ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಾಗಿರುವುದೇನು?


Team Udayavani, Nov 8, 2019, 5:06 AM IST

cc-51

ಸಾಂದರ್ಭಿಕ ಚಿತ್ರ

ಬೆಟ್ಟಗುಡ್ಡಗಳು, ಕೆರೆ, ನದಿಗಳು, ದ್ವೀಪಗಳು, ಸಮದ್ರ ಕಿನಾರೆಗಳಂತಹ ಭೌಗೋಳಿಕ ವೈಶಿಷ್ಟ್ಯಗಳು, ಐತಿಹಾಸಿಕ ಸ್ಥಳಗಳು, ನಿಸರ್ಗ ಧಾಮಗಳು, ವಿಶಿಷ್ಟ ರಚನೆ – ಸ್ಮಾರಕಗಳಂತಹ ಆಕರ್ಷಣಾ ಕೇಂದ್ರಗಳು, ಧಾರ್ಮಿಕ ಮತ್ತು ಪಾರಂಪರಿಕ ಮಹತ್ವದ ಸ್ಥಳಗಳು, ತಿಂಡಿ ತಿನಿಸುಗಳು, ಕಲಾ ಪ್ರಕಾರಗಳು, ವೇಷಭೂಷಣಗಳು ಇಂತಹ ಹತ್ತು ಹಲವು ವಿಸ್ಮಯ-ವಿಶೇಷತೆಗಳು ಪ್ರವಾಸೋದ್ಯಮದಲ್ಲಿ ಮಹತ್ವ ಪಡೆಯುತ್ತವೆ. ಒಂದೂರಿನಲ್ಲಿರುವ ವಿಶೇಷತೆಗಳಿಗೆ ಸಾಕ್ಷಿಯಾಗುವಂತೆ ಪ್ರವಾಸಿಗರ ಮನಸೆಳೆಯುವುದು, ಆಕರ್ಷಿತರಾದ ಪ್ರವಾಸಿಗರಿಗೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವುದು, ಆದರಾತಿಥ್ಯದಿಂದ ಮನ ಗೆಲ್ಲುವುದೇ ಪ್ರವಾಸೋದ್ಯಮದ ಯಶಸ್ವಿನ ಗುಟ್ಟು. ಸಂದರ್ಶಿಸಿದವರ ಬಾಯ್ದೆರೆ ಪ್ರಚಾರದ ಮೂಲಕವೇ ಪ್ರವಾಸೋದ್ಯಮ ಮತ್ತಷ್ಟು ಎತ್ತರಕ್ಕೆ ಸಾಗಬಹುದಾಗಿದೆ.

ನೈಸರ್ಗಿಕ ಮತ್ತು ಪಾರಂಪರಿಕ ವಿಚಾರಗಳಲ್ಲಿ ಭಾರತದಲ್ಲಿ ಇರುವಷ್ಟು ವೈವಿಧ್ಯತೆ ಬೇರೆಲ್ಲಿಯೂ ಇರಲಿಕ್ಕಿಲ್ಲ. ದೇಶದ ಉದ್ದಗಲಕ್ಕೆ ಇಂತಹ ವಿಶೇಷತೆಗಳನ್ನು ಕಾಣಬಹುದು. ಇಂತಹ ವೈವಿಧ್ಯಗಳನ್ನು ಇಟ್ಟುಕೊಂಡು ಕ್ಷೇತ್ರಗಳನ್ನು ಜತೆ ಗೂಡಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದಾಗಿದೆ. ಅಲೋಪತಿ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತಿತರ ಎಲ್ಲಾ ಪ್ರಕಾರ ಗಳನ್ನು ಒಳಗೊಂಡಿರುವ ಮೆಡಿಕಲ್‌ ಸವಲತ್ತುಗಳು ಹೇರಳವಾಗಿ ರುವಲ್ಲಿ ಮೆಡಿಕಲ್‌ ಪ್ರವಾಸೋದ್ಯಮ ರೂಪಿಸ ಬಹುದಾಗಿದೆ. ಧಾರ್ಮಿಕ ಕೇಂದ್ರಗಳ ಸಂದರ್ಶನದೊಂದಿಗೇ ರಮಣೀಯ ಸ್ಥಳಗಳ ಭೇಟಿಗೂ ಪ್ರೋತ್ಸಾಹಿಸಬಹುದಾಗಿದೆ.

ಮಂಗಳೂರಿಗೆ ಪ್ರವಾಸ ಬರುವವರು ನಗರ ಮತ್ತು ಸುತ್ತಮುತ್ತಲಿನ ಧಾರ್ಮಿಕ ಸ್ಥಳಗಳು, ಸಮುದ್ರ ಕಿನಾರೆ, ಪಿಲಿಕುಳದಂತಹ ಆಕರ್ಷಣೀಯ ಸ್ಥಳಗಳನ್ನು ಸಂದರ್ಶಿಸಬಹುದಾಗಿದೆ. ಧಾರ್ಮಿಕ ಸ್ಥಳಗಳ ಭೇಟಿಗೆ ಬೆಳಗಿನ ಸಮಯ ಪ್ರಶಸ್ತ. ಅದೇ ರೀತಿ ಸಮುದ್ರ ಕಿನಾರೆ ಭೇಟಿಗೆ ಸಂಜೆ ಸಮಯ ಸೂಕ್ತವಾದದ್ದು. ಆ ಪ್ರಕಾರ ಒಂದು ದಿನದ ಪ್ರವಾಸವಾದರೆ ಬೆಳಿಗ್ಗೆ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸಿ, ಬಳಿಕ ಪಿಲಿಕುಳಕ್ಕೆ ಭೇಟಿ ನೀಡಿ, ಸಾಯಂಕಾಲ ಸೋಮೇಶ್ವರ, ತಣ್ಣೀರುಬಾವಿ ಅಥವಾ ಪಣಂಬೂರು ಸಮುದ್ರ ತೀರಕ್ಕೆ ವಿಹಾರ ಕೈಗೊಳ್ಳಬಹುದು. ಎರಡು/ಮೂರು ದಿನಗಳ ಪ್ರವಾಸವಾದರೆ ಧರ್ಮಸ್ಥಳ, ಕಾರ್ಕಳ, ಮಣಿಪಾಲ, ಉಡುಪಿ, ಮಲ್ಪೆಗಳಿಗೆ ಭೇಟಿ ನೀಡಿ ಮಂಗಳೂರು,ಧರ್ಮಸ್ಥಳ,ಉಡುಪಿಗಳಲ್ಲಿ ವಸತಿ ಕೈಗೊಳ್ಳ ಬಹುದು. ಈ ಬಗ್ಗೆ ಬೇಕಾದ ವ್ಯವಸ್ಥೆಗಳನ್ನು ಪ್ರವಾಸಕ್ಕೆ ಸಂಬಂಧಪಟ್ಟ ಸಂಸ್ಥೆಗಳು ರೂಪಿಸಬಹದಾಗಿದೆ.

ಕರ್ನಾಟಕದ ನೆಲೆಯಲ್ಲಿ ಹೇಳುವುದಾದರೆ ಇಲ್ಲಿ ಸುಮಾರು 320 ಕಿ.ಮಿ. ಸಮುದ್ರ ತೀರಗಳಿ ವೆ. ನಮಗಿಂತಲೂ ಕಡಿಮೆ ತೀರವಿರುವ ಗೋವಾ, ಸಮುದ್ರ ತೀರವನ್ನು ಚೆನ್ನಾಗಿ ಬಳಸಿ ಪ್ರವಾಸೋದ್ಯದಲ್ಲಿ ಅದ್ಭುತ ಸಾಧನೆಗೈದಿದೆ. ಕೇರಳವಂತೂ ಈ ದಿಶೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬಹಳಷ್ಟು ಮುಂದುವರಿದಿದೆ. ಕರ್ನಾಟಕದ ಎರಡನೇ ನಗರ ಎಂದು ಹೇಳಲ್ಪಡುವ ಮಂಗಳೂರಿನಲ್ಲಿಯೂ ಇಲ್ಲದ ಪಂಚತಾರ ಸವಲತ್ತುಗಳು ಕೇರಳದ ಬೇಕಲಕೋಟೆಯಲ್ಲಿವೆ. ದ.ಕ. ಸಮುದ್ರ ಕಿನಾರೆಯಲ್ಲಿ ಅನೇಕ ವರ್ಷಗಳಿಂದ ಪ್ರವಾಸೋದ್ಯಮದಲ್ಲಿ ತೊಡಗಿದ್ದು ಈ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೈದಿರುವ ಉದ್ಯಮಿಯೋರ್ವರ ಪ್ರಕಾರ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಸರಕಾರದ ಪ್ರೋತ್ಸಾಹ ಏನೇನೋ ಸಾಲದು. ಈಗಲಾದರೂ ಹೊಸ ಸಿಆರ್‌ಝಡ್‌ ನಿಯಮಾವಳಿಗಳ ಪ್ರಕಾರ ಕರ್ನಾಟಕದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸಮುದ್ರಕಿನಾರೆ ಪ್ರವಾಸೋದ್ಯಮ ಬೆಳೆಸಲು ಏನೆಲ್ಲಾ ಸಾಧ್ಯವೋ ಅದನ್ನು ಮಾಡುವುದು ಅಗತ್ಯ. ನದಿಗಳನ್ನೂ ಪ್ರವಾಸೋದ್ಯಮ ಉದ್ದೇಶಕ್ಕೆ ಬಳಸಬಹುದಾಗಿದೆ. ಊಟೋಪಚಾರದಲ್ಲಿ ಕರ್ನಾಟಕ ಅದರಲ್ಲಿಯೂ ಕರಾವಳಿಗರು ಮುಂಚೂಣಿಯಲ್ಲಿದ್ದಾರೆ. ಇಲ್ಲಿಯ ಬಗೆಬಗೆಯ ಅಡುಗೆ ತಿಂಡಿಗಳಿಗೆ ಪ್ರಚಾರ ನೀಡಿ ಪ್ರವಾಸೋದ್ಯಮದ ಅಭಿವೃದ್ದಿಯಲ್ಲಿ ಪೂರಕವಾಗುವಂತೆ ಮಾಡ‌ಬಹುದಾಗಿದೆ.

ಭಾರತ ವಿಶ್ವದಲ್ಲೇ ಏಳನೇ ದೊಡ್ಡ ದೇಶ. ಪ್ರವಾಸೋದ್ಯಮ ಬೆಳೆಸುವ ಪ್ರಾಕೃತಿಕ ಮತ್ತು ಮಾನವ ನಿರ್ಮಿತ ಎಲ್ಲಾ ಅನುಕೂಲಗಳು ನಮ್ಮಲ್ಲಿವೆ. ವರ್ಷದ ಹಲವಾರು ತಿಂಗಳುಗಳಲ್ಲಿ ಹವೆಯೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ಬೇಕಾಗಿರುವುದು ಸರಕಾರದ ಸಮರ್ಪಕ ಯೋಜನೆಗಳು ಮತ್ತು ಜನರ ಸಹಭಾಗಿತ್ವ. ಈ ರೀತಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದರೆ ದೇಶದಾದ್ಯಂತ ಕೋಟಿಗಟ್ಟಲೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು. ಆರ್ಥಿಕ ಹಿಂಜರಿತದಿಂದ ಸೊರಗಿದ ಉದ್ಯೋಗ ಮಾರುಕಟ್ಟೆಗೆ ಈ ರೂಪದಲ್ಲಿ ಪುನಶ್ಚೇತನ ನೀಡಬಹುದು.

ತಮ್ಮ ಜಿಡಿಪಿಗೆ ದೊಡ್ಡ ಪಾಲು ಪ್ರವಾಸೋದ್ಯಮ ಕ್ಷೇತ್ರದಿಂದ ಸಲ್ಲುವುದಕ್ಕೆ ಒತ್ತು ನೀಡಿರುವ ಹಲವಾರು ದೇಶಗಳಿವೆ. ಅಂತಹ ಹೆಚ್ಚಿನ ದೇಶಗಳಲ್ಲಿ ಅತಿಥಿ ದೇವೋಭವ ಅಕ್ಷರಶಃ ಪಾಲನೆಯಾಗುತ್ತದೆ. ಅಲ್ಲಿನ ಕಾನೂನು ಕಟ್ಟಳೆಗಳು, ನೀತಿ ನಿಯಮಗಳು ಪ್ರವಾಸಿಗರ ರಕ್ಷಣೆಗೆ, ಆತಿಥ್ಯಕ್ಕೆ ಇನ್ನಿಲ್ಲದ ಮಹತ್ವ ನೀಡುತ್ತವೆ. ಮರುಭೂಮಿಯಾಗಿರುವ ದುಬೈ ತನ್ನ ಶಾಪಿಂಗ್‌ ಫೆಸ್ಟಿವಲ್‌ ವೇಳೆ ಮಾತ್ರವಲ್ಲದೆ ವರ್ಷದ ಎಲ್ಲಾ ಕಾಲದಲ್ಲಿಯೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಲ್ಲಿಯ ಸ್ವತ್ಛತೆ, ನಾಜೂಕಾದ ರಸ್ತೆಗಳು, ಮೋಸವಿಲ್ಲದ ವ್ಯವಹಾರ ಎಲ್ಲಕ್ಕೂ ಮಿಗಿಲಾಗಿ ಎಲ್ಲರಿಗೂ ಅನ್ವಯವಾಗುವ ಕಠಿಣ ಕಾನೂನು ಕ್ರಮಗಳು ಇತ್ಯಾದಿಗಳನ್ನು ಅನುಕರಣೀಯ. ಇನ್ನೊಂದು ಉದಾಹರಣೆ ನೀಡುವುದಾದರೆ ಥಾಯ್ಲೆಂಡಿನ ಪುಟ್ಟ ದ್ವೀಪ ಫ‌ುಕೆತ್‌. ವಿಸ್ತೀರ್ಣ ಕೇವಲ 576 ಚ.ಕಿ.ಮೀ. ಆಕರ್ಷಕ ಸಮುದ್ರ ಕಿನಾರೆ, ಬೆಟ್ಟಗುಡ್ಡಗಳನ್ನು ಒಳಗೊಂಡ ಪ್ರದೇಶ. ಅಲ್ಲಿ ಆಹಾರ ವಿಹಾರ, ಮೋಜಿಗೆ ಪ್ರಾಮುಖ್ಯತೆ ಇರುವುದು °ಫ‌ುಕೆತ್‌ಗೆ ಭೇಟಿ ನೀಡಿರುವ ಪ್ರವಾಸಿಗರು ಮೆಚ್ಚಿಕೊಳ್ಳುತ್ತಾರೆ. ಅಲ್ಲಿಯ ಜನಸಂಖ್ಯೆಯ ಅರ್ಧದಷ್ಟು ಪಾಲು ಪ್ರವಾಸೋದ್ಯಮದಲ್ಲಿ ತೊಡಗಿದ್ದು ಪ್ರವಾಸೋದ್ಯಮ ಆ ಪ್ರದೇಶದ ಅಭಿವೃದ್ಧಿಯಲ್ಲಿ ವಹಿಸಿರುವ ಪಾತ್ರವನ್ನು ಗಮನಿಸಬಹುದು. ಮಧ್ಯರಾತ್ರಿ ಕಳೆದರೂ ಫ‌ುಕೆತ್‌ನ ಬೀದಿಗಳಲ್ಲಿ ಸ್ತ್ರೀಯರು ನಿರ್ಭೀತಿಯಿಂದ ನಡೆದಾಡಬಹುದೆಂದಾದರೆ ಅಲ್ಲಿಯ ಕಾನೂನು ಮತ್ತು ವ್ಯವಸ್ಥೆ ಪಾಲನೆಯ ಮಟ್ಟವನ್ನು ತಿಳಿಸುತ್ತದೆ.

ಆದರೆ ನಮ್ಮಲ್ಲಿ? ಬೆಂಗಳೂರಿನಂತಹ ಮಹಾನಗರಗಳಲಿ ಘಟಿಸಿದ ಕೆಲವೊಂದು ಅಹಿತಕರ ಘಟನೆಗಳಿಂದಾಗಿ ಮಧ್ಯರಾತ್ರಿ ಬಿಡಿ ಹಗಲು ಹೊತ್ತಿನಲ್ಲೇ ದೂರದೂರಿನ ಪ್ರಯಾಣದ ಬಳಿಕ ವಿಮಾನ / ರೈಲು ನಿಲ್ದಾಣಗಳಿಂದ ತಮ್ಮ ಮನೆಗಳಿಗೆ ಹಿಂತಿರುಗಿ ಬರಲು ಒಬ್ಬಂಟಿ ಸ್ತ್ರೀಯರು ಹೆದರುವ ಪರಿಸ್ಥಿತಿ ಇದೆಯಲ್ಲವೇ? ಇಂತಹ ಸನ್ನಿವೇಶದಲ್ಲಿ ಪ್ರವಾಸೋದ್ಯಮದ ಮಾತೆಲ್ಲಿ ಬಂತು?

ಯಾವುದೇ ಪ್ರವಾಸಿ ಸ್ಥಳ ಪ್ರವೇಶಿಸುವಾಗ ಪ್ರವಾಸಿಗರು ಮೊದಲು ಭೇಟಿಯಾಗುವುದು ಅಟೋರಿಕ್ಷಾ ಅಥವಾ ಟ್ಯಾಕ್ಸಿಗಳನ್ನು. ಅಂತಹ ವಾಹನಗಳ ಚಾಲಕರು ಒಂದರ್ಥದಲ್ಲಿ ಆಯಾ ಪ್ರದೇಶಗಳ ಸ್ವಾಗತಕಾರರು ಅಥವಾ ರಾಯಭಾರಿಗಳೆಂದರೂ ತಪ್ಪಲ್ಲ. ಇಂತಹ ವರು ಪ್ರವಾಸಿಗರೊಡನೆ ಅನುಚಿತವಾಗಿ ವರ್ತಿಸಿದರೆ, ಮೀಟರ್‌ ಹಚ್ಚದೆ ಅಥವಾ ಹಚ್ಚಿಯೂ ನಿಗದಿಗಿಂತ ಹೆಚ್ಚಿನ ಬಾಡಿಗೆ ವಸೂಲಿ ಮಾಡಿದರೆ, ಹೆಚ್ಚಿನ ಸಂಪಾದನೆಯ ಆಸೆಯಿಂದ ಸುತ್ತಾಡಿಸಿದರೆ, ಬಾಡಿಗೆ ದೊರಕಿಸಿಕೊಳ್ಳುವ ವಿಚಾರದಲ್ಲಿ ಘರ್ಷಣೆಗೆ ತೊಡಗಿದರೆ ಆ ಪ್ರದೇಶದ ಘನತೆ ಮತ್ತು ಪ್ರಾಮಾಣಿಕತೆಗೆ ಮಸಿ ಬಳಿದಂತಾ ಗುತ್ತದೆ. ಪ್ರವಾಸಿಗರ ಮನಮುಟ್ಟುವ ಇನ್ನೊಂದು ಅಂಶ ಭೇಟಿ ನೀಡಿದ ಪ್ರದೇಶಗಳ ರಸ್ತೆಗಳು. ವಿದೇಶಿ ಪ್ರವಾಸಿಗರು ಐಷಾರಾಮಿ ಹಡಗುಗಳ ಮೂಲಕ ನವಮಂಗಳೂರು ಬಂದರಿಗೆ ಆಗಮಿಸುತ್ತಾರೆ. ಅಂತಹವರಲ್ಲಿ ಕೆಲವರು ನಗರ ಸುತ್ತಾಟ ನಡೆಸುತ್ತಾರೆ. ಅಂತಹ ಪ್ರವಾಸಿಗರಿಗೆ, ಅದರಲ್ಲಿಯೂ ಪ್ರಯಾಣಕ್ಕಾಗಿ ಅಟೋರಿಕ್ಷಾಗಳನ್ನು ಆಯುುªಕೊಂಡವರಿಗೆ ನಮ್ಮ ಕೆಟ್ಟ ರಸ್ತೆಗಳು ಯಾವ ಸಂದೇಶ ನೀಡುತ್ತವೆ? ಈ ಸುಧಾರಿತ ಕಾಲದಲ್ಲಿಯೂ ಮಳೆಗಾಲ ಎಂಬ ಸಬೂಬು ನೀಡಿದರಾಯಿತೇ? ಎಲ್ಲಾ ಕಾಲದಲ್ಲೂ ಹಾಳಾಗದ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕಲ್ಲವೇ?

ಊರು, ರಸ್ತೆಗಳು, ಕಟ್ಟಡ, ಸ್ಮಾರಕ ಎಲ್ಲೆಡೆಯಲ್ಲಿಯೂ ಅವುಗಳ ಹೆಸರುಗಳಿರಬೇಕಿರುವುದು ಅಗತ್ಯ. ಬಹಳಷ್ಟು ಕಡೆ ಇದಕ್ಕೆ ಗಮನವನ್ನೇ ನೀಡಲಾಗುತ್ತಿಲ್ಲ. ರೈಲ್ವೇ ನಿಲ್ದಾಣಗಳ ಮಾದರಿಯಲ್ಲಿ ಕನಿಷ್ಟ ಪೇಟೆಯ ಆರಂಭ ಮತ್ತು ಅಂತ್ಯದಲ್ಲಿ ಆಯಾ ಊರಿನ ಹೆಸರನ್ನು ದೊಡ್ಡಕ್ಷರಗಳಲ್ಲಿ ಕಾಣಿಸಬೇಕು. ಊರಿನ ಚರಿತ್ರೆ ಅಥವಾ ಮಹತ್ವವನ್ನು ತಿಳಿಸುವ ಮಾಹಿತಿಯನ್ನು ಚುಟುಕಾಗಿ ಪ್ರದರ್ಶಿ ಸುವುದೂ ಅಗತ್ಯ. ಎಲ್ಲೆಲ್ಲಿ ಏನೇನಿದೆ, ಅಲ್ಲಿಗೆ ಯಾವ ರೀತಿ ತಲಪಬಹುದು ಎಂಬಂತಹ ವಿಚಾರಗಳನ್ನು ತಿಳಿಸಿದ ಮಾತ್ರಕ್ಕೆ ಪ್ರವಾಸೋದ್ಯಮ ಅಭಿವೃದ್ದಿಯಾಗುವುದಿಲ್ಲ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕಾನೂನು ಮತ್ತು ಶಿಸ್ತು ಪರಿಪಾಲನೆ, ವಂಚಿನೆಯಿಲ್ಲದ ವ್ಯವಹಾರ, ಸ್ವತ್ಛತೆ ಇಂತಹ ವಿಚಾರಗಳೂ ಪ್ರವಾಸೋದ್ಯಮದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸರಕಾರದ ನೀತಿಯಲ್ಲಿ ಇಂತಹ ಅಂಶ‌ಗಳಿಗೂ ಮಹತ್ವವಿರಲಿ.

– ಎಚ್‌. ಆರ್‌. ಆಳ್ವ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.