ಗಾಂಧಿ ಕುಟುಂಬವ ಟೀಕಿಸುವ ಧೈರ್ಯ ಪತ್ರಕರ್ತರಿಗಿತ್ತೇ?


Team Udayavani, May 14, 2019, 5:50 AM IST

12
ಅಮೆರಿಕದ ಟೈಮ್‌ ವಾರಪತ್ರಿಕೆ ಮೋದಿಯನ್ನು ‘ಡಿವೈಡರ್‌ ಇನ್‌ ಚೀಫ್’ ಎಂದು ಕರೆಯುತ್ತಾ ಮುಖಪುಟ ಲೇಖನ ಪ್ರಕಟಿಸಿರುವುದು ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಲೇಖನ ಬರೆದವರು ಆತೀಶ್‌ ತಸೀರ್‌ ಎಂಬ ಪತ್ರಕರ್ತ. ಈತ ಪಾಕಿಸ್ತಾನಿ ರಾಜಕಾರಣಿ ಸಲ್ಮಾನ್‌ ತಸೀರ್‌ ಮತ್ತು ಭಾರತೀಯ ಪತ್ರಕರ್ತೆ ತವ್ಲೀನ್‌ ಸಿಂಗ್‌ ಅವರ ಮಗ. ಅತ್ತ ಆತೀಶ್‌ ತಸೀರ್‌ ಮೋದಿಯನ್ನು ವಿರೋಧಿಸಿ ಲೇಖನ ಪ್ರಕಟಿಸಿದರೆ, ಇತ್ತ ಅವರ ತಾಯಿ ತವ್ಲೀನ್‌ ಸಿಂಗ್‌ ಮೋದಿ ಪರ ಲೇಖನ ಬರೆದಿದ್ದಾರೆ…ಹಿಂದಿಯ ಅಮರ್‌ ಉಜಾಲಾ ಜಾಲತಾಣಕ್ಕೆ ತವ್ಲೀನ್‌ ಸಿಂಗ್‌ ಬರೆದ ಲೇಖನ ಇಲ್ಲಿದೆ…
ಗಾಂಧಿ ಪರಿವಾರದ ಆ ಪ್ರವಾಸದ ಬಗ್ಗೆ ನನಗಿನ್ನೂ ನೆನಪಿದೆ. ಆಗ ಆ ಪರಿವಾರದ ಜೊತೆಗೆ ಯಾರ್ಯಾರು ಇದ್ದರು ಎನ್ನುವುದೂ ನೆನಪಿದೆ. ಆ ದಿನ ಗಳಲ್ಲಿ ನಾವು ಪತ್ರಕರ್ತರು ದೇಶದ ಈ ಅತಿ ಶಕ್ತಿಶಾಲಿ ರಾಜಪರಿವಾರಕ್ಕೆ ಯಾವ ಪರಿ ಗುಲಾಮರಾಗಿದ್ದೇವೆಂದರೆ, ದೇಶದ ಯಾವುದೇ ಪತ್ರಿಕೆಯೂ ಆ ರಜಾ ಪ್ರವಾಸವನ್ನು ಟೀಕಿಸುವ ಧೈರ್ಯ ತೋರಿರಲಿಲ್ಲ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣವೊಂದರಲ್ಲಿ ರಾಜೀವ್‌ ಗಾಂಧಿ ಕುರಿತು ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಯಿತು. ರಾಜೀವ್‌ ಗಾಂಧಿಯವರು ನೌಕಾ ಪಡೆಯ ಐಎನ್‌ಎಸ್‌ ವಿರಾಟ್ ಅನ್ನು ದುರುಪಯೋಗ ಮಾಡಿ ಕೊಂಡರು ಎಂದು ಮೋದಿ ಹೇಳಿದ್ದರು. ಅದೇ ದಿನವೇ ಪ್ರಿಯಾಂಕಾ ಗಾಂಧಿಯವರು ತಮ್ಮ ಭಾಷಣದಲ್ಲಿ ಮೋದಿಯನ್ನು ಟೀಕಿಸಿದರು. ‘ನರೇಂದ್ರ ಮೋದಿಯವರು ತಮ್ಮ ಪ್ರತಿಯೊಂದು ದೋಷವನ್ನೂ ನೆಹರು-ಗಾಂಧಿ ಪರಿವಾರದ ಮೇಲೆ ಹೊರಿಸುತ್ತಾರೆ’ ಎಂದರು ಪ್ರಿಯಾಂಕಾ.

ಈಗ ಪ್ರಶ್ನೆ ಏನೆಂದರೆ, ನೆಹರೂ-ಗಾಂಧಿ ಪರಿವಾರದ ಊಳಿಗ ಮಾನ್ಯ ಗುಣವನ್ನು ದೇಶದ ಮತದಾರರಿಗೆ ನೆನಪಿಸಿಕೊಡುವುದು ಅವಶ್ಯಕವಲ್ಲವೇನು? ಭಾರತೀಯ ಪ್ರಜಾ ಪ್ರಭುತ್ವದಲ್ಲಿ ಒಂದು ಕಾಲವಿತ್ತು, ಆಗೆಲ್ಲ ಪ್ರಧಾನಮಂತ್ರಿಯ ಕುಟುಂಬವು ರಜೆ ಅನುಭವಿಸಲು ನೌಕಾಪಡೆಯ ಹಡಗುಗಳನ್ನು ಬಳಸಿಕೊಂಡು ಲಕ್ಷದ್ವೀಪಕ್ಕೆ ಹೋಗುತ್ತಿತ್ತು ಎಂದು ಜನರಿಗೆ ನೆನಪು ಮಾಡಿಕೊಡುವ ಅವಶ್ಯಕತೆ ಇಲ್ಲವೇನು? ಗಾಂಧಿ ಪರಿವಾರದ ಆ ಪ್ರವಾಸದ ಬಗ್ಗೆ ನನಗಿನ್ನೂ ನೆನಪಿದೆ. ಆಗ ಆ ಪರಿವಾರದ ಜೊತೆಗೆ ಯಾರ್ಯಾರು ಇದ್ದರು ಎನ್ನುವುದೂ ನೆನಪಿದೆ. ಆ ದಿನಗಳಲ್ಲಿ ನಾವು ಪತ್ರಕರ್ತರು ದೇಶದ ಅತಿ ಶಕ್ತಿಶಾಲಿ ರಾಜಪರಿವಾರಕ್ಕೆ ಎಷ್ಟು ಗುಲಾಮರಾಗಿದ್ದೆವೆಂದರೆ, ದೇಶದ ಯಾವುದೇ ಪತ್ರಿಕೆಯೂ ಆ ರಜಾ ಪ್ರವಾಸವನ್ನು ಟೀಕಿಸುವ ಧೈರ್ಯ ತೋರಿರಲಿಲ್ಲ. ನಾವು ಪತ್ರಕರ್ತರ ತಪ್ಪಂತೂ ಇತ್ತೇನೋ ಸರಿ, ಆದರೆ ಆ ಸಮಯದಲ್ಲಿ ಕೆಲವೇ ಕೆಲವರಿಗೆ ಮಾತ್ರ ಪ್ರಜಾಪ್ರಭುತ್ವದಲ್ಲಿನ ಸಾಮಂತವಾದದ ಈ ಕೆಟ್ಟ ಕಲಬೆರಿಕೆಯ ಬಗ್ಗೆ ಅರಿವಿತ್ತು.

ಒಳ್ಳೆಯ ಸಂಗತಿಯೆಂದರೆ, ಈಗ ದೇಶದ ರಾಜಕೀಯ ಬದಲಾ ಗಿದೆ ಮತ್ತು ಪ್ರಧಾನಮಂತ್ರಿ ನಿವಾಸದಲ್ಲಿ ಒಬ್ಬ ಚಾಯ್‌ವಾಲಾನ ಮಗ ವಿರಾಜಮಾನರಾಗಿದ್ದಾರೆ ಎನ್ನುವುದು (ಅವರೆಂದಿಗೂ ರಜೆ ತೆಗೆದುಕೊಂಡಿಲ್ಲ). ಮೋದಿಯವರು ಐಎನ್‌ಎಸ್‌ ವಿರಾಟ್‌ನ ಬಗ್ಗೆ ಮಾತನಾಡುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾಗಳಲ್ಲಿ ನೆಹರೂ ಅವರ ಚಿತ್ರಗಳೂ ಹರಿದಾಡಲಾರಂಭಿಸಿದವು. ಪಂಡಿತ್‌ ನೆಹರೂ ಅವರು ಕೆಲವೊಮ್ಮೆ ತಮ್ಮ ಮಗಳು ಮತ್ತು ಮೊಮ್ಮಕ್ಕಳನ್ನೂ ಸಹ ನೌಕಾಪಡೆಯ ಯುದ್ಧ ಹಡಗುಗಳಲ್ಲಿ ತಿರುಗಾಡಿಸಿದ್ದರು. ನನಗೆ ಕೆಲವರು ಎರಡು ಲೇಖನಗಳನ್ನು ಕಳುಹಿಸಿದ್ದಾರೆ, ಅದರಲ್ಲಿ ಒಂದರಲ್ಲಿ ಐಎನ್‌ಎಸ್‌ ವಿರಾಟ್‌ನ ವರ್ಣನೆಯಿದೆ ಮತ್ತು ಈ ರೀತಿಯ ಯುದ್ಧನೌಕೆಗಳಲ್ಲಿ ವಿದೇಶಿಯರ ಮೇಲೆ ಪ್ರತಿಬಂಧವಿದೆ ಎಂದೂ ಅದರಲ್ಲಿ ಹೇಳಲಾಗಿದೆ. ಆದರೆ ರಾಜೀವ್‌ ಗಾಂಧಿಯವರ ಅತಿಥಿಗಳಲ್ಲಿ ಸೋನಿಯಾರ ಇಟಾಲಿಯನ್‌ ಸಂಬಂಧಿಕರೂ ಇದ್ದರು ಮತ್ತು ಅವರು ಲಕ್ಷದ್ವೀಪದಲ್ಲಿ ರಜೆ ಕಳೆಯಲು ಹೋಗಿದ್ದರು. ಅಂದಿನ ಇನ್ನೊಂದು ಲೇಖನದಲ್ಲಿ, ರಜೆ/ಪ್ರವಾಸದ ಖರ್ಚು ವೆಚ್ಚಗಳ ಬಗ್ಗೆಯೂ ವಿಸ್ತಾರವಾಗಿ ಬರೆಯಲಾಗಿದೆ.

ಇವನ್ನೆಲ್ಲ ಓದಿ ನಾನು ಹೈರಾಣಾಗಿಬಿಟ್ಟೆ. ಆದರೆ ಇದೆಲ್ಲ ತಿಳಿದಿದ್ದರೂ ನನ್ನ ಬಹುತೇಕ ಪತ್ರಕರ್ತ ಬಂಧುಗಳಿಗೆ ಈಗಲೂ ಗುಲ ಾಮಗಿರಿಯ ಭಾವನೆಯಿದೆ ಅಥವಾ ನರೇಂದ್ರ ಮೋದಿಯವರ ಬಗ್ಗೆ ದ್ವೇಷವಿದೆ. ಸತ್ಯವೇನೆಂದರೆ ಗಾಂಧಿ ಪರಿವಾರದ ಈ ಊಳಿಗ ಮಾನ್ಯ ಗುಣದ ಬಗ್ಗೆ ಬರೆದವರ ಸಂಖ್ಯೆ ತುಂಬಾ ಕಡಿಮೆ. ಇದರ ಬದಲಾಗಿ, ಬಹಳಷ್ಟು ಪತ್ರಕರ್ತರು ‘ಮೋದಿ ತಮ್ಮ ತಪ್ಪುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಗಾಂಧಿ ಪರಿವಾರದ ಮೇಲೆ ಕೆಸರೆರಚುತ್ತಿದ್ದಾರೆ’ ಎಂದು ಬರೆದಿದ್ದಾರೆ!

ಮೋದಿ ತಮ್ಮ ಸರ್ಕಾರದ ಕೊರತೆಗಳನ್ನು ಮುಚ್ಚಿಡಲು ಈ ವಿಷಯವನ್ನು ಕೈಗೆತ್ತಿಕೊಂಡರು ಎಂಬ ವಾದವನ್ನು ಒಂದು ಕ್ಷಣ ಒಪ್ಪಿಕೊಳ್ಳೋಣ. ಆದರೆ, ಇಂಥ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ಮಾಡಿದಷ್ಟೂ ಒಳ್ಳೆಯದಲ್ಲವೇನು? ಏಕೆಂದರೆ ಇದರಿಂದಾಗಿ ಪ್ರಜಾ ಪ್ರಭುತ್ವ ಬಲಿಷ್ಠವಾಗುತ್ತದೆ ಎನ್ನುವ ವಾದವನ್ನೂ ನಾವು ಸ್ವೀಕರಿಸ ಬೇಕಲ್ಲವೇ? ನನ್ನ ಪ್ರಕಾರ, ಯಾವಾಗೆಲ್ಲ ಲೋಕ ತಂತ್ರದಲ್ಲಿ ಫ್ಯೂಡಲಿ ಸಂನ ವಾಸನೆ ಬರಲಾರಂಭಿಸುತ್ತದೋ, ಆಗೆಲ್ಲ ಅದರತ್ತ ದೃಷ್ಟಿ ಹರಿಸು ವುದು ಒಳ್ಳೆಯದು. ನಾನು ಹೀಗೆ ಹೇಳುತ್ತಿರುವುದಕ್ಕೂ ಕಾರಣವಿದೆ. ಏಕೆಂದರೆ, ಆಗೆಲ್ಲ ನಾನು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ದಬ್ಟಾಳಿ ಕೆಯನ್ನು ನೋಡಿದ್ದೇನೆ. ನಮ್ಮ ಪ್ರಜಾಪ್ರಭುತ್ವ ಈಗಲೂ ಎಷ್ಟೊಂದು ದುರ್ಬಲವಾಗಿದೆಯೆಂದರೆ, 5 ವರ್ಷದ ಹಿಂದೆ ದೇಶದ ಪ್ರಧಾನ ಮಂತ್ರಿಗಳು ಸೋನಿಯಾ ಗಾಂಧಿಯವರ ಮುಂದೆ ತಲೆಬಾ ಗುತ್ತಿ ದ್ದರು. ಏಕೆಂದರೆ ಸೋನಿಯಾ ರಾಜಪರಿವಾರದ ಸೊಸೆಯ ಲ್ಲವೇ? ಈ ರಾಜಪರಿವಾರವು 1947ರಿಂದ ದೇಶವನ್ನು ತಮ್ಮ ಜಹಗೀರು ಎಂದು ಭಾವಿಸಿದೆ.

ಈ ರಾಜಪರಿವಾರದ ವಾರಸುದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಮುಖ್ಯ ಎದುರಾಳಿಯಾಗಿದ್ದಾರೆ. ರಾಹುಲ್ ಗಾಂಧಿಯವರಲ್ಲಿ ಎಷ್ಟು ಅಹಂಕಾರವಿದೆಯೆಂದರೆ, ಅವರು ತಿಂಗಳುಗಳಿಂದ ‘ಪ್ರಧಾನಮಂತ್ರಿ ಚೋರ್‌ ಹೈ’ ಎನ್ನುತ್ತಾ ಬಂದಿದ್ದಾರೆ. ಯಾವಾಗ ಮೋದಿ ‘ನಿಮ್ಮ ಅಪ್ಪ ಭ್ರಷ್ಟಾಚಾರಿ ನಂಬರ್‌ 1’ ಎಂದು ಎದುರೇಟು ಕೊಟ್ಟರೋ, ಆಗ ದೊಡ್ಡ ಗದ್ದಲವೆದ್ದುಬಿಟ್ಟಿತು. ಹೀಗೇಕೆ ಆಗುತ್ತಿದೆ ಎಂದು ನಾವು ಪ್ರಶ್ನಿಸಲೇಬೇಕಲ್ಲವೇ?

(ಕೃಪೆ: ಅಮರ್‌ ಉಜಾಲಾ)

•ತವ್ಲೀನ್‌ ಸಿಂಗ್‌

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.