ಭಾವ ಗಾನ ಯಾನಿ

ಎಚ್ಚೆಸ್ವಿಯೊಂದಿಗೆ ನೆನಪಾಗುವ ಭಾವಗೀತೆಗಳು

Team Udayavani, Feb 6, 2020, 5:35 AM IST

sam-14

ಎಚ್ಚೆಸ್ವಿಯವರ ಕಾವ್ಯವನ್ನು ಅಭ್ಯಸಿಸದವರೂ, ಅವರ ಹೆಸರನ್ನು ಕೇಳದಿರುವ ಜನರೂ, ಅವರ ಭಾವಗೀತೆಗಳ ಮೂಲಕ ರಾಧೆಯನ್ನು ಕಂಡಿರುತ್ತಾರೆ. ಅವರ ಭಾವಗೀತೆಗಳ ಕಾರಣದಿಂದಲೇ ಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡಿರುತ್ತಾರೆ…

ರಾಧೆ- ಕೃಷ್ಣರ ಪ್ರೀತಿ ಯಾರಿಗೆ ಗೊತ್ತಿಲ್ಲ. ಜಯದೇವನ ರಾಧೆ, ಮುಂದೆ ಕವಿಗಳನ್ನು, ಪ್ರೇಮಿಗಳನ್ನು ಆವರಿಸಿದ ಪರಿ ಅಚ್ಚರಿ… ರಾಧೆಯ ನಿಷ್ಠೆ ಕೃಷ್ಣನಿಗೂ ಸವಾಲು, ಧನ್ಯತೆ… ಅಷ್ಟು ಪ್ರೀತಿಗೆ ಒಳಗಾಗುವುದು, ಪ್ರೀತಿಸಲ್ಪಡುವುದು ಧನ್ಯತೆಯಲ್ಲದೆ ಮತ್ತೇನು? ಅದನ್ನು ಎಚ್ಚೆಸ್ವಿಯವರ ಭಾವಗೀತೆಗಳಲ್ಲಿ ಓದುವುದೇ ಒಂದು ಸೊಗಸು. ಎಚ್ಚೆಸ್ವಿಯವರ ಕಾವ್ಯವನ್ನು ಅಭ್ಯಸಿಸದವರೂ, ಅವರ ಹೆಸರನ್ನು ಕೇಳದಿರುವ ಜನರೂ, ಅವರ ಭಾವಗೀತೆಗಳ ಮೂಲಕ ರಾಧೆಯನ್ನು ಕಂಡಿರುತ್ತಾರೆ. ಅವರ ಭಾವಗೀತೆಗಳ ಕಾರಣದಿಂದಲೇ ಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡಿರುತ್ತಾರೆ. ತನ್ನನ್ನು ಪ್ರೀತಿಸಿದವರಿಗೆ ಕೃಷ್ಣ ಏನೇನು ಕೊಟ್ಟ ಎಂದು “ಪ್ರೀತಿ ಕೊಟ್ಟ ರಾಧೆಗೆ…’ ಎಂಬ ಗೀತೆಯಲ್ಲಿ ಎಚ್ಚೆಸ್ವಿ ಹೇಳುತ್ತಾರೆ ಕೇಳಿ: ತನ್ನನಿತ್ತ ಕೊಳಲಿಗೆ ರಾಗ ತೆತ್ತವನು ಅವನು, ಹಾಲು ಕೊಟ್ಟ ವಿದುರನಿಗೆ ಬಾಳು ಕೊಟ್ಟವನು… ದೇಹವಿಟ್ಟ ಮಣ್ಣಿಗೆ ಜೀವ ಕೊಟ್ಟವನು… ಪ್ರೀತಿ ಕೊಟ್ಟವಳಿಗೆ ಮಾತು ಕೊಟ್ಟವನು… ಅನ್ನ ಕೊಟ್ಟ ಭಕ್ತನಿಗೆ ಹೊನ್ನು ಕೊಟ್ಟವನು… ಇಷ್ಟೆಲ್ಲಾ ಕೊಡುವ ಸಾಮರ್ಥ್ಯವಿದ್ದೂ, ಅಮ್ಮನ ಮುಂದೆ ನಾನು ಬೆಣ್ಣೆ ಕದ್ದಿಲ್ಲವೆಂದು ದೇವರಾಣೆ ಹಾಕುವವನು… ಬೆಣ್ಣೆ ಕದ್ದು ತಿಂದ ಬಾಯಿ ಒರೆಸಿದ ಕೈಗಳನ್ನು ಬೆನ್ನ ಹಿಂದೆ ಮರೆಸಿ ಅಮಾಯಕನಂತೆ ನಿಲ್ಲುವವನು…

ಎಚ್ಚೆಸ್ವಿಯವರ ಆಪ್ತಗೀತದ ಕೃಷ್ಣನ ಸರಳ ರೂಪು ಇದು. ಶ್ರಾವಕ, ಸೇವಕ, ಯಾದವ, ಕಾದವ ಎಲ್ಲವೂ ಆದವನು, ಅಮ್ಮನಿಗೆ ಮಗುವಾಗುವ, ಭಕ್ತರಿಗೆ ಧೇನುವಾಗುವ, ಪ್ರೀತಿಸಿದವಳ ಬದುಕಾಗುವ, ಗೋಪಿಯರಿಗೆ ಸಾಂಗತ್ಯದ ಸಾರ್ಥಕತೆ ನೀಡುವ ಸಾಲುಗಳನ್ನು ಎಚ್ಚೆಸ್ವಿಯವರ ಗೀತ ಸಾಲುಗಳು ಕಟ್ಟಿಕೊಡುವ ಪರಿ ಅನನ್ಯ.

ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು. ಆದರೆ, ಆಕೆ ಪ್ರೀತಿಯ ಮೂಲಕ ಕೃಷ್ಣನನ್ನು ಕಾಣಿಸುತ್ತಾಳೆ. ಮತ್ತೆ ಬಾರದ, ಮರಳಿ ಬಾರದ ಮೋಹನನ ಪ್ರೀತಿಸುತ್ತಲೇ ಉಳಿಯುತ್ತಲೇ ಆಕೆ, ಎಲ್ಲರಂತೆ ಅಲ್ಲ ಎಂಬುದನ್ನು ನಿರೂಪಿಸುತ್ತಾಳೆ… ಮರಳಿ ಬಾರದ ಕೃಷ್ಣ ಅಲ್ಲಿ ರಾಧೆಯನ್ನು ನೆನೆಯುತ್ತಿಲ್ಲವಾ? ಅದಕ್ಕೆಂದೇ ಭೂಮಿಯ ಮೇಲಿರುವ ಆತನ ಪ್ರತಿನಿಧಿಗಳ ಬಗ್ಗೆ ಹೇಳುತ್ತಾ ಕೃಷ್ಣನ ನೋವನ್ನು ಎಚ್ಚೆಸ್ವಿ ಹೇಳುವುದು, “ಯಾರೋ ಮೋಹನ ಯಾವ ರಾಧೆಗೊ ಪಡುತಿರುವನು ಪರಿತಾಪ…’

ಯಾರೋ ಮೋಹನನನ್ನು ಮೋಹನನ ಎತ್ತರಕ್ಕೆ ಕೊಂಡೊಯ್ಯುವ ಎಚ್ಚೆಸ್ವಿ ಯಾರೋ ರಾಧೆಯನ್ನು ನಿಜವಾದ ರಾಧೆಯನ್ನಾಗಿಸುತ್ತಾರೆ. ಅದು ಪುರಾಣದ ಕಥನ, ಅಲ್ಲಿ ಅಗಲಿಕೆ ದೈವ ನಿಯಾಮಕ ಎಂದು ಸಮಾಧಾನ ಪಟ್ಟುಕೊಳ್ಳುವೆಡೆಯಲ್ಲಿ ಈ ಭೂಮಿಯ ಮೋಹನರ ಅಸಹಾಯಕತೆ, ಪರಿತಾಪ ಹೇಳುವ ಮೂಲಕ, ಇಲ್ಲಿರುವ ಯಾರೋ ರಾಧೆಯರ ನಿಷ್ಠೆಯನ್ನು ಹೇಳುವ ಮೂಲಕ, ಪ್ರೇಮದ ತೀವ್ರತೆಯನ್ನು ಮನದಟ್ಟು ಮಾಡಿಕೊಡುತ್ತಾ ಕಣ್ತುಂಬಿಸುತ್ತಾರೆ .. ದೈವತ್ವವನ್ನು ಮಾನವತ್ವಕ್ಕೂ, ಮಾನವತ್ವವನ್ನು ದೈವತ್ವಕ್ಕೂ ಕೊಂಡೊಯ್ಯುವ ಈ ಪದ್ಯ, ಲೋಕದ ಮನೆಮಾತಾಗಿದ್ದರಲ್ಲಿ ಅಚ್ಚರಿಯೇನು?

ರಾಧಾ- ಮಾಧವರ ಪ್ರೇಮ, ಆ ಕ್ಷಣದ ತಳಮಳ, ವಿರಹ, ಅಲ್ಲಿಯೇ ಇರುವ ಕಂಡೂ ಕಾಣದಂಥ ನಿರ್ಲಕ್ಷ್ಯ- ಇವು ಕಟ್ಟಿಕೊಡುವ ಭಾವತೀವ್ರತೆಯನ್ನು ಆಪ್ತವಾಗಿ ಹೇಳುವ ಎಚ್ಚೆಸ್ವಿ, ಪರಸ್ಪರ ವಿರುದ್ಧವಿದ್ದರೂ ಜೊತೆ ಜೊತೆಗಿರಬಲ್ಲ ಅಭೇದ್ಯ ಸಂಬಂಧದ ಕುರಿತು ಮತ್ತೂಂದು ಭಾವಗೀತೆಯಲ್ಲಿ ಹೇಳುತ್ತಾರೆ: “ನಂಬಬಹುದೇ ಗೆಳತಿ…’ ಎಂಬ ಆ ಗೀತೆಯಲ್ಲಿ, ಕೆಲವು ಜೊತೆಗಳನ್ನು ಹೇಳುತ್ತಾ ಹೋಗುತ್ತಾರೆ… ಅವು ಒಂದಕ್ಕೊಂದು ವಿರುದ್ಧವಾದರೂ, ಒಂದಕ್ಕೊಂದು ಜೊತೆ ಎಂದು ಪರಿಗಣಿಸಲಾಗದಿದ್ದರೂ ಆಗಲಿರಲಾರವು.. ನಗೆಯೊಳಗೆ ಹಗೆ, ನೀರಿನೊಳಗೆ ಧಗೆ ಹೇಳುತ್ತಾ, ನಿನ್ನ ಒಳಗೇ ನಾನಿರುವುದ ನಂಬಬಹುದೇ ಎಂದು ಪ್ರಶ್ನಿಸುತ್ತಲೇ ಅದೆಲ್ಲವೂ ಇದ್ದರೂ ನಾವಿಬ್ಬರೂ ಒಂದೇ ಎನ್ನುವುದನ್ನು ಸೊಗಸಾಗಿ ಹೇಳುತ್ತಾರೆ.

ಸಂಬಂಧಗಳೆಂದರೆ ಹಾಗೇ… ರಾಧೆಯ ರೀತಿ ಎಂದಿಗೂ ಬಾರದವನನ್ನು ಪ್ರೀತಿಸುತ್ತಲೇ ಅವನತ್ತ ತಿರುಗಿಯೂ ನೋಡದೇ ಇದ್ದು ಬಿಡಬಹುದು. ತೂಗುಮಂಚದಲ್ಲಿ ಕೂತ ಸಂತೃಪ್ತ ದಾಂಪತ್ಯ ಪೊರೆಯಬಹುದು. ಸಂಬಂಧಗಳ ಅಳವರಿಯದೆ ನಿಭಾವಣೆಯಲ್ಲಿ ಸೋತು ಒಟ್ಟಿಗಿದ್ದರೂ ಒಟ್ಟಿಗಿರದಂತೆ ಬದುಕು ಸಾಗಿಸಿಬಿಡಬಹುದು ಅಥವಾ ಪರಸ್ಪರ ವೈರುಧ್ಯಗಳಿದ್ದರೂ ಬೇರ್ಪಡಿಸಲಾಗದಂತೆ ಬೆಸೆದುಕೊಂಡು ನಗೆ ಚೆಲ್ಲಬಹುದು… ಎಚ್ಚೆಸ್ವಿ ಭಾವಗೀತೆಗಳು ಮನಮುಟ್ಟುವುದು ಇಂತಹ ಕಾರಣಗಳಿಗಾಗಿ.

ಎಚ್ಚೆಸ್ವಿ ಟಾಪ್‌ 8 ಭಾವಗೀತೆಗಳು
ನಾಕು ದಿನದ ಬಾಳಿಗೆ
ಇರಲಿ ಹಾಲು ಹೋಳಿಗೆ
ಕೆಡಿಸಬಹುದೇ ಬಾಳ ಹದವ
ಹುಳಿಯ ಹಿಂಡಿ ಹಾಲಿಗೆ
**********
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯ್ಗೆ ಬೆಣ್ಣೆ ಮೆತ್ತಿದರಮ್ಮ
**********
ತೂಗುಮಂಚದಲ್ಲಿ ಕೂತು
ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು- ರಾಧೇ ನಾಚುತಿದ್ದಳು
*******
ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು
ಮಾತುಮಾತಿಗೇಕೋ ನಗೆ
ಮರುಘಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು
ಬರೆಯದಿರುವ ಕವನ
********
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು
********
ನನ್ನ ಓಲೆ ಓಲೆಯಲ್ಲ
ಮಿಡಿವ ಒಂದು ಹೃದಯ
ಒಡೆಯಬೇಡ ಒಲವಿಲ್ಲದೆ
ನೋಯುತ್ತಿರುವ ಎದೆಯ
************
ಬಯಸಿದೆ ನಿನ್ನನು ಭಾವದ ಮೇಳಕೆ
ಮಿಡಿದಿದೆ ಎದೆಯಿದು ಯಾವುದೊ ತಾಳಕೆ
*********
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವಾ…

ಮಾಲಿನಿ ಗುರುಪ್ರಸನ್ನ

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.