ಹಾದಿ ತಪ್ಪಿರುವ ಸಮಾಜಕ್ಕೆ ಬೇಕಿದೆ ಕಾಯಕಲ್ಪ


Team Udayavani, Oct 5, 2022, 6:05 AM IST

ಹಾದಿ ತಪ್ಪಿರುವ ಸಮಾಜಕ್ಕೆ ಬೇಕಿದೆ ಕಾಯಕಲ್ಪ

ನಮ್ಮ ಆರಾಧನಾ ಕೇಂದ್ರಗಳು ಧರ್ಮ-ಅಧ್ಯಾತ್ಮ-ಸಂಸ್ಕಾರ-ಸಂಸ್ಕೃತಿಯ ಔನ್ನತ್ಯದ ತೊಟ್ಟಿಲುಗಳು. ಇವು ಆಯಾಯ ಭೌಗೋಳಿಕತೆಯ ಆಕರ್ಷಣೆಯ ಕೇಂದ್ರ ಬಿಂದುಗಳು. ಜತೆಗೆ ಆರಾಧನಾಲಯಗಳು ಸಮಾಜದ, ಊರು, ಪ್ರದೇಶಗಳ ಪ್ರಗತಿಯ ಮಾನದಂಡ ಕೂಡ ಎಂಬುದು ಪ್ರಾಜ್ಞರ ಅಭಿಮತ. ನಮ್ಮ ಸುತ್ತಮುತ್ತಲ ಅಸಂಖ್ಯಾತ ಆರಾಧನಾ ಕೇಂದ್ರಗಳು ನವರೂಪ ಪಡೆಯುತ್ತಿರುವುದು ಸರ್ವವಿದಿತ, ಸಂತಸಕರ. ಇನ್ನೂ ಪಾಳುಬಿದ್ದಿರುವ ಅಪಾರ ಸಂಖ್ಯೆಯ ಇಂಥ ಕೇಂದ್ರಗಳನ್ನು ಈ ಪ್ರಕ್ರಿಯೆಗೆ ಒಳಪಡಿಸುವ ಆವಶ್ಯಕತೆ ಇದೆ.

ಇಂಥ ಕಾರ್ಯಗಳಿಂದ ಸಮಾಜ, ಊರು ಮತ್ತಷ್ಟು ಚೈತನ್ಯಶಾಲಿ ಮತ್ತು ಪುನರುತ್ಥಾನಗೊಳ್ಳುವುದು ಎಂಬ ಹಿರಿಯರ ವ್ಯಾಖ್ಯಾನ ನಿಸ್ಸಂಶಯವಾಗಿ ಸಾಬೀತಾಗುತ್ತಿದೆ. ಆದರೆ ಆರಾಧನಾ ಕೇಂದ್ರಗಳು ರಾರಾಜಿಸಿದರೆ ಸಾಕೆ? ಸಮಾಜ ಕಾಯಕಲ್ಪ ಪಡೆಯಬೇಡವೆ? ಸಮಾಜ ಯಾಕೆ ಇನ್ನೂ ಹಲವಾರು ಸಮಸ್ಯೆಗಳಿಂದ ಜರ್ಝರಿತವಾಗಿದೆ? ಎಂಬ ಪ್ರಶ್ನೆ ನಮ್ಮ ಅಂತಃಕರಣವನ್ನು ಕಾಡದೇ ಇರ ಲಾರದು. ಈ ಪ್ರಶ್ನೆ ಉದ್ಭವಿಸಲು ಸಕಾರಣಗಳೂ ಇವೆ. ದುಃಖಕರ ಅಂಶಗಳೆಂದರೆ ಪ್ರಸಕ್ತ ಸಮಾಜದ ಅಪಸವ್ಯ, ದುರಂತಗಳು ಸಮಾಜದ ಪ್ರಾಮಾಣಿಕತೆ- ನೆೃತಿಕತೆಯ ವಿಫ‌ಲತೆಯನ್ನು ಬೆಟ್ಟು ಮಾಡುತ್ತಿವೆ.

ನಾನಾ ಕಾರಣಗಳಿಂದ ಸಮಾಜದ ವಿವಿಧ ಸ್ತರಗಳಲ್ಲಿ ನಡೆಯುತ್ತಿರುವ ಕೌಟುಂಬಿಕ ಕಲಹ, ಆಸ್ತಿ ವಿವಾದ, ಲಂಚ, ಭ್ರಷ್ಟಾಚಾರ, ತಂಟೆ- ತಕರಾರು- ತಗಾದೆ, ಹಿರಿಯರ ಅವಗಣನೆ, ಕೊಲೆ, ಅತ್ಯಾಚಾರ, ದಾಂಪತ್ಯದಲ್ಲಿ ಬಿರುಕು, ವಿವಿಧ ಮೋಸ-ವಂಚನೆ… ಇವೆಲ್ಲವು ನಮ್ಮ ಕಣ್ಣಿಗೆ ರಾಚುತ್ತಿವೆ. ಹಲವು ಅಪರಾಧಗಳು ನ್ಯಾಯವನ್ನೇ ಅಣಕಿಸುವಂತೆ, ಕಾನೂನಿಗೂ ಸವಾಲು ಎಸೆಯುವಂತೆ ನಡೆಯುತ್ತಿವೆ. ಪ್ರೀತಿ- ಪ್ರೇಮದ ಜಾಗವನ್ನು ದ್ವೇಷ- ಮತ್ಸರಾದಿಗಳು ಕಬಳಿಸಿವೆ. ಕರುಡು ಕಾಂಚಾಣದ ನರ್ತನ ಬಿರುಸಾಗಿದೆ. ಪ್ರಾಮಾಣಿಕತೆ-ನೆೃತಿಕತೆಗಳು ಮೂಲೆ ಗುಂಪಾಗಿವೆ. ಧರ್ಮ, ಸೇವೆ, ದಿವ್ಯ-ಪಾವನ ಧಾಮಗಳಲ್ಲಿ ದಂಧೆಗಳು ನುಸುಳಿವೆ.

ನಾನೇ, ನನ್ನ ಧೋರಣೆಗಳೇ ಸರಿ ಎಂಬ ಭ್ರಮಾ ಲೋಕದಲ್ಲಿ ವಿಹರಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅನುಕಂಪ, ಸಹನೆ, ಉಪಕಾರ ಸ್ಮರಣೆ, ಪಾಪಪ್ರಜ್ಞೆ, ವ್ಯವ ಧಾನ, ಸಂಯಮಗಳು ಮರೆಯಾಗುತ್ತಿವೆ. ವಿಶ್ವಾಸ- ನಂಬಿಕೆಗಳಿಂದ ತುಂಬಿ ತುಳುಕಬೇಕಾದ ಸಮಾಜದಲ್ಲಿ ಅವಿಶ್ವಾಸ-ಅಪನಂಬಿಕೆಗಳ ಮೇಲಾಟವಿದೆ. ಸಮಾಜದ ಅಲ್ಲಲ್ಲಿ ಮೇಲಿನ ಅಪಸವ್ಯಗಳಿಗೆ ಅಪವಾದಗಳಿದ್ದರೂ ಬಹುತೇಕ ಸಮಾಜ ಇವೆಲ್ಲವುಗಳಿಂದ ತತ್ತರಿಸಿರು ವುದಂತೂ ಅಕ್ಷರಶಃ ಸತ್ಯ. ಹೀಗಿರುವಾಗ ಸಮಾಜ ಶುದ್ಧೀ ಕರಣಗೊಂಡು ಶಿಷ್ಟಾಚಾರಗಳಿಂದ ವೆೃವಿಧ್ಯಮಯ ವಾಗಬೇಕಿದೆ. ಇತ್ತ ಇಡೀ ಸಮಾಜ ಚಿಂತನೆ ಹರಿಸಬೇಕು.

“ತಾನು ಸರಿಯಾದರೆ ಲೋಕವೇ ತಿಳಿಯಾಗುವುದು’ ಎಂಬ ಮಾತಿನಂತೆ ನಡೆದಲ್ಲಿ ನೆೃತಿಕತೆ- ಪ್ರಾಮಾಣಿಕತೆ ಯಿಂದ ಸದಾ ಸಮಾಜ ಮಿಂದಲ್ಲಿ, ಪ್ರೀತಿ- ಪ್ರೇಮದಲ್ಲಿ ವಿಹರಿಸಿದಲ್ಲಿ ಸಮಾಜ- ಲೋಕ ನವ ಸನ್ಮಾರ್ಗದ ಅರುಣೋದಯ ಕಾಣುವ ದಿನ ದೂರವಿಲ್ಲ. ಈ ಶುಭ ಘಳಿಗೆ ಬೇಗ ನಮ್ಮನ್ನು ಆವರಿಸಲಿ.

-ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.