ಕಾರಂತರ “ಇನ್ನೊಂದೇ ದಾರಿ’


Team Udayavani, Nov 10, 2020, 5:55 AM IST

Book

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

ನಡೆದಾಡುವ ವಿಶ್ವಕೋಶ ಖ್ಯಾತಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಕೆ ಶಿವರಾಮ ಕಾರಂತರ “ಇನ್ನೊಂದೇ ದಾರಿ’ಯು ಮಾನವೀಯ ಸಂವೇದನೆಯ ಕೃತಿಯಾಗಿದೆ. ಪುಟ ತಿರುವಿದಂತೆ ಕುತೂಹಲ ಮೂಡಿಸುವ ಈ ಕೃತಿಯಲ್ಲಿ ಎದುರಾಗುವ ವಾಸ್ತವಿಕ ನೆಲೆಯ ರೋಚಕ ತಿರುವುಗಳು ಮನಸ್ಪರ್ಶಿಯಾಗಿವೆ.

ಇದೊಂದು ಸಾಂಸಾರಿಕ ಕಾದಂಬರಿಯಾಗಿದ್ದು, ಕುಟುಂಬದ ಮಹತ್ವ ವನ್ನು ಸಾರುತ್ತದೆ. ಮಮತೆ, ಸಂಬಂಧಗಳ ಮಹತ್ವ, ವಾತ್ಸಲ್ಯ, ಸ್ನೇಹ, ಪ್ರೀತಿ, ಸಹಾಯ, ಅನುಕಂಪ, ಕರುಣೆ, ಶಿಕ್ಷಣ, ಸಂಶೋಧನೆ, ಮೋಸ ಮುಂತಾದವೆಲ್ಲ ಸಂಸಾರದಲ್ಲಿ ಹೇಗೆಲ್ಲ ಮನÓÕ‌ನ್ನು ಕಾಡುತ್ತವೆ ಎಂಬುದನ್ನು ಲೇಖಕರು ಮನ ಸ್ಪರ್ಶಿಯಾಗಿ ನಿರೂಪಿಸಿದ್ದಾರೆ. ಈ ಕಥೆಯಲ್ಲಿ ಸಂಸಾರದ ವಿವಿಧ ಮಜಲುಗಳು ನಮ್ಮೆದುರು ತೆರೆದುಕೊಳ್ಳುತ್ತವೆ.

ಅಜ್ಜಿ-ಮೊಮ್ಮಕ್ಕಳು, ಅತ್ತೆ-ಸೊಸೆ, ಮಕ್ಕಳ ಪಾತ್ರಗಳೊಂದಿಗೆ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಬಡತನ ಬವಣೆಯನ್ನು ನೀಗಿಸಲು ಹೊನ್ನಜ್ಜಿ ಎಂಬವರು ಮೊಮ್ಮ ಗನನ್ನು ಸಾಹುಕಾರನಿಗೆ ದತ್ತು ನೀಡುತ್ತಾರೆೆ. ಅಜ್ಜಿ ತನ್ನ ಮೊಮ್ಮಕಳಿಗೆ ಬದುಕು ಸಾಗಿಸುವ ಮಾರ್ಗವನ್ನು ಹೇಳಿಕೊಟ್ಟು ಕೊನೆ ಉಸಿರೆಳೆಯುತ್ತಾರೆ.

ಈ ಕಥೆಯ ಪ್ರಮುಖ ಕುಟುಂಬವೆಂದರೆ ನರಸಿಂಹ ಸಾಹುಕಾರ ಅವರದು. ಸಂಪ್ರದಾ ಯವಾದಿ ಹಾಗೂ ಸಾತ್ವಿಕರಾಗಿರುವ ಇವರ ಎಲ್ಲ ಕಾರ್ಯಗಳಿಗೂ ಪತ್ನಿ ಜಾನಕಿಯ ಬೆಂಬಲವಿದೆ. ದಂಪತಿಗೆ ಶ್ರೀರಾಮ ಮತ್ತು ಜಯರಾಮ ಎಂಬಿಬ್ಬರು ಮಕ್ಕಳು. ಇವರು ಬೆಳೆಯುವ ಹೊತ್ತಿಗೆ ಆಧುನಿಕ ಕಾಲಘಟ್ಟ ಆರಂಭವಾಗುತ್ತದೆ. ಸೌಮ್ಯ ಸ್ವಭಾವದ ಶ್ರೀರಾಮನು ಎಂ.ಎ. ಓದಲು ಬೆಂಗಳೂರಿಗೆ ಹೋದಾಗ ಬೇರೆ ಜಾತಿಯ ಚಂಪೆ ಎಂಬ ಯುವತಿಯೊಂದಿಗೆ ಪ್ರೀತಿ ಮೂಡಿ ಬಳಿಕ ವಿವಾಹವೂ ಆಗುತ್ತದೆ. ಚಂಪೆ ಆಧುನಿಕ ಸುಖ ಜೀವನದ ಆಸೆ ಹೊತ್ತು ಸಾಹುಕಾರನ ಸೊಸೆ ಆದವಳು. ಆಕೆಗೆ ಶ್ರೀರಾಮನ ನಿಜವಾದ ಪ್ರೀತಿ ಬೇಕಿರಲಿಲ್ಲ. ಒಂದು ಮಗುವಾದ ಬಳಿಕ ಗಂಡನನ್ನು ತೊರೆದಾಗ ಶ್ರೀರಾಮ ಕಂಗಾ ಲಾಗುತ್ತಾನೆ. ಆ ಹೊತ್ತಿಗೆ ತಮ್ಮ ಜಯರಾಮನ ಮಾತುಗಳು ಜೀವನದ ಆಸೆಯನ್ನು ಉಳಿ ಸುತ್ತವೆ. ಮುಂದೆ ಪ್ರಾಣಿಶಾಸ್ತ್ರದಲ್ಲಿ ಪಿಎಚ್‌.ಡಿ. ಮಾಡುತ್ತಾನೆ. ಕಾದಂಬರಿಯಲ್ಲಿ ಬರುವ ಪ್ರಾಣಿಶಾಸ್ತ್ರದ ಅಧ್ಯಯನ, ಪರಿಸರದ ಚಿತ್ರಣಗಳೆಲ್ಲವೂ ಕುತೂಹಲ ಮೂಡಿಸುತ್ತವೆ. ಬಳಕೆಯಾದ ಶಬ್ದಗಳು ಕಾದಂಬರಿಯ ಘನತೆ ಯನ್ನು ಹೆಚ್ಚಿಸುತ್ತವೆ.

ಕುಟುಂಬದವರು ತೋರಿಸಿದ ಪ್ರೀತಿಯು ಶ್ರೀರಾಮ ನಿಗೆ ಚಂಪೆಯ ಮೋಸವನ್ನು ಮರೆಯಲು ಸಹಕಾರಿಯಾ ಗುತ್ತದೆ. ಆತನ ಮಗುವಿನ ಪಾಲನೆಯ ಜವಾ ಬ್ದಾರಿಯನ್ನು ಜಯರಾಮ ಹೊತ್ತಿದ್ದರಿಂದಲೇ ಶ್ರೀರಾಮ ಪಿಎಚ್‌.ಡಿ. ಮಾಡಲು ಸಾಧ್ಯವಾಯಿತು.

ಕೃತಿಯಲ್ಲಿ ಮನಸ್ಸಿಗೆ ಹೆಚ್ಚು ಹತ್ತಿರವಾಗುವ ಜಯರಾಮನದ್ದು ವಿಶೇಷ ವ್ಯಕ್ತಿತ್ವ. ಶುದ್ಧ ನಾಸ್ತಿಕ, ಹೊಸ ದೃಷ್ಟಿಯಿಂದ ಅನುಭವಗಳನ್ನು ಅಳೆದು ನೋಡಿ ನಿರ್ಧಾರಕ್ಕೆ ಬರುವ ಮನಸ್ಸು. ವೈಚಾರಿಕತೆ ಮೂಸೆಯಲ್ಲಿ ತಿಕ್ಕಿತೀಡಿ ತನಗೆ ಸರಿ ಅನಿಸಿದಂತೆ ಬದುಕುವವನು. ನೇರವಾಗಿ ಮಾತಾಡುವ ಸ್ವಭಾವ. ತರ್ಕಶಾಸ್ತ್ರದ ದರ್ಶನದಲ್ಲಿ ಅಭ್ಯಾಸ ಮಾಡಿದವನು.

ಹಿರಿಯರ ಪ್ರಾಮಾಣಿಕತೆಯನ್ನು ಒಪ್ಪಿಕೊಂಡು ಮುಂದಿನವರು ಸಾಗಬೇಕಾದರೂ “ಕೇವಲ ಪ್ರಾಮಾಣಿಕತೆ ಮಾತ್ರವೇ ಸತ್ಯದ ಅರಿವಿಗೆ ಪೂರ್ಣವಲ್ಲ’, “ಅಪೂರ್ಣ ಅರಿವು ಕೂಡ ಜೀವನ ನಡೆಸಲು ಸಾಲದು’ ಮುಂತಾದ ವಿಷ ಯವನ್ನು ಲೇಖಕರು ಕೃತಿಯಲ್ಲಿ ತಿಳಿಸಿ¨ªಾರೆ.
ಅಂಧತ್ವದ ಪೊರೆ ಕಳಚಿ ಕುಟುಂಬದಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ, ಸಹಕಾರ ಬೆಳೆದು ಪ್ರಜ್ಞಾವಂತ ಜೀವನ ನಡೆಸುವ ಮಾರ್ಗವನ್ನು ಈ ಕಾದಂಬರಿ ತಿಳಿಸುತ್ತದೆ.

-ಲಕ್ಷ್ಮೀ ಬಿ., ಕಲಬುರಗಿ

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.