ಮೋಟಾರ್‌ ವಾಹನಗಳ ಮಾದರಿಯ ಕಾಯ್ದೆ, ರಸ್ತೆಗಳಿಗೇಕಿಲ್ಲ?


Team Udayavani, Sep 13, 2019, 5:21 AM IST

t-47

ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ, 2019ರ ಪ್ರಕಾರ ಸೆ. 1ರಿಂದ ಮೋಟಾರ್‌ ವಾಹನಗಳಿಗೆ / ಚಾಲನೆಗೆ ಸಂಬಂಧಪಟ್ಟಂತೆ ಅಪರಾಧಗಳಿಗೆ ದಂಡವನ್ನು ಹಲವು ಪಟ್ಟು ಹೆಚ್ಚಿಸಿದ್ದು ಮಾತ್ರವಲ್ಲದೆ ಕೆಲವೊಂದು ಅಪರಾಧಗಳಿಗೆ ಜೈಲು ಶಿಕ್ಷೆ ನೀಡಬಹುದಾದ ಅವಕಾಶವನ್ನೂ ಕಲ್ಪಿಸಲಾಗಿದೆ. ಈ ದಂಡನೆಗಳ ತೀವ್ರತೆ ಕಾಣುವಾಗ ಮುಂದುವರಿದ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿ ರುವಂತೆ ಅಥವಾ ಅದಕ್ಕಿಂತಲೂ ಒಂದು ಹೆಜ್ಜೆ ಮಿಗಿಲಾಗಿ ದಂಡನೆಗಳನ್ನು ಅಳವಡಿಸಲಾಗಿದೆ ಎನ್ನಲಡ್ಡಿಯಿಲ್ಲ.

ಹೀಗಿರುವಾಗ, ಒಂದು ಲೆಕ್ಕದಲ್ಲಿ ಈ ತಿದ್ದುಪಡಿ ಕಾಯಿದೆ ನಮ್ಮ ದೇಶವೂ ಮುಂದುವರಿದಿರುವ/ತ್ತಿರುವ ಬಗ್ಗೆ ದೇಶವಾಸಿಗಳೆಲ್ಲರೂ ಹೆಮ್ಮೆಪಡಬೇಕಾದ ವಿಷಯ. ಅದೇ ಹೊತ್ತು ಮೋಟಾರ್‌ ವಾಹನಗಳಿಗೆ ಅತ್ಯಂತ ನಿಕಟವಾಗಿರುವ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯ ದೋಷ ಅಥವಾ ನ್ಯೂನತೆಗಳ ಕುರಿತು ಗಮನ ಹರಿಸಿದ್ದು ಕಡಿಮೆ ಎನ್ನಬಹುದು. ಹಳ್ಳಿಗಾಡಿನ ಒಳ ರಸ್ತೆಗಳು ಒತ್ತಟ್ಟಿಗಿರಲಿ ನಿನ್ನೆಮೊನ್ನೆ ಎಂಬಂತೆ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎದ್ದಿರುವ ಹೊಂಡಗಳು ರಸ್ತೆಗಳ ಆಲಕ್ಷ್ಯಕ್ಕೆ ಹಿಡಿದ ಕನ್ನಡಿಯಲ್ಲವೇ? ರಸ್ತೆಗೆ ಮಂಜೂರಾದ ಪೂರ್ತಿ ಮೊತ್ತ ಕಾಮಗಾರಿಗೆ ಹೋಗದಿರುವ ಸಾಧ್ಯತೆಯನ್ನು ಈ ಹೊಂಡಗಳು ತೋರಿಸುತ್ತಿವೆ. ಕಾಮಗಾರಿ ಕಳಪೆಯಾಗಿ ರುವುದನ್ನು ಆ ಹೊಂಡಗಳು ಸಾರಿ ಹೇಳುತ್ತವೆ. ಹಾಗಿರುವಾಗ ರಸ್ತೆ ಸಂಬಂಧಿ ಕಠಿಣ ನೀತಿ-ನಿಯಮಗಳ ಅನುಷ್ಠಾನವೂ ಅಗತ್ಯ ಎಂದನಿಸುವುದಿಲ್ಲವೇ?

ಸ್ವಾತಂತ್ರ್ಯ ಪೂರ್ವದಲ್ಲಿ ಅಥವಾ ಐವತ್ತನೇ, ಅರ್ವತ್ತನೇ ದಶಕದಲ್ಲಿ ಡಾಮಾರಿಕರಣಗೊಂಡು ನಿರ್ಮಿತವಾಗಿರುವ ಅನೇಕ ರಸ್ತೆಗಳು ಸದೃಢವಾಗಿವೆ. ಉದಾ: ಕರಾವಳಿ ಪ್ರದೇಶದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ (ಹಿಂದೆ 17, ಈಗ 66) ಅರ್ವತ್ತನೇ ದಶಕದ ಬಳಿಕ ನಿರ್ಮಾಣಗೊಂಡಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಅದನ್ನು ಚತುಷ್ಪಥಗೊಳಿಸುವ‌ ಕಾಮಗಾರಿ ನಡೆದಿದ್ದು ಕೆಲವೆಡೆ ಆ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಕಾಮಗಾರಿ ಪೂರ್ಣಗೊಂಡಿರುವ ಕೆಲವೆಡೆ ನಾಲ್ಕೈದು ವರ್ಷಗಳನ್ನು ಪೂರೈಸುವ ಮೊದಲೇ ದೊಡ್ಡದೊಡ್ಡ ಹೊಂಡಗಳು ಎದ್ದಿರುವುದು ಏನನ್ನು ಸೂಚಿಸುತ್ತದೆ? ಕಾಮಗಾರಿ ಪೂರ್ಣಗೊಂಡಿಲ್ಲ ದಿದ್ದರೂ, ಹೊಂಡಗಳಿಂದಾಗಿ ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತಿದ್ದರೂ ಟೋಲನ್ನು ಮಾತ್ರ ಅನಾಯಾ ಸವಾಗಿ ಸಂಗ್ರಹಿಸಲಾಗುತ್ತದೆ.

ದೇಶದ ಪ್ರಗತಿ, ಹಣಕಾಸಿನ ಸ್ಥಿತಿಗತಿ ಹಿಂದಿನ ಕಾಲಕ್ಕಿಂತಲೂ ಇಂದು ಬೆಳೆದಿದೆ. ಆ ಕಾಲಕ್ಕಿಂತಲೂ ತಾಂತ್ರಿಕತೆ ಇಂದು ಹೆಚ್ಚು ಅಭಿವೃದ್ಧಿಗೊಂಡಿದೆ. ದೇಶದ ಒಟ್ಟಾರೆ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದ ಆ ಕಾಲದಲ್ಲಿ ನಿರ್ಮಿತವಾಗಿರುವ ಕಾಮಗಾರಿಗಳು ನಾಲ್ಕೈದು ದಶಕಗಳಿಗೂ ಮೀರಿ ಬಾಳ್ವಿಕೆ ಬರುತ್ತಿದ್ದರೆ ಹಣಕಾಸು, ತಾಂತ್ರಿಕತೆ ಮತ್ತಿತರ ಎಲ್ಲಾ ವಿಷಯಗಳಲ್ಲಿಯೂ ಮೇಲ್ಮಟ್ಟದಲ್ಲಿರುವ ಇಂದಿನ ಕಾಲದ ಕಾಮಗಾರಿಗಳು ನಾಲ್ಕೈದು ವರ್ಷಗಳೂ ಬಾಳ್ವಿಕೆ ಬರುವುದಿಲ್ಲ ಅಂದರೆ ಏನರ್ಥ? ಅಂದಿನ ಪ್ರಾಮಾಣಿಕತೆ ಇಂದು ಉಳಿದಿಲ್ಲ ಎಂದೇ ಹೇಳಬಹುದಲ್ಲವೇ? ಮಾನವ ಘಟಿತ ಲೋಪಗಳಿಗೆ ಕೆಲವೊಮ್ಮೆ ಪ್ರಕೃತಿಯನ್ನು ದೂರು ವುದಿದೆ. ಅದರಂತೆ ಕರಾವಳಿ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಕಾರಣ ರಸ್ತೆ ಮತ್ತಿತರ ಕಾಮಗಾರಿಗಳ ಗುಣಮಟ್ಟ ಕೆಡುತ್ತದೆ ಎಂದು ಹೇಳುವುದಿದೆ. ಮಳೆ ಪ್ರಮಾಣದಲ್ಲಿ ಹಿಂದಿನ ಕಾಲ ಮತ್ತು ಇಂದಿಗೆ ಅಜಗಜಾಂತರವೇನೂ ಇಲ್ಲ. ಆದರೂ ಇಂದಿನ ಕಾಮಗಾರಿಗಳು ಬಾಳ್ವಿಕೆ ಬರುವುದಿಲ್ಲ ಅಂದರೆ ಕಾಮಗಾರಿಗಳಲ್ಲಿ ಅಗತ್ಯವಾಗಿರುವ ವಸ್ತುಗಳು ಬೇಕಾದ ಪ್ರಮಾಣದಲ್ಲಿ ಉಪಯೋಗವಾ ಗದಿರುವುದು ಅಥವಾ ಕಾಮಗಾರಿಗಳ ನಿರ್ವಹಣೆಯಲ್ಲಿ ದೋಷ ಇರುವುದು ಕಾರಣ ಯಾಕಾಗಬಾರದು?

ಇಂದಿನ ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ ಮಾದರಿಯಲ್ಲಿಯೇ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿಯೂ (ಮತ್ತು ಇತರ ಕಾಮಗಾರಿಗಳಿಗೆ ಕೂಡ) ಕಟ್ಟುನಿಟ್ಟಿನ ಕಾಯ್ದೆ ಜಾರಿ ಗೊಳಿಸಬೇಕು. ಕಾಮಗಾರಿಗಳನ್ನು ನಿರ್ವಹಿಸಿದವರಿಂದ ಇಂತಿಷ್ಟೇ ಅವಧಿಗೆ ಕಾಮಗಾರಿಗಳ ಸುಸ್ಥಿತಿ ಬಗ್ಗೆ ಹೊಣೆಗಾರಿಕೆ ಅಥವಾ ಗ್ಯಾರಂಟಿ ಪಡೆಯಬೇಕು. ಕಾಂಕ್ರಿಟ್, ಡಾಮಾರು ಅಥವಾ ಜಲ್ಲಿಗಳು ಎದ್ದು ಹೋಗುವುದು, ಹೊಂಡ ಬೀಳುವುದು ಇತ್ಯಾದಿಗಳಿಗೆ ಅವರನ್ನು ಜವಾಬ್ದಾರರನ್ನಾಗಿ ಮಾಡಬೇಕು. ಈ ಸಂಬಂಧ ಈಗಾಗಲೇ ಇರುವ ಕಾಯ್ದೆಗಳನ್ನು ಬಲಪಡಿಸುವುದರ ಅಥವಾ ಹೊಸತಾಗಿ ರೂಪಿಸುವುದರ ಮೂಲಕ ತಪ್ಪಿತಸ್ಥರನ್ನು ದಂಡನೆಗೆ ಗುರಿಪಡಿಸಬೇಕು. ಆಗಲೇ ನಮ್ಮ ದೇಶ ನಿಜವಾಗಿಯೂ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ.

ಇಂದಿನ ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ ಮಾದರಿಯಲ್ಲಿಯೇ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿಯೂ ಕಟ್ಟುನಿಟ್ಟಿನ ಕಾಯ್ದೆ ಜಾರಿ ಗೊಳಿಸಬೇಕು.

ಎಚ್‌. ಆರ್‌. ಆಳ್ವ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.