂಡಿಕೆ ಮಾಡುವಂತದ್ದು. ಸರಕಾರದ ಶೇರುಗಳಿಗಿಂತ ಸರಕಾರದ ಸಾಲಪತ್ರಗಳು ಜಾಸ್ತಿ ಪ್ರತಿಫ‌ಲ ನೀಡುವುದರಲ್ಲಿ ಆಶ್ಚರ್ಯವೇನಿಲ್ಲ.

ಸರಕಾರವು ಈ ಬಾಂಡನ್ನು ಬಿಡುಗಡೆ ಮಾಡುವ ಕೆಲಸವನ್ನು ಎಡೆಲ್‌ ವೈಸ್‌ ಎಂಬ ಫ‌ಂಡ್‌ ಹೌಸಿಗೆ ನೀಡಿದೆ ಮತ್ತು ಈ ಕಂಪೆನಿ ಈಗಾಗಲೇ ಎರಡು ರೀತಿಯ ಭಾರತ್‌ ಬಾಂಡುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಡಿಸೆಂಬರ್‌ 12ರಂದು ತೆರೆಯಲ್ಪಟ್ಟ ಈ ಆಫ‌ರ್‌ ಡಿಸೆಂಬರ್‌ 20ರಂದು ಕ್ಲೋಸ್‌ ಆಗುತ್ತದೆ.

ಸುಮಾರು 7,000 ಕೋಟಿ ರೂಪಾಯಿಗಳನ್ನು ಒಗ್ಗೂಡಿಸುವ ಉದ್ದೇಶವಿರುವ ಈ ಫ‌ಂಡು ಆ ಬಳಿಕವೂ ವರ್ಷಕ್ಕೊಮ್ಮೆ ಖರೀದಿಗೆ ತೆರೆದಿರುತ್ತದೆ. ಅಲ್ಲದೆ, ಒಮ್ಮೆ ಬಿಡುಗಡೆಯಾದ ಈ ಇ.ಟಿ.ಎಫ್. ಫ‌ಂಡು ಬಿ.ಎಸ್‌.ಸಿ. ಮತ್ತು ಎನ್‌.ಎಸ್‌.ಸಿ.ಗಳಲ್ಲಿ ಮಾರಾಟವಾಗುತ್ತವೆ. ಯಾವಾಗ ಬೇಕಾದರೂ ಆ ಕ್ಷಣದ ಮಾರುಕಟ್ಟೆ ಬೆಲೆಗೆ ಅಲ್ಲಿಂದ ಖರೀದಿಸಬಹುದು . ಹಾಂ! ಈ ಇ.ಟಿ.ಎಫ್. ಬಾಂಡುಗಳ ಖರೀದಿಗೆ ಡಿ-ಮ್ಯಾಟ್‌ ಖಾತೆ ಖಂಡಿತಾ ಬೇಕಾಗುತ್ತದೆ.

ಭಾರತ್‌ ಬಾಂಡಿನಲ್ಲಿ ಹೂಡಿಕೆ ಮಾಡುವುದರಲ್ಲಿ ಈ ಕೆಳಗಿನ ಜಾಣತನವನ್ನು ಗುರುತಿಸಬಹುದು:
1. ಇದು ಕಾರ್ಪೋರೇಟ್‌ ಅಥವಾ ಕಂಪೆನಿಗಳ ಸಾಲಪತ್ರವಾದ ಕಾರಣ ಉಳಿದ ಸರಕಾರಿ ಸಾಲಪತ್ರಗಳಿಂದ ಒಂದೆರಡು ಶೇಕಡಾ ಜಾಸ್ತಿ ಪ್ರತಿಫ‌ಲವನ್ನು ನಿರೀಕ್ಷಿಸಬಹುದು.

2. ಇದು ಸರಕಾರಿ ಬಾಂಡು ಆಗಿರುವ ಕಾರಣ ಭದ್ರತೆಯ ದೃಷ್ಟಿಯಿಂದ ಇದು ಸುಭದ್ರವಾಗಿದೆ, ಕೇಂದ್ರ ಸರಕಾರವೇ ಇದಕ್ಕೆ ಗ್ಯಾರಂಟಿ. ಇಂತಹ ಸೌಲಭ್ಯ ಅಪರೂಪ. ಇತ್ತೀಚೆಗಿನ ದಿನಗಳಲ್ಲಿ ಸಾಲಪತ್ರ ಅಥವಾ ಡೆಟ್‌ ಮಾರ್ಕೆಟ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡುತ್ತಿರುವವರಿಗೆ ಈ ಭದ್ರತೆಯ ಮಹತ್ವ ಅರ್ಥವಾದೀತು. ನಿಜವಾಗಿ ಹೇಳಬೇಕಾದರೆ ಸದ್ಯದ ಡೆಟ್‌ ಮಾರುಕಟ್ಟೆಯ ಡೋಲಾಯಮಾನ ಪರಿಸ್ಥಿತಿಯೇ ಸರಕಾರವು ಇಂತಹ ಒಂದು ಭದ್ರತೆಯ ಬಾಂಡ್‌ ಹೊರತರುವುದಕ್ಕೆ ಕಾರಣವಾಗಿರಬಹುದು.

3. ಭಾರತ್‌ ಬಾಂಡು ಒಂದು ಫ‌ಂಡ್‌. ಆದುದರಿಂದ ಎಫ್.ಡಿ.ಯಂತೆ ಇಂತಿಷ್ಟು ಎನ್ನುವ ಪ್ರತಿಫ‌ಲದ ಮುದ್ರೆಯೊಂದಿಗೆ ಅದು ಬರುವುದಿಲ್ಲ. ಪಬ್ಲಿಕ್‌ ಸೆಕ್ಟರ್‌ ಯುನಿಟ್ಸ್‌ಗಳ ಸಾಲಪತ್ರಗಳಲ್ಲಿ ಹೂಡಿ ಬಂದ ನೈಜವಾದ ಪ್ರತಿಫ‌ಲವು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುತ್ತದೆ. ಪ್ರತಿಫ‌ಲದಲ್ಲಿ ತುಸು ಏರಿಳಿತಗಳಿದ್ದರೂ ಒಂದು ಎಫ್ಡಿಗಿಂತ ಕಡಿಮೆ ಪ್ರತಿಫ‌ಲ ಬರಲಾರದು.

4. ಎಡೆಲ್‌ ವೈಸ್‌ ಫ‌ಂಡು ಹೌಸ್‌ ಈ ನಿಧಿಯ ನಿರ್ವಹಣೆಗೆ ಕೇವಲ ಶೇ. 0.0005 ಮಾತ್ರವೇ ಶುಲ್ಕ ವಿಧಿಸುತ್ತದೆ. ಇದು ಜಗತ್ತಿನಲ್ಲಿಯೇ ಅತ್ಯಂತ ಅಗ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಕಾರಣಕ್ಕೆ ನಮಗೆ ಸಿಗುವ ಪ್ರತಿಫ‌ಲ ಜಾಸ್ತಿಯಾದೀತು.

5. ಈ ಬಾಂಡುಗಳಲ್ಲಿ ನಿಮ್ಮ ದುಡ್ಡನ್ನು ಮೆಚೂÂರಿಟಿಯವರೆಗೆ ಹೂಡಿ ಇಟ್ಟರೆ 3 ವರ್ಷದ ಬಾಂಡಿನ ಮೇಲೆ ಸರಿ ಸುಮಾರು ಶೇ. 6.59 ಹಾಗೂ 10 ವರ್ಷದ ಬಾಂಡಿನ ಮೇಲೆ ಸುಮಾರು ಶೇ. 7.52 ಸಿಗುವ ಸಂಭವವಿದೆ. ಈ ಪ್ರತಿಫ‌ಲ ಸಂಭಾವ್ಯವೇ ಹೊರತು ಗ್ಯಾರಂಟಿಯದ್ದು ಅಲ್ಲ ಎನ್ನುವುದನ್ನು ಗಮನಿಸಬೇಕು. ಮ್ಯೂಚುವಲ್‌ ಫ‌ಂಡುಗಳು (ಇ.ಟಿ.ಎಫ್. ಸಹಿತ) ಪ್ರತಿಫ‌ಲದ ಮೇಲೆ ಬ್ಯಾಂಕು ಎಫ್.ಡಿ.ಗಳಂತೆ ಯಾವುದೇ ಗ್ಯಾರಂಟಿ ಕೊಡುವುದಿಲ್ಲ.

6. ಇವು ಹೂಡುವ ಸಾಲಪತ್ರಗಳು. ವಾರ್ಷಿಕವಾಗಿ ಬಡ್ಡಿ ನೀಡುತ್ತವಾದರೂ ಫ‌ಂಡು ಹೌಸು ಅದನ್ನು ಪುನರ್‌ ಹೂಡಿಕೆ ಮಾಡುತ್ತವೆ. ಹಾಗಾಗಿ ಹೂಡಿಕೆಯಲ್ಲಿ ಮೌಲ್ಯವೃದ್ಧಿಯಾಗಿ ಬಾಂಡು ಮಾರಿದಾಗ ಮಾತ್ರವೇ ದುಡ್ಡು ಕೈಸೇರುತ್ತದೆ.

7. ಭಾರತ್‌ ಬಾಂಡುಗಳು ಪಾಸ್ಸಿವ್‌ ಹೂಡಿಕೆ; ಅಂದರೆ ಇದರಲ್ಲಿ ಸಕ್ರಿಯವಾಗಿ ಪೋರ್ಟ್‌ ಫೋಲಿಯೋವನ್ನು ಕಲಸುವ ಕೆಲಸ ಇರುವುದಿಲ್ಲ. ದುಡ್ಡು ಬಂದಂತೆ ಹೂಡಿಕೆ ಮಾಡಿ ತಣ್ಣನೆ ಕೂರುವುದು ಇವರ ಕೆಲಸ. ಇದು ಹಲವರ ರುಚಿಗೆ ಸಪ್ಪೆಯಾಗಿ ಕಂಡರೂ ಈ ರಣತಂತ್ರದಲ್ಲಿ ಪ್ರತಿಫ‌ಲದ ಸ್ಥಿರತೆ ಇರುತ್ತದೆ. ಅದೊಂದು ಒಳ್ಳೆಯ ಅಂಶ.

8. ಮನ ಬಂದಾಗ ಮಾರುಕಟ್ಟೆಯಲ್ಲಿ ಮಾರಲು ಬರುವುದರಿಂದ ಇದರಲ್ಲಿ ಲಿಕ್ವಿಡಿಟಿ ಅಥವಾ ಬೇಕಾದಾಗ ನಗದೀಕರಿಸುವ ಅಂಶ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಕೊಳ್ಳುವವರು ಆಯಾ ಸಂದರ್ಭಗಳಲ್ಲಿ ಇರುತ್ತಾರೆ ಎನ್ನುವ ಆಶಯ ಇದರ ಹಿಂದಿದೆ. ಸಂದರ್ಭಾನುಸಾರ ಮಾರುಕಟ್ಟೆಯಲ್ಲಿ ಲಿಕ್ವಿಡಿಟಿ ಸೃಷ್ಟಿ ಮಾಡುವ ಹೊಣೆಗಾರಿಕೆ ಕೂಡಾ ಫ‌ಂಡ್‌ ಹೌಸಿನ ಹೆಗಲ ಮೇಲಿದೆ. ಅದಕ್ಕಾಗಿ ಏಜೆಂಟರನ್ನು ನಿಯುಕ್ತಿಗೊಳಿಸುವ ಸೌಕರ್ಯ ನೀಡಲಾಗಿದೆ.

9. ಎರಡು ಮುಖ್ಯ ಅಂಶಗಳಲ್ಲಿ ಈ ಬಾಂಡುಗಳು ಬ್ಯಾಂಕ್‌ ಎಫ್.ಡಿ. ಗಳಿಗಿಂತ ಉತ್ತಮವಾಗಿವೆ. ಮೊದಲನೆಯದಾಗಿ ಇಳಿಯುತ್ತಿರುವ ಬಡ್ಡಿ ದರ ಕಾಲಘಟ್ಟದಲ್ಲಿ ಬಾಂಡುಗಳು ಮಾರುಕಟ್ಟೆಯಲ್ಲಿ ತಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಬಡ್ಡಿ ದರ ಇಳಿದಂತೆÇÉಾ ಬಾಂಡುಗಳನ್ನು ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಬಹುದು, ಈ ಸೌಲಭ್ಯ ಎಫ್.ಡಿ.ಗಳಿಗೆ ಇಲ್ಲ. ಅವು ಟ್ರೇಡೇಬಲ್‌ ಅಲ್ಲ. ಎರಡನೆಯದಾಗಿ ಈ ಬಾಂಡುಗಳು ಇತರ ಡೆಟ್‌ ಫ‌ಂಡುಗಳಂತೆ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ಗೆ ಒಳಪಡುತ್ತವೆ.ಅಂದರೆ 3 ವರ್ಷ ಮೀರಿದ ಹೂಡಿಕೆಗೆ ಶೇ.20 ಟ್ಯಾಕ್ಸ್‌ ಕೊಟ್ಟರೆ ಸಾಕು; ಅದೂ ಕೂಡಾ ಇಂಡೆಕ್ಸೇಶನ್‌ ಬಳಿಕ. ಇಂಡೇಕ್ಸೇಶನ್‌ ಸೂತ್ರದ ಪ್ರಕಾರ ಹಣದುಬ್ಬರದ ಅಂಶವನ್ನು ಮೌಲ್ಯವೃದ್ಧಿªಯಿಂದ ಕಳೆದು ಅಸಲಿ ಲಾಭದ ಪ್ರಮಾಣದ ಮೇಲೆ ಮಾತ್ರವೇ ತೆರಿಗೆ ಕಟ್ಟಿದರೆ ಸಾಕು. ಬ್ಯಾಂಕು ಎಫ್.ಡಿ.ಗಳಿಗೆ ಪ್ರತಿ ವರ್ಷ ಲಾಭಾಂಶದ ಮೇಲೆ ಅನ್ವಯ ದರದಲ್ಲಿ ತೆರಿಗೆ ಕಟ್ಟಬೇಕು. ಜಾಸ್ತಿ ಆದಾಯ ಇದ್ದುಕೊಂಡು ತೆರಿಗೆ ಕಟ್ಟುವವರಿಗೆ ಭಾರತ್‌ ಬಾಂಡ್‌ ಲಾಭದಾಯಕವಾದೀತು.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.