ರಾಜಕೀಯ ಪಕ್ಷ ಗಳ ನಂಬರ್‌ ಗೇಮ್‌ ಹಿಂದಿನ ಮರ್ಮವೇನು?


Team Udayavani, Feb 23, 2018, 11:48 AM IST

Vote.jpg

ರಾಜ್ಯದ ರಾಜಕೀಯ ರಂಗ ಚುನಾವಣೆ ಹತ್ತಿರ ಆಗುತ್ತಿರುವಂತೆಯೇ ರಂಗೇರುತ್ತಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಬಿರುಸಿನಿಂದ ಪ್ರಚಾರ ಮಾಡುತ್ತಿವೆ. ರಾಜಕೀಯ ಪಕ್ಷಗಳು ಪ್ರತಿ ಚುನಾವಣೆಯಂತೆ ಈ ಬಾರಿಯೂ ಹಲವು ಬಗೆಯ ಕೌಶಲ- ತಂತ್ರಗಳನ್ನು ರೂಪಿಸಿಕೊಂಡೇ ಕದನಕ್ಕೆ ಇಳಿದಂತೆ ಭಾಸವಾಗುತ್ತಿದೆ.  ಕೌಶಲಗಳು ಅನಿವಾರ್ಯ ಎನ್ನುವುದಕ್ಕಿಂತ ಅಗತ್ಯ ಎನ್ನಬಹುದು. ಮಾಧ್ಯಮಗಳ ಭರಾಟೆಯ ಪ್ರಚಾರಗಳು ರಾಜಕೀಯ ಪಕ್ಷಗಳ ಇಂಚಿಂಚು ಚಲನವಲನಗಳನ್ನು ಬಿತ್ತರಿಸುತ್ತಿವೆ. ಹೀಗೆ
ಹರಡುತ್ತಿರುವ ಮಾಹಿತಿಗಳು ಮತದಾರನೊಳಗೆ ಸೇರಿ ಹೋಗಿ ಒಂದು ತೀರ್ಮಾನಕ್ಕೆ ಆತ ಬರುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ ಚುನಾವಣೆ ಮತ್ತು ಮತದಾನಗಳು ಪ್ರಜಾಪ್ರಭುತ್ವದ ಬ್ಯೂಟಿ (ಸೌಂದರ್ಯ) ಎಂದು ಕರೆಸಿಕೊಳ್ಳುತ್ತವೆ. ವಿಶೇಷವಾಗಿ ರಾಜ್ಯಶಾಸ್ತ್ರ
ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ಹಿರಿಯ ನಾಗರಿಕರು,  ಯುವಕರು, ಕೃಷಿಕರು, ಸಾಹಿತಿಗಳಿಂದ ಹಿಡಿದು ಎಲ್ಲಾ ಸಮುದಾಯದವರೂ ಇಲ್ಲಿ ಭಾಗೀದಾರರು.

ಈ ಹಿನ್ನೆಲೆಯಲ್ಲಿ ಮತದಾರನು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸದಿದ್ದರೂ, ಮತದಾನದ ದಿನ ಮಹತ್ತರ ಪಾತ್ರ ವಹಿಸುತ್ತಾನೆ. ಯಾವ ಪಕ್ಷಕ್ಕೆ ಮತ ನೀಡಬೇಕೆಂದು ವಿವೇಚಿಸಿ ಹಾಕುವ ವರ್ಗವೊಂದಿದ್ದರೆ, ಮನಸೋ ಇಚ್ಛೆ ಹಾಕುವ ವರ್ಗ ಇನ್ನೊಂದಿದೆ. ಹಾಗಾದರೆ ಮತದಾರ ಪರಿಪಕ್ವನಾಗಿದ್ದಾನೆಯೇ?  ಇನ್ನೂ ಆಗಿಲ್ಲ ಎನ್ನುವ ಉತ್ತರ ದೊರಕುತ್ತದೆ. ಇಂತಹ ಮನಸ್ಥಿತಿ ಯಿಂದ ಉಂಟಾಗುವ ಅವಕಾಶಗಳನ್ನು ನಮ್ಮ ರಾಜಕೀಯ ಪಕ್ಷಗಳು ಬಳಸಿಕೊಂಡು ಹೇಳಿಕೆಗಳನ್ನು ನೀಡುತ್ತಿವೆಯೇ ಎನ್ನುವ ಸಂದೇಹ ಉಂಟಾಗುತ್ತಿದೆ.

ಭಾರತೀಯ ಜನತಾ ಪಕ್ಷ ಮೋದಿ ಹಾಗೂ ಅಮಿತ್‌ ಶಾ ನೇತೃತ್ವದಲ್ಲಿ ಯಡಿಯೂರಪ್ಪನವರನ್ನು ಮುಂದಿರಿಸಿ ಚುನಾವಣೆ ಎದುರಿಸುತ್ತಿದೆ. ಕಾಂಗ್ರೆಸ್‌ ಪಕ್ಷ ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಅವರ ತಂಡದೊಂದಿಗೆ ಚುನಾವಣೆ ಎದುರಿಸುತ್ತಿದೆ. ಹಾಗೆಯೇ ಜಾತ್ಯತೀತ ಜನತಾದಳ ದೇವೇಗೌಡ ಮತ್ತು ಕುಮಾರಸ್ವಾಮಿ ಮುಂದಾಳತ್ವದಲ್ಲಿ ಚುನಾವಣೆ ಕಣದಲ್ಲಿದೆ. ಉಳಿದ ಪಕ್ಷಗಳು ಅವುಗಳದೇ ಆದ ಕೌಶಲಗಳನ್ನು ರೂಪಿಸಿ ಕಣಕ್ಕಿಳಿಯಲಿವೆ. ಎಲ್ಲಾ ಪಕ್ಷಗಳಲ್ಲಿಯೂ ಕರಾರುವಕ್ಕಾಗಿ ಲೆಕ್ಕಾಚಾರ ಹಾಕುವ, ಗೆಲ್ಲುವ ಕುದುರೆಗಳಂತಿರುವ ನಾಯಕರಿದ್ದಾರೆ. ರಾಜಕೀಯವನ್ನು ವಾಸ್ತವದಲ್ಲಿ ಅರಿತು, ಪಳಗಿದವರೂ ಇದ್ದಾರೆ. ಪ್ರಜಾಪ್ರಭುತ್ವ ಸಹ್ಯ ಮಾತುಗಳನ್ನು ಆಡುವವರೂ ಇದ್ದಾರೆ. ಹಾಗೆಯೇ ಇದಕ್ಕೆಲ್ಲಾ ವಿರುದ್ಧವಾಗಿರುವ ನೇತಾರರೂ ಇದ್ದಾರೆ.

ಪ್ರತಿಯೊಂದು ಪಕ್ಷವೂ ನಾವು ಇಂತಿಷ್ಟು ಸೀಟನ್ನು ಗೆದ್ದು ಸರಕಾರ ರಚಿಸುತ್ತೇವೆ ಎಂದು ಹೇಳುತ್ತಿವೆ. ಇದು ಭ್ರಮೆಯೋ, ಉತ್ಪ್ರೇಕ್ಷೆಯೋ, ಸುಳ್ಳೋ ತಿಳಿಯದು. ಆದರೆ ಈ ಕ್ಷಣಕ್ಕೆ ಆ ಮಾತುಗಳನ್ನೇ ಸತ್ಯಮಾಡುತ್ತವೆ ಈ ಪಕ್ಷಗಳು. ಹಾಗಾದರೆ ಮತದಾರನನ್ನು ಚುನಾವಣಾ ಪೂರ್ವದಲ್ಲಿಯೇ ಕೊಂಡುಕೊಳ್ಳಲಾಗುತ್ತಿದೆಯೇ? ಯಾವ ಆಧಾರದಲ್ಲಿ ಜನತೆಯ ಮನಸ್ಸಿನ ನಿರ್ಣಯವನ್ನು ಗಣಿತವನ್ನಾಗಿಸಿ ಹೇಳಿಕೆಗಳನ್ನು ನೀಡುತ್ತಾರೆ ಎನ್ನುವುದು ನಿಗೂಢ. ಭಾರತದ ಪ್ರಜಾಪ್ರಭುತ್ವ ರಾಜಕೀಯ ನೇತಾರರ ಲೆಕ್ಕ ಗಣತಿಯೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಬಹುವಿಧದ ಪಕ್ಷಗಳನ್ನು ಹೊಂದಿದ ಭಾರತ ತನ್ನ ಆಳ್ವಿಕೆಯನ್ನು ತಾನು ಮಾಡಿಕೊಳ್ಳಲು ಪ್ರಜಾಪ್ರಭುತ್ವ ಎನ್ನುವ ಸಿದ್ಧಾಂತವನ್ನು ಅಪ್ಪಿಕೊಂಡಿದೆ. ಆ ಪ್ರಕಾರ ಚುನಾವಣೆ ಮತ್ತು ಸರಕಾರಗಳ ರಚನೆಯೂ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ಪ್ರಮುಖವಾಗಿರುವುದರಿಂದ ಜನತೆಯ ಪಾತ್ರ ಮಹತ್ವದ್ದು. ಚುನಾವಣೆಯಲ್ಲಂತೂ ಅವರೇ ಪ್ರಭುಗಳು.

ಆಶ್ಚರ್ಯವೆಂದರೆ, ಪ್ರಜಾಪ್ರಭುತ್ವವನ್ನು ತೆಕ್ಕೆಗೆ ತೆಗೆದುಕೊಂಡ ರಾಜಕೀಯ ಪಕ್ಷಗಳು ನಂಬರ್‌ ಗೇಮ್‌ ಹಿಂದೆ ಬಿದ್ದು, ಮತದಾರನನ್ನು ಗಣತಿ ಮಾಡುತ್ತಿವೆ. ಪಕ್ಷಗಳ ಅಜೆಂಡಾ ನಂಬರ್‌ ಪಡೆಯುವುದೇ ಆಗಿದೆ ಹೊರತಾಗಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವುದು ಅಲ್ಲ ಅನಿಸುತ್ತಿದೆ. ಮತದಾರನನ್ನು ಸರಕಾರ ರಚನೆಯಲ್ಲಿ ಬೇಕಾಗುವ ವ್ಯಕ್ತಿಯಾಗಿ ಪರಿಗಣಿಸಿ, ನಂತರದ ದಿನಗಳಲ್ಲಿ ಫ‌ಲಾನುಭವಿಯನ್ನಾಗಿ ಮಾಡುವುದು ಒಂದು ಕಡೆಯಾದರೆ, ವರ್ಗ, ಜಾತಿ, ಧರ್ಮಗಳಿಗೆ ಅನುಸಾರವಾಗಿ ವಿಂಗಡಿಸುವುದು ಇನ್ನೊಂದು. ಫ‌ಲಾನುಭವಿಯಾದವನು ಸರಕಾರ ನೀಡಿದ ಸವಲತ್ತು ಎನ್ನುವುದಕ್ಕಿಂತ ನೇತಾರ ಯಾ ನಿರ್ದಿಷ್ಟ ಪಕ್ಷ ನೀಡಿದ್ದು ಎಂದು ಪರಿಭಾವಿಸುತ್ತಾನೆ. ಅದುವೇ ಮತವಾಗಿ ಪರಿವರ್ತಿತವಾಗುತ್ತದೆ. 

ಹಾಗಾದರೆ ಸರಕಾರಗಳು ರಚನೆಯಾದ ನಂತರವೂ ಒಂದು ಪಕ್ಷದ ಮುಖವಾಣಿಯಂತೆ ಇರುವುದು ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ವಿರುದ್ಧವಲ್ಲವೇ? ಸರಕಾರದ ರಚನೆ ಮಾಡಬೇಕಾದರೆ ರಾಜಕೀಯ ಪಕ್ಷಗಳು ಅಗತ್ಯ. ನಂತರವೂ ಅದನ್ನು ಮುಂದುವರೆಸಿಕೊಂಡು ಹೋದರೆ ಸಮತೆ ಮತ್ತು ಸಮಾನತೆಯ ಪಾಡೇನು? ಜನತೆಯ ಸರಕಾರ ಎನ್ನುವ ಬದಲು ನಿರ್ದಿಷ್ಟ ಪಕ್ಷದ ಸರಕಾರ ಎಂದೆನಿಸುವುದಿಲ್ಲವೇ? ಪ್ರಜಾಪ್ರಭುತ್ವದ ಫ‌ಲವನ್ನು ಪಕ್ಷದ ಫ‌ಲ ಎಂದು ಭಾವಿಸುವ ಜನತೆ ಪ್ರಜಾಪ್ರಭುತ್ವವನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಎಡವಿದ್ದಾರೆಯೇ? ಪಕ್ಷಗಳು ಈ ನಿಟ್ಟಿನಲ್ಲಿಯೇ ಕಾರ್ಯನಿರ್ವಹಿಸುವ ಗುಟ್ಟೇನು? ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರವಾಗಿರುವ ಹಲವು ಅನುಯಾಯಿಗಳು ಪರೋಕ್ಷವಾಗಿ ಪಕ್ಷಗಳಿಗೆ ಸಹಾಯ ಮಾಡಬಲ್ಲರು. ಸರಕಾರ ರಚನೆಯ ನಂತರದ ನೀತಿ, ನಿಯಮಗಳನ್ನು ರೂಪಿಸುವಲ್ಲಿ ಆಸಕ್ತ ಗುಂಪುಗಳಾಗಿ ಅವರು ಪ್ರಭಾವಿಸಬಲ್ಲವು. ಆದರೆ ಮತದಾನದ ದಿನ ಜನತೆಯೇ ಮೂಲ ಧಾತು. ಇಂತಹ ಪ್ರಚಂಡ ಶಕ್ತಿಯನ್ನು ಹೊಂದಿರುವ ಜನರನ್ನು ಅದ್ಯಾವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮುಂಚಿತವಾಗಿಯೇ ಲೆಕ್ಕಾಚಾರ ಮಾಡುತ್ತಿವೆಯೋ? ಈ ಲೆಕ್ಕಾಚಾರವೂ ಪ್ರತಿ ರಾಜಕೀಯ ಪಕ್ಷದ ಆಲೋಚನೆಯ ಭಾಗವಾಗಿದೆಯೇ? ಚುನಾವಣಾ ಆಯೋಗ ನೀಡಿದ ಅಂತಿಮ ಮತದಾರರ ಪಟ್ಟಿಯನ್ನೇ ಆಧರಿಸಿ ಈ ಲೆಕ್ಕಾಚಾರಗಳ್ಳೋ? ಅರ್ಥವಾಗದ ಪ್ರಶ್ನೆಗಳು.

ಜನತೆಯೂ ತಮ್ಮ ಆಕಾಂಕ್ಷೆಗಳ ಈಡೇರಿಕೆಗಾಗಿ ಪಕ್ಷಗಳನ್ನು ನೆಚ್ಚಿಕೊಂಡಿರುವುದು ಪ್ರಜಾಪ್ರಭುತ್ವದ ಅಣಕ. ಚುನಾಯಿತ ಸರಕಾರಗಳೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಬಹುಶಃ ಈ ದೇಶದಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತಿತ್ತು. ಚುನಾಯಿತ ಸರಕಾರ ಪ್ರಜಾಪ್ರಭುತ್ವದ ಪ್ರತೀಕ. ಅಂತಹ ಸರಕಾರವೂ ಪಕ್ಷಾಧಾರಿತ ಕಾರ್ಯಗಳನ್ನು ಹೆಚ್ಚು ಹೆಚ್ಚು ಮಾಡುತ್ತಿದ್ದರೆ, ಜನಸಾಮಾನ್ಯರ ಪಾಡೇನು? ಪ್ರಜಾಪ್ರಭುತ್ವವನ್ನು ಉಳಿಸುತ್ತಿರುವ ಜನಸಾಮಾನ್ಯರನ್ನು ಕಲ್ಯಾಣದತ್ತ ಕೊಂಡೊಯ್ಯುವುದು ಸರಕಾರದ ಮಂತ್ರವಾಗಬೇಕು. ಪಕ್ಷಗಳು ಸರಕಾರ ರಚನೆಯನ್ನು ಮಾಡುವಲ್ಲಿ ನಿರ್ಣಾಯಕರಾಗಬೇಕು. ಪಕ್ಷಗಳಿಗೂ ಜನತೆ ಎಂದರೆ ಆಯಾ ಪಕ್ಷಗಳ ಕಾರ್ಯಕರ್ತರಾಗಿದ್ದಾರೆ ಎನ್ನುವುದು ದಿಟವಾಗುತ್ತಿದೆ.

ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಜನತೆಯನ್ನು ಸಮಗ್ರವಾಗಿ ನೋಡಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರಜಾಪ್ರಭುತ್ವದ ಸ್ವಭಾವದ ವಿಸ್ತರಣೆ ಇಂದು ಆಗಬೇಕಾಗಿದೆ. ಸೀಮಿತ ವರ್ಗ ಮತ್ತು ರಾಜಕೀಯ ಪಕ್ಷಗಳಿಗಿಂತ ಮೀರಿ ಅದರ ವಿಸ್ತರಣೆ ಆಗಬೇಕಾಗಿದೆ. ಭಾರತದ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಜನತೆಯ ಭಾಗವಹಿಸುವಿಕೆ ಮುಖ್ಯ. ಇಂದಿನ ಚುನಾವಣೆಗಳನ್ನು ನೋಡಿದರೆ, ಸುಮಾರು ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆಯ ಬಹುಮತವನ್ನಾಧಾರಿಸಿದ ಪಕ್ಷಗಳು ಸರಕಾರ ರಚಿಸುತ್ತಿವೆ. ಇಲ್ಲಿಯೂ ಜನತೆಯ ಭಾಗವಹಿಸುವಿಕೆಯನ್ನು ವಿಸ್ತರಿಸಬೇಕಿದೆ.  ಚುನಾವಣೆಯನ್ನು ನಂಬರ್‌ ಗೇಮ್‌ ಮೂಲಕ ಗೆಲ್ಲುವ ಕಸರತ್ತು ನಡೆಸುವ ಪಕ್ಷಗಳು ಇತ್ತ ಕಡೆಯೂ ಗಮನಹರಿಸಬೇಕಿದೆ. ಹಾಗಾದಾಗ ಪ್ರಜಾಪ್ರಭುತ್ವದ ಉಸಿರು ಇನ್ನಷ್ಟು ಕಾಲ ಇರಬಲ್ಲದು. ಸಾಂಪ್ರದಾಯಕವಾಗಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಭಾರತಕ್ಕೆ ಅದನ್ನು ಹೆಚ್ಚು ಗಟ್ಟಿಗೊಳಿಸುವುದು ಅನಿವಾರ್ಯ ಮತ್ತು ಅಗತ್ಯವೂ ಹೌದು.

*ಡಾ| ಶೌರೀಶ್‌ ಕುಧ್ಕುಳಿ 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.