ಮಡಿಲಲ್ಲಿ ಕಟ್ಟಿಕೊಂಡ ಬಾಂಬ್‌ ಕ್ವಿಕ್‌ ಫಾಸ್‌


Team Udayavani, Sep 9, 2019, 5:41 AM IST

kwit-pass

ಬೆಂಗಳೂರಿನಲ್ಲಿ ಡಿನ್ನರ್‌ ಮುಗಿಸಿ ಬಂದ ಮೂವರು ಮಾಳಿಗೆಯಲ್ಲಿರುವ ತಮ್ಮ ಕೋಣೆ ಪ್ರವೇಶಿಸಿದರು. ಏನೋ ವಾಸನೆ. ಬಂದ ಕೆಲವೇ ನಿಮಿಷಗಳಲ್ಲಿ ವಾಂತಿ ಮಾಡತೊಡಗಿದರು. ಡಿನ್ನರ್‌ ಪಾರ್ಟಿಯ ನಶೆ ಅವರನ್ನು ಹೆಚ್ಚು ಚಿಂತಿಸಲು ಬಿಡದೆ ನಿದ್ರಿಸುವಂತೆ ಮಾಡಿತು. ಮರುದಿನ ಎದ್ದಾಗ ತೀವ್ರ ಅಸ್ವಸ್ಥಗೊಂಡ ಅವರನ್ನು ಅಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಓರ್ವ, ಇನ್ನೋರ್ವ ಆಸ್ಪತ್ರೆಯಲ್ಲಿ, ಮತ್ತೋರ್ವ ಎರಡು ದಿನಗಳು ಕಳೆದು ಸಾವನಪ್ಪಿದರು.

ಅಡಿಕೆ ಸಂರಕ್ಷಿಸಲು ಗೋಣಿಯಲ್ಲಿ ಅಡಿಕೆ ತುಂಬಿಸಿ “ಸಂರಕ್ಷಕ ಮಾತ್ರೆ’ ಹಾಕಿಟ್ಟು ಅದೇ ಕೋಣೆಯಲ್ಲಿ ನಿದ್ರಿಸುತ್ತಾನೆ ಓರ್ವ ಕೃಷಿಕ. ವರ್ಷವೊಂದರಲ್ಲಿ ಶ್ವಾಸಕೋಶ‌ದ ಕ್ಯಾನ್ಸರ್‌ಗೆ ತುತ್ತಾಗುತ್ತಾನೆ‌.
ಮೇಲಿನ ಎರಡೂ ಪ್ರಕರಣಗಳಲ್ಲಿ ಖಳ ನಾಯಕನಾಗಿ ಬಂದುದು ಧಾನ್ಯ ಸಂರಕ್ಷಣೆಗಾಗಿ ಉಪಯೋಗಿಸುವ “ಸಂರಕ್ಷಕ ಮಾತ್ರೆ’ ಕ್ವಿಕ್‌ ಫಾಸ್‌, ಅಂದರೆ ಅಲ್ಯುಮಿನಿಯಂ ಫಾಸ್‌ಫೈಡ್‌. ಇನ್ನೂ ಸುಲಭದ ಹೆಸರು ಇಲಿ ಪಾಷಾಣ.

ಅಡಿಕೆ ಒಣಗಿದೊಡನೆ ಮಾರುವುದಿದ್ದರೆ ಹೊಸ ಅಡಿಕೆ ಎಂದು ಇದರ ಬೆಲೆ ಕಡಿಮೆ. ಅಡಿಕೆಯನ್ನು ಒಂದು ವಷ‌ì ದಾಸ್ತಾನಿರಿಸಿ ಹಳೆ ಅಡಿಕೆ ಮಾಡಿಕೊಡುವುದಾದರೆ ಕಿಲೋ ಒಂದಕ್ಕೆ ಅಂದಾಜು ರೂ. 80ಕ್ಕೂ ಹೆಚ್ಚು ಸಿಗುತ್ತದೆ. ಆದರೆ ಸರಿಯಾಗಿ ಒಣಗಿಸಿ ದಾಸ್ತಾನಿರಿಸಿದರೆ ಸರಿ. ಇಲ್ಲವಾದರೆ ಕೀಟದ ಬಾಧೆಗೊಳಗಾಗಿ ಅಡಿಕೆ ತೂತು ಬೀಳುತ್ತದೆ. ವ್ಯಾಪಾರಿ ಭಾಷೆಯಲ್ಲಿ ಡಂಕಿಯಾದ ಅಡಿಕೆ. ಇದು ತೂಕದಲ್ಲಿಯೂ, ಗುಣಮಟ್ಟದಲ್ಲೂ ಕಳಪೆಯಾಗಿ ರುತ್ತದೆ. ಬೆಲೆಯೂ ಕಡಿಮೆ. ಇದಕ್ಕಾಗಿ ಅಡಿಕೆಯನ್ನು ಸಂರಕ್ಷಿಸಲು ಕಂಡುಕೊಂಡ ವಿಧಾನ ಕ್ವಿಕ್‌ ಫಾಸ್‌ ಮಾತ್ರೆ ಹಾಕಿರಿಸುವುದು.

ಇದೊಂದು ಸಾಮಾನ್ಯ ಕೀಟ ನಾಶಕ ಎನ್ನುತ್ತಾರೆ ಇದರ ವ್ಯಾಪಾರಸ್ಥರು. ಆದರೆ ಇದು ಅಸಾಮಾನ್ಯ ವಿಷ. ಮಡಿಲಲ್ಲಿ ಕಟ್ಟಿಕೊಂಡ ವಿಷಾನಿಲ ಬಾಂಬ್‌. ಸೈಲೆಂಟ್‌ ಕಿಲ್ಲರ್‌. ಇದನ್ನು ತೀವ್ರ ಗತಿಯಲ್ಲಿ ಉಸಿರಾಡಿದವರು ಒಂದೇ ಗಂಟೆಯಲ್ಲಿ ಸಾವನ್ನಪ್ಪುತ್ತಾರೆ. ಮೇಲೆ ತಿಳಿಸಿದ ಉದಾಹರಣೆಯಲ್ಲಿ ಆ ಬಡವಾಣೆಯಲ್ಲಿ ಇವರು ವಾಸ್ತವ್ಯವಿದ್ದ ಮಾಳಿಗೆಯ ಕೋಣೆಯ ಕೆಳಭಾಗದ ಕೋಣೆಯ ವ್ಯಕ್ತಿ ತಿಗಣೆ ಕಾಟಕ್ಕಾಗಿ ಕೋಣೆಯೊಳಗೆ ಹಲವಾರು ಕ್ವಿಕ್‌ಫಾಸ್‌ ಮಾತ್ರೆಯಿರಿಸಿ ಕೋಣೆಯ ಬಾಗಿಲನ್ನು ಮುಚ್ಚಿ ಹೋಗಿದ್ದ. ವಿಷಾನಿಲ ಸೀಲಿಂಗ್‌ ಮತ್ತು ಕಿಟಿಕಿಯ ಮೂಲಕ ಮೇಲೆ ಬಂದು ಇವರ ಕೋಣೆಯನ್ನು ಆವರಿಸಿತ್ತು. ಇದರದೇ ವಾಸನೆ ಎಂದು ದೃಢೀಕರಿಸಲಾಗಿತ್ತು. ಇವರ ಮೃತ ದೇಹ ಮತ್ತು ಜೊಲ್ಲು ರಸದ ಪರೀಕ್ಷೆಯಲ್ಲಿ ಕ್ವಿಕ್‌ ಫಾಸ್‌ ವಿಷದಂಶ ಪತ್ತೆಯಾಗಿತ್ತು. ಇವರ ಜೊತೆಗೆ ಡಿನ್ನರ್‌ ಪಾರ್ಟಿ ಮುಗಿಸಿ ಬಂದ ಇನ್ನೋರ್ವ ಮಿತ್ರ ಬೇರೆ ಕೋಣೆಯಲ್ಲಿ ಮಲಗಿದ್ದರಿಂದ ಸಾವಿನಿಂದ ಬಚಾವಾಗಿದ್ದ.

ಅಲ್ಯುಮಿನಿಯಂ ಫಾಸ್‌ಫೈಡ್‌ ಮಾರುಕಟ್ಟೆಯಲ್ಲಿ ನಾನಾ ಹೆಸರಿನಲ್ಲಿ ದೊರಕುತ್ತದೆ. ಕ್ವಿಕ್‌ ಫಾಸ್‌, ಸಲ್‌ಫಾಸ್‌, ಪಾಷಾಣ ಇತ್ಯಾದಿ ಹೆಸರುಗಳು. ಪಟ್ಟಣಗಳ ರಸ್ತೆ ಬದಿಗಳಲ್ಲಿ ಈ ಮಾತ್ರೆಗಳನ್ನು ಮಾರುವವರಿದ್ದಾರೆ. ಬಡಾವಣೆಗಳಲ್ಲಿ ತಿಂಗಳಿಗೊಮ್ಮೆ ಈ ಮಾತ್ರೆ ಮಾರುತ್ತಾ ಬರುವವರಿದ್ದಾರೆ.

ಸುಲಭದಲ್ಲಿ ಮಾತುಗಳಿಂದ ಮಂತ್ರಮುಗ್ಧ‌ªಗೊಳಿಸಿ ತಿಗಣೆಗಳಿಗೆ ಇವರು ಈ ಔಷಧ ನೀಡುತ್ತಾರೆ. ಸ್ವಲ್ಪ ಮಟ್ಟಿಗೆ ಕೊಳೆತ ಬೆಳ್ಳುಳ್ಳಿಯ ವಾಸನೆ ಬರುತ್ತದೆ ಅಷ್ಟೇ ಎನ್ನುತ್ತಾರೆ. ಮಾರಾಟ ಮಾಡುವವನಿಗೂ ಇದರ ಪರಿಣಾಮ ಗೊತ್ತಿರುವುದಿಲ್ಲ. ಅರಿಯದೆ ಅದೆಷ್ಟೋ ಮಂದಿ ಈ ವಿಷಾನಿಲದ ಘಾತಕ್ಕೆ ಒಳಗಾಗುತ್ತಿದ್ದಾರೆ. ಕೆಲವೆಡೆ ಬಸ್‌ಗಳಲ್ಲಿ ತಿಗಣೆ ಕಾಟದಿಂದ ಮುಕ್ತಿ ಪಡೆಯಲು ಇದನ್ನು ಉಪಯೋಗಿ ಸುತ್ತಾರಂತೆ.

ಮೂಷಕಗಳಿಗಾಗಿ ಇಲಿ ಪಾಷಾಣ, ಕೇಕ್‌, ಕ್ರೀಮ್‌ನಂತಹ ನಾನಾ ರೂಪದಲ್ಲಿ ಈ ಅಲ್ಯುಮಿನಿಯಂ ಫಾಸ್‌ಫೈಡ್‌ನ‌ ವಿಷಗಳು ಮಾರ್ಕೆಟ್‌ನಲ್ಲಿ ದೊರಕುತ್ತಿವೆ. ಇದನ್ನು ಎಣ್ಣೆ ತಿಂಡಿಗಳಲ್ಲಿ ಬೆರೆಸಿಟ್ಟಾಗ ಅದನ್ನು ತಿಂದ ಇಲಿ ಹೆಗ್ಗಣ ಇತ್ಯಾದಿಗಳು ಸಾಯುತ್ತವೆ. ಇದನ್ನು ನಾಯಿ ಬೆಕ್ಕುಗಳು ಕೂಡ ತಪ್ಪಿ ತಿಂದರೆ ಸಾವು ಖಂಡಿತ. ನಾಯಿ ಸ್ವಲ್ಪ ರುಚಿ ನೋಡಿದರೂ ಸಾಕು ಆಗ ಸಾಯುವುದಿಲ್ಲ. ಆಹಾರ ಸಂಪೂರ್ಣ ತ್ಯಜಿಸಿ ನೀರನ್ನು ಕುಡಿದು ಕೃಷವಾಗಿ ಕೆಲವೇ ದಿನಗಳಲ್ಲಿ ಸಾವನ್ನಪ್ಪುತ್ತದೆ. ಆಯುರ್ವೇದ ಗ್ರಂಥಗಳ ಪುಟಗಳನ್ನು ಮೊಗಚಿದರೆ ಅಡಿಕೆಯ ಹಲವಾರು ಔಷಧೀಯ ಗುಣಗಳು ನಿಮ್ಮೆದುರಿಗೆ ಬರುತ್ತವೆ. ವೇದಗಳ ಮತ್ತು ಪುರಾಣಗಳ ಕಾಲದಲ್ಲಿ ಅಡಿಕೆಯ ಉಪಯೋಗದ ಬಗ್ಗೆ ಸಾಕಷ್ಟು ಮಾಹಿತಿಗಳಿತ್ತು. ಈಗ ಅಡಿಕೆಯನ್ನು ಮೆಲ್ಲುವುದು ಕ್ಯಾನ್ಸರ್‌ಕಾರಕ ಎಂದು ಗುಲ್ಲೆಬ್ಬಿಸುತ್ತಿದ್ದಾರೆ. ಇದಕ್ಕೆ ಕಾರಣ ವಿಶ್ಲೇಷಿಸಿದರೆ ಖಳನಾಯಕನಾಗಿ ಕಾಣಿಕೊಳ್ಳುವುದು ಈ ವಿಷದ ಮಾತ್ರೆ.

ಅಲ್ಯುಮಿನಿಯಂ ಫಾಸ್‌ಫೈಡ್‌ ಕೆಂಪು ರಂಜಕ ಮತ್ತು ಅಲ್ಯುಮೀನಿಯಂನ್ನು ಉರಿಸಿ ತಯಾರಿಸುತ್ತಾರೆ. ಅಲ್ಯುಮಿನಿಯಂ ಫಾಸ್‌ಫೈಡ್‌ ಗಾಳಿಯಲ್ಲಿರುವ ನೀರಿನಂಶ ದೊರೆತೊಡನೆ ಕರಗಿ ಫಾಸಿ#àನ್‌ ವಿಷ ಗಾಳಿಯಾಗಿ ಹೊರ ಬರುತ್ತದೆ. ಮಾತ್ರೆ ಕಾಣೆಯಾಗುತ್ತದೆ. ಅಥವಾ ಅಲ್ಪ ಪ್ರಮಾಣದ ಹುಡಿ ಉಳಿದಿರುತ್ತದೆ. ಫಾಸಿ#àನ್‌ ನೇರವಾಗಿ ಜೀವಿಯ ಉಸಿರಾಟ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಈ ವಿಷ ಗಾಳಿ ಸೇವಿಸಿದ ಮೂಷಕಗಳು,ತಿಗಣೆ, ಹುಳ,ಹುಪ್ಪಟೆಗಳು ಮರಣವನ್ನಪ್ಪುತ್ತವೆ. ಮನುಷ್ಯರು ಈ ಗಾಳಿ ಸೇವಿಸಿದವರಿಗೆ ಶ್ವಾಸನಾಳದಲ್ಲಿ ಕೆರೆತ, ಕೆಮ್ಮು, ತಲೆಸುತ್ತು¤, ವಾಂತಿ, ಹೊಟ್ಟೆ ನೋವು ಬರುತ್ತದೆ. ಉಸಿರಾಟದ ಮೂಲಕ ರಕ್ತಕ್ಕೆ ಸೇರಿದಾಗ ನಾಡಿ ಬಡಿತ ಮತ್ತು ಕಿಡ್ನಿಯ ಕ್ರಿಯೆ ನಿಧಾನವಾಗುತ್ತದೆ ಅಥವಾ ವಿಫ‌ಲವಾಗಿ ಸಾವು ಹತ್ತಿರ ಬರುತ್ತದೆ. ದಿನ ನಿತ್ಯ ಅತ್ಯಲ್ಪ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ ಜೀವಕೋಶಗಳು ಸಾಯುತ್ತಾ ಕ್ಯಾನ್ಸರ್‌ಗೆ ತುತ್ತಾಗುತ್ತಾನೆ.

ದವಸ ಧಾನ್ಯಗಳನ್ನು ಹುಳ ಬೀಳದಂತೆ ಸಂರಕ್ಷಿಸಿಡಲು ಇದಲ್ಲದೆ ಬೇರೆ ದಾರಿ ಇಲ್ಲ ಎಂದು ವಾದಿಸುವ ಕೃಷಿಕರು, ವ್ಯಾಪಾರಿಗಳಿದ್ದಾರೆ. ಬೇಳೆ ಕಾಳುಗಳನ್ನು ನಾವು ತೊಳೆದು, ಬೇಯಿಸಿ ಉಪಯೋಗಿಸುತ್ತೇವೆ. ತೊಳೆದು ಬೇಯಿಸಿದಾಗ ಇದರ ವಿಷದಂಶ ಕಡಿಮೆಯಾಗುವುದು ಸತ್ಯ. ಆದರೆ ಅಲ್ಪ ಪ್ರಮಾಣದಲ್ಲಿ ನಮ್ಮ ಹೊಟ್ಟೆ ಸೇರುವುದು ಖಚಿತ. ಆದರೆ ಅಡಿಕೆ ಈ ರೀತಿಯಲ್ಲ. ಮಾತ್ರೆ ಹಾಕಿದ ಅಡಿಕೆಯನ್ನು ಪುಡಿಮಾಡಿ ಹಾಗೆಯೇ ಸೇವಿಸುತ್ತಾರೆ. ತೊಳೆಯುವ, ಕುದಿಸುವ ಪರಿಪಾಠವಿಲ್ಲ. ಮಾಡಿದರೂ ಅಡಿಕೆಯ ರುಚಿ ಕೆಡುತ್ತದೆ. ಈಗ ಹೇಳಿ ಇದನ್ನು ಅರಿಯದೆ ತಿಂದವನ ಆರೋಗ್ಯ ಸ್ಥಿತಿ ಏನಾಗಬಹುದು. ಕ್ವಿಕ್‌ ಫಾಸ್‌ ಹಾಕಿದ ಅಡಿಕೆಯನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಿದರೆ ಖಂಡಿತ ಫಾಸಿ#àನ್‌ ಅಂಶ ಕಂಡು ಬರಬಹುದು. ಆದರೆ ಯಾರೂ ಪರೀಕ್ಷಿಸಲು ಹೋಗಿಲ್ಲ. ತಮ್ಮ ತಲೆಗೆ ತಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳಲು ಯಾರೂ ಸಿದ್ಧರಿಲ್ಲ.

ವಿದೇಶಗಳಲ್ಲೂ ಈ ಮಾತ್ರೆಯ ವಿಷಾನಿಲದಿಂದ ಸಾವನ್ನಪ್ಪಿದ್ದಾರೆ. ಇದು ನಿರ್ಧರಿತವಾದೊಡನೆ ಆ ದೇಶಗಳಲ್ಲಿ ಈ ಮಾತ್ರೆಯನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಅಲ್ಲಿ ಯಾರಲ್ಲಾದರೂ ಈ ಮಾತ್ರೆ ಅಕ್ರಮವಾಗಿ ಕಂಡು ಬಂದಲ್ಲಿ ಜೈಲು ಸಜೆ ಕಾದಿರುತ್ತದೆ. ಆದರೂ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ನಮ್ಮಂತೆ ಇದರ ಉಪಯೋಗ ಹೆಚ್ಚಾಗಿದೆ.

ಅನೇಕ ಮಂದಿ ಸಾವಯವ ಕೃಷಿಕರು ತಮ್ಮ ಬೇಳೆ ಕಾಳುಗಳನ್ನು ಸಂರಕ್ಷಿಸಲು ಸಾವಯವ ಕ್ರಮವನ್ನು ಅನುಸರಿಸಿ ಯಶಸ್ವಿ ಯಾ ಗಿದ್ದಾರೆ. ಕಹಿ ಬೇವಿನ ಮತ್ತು ಲವಂಗದ ಕಾಯಿ, ಎಣ್ಣೆ, ಒಣಗಿದೆ ಎಲೆ, ಕರಿಮೆಣಸಿನ ಕಾಳುಗಳು, ಗೇರುಬೀಜದ ಸಿಪ್ಪೆ ಇತ್ಯಾದಿ ಗಳನ್ನು ಬೇಳೆ ಕಾಳುಗಳ, ಸುಲಿದ ಅಡಿಕೆ ಜೊತೆಗೆ ಸೇರಿಸಿಟ್ಟು ಯಶಸ್ವಿಯಾಗಿದ್ದಾರೆ. ಇವೆಲ್ಲ ಆಹಾರ ವಸ್ತುಗಳಲ್ಲದೆ ಔಷಧೀಯ ಗುಣವುಳ್ಳ ಕೀಟ ನಾಶಕಗಳೂಆಗಿವೆ. ಆದರೆ ಇದನ್ನು ಉಪಯೋಗಿಸುವಲ್ಲಿ ಪರಿಶ್ರಮ ಹೆಚ್ಚು ಬೇಕು. ಬೇಳೆ ಕಾಳು, ಅಡಿಕೆ ಉಪಯೋಗಿಸುವವರಿಗೆ ಇದರಿಂದ ಯಾವುದೇ ಹಾನಿ ಇಲ್ಲ. ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಲು ಭದ್ರವಾದ ಗಾಳಿಯಾಡದ ಕೋಣೆಯಲ್ಲಿಟ್ಟು ಗಂಧಕದ ಹೊಗೆ ಹಾಕುವ ಹ್ಯುಮಿಗೇಷನ್‌ ಎನ್ನುವ ಕ್ರಮ ಉತ್ತಮ ವಿಧಾನ ಎನಿಸಿದೆ.

ಅತಿ ಆಸೆ ನಮ್ಮವರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆಯೇ? ನನ್ನ ಕೃಷಿ ಉತ್ಪನ್ನದಿಂದ, ನಾನು ಮಾಡುವ ವ್ಯಾಪಾರದಿದ ನನಗೆ ಮಾತ್ರ ಲಾಭವಾದರೆ ಸಾಕು ಎನ್ನುವ ಸ್ವಾರ್ಥವನ್ನು ಬಿಡಬೇಕು. ಇದನ್ನು ಉಪಯೋಗಿಸುವವರ‌ೂ ನಾಳೆಯ ನಮ್ಮ ಉತ್ಪನ್ನವನ್ನು ಖರೀದಿಸಲು ಜೀವಂತ ಇರಬೇಕು ಎಂದು ತಿಳಿಯುವ ಮಾನವೀಯತೆ ನಾವು ತೋರಿದರೆ ಸಾಕು. ಈ ವಿಷಾನಿಲದ ಬಾಂಬ್‌ ನೀವು ಮುಂದೆ ಉಪಯೋಗಿಸಲಾರಿರಿ.

– ಶಂಕರ್‌ ಸಾರಡ್ಕ

ಟಾಪ್ ನ್ಯೂಸ್

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.