ಸಾಹಿತ್ಯದ ಸಸಿಗೆ ನೀರೆರೆದವಳು
ನಮ್ಮ ಉದಯವಾಣಿ, ನಮ್ಮ ಹೃದಯವಾಣಿ
Team Udayavani, Feb 22, 2020, 5:02 AM IST
ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ
ಬಾಲ್ಯ ಜೀವನದಲ್ಲಿ ವಾರ್ತಾಪತ್ರಿಕೆಗಳ ಓದುವುದು, ಬರೆಯುವ ಹವ್ಯಾಸಗಳಿರಲಿಲ್ಲ. ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ನಾನು ಮದುವೆಯಾಗಿ, ಬಳಿಕ ಮನೆಯಲ್ಲೇ ಮಗುವಿನ ಆರೈಕೆಯಲ್ಲಿ ನಿರತನಾದೆ. ನಾನು ಕೆಲಸಕ್ಕೆ ರಾಜೀನಾಮೆ ನೀಡುವಾಗ “ಕೆಲಸ ಬಿಡಬೇಡ’ ಎಂದವರು ಕಡಿಮೆ ಏನಲ್ಲ. ಆದರೆ ಕೆಲಸ ಬಿಟ್ಟಿದ್ದೇ ನಾನು ಮಾಡಿದ ಒಳ್ಳೆಯ ಗಳಿಗೆ. ನನ್ನ ಜೀವನಕ್ಕೆ ಉದಯವಾಣಿ ಬಂದಳು. ನನ್ನ ಓದುವ, ಬರೆಯುವ ಹವ್ಯಾಸ ಅಲ್ಲಿಂದ ಆರಂಭವಾಯಿತು. ಮಾವ ಪತ್ರಿಕೆಗೆ ಲೇಖನ ಕಳುಹಿಸಿ ನೋಡು ಪ್ರಕಟವಾಗಬಹುದು ಎಂದರು.
ಪ್ರತಿ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವಂತೆಯೇ ನನ್ನ ಸಾಹಿತ್ಯದ ಕೂಸಿನ ಅಂಬೆಗಾಲಿಡುವ ಯಶಸ್ಸಿನ ಶ್ರೇಯಸ್ಸು “ಮಹಿಳಾ ಸಂಪದ’ ದದ್ದು. ಅನಂತರ ಸಣ್ಣ ಸಣ್ಣ ಲೇಖನಗಳನ್ನು ಬರೆದಾಗ ಪೊರೆದವಳು “ಅವಳು’. ನಾಗತಿಹಳ್ಳಿಯವರ “ನನ್ನ ಪ್ರೀತಿಯ ಹುಡುಗಿಗೆ’ ಪುಸ್ತಕ ಓದಿ ಪ್ರೇಮಪತ್ರ ಪ್ರಬಂಧ ಬರೆಯಲು ಶುರುಮಾಡಿದಾಗ “ಜೋಶ್’ ಜಾಗ ಮಾಡಿ ಕೊಟ್ಟಿತು. “ಚಿನ್ನಾರಿ’ ಪುಟಕ್ಕೂ ಪ್ರಯತ್ನಿಸಿದ್ದೇನೆ.
ನಾನು ಹೈಸ್ಕೂಲು ಓದುವಾಗ ಗುರುನಾಥ ಎಂಬ ಶಿಕ್ಷಕರು ಬರೆಯುವ ಮನಸ್ಸುಳ್ಳವರು ಸಾಕಷ್ಟು ಓದಬೇಕು ಎನ್ನುತ್ತಿದ್ದರು. ಈಗ ಉದಯವಾಣಿಯ ಪ್ರತಿ ಪುರವಣಿ ಓದುವುದೇ ನನಗೆ ಬಹಳ ಅಚ್ಚುಮೆಚ್ಚು. ಲೇಖನದ ಆಡಿಯೋ ಕೇಳುತ್ತ ಮನೆಕೆಲಸಗಳ ಪೂರ್ತಿಗೊಳಿಸಿದ್ದು ಉಂಟು. “ಉದಯವಾಣಿ ಆ್ಯಫ್’ ಈ ನಿಟ್ಟಿನಲ್ಲಿ ನನಗೆ ಉತ್ತಮ ಗೆಳತಿ.
ಮಗನ ತುಂಟಾಟಗಳನ್ನು ನೋಡುತ್ತ, ನನಗೆ ದೊರೆತ ಸ್ವಲ್ಪ ಸಮಯದಲ್ಲಾದರೂ ಓದಲು ಅವಕಾಶ ಸಿಕ್ಕಿರುವುದು “ಆ್ಯಪ್’ ನಿಂದ. ಓದು ಶಬ್ದ ಭಂಡಾರವನ್ನು ಬೆಳೆಸುತ್ತದೆ ಎಂಬ ಮಾತು ಸುಳ್ಳಲ್ಲ.
ನಾನು ಸಾಹಿತ್ಯ ಕ್ಷೇತ್ರದಲ್ಲಿ ಒಂದು ಸಣ್ಣ ಕೂಸು. ಉದಯವಾಣಿಯೆಂಬ ಮಹಾತಾಯಿಯ ಪ್ರೀತಿ 50 ವರುಷಗಳಿಂದ ಪಸರಿಸಿದರೂ, ನನ್ನ ಅವಳ ನಂಟು 2-3 ವರುಷಗಳಿಂದ ಇರಬಹುದು. ಆದರೆ ತಾಯಿಯ
ಪ್ರೀತಿ ತಡವಾಗಿ ಸಿಕ್ಕರೂ ಅಮೃತದಂತಲ್ಲವೇ? ಅವಳ ಪ್ರೀತಿ, ಆಶೀರ್ವಾದ ನನ್ನ ಮೇಲಷ್ಟೇ ಅಲ್ಲ ನಾಡಿನ ಜನತೆಯ ಮೇಲೆ ನಿತ್ಯ ನಿರಂತರವಾಗಿರಲಿ ಎಂಬುದೇ ನನ್ನ ಆಶಯ.
ಸಾವಿತ್ರಿ ಶ್ಯಾನುಭಾಗ್, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ