ಸ್ವಾತಂತ್ರ್ಯ @75 ಅಮೃತ ಉತ್ಸವ: ದಶಕದ ಹೆಜ್ಜೆಗಳು
Team Udayavani, Aug 8, 2021, 6:10 AM IST
1947-1960 : ಭಾರತಕ್ಕೆ ಸ್ವಾತಂತ್ರ್ಯ ಬಂದು ಇದೇ 15ಕ್ಕೆ ಸರಿಯಾಗಿ 75 ವರ್ಷ. ಅಮೃತ ಮಹೋತ್ಸವದ ಸವಿಗಳಿಗೆಯಲ್ಲಿರುವ ಭಾರತ ಮೊದಲ ದಶಕದಲ್ಲಿ ಸಾಧಿಸಿದ್ದು ಹಲವಾರು. ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಹೊಸ ಭಾರತಕ್ಕೆ ಮುನ್ನುಡಿ ಬರೆದರು. ಒಂದು ಅರ್ಥದಲ್ಲಿ ಸ್ವಾತಂತ್ರ್ಯ ಭಾರತದ ಮೊದಲ 10 ವರ್ಷ ಸಂಪೂರ್ಣವಾಗಿ ನೆಹರೂ ಅವರಿಗೇ ಸೇರಿದ್ದಾಗಿತ್ತು.
- 1947ರಲ್ಲಿ ಇಂಡೋ-ಪಾಕಿಸ್ಥಾನ ಸಮರದಲ್ಲಿ ಭಾರತಕ್ಕೆ ಗೆಲುವು.
- 500ಕ್ಕೂ ಹೆಚ್ಚು ರಾಜಾಡಳಿತಗಳನ್ನು ಒಂದುಗೂಡಿಸುವ ಕೆಲಸ ಆರಂಭ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಇದ್ದದ್ದು 17 ಪ್ರಾಂತ್ಯಗಳು, 565 ರಾಜಾಡಳಿತಗಳು.
- ಆಗಿನ ಉಪಪ್ರಧಾನಿ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪರಿಶ್ರಮದಿಂದಾಗಿ ಬಹುತೇಕ ಎಲ್ಲ ರಾಜ್ಯಾಡಳಿತ ಪ್ರಾಂತ್ಯಗಳನ್ನೂ ಭಾರತದ ಒಕ್ಕೂಟಕ್ಕೆ ಸೇರ್ಪಡೆ.
- ಜುನಾಗಢ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳು ಮಾತ್ರ ಕೊಂಚ ಕಠಿನವಾಗಿದ್ದವು. ಇವುಗಳನ್ನೂ ಭಾರತಕ್ಕೆ ಜನಶಕ್ತಿ ಮತ್ತು ಮಿಲಿಟರಿ ಶಕ್ತಿ ಬಳಸಿ ಸೇರ್ಪಡೆ.
- ಸಂವಿಧಾನ ರಚನೆ. ಸ್ವಾತಂತ್ರ್ಯ ಭಾರತದ ಮಹತ್ವದ ಘಟ್ಟ. ಡಾ| ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿ ಸಂವಿಧಾನವನ್ನು ನೀಡಿತು. 1956ರ ಜನವರಿ 26ರಂದು ಇದನ್ನು ಅಳವಡಿಸಿಕೊಳ್ಳಲಾಯಿತು.
- ದೇಶದ ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು 1952ರಲ್ಲಿ. ಭಾರತ ರಾಷ್ಟ್ರೀಯ ಕಾಂಗ್ರೆಸ್ ಬಹುಮತ ಪಡೆಯಿತು. ನೆಹರೂ ಅವರು ಎರಡನೇ ಬಾರಿಗೆ ಪ್ರಧಾನಿಯಾದರು.
- ಮಹಿಳೆಯರಿಗೆ ಕಾನೂನು ಬದ್ಧ ಹಕ್ಕುಗಳನ್ನು ನೀಡಿದ್ದು, ಸ್ವಾತಂತ್ರ್ಯ ಭಾರತದ ಮೊದಲ ಸರಕಾರದ ಸಾಧನೆ. ಹಾಗೆಯೇ ಜಾತಿ ತಾರತಮ್ಯ, ಅಸ್ಪೃಶ್ಯತೆ ನಿವಾರಣೆಗೆ ಟೊಂಕ ಕಟ್ಟಲಾಯಿತು.
- ಪ್ರಾಥಮಿಕ ಹಂತದಿಂದ ಹಿಡಿದು, ಐಐಟಿವರೆಗೆ ದೇಶಾದ್ಯಂತ ಶಾಲಾ ಸಂಸ್ಥೆಗಳು ಆರಂಭವಾದವು.
- ಪಂಚವಾರ್ಷಿಕ ಯೋಜನೆ ಜಾರಿಗೆ ಬಂದಿತು. ಸೋವಿಯತ್ ರಷ್ಯಾ ಮಾದರಿಯಲ್ಲಿ ರೈತರ ಮೇಲೆ ತೆರಿಗೆ ಹಾಕದಿರುವ ನಿರ್ಧಾರ ತೆಗೆದುಕೊಳ್ಳಲಾಯಿತು.
- ಉಕ್ಕು, ವಿಮಾನಯಾನ, ಶಿಪ್ಪಿಂಗ್, ವಿದ್ಯುತ್ ಮತ್ತು ಗಣಿಗಾರಿಕೆಯನ್ನು ರಾಷ್ಟ್ರೀಕರಣ ಮಾಡಲಾಯಿತು. ಪ್ರಮುಖ ಅಣೆಕಟ್ಟುಗಳು, ನೀರಾವರಿ ಕಾಲುವೆಗಳು, ರಸ್ತೆಗಳು, ಥರ್ಮಲ್ ಮತ್ತು ಜಲವಿದ್ಯುತ್ ಘಟಕಗಳನ್ನು ಆರಂಭಿಸಲಾಯಿತು.
- 1956ರಲ್ಲಿ ರಾಜ್ಯಗಳ ಪುನರ್ಸಂಘಟನೆ ಕಾಯ್ದೆ ಜಾರಿಯಾಯಿತು. ಭಾಷೆಗಳ ಆಧಾರದಲ್ಲಿ ರಾಜ್ಯಗಳನ್ನು ಸ್ಥಾಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ