ನಮ್ಮ ಉದಯವಾಣಿ, ನಮ್ಮಹೃದಯವಾಣಿ
ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ
Team Udayavani, Feb 20, 2020, 5:12 AM IST
ಲೇಖನ ಪ್ರಕಟವಾದ ಸಂಭ್ರಮ
ಮಡಿಲ ಮಗು ಕಣ್ಣು ತೆರೆದಾಗ ಮೊದಲು ಅಮ್ಮನ ಮುಖ ನೋಡಿ ದಂತೆ ನಾನು ಓದಿದ ಮೊದಲ ಪತ್ರಿಕೆ ಉದಯವಾಣಿ. ಪತ್ರಿಕೆಯನ್ನು ಕೊಂಡು ಓದಲು ಶಕ್ತಿ ಇಲ್ಲದ ಆ ಕಾಲದಲ್ಲಿ ಒಂದು ಕಿ.ಮೀ. ದೂರದ ಸಂಬಂಧಿಕರೊಬ್ಬರ ಮನೆಯಿಂದ 2 ದಿನಕ್ಕೊಮ್ಮೆ ಎರವಲು ಪಡೆದಾದರೂ ಓದುತ್ತಿದ್ದೆ. ಉದಯವಾಣಿಯನ್ನು ಓದುವ ಗೀಳು ನನ್ನ ಬರವಣಿಗೆಗೆ ಪ್ರಚೋದನೆ ನೀಡಿತು. ಕಾಲೇಜು ದಿನಗಳಲ್ಲಿ ಬರೆದುದನ್ನೆಲ್ಲ ಉದಯ ವಾಣಿಗೆ ಕಳುಹಿಸುತ್ತಿದ್ದೆ. ಮೊದಲು ಜನತಾವಾಣಿಯಲ್ಲಿ ಬರಹವೊಂದು ಪ್ರಕಟವಾಗಿತ್ತು. ಅದು ನನ್ನಲ್ಲಿ ಬರೆಯುವ ಆತ್ಮವಿಶ್ವಾಸವನ್ನು ಮೂಡಿಸಿತ್ತು. ಸಾಪ್ತಾಹಿಕ, ಮಹಿಳಾ ಸಂಪದದಲ್ಲಿ ಬರಹಗಳು ಪ್ರಕಟವಾಗಿರುವುದು ಬಹಳ ಹೆಮ್ಮೆ ಎನಿಸುತ್ತದೆ. ತನ್ನ ಮೌಲ್ಯವನ್ನು ಉಳಿಸಿಕೊಂಡು ಮನಗೆದ್ದ ಪತ್ರಿಕೆ ನೂರುಕಾಲ ಬೆಳಗಲಿ.
ಶೈಲಜಾ, ಪುದುಕೋಳಿ
ಜ್ಞಾನ ಹೊತ್ತು ಬರುವ ಉದಯವಾಣಿ
ಉದಯವಾಣಿ ಜನಮನದ ಜೀವನಾಡಿ ಎಂಬದು ಅಕ್ಷರಶಃ ನಿಜ. ಕಳೆದ ಹಲವು ವರ್ಷಗಳಿಂದ ಪತ್ರಿಕೆಯ ಒಡನಾಡಿಯಾಗಿದ್ದೇನೆ. ಅದೆಷ್ಟೋ ಮಹತ್ವದ ವಿಚಾರಗಳ ಮೂಲಕ ಜ್ಞಾನ ಸಂಪಾದನೆಗೆ ಉದಯವಾಣಿ ಸಹಾಯಕವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭ ಪ್ರತಿದಿನ ವಿದ್ಯಾರ್ಥಿಗಳಿಂದ ಉದಯವಾಣಿಯನ್ನು ಓದಿಸು ತ್ತಿದ್ದೆವು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ರಸಪ್ರಶ್ನೆ ಸ್ಪರ್ಧೆ ಆಯೋಜಿಸುತ್ತಿರುವಾಗ ಉದಯವಾ ಣಿಯ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಓದುವಂತೆ ಪ್ರೇರೇಪಿಸಿ, ಆ ಮೂಲಕ ವಿದ್ಯಾರ್ಥಿಗಳು ವಿಚಾರಗಳನ್ನು ತಿಳಿದು ಸ್ಪರ್ಧೆಗಳಲ್ಲಿ ವಿಜೇತ ರಾಗುತ್ತಿದ್ದರು. ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಾಗ ಆ ಸುದ್ದಿ ಪತ್ರಿಕೆಯಲ್ಲಿ ವರದಿಯಾಗುತ್ತದೆ. ಇದು ಮಕ್ಕಳ ಎಳೆಯ ಪ್ರತಿಭೆಗೆ ಬಹುದೊಡ್ಡ ಸ್ಫೂರ್ತಿಯಾಗಿದೆ. ಪತ್ರಿಕೆಯ ಸಂಪಾದಕೀಯ ಅಂಕಣದಲ್ಲಿ ಬರುವ ಪ್ರತಿಯೊಂದು ವಿಚಾರವು ಅರ್ಥಪೂರ್ಣ. ಉದಯವಾಣಿ ಇನ್ನಷ್ಟು ವಿನೂತನ ಸುದ್ದಿಗಳೊಂದಿಗೆ ಜನರನ್ನು ತಲುಪಲಿ.
ಉದಯ್ ನಾಯ್ಕ…, ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು