ಮೋಟಾರ್‌ ವಾಹನಗಳ ಮಾದರಿಯ ಕಾಯ್ದೆ, ರಸ್ತೆಗಳಿಗೇಕಿಲ್ಲ?


Team Udayavani, Sep 13, 2019, 5:21 AM IST

t-47

ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ, 2019ರ ಪ್ರಕಾರ ಸೆ. 1ರಿಂದ ಮೋಟಾರ್‌ ವಾಹನಗಳಿಗೆ / ಚಾಲನೆಗೆ ಸಂಬಂಧಪಟ್ಟಂತೆ ಅಪರಾಧಗಳಿಗೆ ದಂಡವನ್ನು ಹಲವು ಪಟ್ಟು ಹೆಚ್ಚಿಸಿದ್ದು ಮಾತ್ರವಲ್ಲದೆ ಕೆಲವೊಂದು ಅಪರಾಧಗಳಿಗೆ ಜೈಲು ಶಿಕ್ಷೆ ನೀಡಬಹುದಾದ ಅವಕಾಶವನ್ನೂ ಕಲ್ಪಿಸಲಾಗಿದೆ. ಈ ದಂಡನೆಗಳ ತೀವ್ರತೆ ಕಾಣುವಾಗ ಮುಂದುವರಿದ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿ ರುವಂತೆ ಅಥವಾ ಅದಕ್ಕಿಂತಲೂ ಒಂದು ಹೆಜ್ಜೆ ಮಿಗಿಲಾಗಿ ದಂಡನೆಗಳನ್ನು ಅಳವಡಿಸಲಾಗಿದೆ ಎನ್ನಲಡ್ಡಿಯಿಲ್ಲ.

ಹೀಗಿರುವಾಗ, ಒಂದು ಲೆಕ್ಕದಲ್ಲಿ ಈ ತಿದ್ದುಪಡಿ ಕಾಯಿದೆ ನಮ್ಮ ದೇಶವೂ ಮುಂದುವರಿದಿರುವ/ತ್ತಿರುವ ಬಗ್ಗೆ ದೇಶವಾಸಿಗಳೆಲ್ಲರೂ ಹೆಮ್ಮೆಪಡಬೇಕಾದ ವಿಷಯ. ಅದೇ ಹೊತ್ತು ಮೋಟಾರ್‌ ವಾಹನಗಳಿಗೆ ಅತ್ಯಂತ ನಿಕಟವಾಗಿರುವ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯ ದೋಷ ಅಥವಾ ನ್ಯೂನತೆಗಳ ಕುರಿತು ಗಮನ ಹರಿಸಿದ್ದು ಕಡಿಮೆ ಎನ್ನಬಹುದು. ಹಳ್ಳಿಗಾಡಿನ ಒಳ ರಸ್ತೆಗಳು ಒತ್ತಟ್ಟಿಗಿರಲಿ ನಿನ್ನೆಮೊನ್ನೆ ಎಂಬಂತೆ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎದ್ದಿರುವ ಹೊಂಡಗಳು ರಸ್ತೆಗಳ ಆಲಕ್ಷ್ಯಕ್ಕೆ ಹಿಡಿದ ಕನ್ನಡಿಯಲ್ಲವೇ? ರಸ್ತೆಗೆ ಮಂಜೂರಾದ ಪೂರ್ತಿ ಮೊತ್ತ ಕಾಮಗಾರಿಗೆ ಹೋಗದಿರುವ ಸಾಧ್ಯತೆಯನ್ನು ಈ ಹೊಂಡಗಳು ತೋರಿಸುತ್ತಿವೆ. ಕಾಮಗಾರಿ ಕಳಪೆಯಾಗಿ ರುವುದನ್ನು ಆ ಹೊಂಡಗಳು ಸಾರಿ ಹೇಳುತ್ತವೆ. ಹಾಗಿರುವಾಗ ರಸ್ತೆ ಸಂಬಂಧಿ ಕಠಿಣ ನೀತಿ-ನಿಯಮಗಳ ಅನುಷ್ಠಾನವೂ ಅಗತ್ಯ ಎಂದನಿಸುವುದಿಲ್ಲವೇ?

ಸ್ವಾತಂತ್ರ್ಯ ಪೂರ್ವದಲ್ಲಿ ಅಥವಾ ಐವತ್ತನೇ, ಅರ್ವತ್ತನೇ ದಶಕದಲ್ಲಿ ಡಾಮಾರಿಕರಣಗೊಂಡು ನಿರ್ಮಿತವಾಗಿರುವ ಅನೇಕ ರಸ್ತೆಗಳು ಸದೃಢವಾಗಿವೆ. ಉದಾ: ಕರಾವಳಿ ಪ್ರದೇಶದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ (ಹಿಂದೆ 17, ಈಗ 66) ಅರ್ವತ್ತನೇ ದಶಕದ ಬಳಿಕ ನಿರ್ಮಾಣಗೊಂಡಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಅದನ್ನು ಚತುಷ್ಪಥಗೊಳಿಸುವ‌ ಕಾಮಗಾರಿ ನಡೆದಿದ್ದು ಕೆಲವೆಡೆ ಆ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಕಾಮಗಾರಿ ಪೂರ್ಣಗೊಂಡಿರುವ ಕೆಲವೆಡೆ ನಾಲ್ಕೈದು ವರ್ಷಗಳನ್ನು ಪೂರೈಸುವ ಮೊದಲೇ ದೊಡ್ಡದೊಡ್ಡ ಹೊಂಡಗಳು ಎದ್ದಿರುವುದು ಏನನ್ನು ಸೂಚಿಸುತ್ತದೆ? ಕಾಮಗಾರಿ ಪೂರ್ಣಗೊಂಡಿಲ್ಲ ದಿದ್ದರೂ, ಹೊಂಡಗಳಿಂದಾಗಿ ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತಿದ್ದರೂ ಟೋಲನ್ನು ಮಾತ್ರ ಅನಾಯಾ ಸವಾಗಿ ಸಂಗ್ರಹಿಸಲಾಗುತ್ತದೆ.

ದೇಶದ ಪ್ರಗತಿ, ಹಣಕಾಸಿನ ಸ್ಥಿತಿಗತಿ ಹಿಂದಿನ ಕಾಲಕ್ಕಿಂತಲೂ ಇಂದು ಬೆಳೆದಿದೆ. ಆ ಕಾಲಕ್ಕಿಂತಲೂ ತಾಂತ್ರಿಕತೆ ಇಂದು ಹೆಚ್ಚು ಅಭಿವೃದ್ಧಿಗೊಂಡಿದೆ. ದೇಶದ ಒಟ್ಟಾರೆ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದ ಆ ಕಾಲದಲ್ಲಿ ನಿರ್ಮಿತವಾಗಿರುವ ಕಾಮಗಾರಿಗಳು ನಾಲ್ಕೈದು ದಶಕಗಳಿಗೂ ಮೀರಿ ಬಾಳ್ವಿಕೆ ಬರುತ್ತಿದ್ದರೆ ಹಣಕಾಸು, ತಾಂತ್ರಿಕತೆ ಮತ್ತಿತರ ಎಲ್ಲಾ ವಿಷಯಗಳಲ್ಲಿಯೂ ಮೇಲ್ಮಟ್ಟದಲ್ಲಿರುವ ಇಂದಿನ ಕಾಲದ ಕಾಮಗಾರಿಗಳು ನಾಲ್ಕೈದು ವರ್ಷಗಳೂ ಬಾಳ್ವಿಕೆ ಬರುವುದಿಲ್ಲ ಅಂದರೆ ಏನರ್ಥ? ಅಂದಿನ ಪ್ರಾಮಾಣಿಕತೆ ಇಂದು ಉಳಿದಿಲ್ಲ ಎಂದೇ ಹೇಳಬಹುದಲ್ಲವೇ? ಮಾನವ ಘಟಿತ ಲೋಪಗಳಿಗೆ ಕೆಲವೊಮ್ಮೆ ಪ್ರಕೃತಿಯನ್ನು ದೂರು ವುದಿದೆ. ಅದರಂತೆ ಕರಾವಳಿ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಕಾರಣ ರಸ್ತೆ ಮತ್ತಿತರ ಕಾಮಗಾರಿಗಳ ಗುಣಮಟ್ಟ ಕೆಡುತ್ತದೆ ಎಂದು ಹೇಳುವುದಿದೆ. ಮಳೆ ಪ್ರಮಾಣದಲ್ಲಿ ಹಿಂದಿನ ಕಾಲ ಮತ್ತು ಇಂದಿಗೆ ಅಜಗಜಾಂತರವೇನೂ ಇಲ್ಲ. ಆದರೂ ಇಂದಿನ ಕಾಮಗಾರಿಗಳು ಬಾಳ್ವಿಕೆ ಬರುವುದಿಲ್ಲ ಅಂದರೆ ಕಾಮಗಾರಿಗಳಲ್ಲಿ ಅಗತ್ಯವಾಗಿರುವ ವಸ್ತುಗಳು ಬೇಕಾದ ಪ್ರಮಾಣದಲ್ಲಿ ಉಪಯೋಗವಾ ಗದಿರುವುದು ಅಥವಾ ಕಾಮಗಾರಿಗಳ ನಿರ್ವಹಣೆಯಲ್ಲಿ ದೋಷ ಇರುವುದು ಕಾರಣ ಯಾಕಾಗಬಾರದು?

ಇಂದಿನ ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ ಮಾದರಿಯಲ್ಲಿಯೇ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿಯೂ (ಮತ್ತು ಇತರ ಕಾಮಗಾರಿಗಳಿಗೆ ಕೂಡ) ಕಟ್ಟುನಿಟ್ಟಿನ ಕಾಯ್ದೆ ಜಾರಿ ಗೊಳಿಸಬೇಕು. ಕಾಮಗಾರಿಗಳನ್ನು ನಿರ್ವಹಿಸಿದವರಿಂದ ಇಂತಿಷ್ಟೇ ಅವಧಿಗೆ ಕಾಮಗಾರಿಗಳ ಸುಸ್ಥಿತಿ ಬಗ್ಗೆ ಹೊಣೆಗಾರಿಕೆ ಅಥವಾ ಗ್ಯಾರಂಟಿ ಪಡೆಯಬೇಕು. ಕಾಂಕ್ರಿಟ್, ಡಾಮಾರು ಅಥವಾ ಜಲ್ಲಿಗಳು ಎದ್ದು ಹೋಗುವುದು, ಹೊಂಡ ಬೀಳುವುದು ಇತ್ಯಾದಿಗಳಿಗೆ ಅವರನ್ನು ಜವಾಬ್ದಾರರನ್ನಾಗಿ ಮಾಡಬೇಕು. ಈ ಸಂಬಂಧ ಈಗಾಗಲೇ ಇರುವ ಕಾಯ್ದೆಗಳನ್ನು ಬಲಪಡಿಸುವುದರ ಅಥವಾ ಹೊಸತಾಗಿ ರೂಪಿಸುವುದರ ಮೂಲಕ ತಪ್ಪಿತಸ್ಥರನ್ನು ದಂಡನೆಗೆ ಗುರಿಪಡಿಸಬೇಕು. ಆಗಲೇ ನಮ್ಮ ದೇಶ ನಿಜವಾಗಿಯೂ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ.

ಇಂದಿನ ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ ಮಾದರಿಯಲ್ಲಿಯೇ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿಯೂ ಕಟ್ಟುನಿಟ್ಟಿನ ಕಾಯ್ದೆ ಜಾರಿ ಗೊಳಿಸಬೇಕು.

ಎಚ್‌. ಆರ್‌. ಆಳ್ವ

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.