ಪ್ರತಿದಿನ 2350 ಹಸುಳೆಗಳ ಸಾವು

ಬಗೆಹರಿಯದ ಶಿಶು ಮರಣ ಸಮಸ್ಯೆ

Team Udayavani, Jan 14, 2020, 6:06 AM IST

j-16

ಸಾಂದರ್ಭಿಕ ಚಿತ್ರ

ಪ್ರತಿದಿನ ದೇಶದಲ್ಲಿ ಒಂದು ವರ್ಷದೊಳಗಿನ 2,350 ಶಿಶುಗಳು ಸಾವಿಗೀಡಾಗುತ್ತಿವೆ. ಇದರಲ್ಲಿ ರಾಜಸ್ಥಾನ ಅಗ್ರ ಸ್ಥಾನದಲ್ಲಿದ್ದು, ಪ್ರತಿ ಸಾವಿರ ನವಜಾತ ಶಿಶುಗಳ ಪೈಕಿ 33 ಶಿಶುಗಳು ಹುಟ್ಟಿದ ಸಮಯದಲ್ಲೇ ಅಸುನೀಗುತ್ತಿವೆ. ಹಾಗಾದರೆ ಮರಣ ಪ್ರಮಾಣ ಏರಿಕೆಯಾಗಲು ಕಾರಣವೇನು? ದೇಶದ ಯಾವ ಭಾಗಗಳಲ್ಲಿ ಹೆಚ್ಚು ಮೊದಲಾದ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ.

8 ಲಕ್ಷ ಶಿಶುಗಳ ಸಾವು
ಜಾಗತಿಕವಾಗಿ ಅತೀ ಹೆಚ್ಚು ಶಿಶುಗಳ ಮರಣ ದಾಖಲಾಗುತ್ತಿರುವ ದೇಶ ಭಾರತವಾಗಿದೆ. ಯುನಿಸೆಫ್ ಪ್ರಕಾರ 2017ರಲ್ಲಿ ದೇಶದಲ್ಲಿ 8,02,000 ಶಿಶುಗಳು ಸಾವನ್ನಪ್ಪಿವೆ.

ಶೇ. 78.9ರಷ್ಟು
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಕೇವಲ ಶೇ. 78.9ರಷ್ಟು ಶಿಶುಗಳು ಮಾತ್ರ ವೈದ್ಯಕೀಯ ಸೌಲಭ್ಯ ಮತ್ತು ಮಾರ್ಗದರ್ಶನದಲ್ಲಿ ಜನನ ವಾಗುತ್ತಿವೆ. ಶೇ. 21.1ರಷ್ಟು ಶಿಶುಗಳು ಸೌಲಭ್ಯ ವಂಚಿತ, ಅಸುರಕ್ಷತೆಯಲ್ಲಿ ಹುಟ್ಟುತ್ತಿರುವುದು ಮರಣ ಹೆಚ್ಚಳಕ್ಕೆ ಒಂದು ಕಾರಣ.

ಎಲ್ಲಿ ಹೆಚ್ಚು ?
ರಾಜಸ್ಥಾನದಲ್ಲಿ ಪ್ರತಿವರ್ಷ 1.65 ದಶಲಕ್ಷ ಶಿಶುಗಳ ಜನನವಾಗುತ್ತಿದ್ದು, 1,000 ದಲ್ಲಿ 38 ಶಿಶುಗಳು ಮರಣವಾಗುತ್ತಿವೆ. ವಾರ್ಷಿಕವಾಗಿ 62,843 ಮತ್ತು ಪ್ರತಿದಿನ ಸರಾಸರಿ 172 ಶಿಶುಗಳು ಸಾವನ್ನಪ್ಪುತ್ತಿವೆ. ಗುಜರಾತ್‌ನಲ್ಲಿ 1,000ಕ್ಕೆ 30 ಶಿಶುಗಳು ಅಸುನೀಗುತ್ತಿದ್ದು, ವರ್ಷಕ್ಕೆ ಸುಮಾರು 36,000 ಮತ್ತು ದಿನಕ್ಕೆ ಸರಾಸರಿ 98 ಶಿಶುಗಳು ಸಾಯುತ್ತಿವೆ.

ರಾಜ್ಯದ ಸ್ಥಿತಿ ಏನು ?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ- ಅಂಶ (2017) ದ ಪ್ರಕಾರ ಪ್ರತಿವರ್ಷ ರಾಜ್ಯದಲ್ಲಿ 12 ಸಾವಿರ ಶಿಶುಗಳು ಮರಣ ಹೊಂದುತ್ತಿದ್ದು, ಜನಿಸಿದ 1,000 ಶಿಶುಗಳಲ್ಲಿ 31 ಶಿಶುಗಳು ಸಾಯುತ್ತಿವೆ. 2015ರಿಂದ 2019ರ ಅಕ್ಟೋಬರ್‌ ವರೆಗೆ 44,250 ಶಿಶುಗಳು ಸಾವನ್ನಪ್ಪಿವೆ.

ಅನಕ್ಷರತೆ ಮುಖ್ಯ ಕಾರಣ
ಯುನಿಸೆಫ್ ವರದಿಯ ಪ್ರಕಾರ, 20 ವರ್ಷಕ್ಕಿಂತ ಒಳಗೆ ಗರ್ಭ ಧರಿಸುವ ತಾಯಂದಿರು ಮತ್ತು ಶಿಶುಗಳ ಮರಣ ಪ್ರಮಾಣ ಹೆಚ್ಚಿದೆ ಎಂದು ಉಲ್ಲೇಖಿಸಿದ್ದು, ಅನ‌ಕ್ಷರತೆ ಮತ್ತು ಮಾಹಿತಿ ಕೊರತೆ ಈ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ ಎಂದು ವರದಿ ಹೇಳಿದೆ.

ಕಾರಣವೇನು ?
· ತಾಯಿಯಲ್ಲಿ ಶಿಕ್ಷಣದ ಕೊರತೆ
· ಅಪೌಷ್ಟಿಕತೆ (ಭಾರತೀಯ ಮಹಿಳೆಯರಲ್ಲಿ ಅರ್ಧಕ್ಕಿಂತ  ಹೆಚ್ಚು ಜನರು ರಕ್ತಹೀನತೆ ಹೊಂದಿದ್ದಾರೆ)
· ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ.
· ಸೌಲಭ್ಯಗಳ ಕೊರತೆ

ಮರಣ ಪ್ರಮಾಣ
(2014-17ರಲ್ಲಿ ಪ್ರತಿ ಸಾವಿರಕ್ಕೆ)
ಮಧ್ಯಪ್ರದೇಶ 47
ರಾಜಸ್ಥಾನ‌ 46
ಅಸ್ಸಾಂ 44
ಅರುಣಾಚಲ ಪ್ರದೇಶ 42
ಉತ್ತರ ಪ್ರದೇಶ 41
ಒಡಿಶಾ 41
ಮೇಘಾಲಯ 39
ಛತ್ತೀಸ್‌ಗಢ್‌ 38
ಗುಜರಾತ್‌ 35
ಕರ್ನಾಟಕ 31

ಶೇ. 33ರಷ್ಟು ಮರಣ
ದೇಶದಲ್ಲಿ ವಾರ್ಷಿಕವಾಗಿ ಸುಮಾರು 2.6 ಕೋಟಿ ಜನನ ವಾಗುತ್ತಿವೆ. ಸದ್ಯ ಶಿಶು ಮರಣದ ಪ್ರಮಾಣ (ಐಎಂಆರ್‌) 1,000 ಜನನಗಳಿಗೆ 33ರಷ್ಟಿದ್ದು, ದೈನಂದಿನ 2,350 ಶಿಶುಗಳು ಸಾಯುತ್ತಿವೆ.

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.