ಮಾತೇ ಮುತ್ತು;  ಮಾತೇ ಮೃತ್ಯು


Team Udayavani, May 8, 2021, 6:00 AM IST

ಮಾತೇ ಮುತ್ತು;  ಮಾತೇ ಮೃತ್ಯು

ಈ ಪ್ರಪಂಚದಲ್ಲಿ ಮಾನವ ಇತರೆಲ್ಲ ಜೀವಿಗಳಿಗಿಂತ ವಿಭಿನ್ನನಾಗಿ, ಶ್ರೇಷ್ಠನಾಗಿ ಗುರುತಿಸಿಕೊಳ್ಳಲು ಪ್ರಮುಖ ಕಾರಣ ಎಂದರೆ ಆತನಿಗೆ ಪ್ರಕೃತಿದತ್ತ ವಾಗಿ ಬಂದಿರುವ ಬುದ್ಧಿಶಕ್ತಿಯೇ ಕಾರಣ. ಹಾಗೆಂದ ಮಾತ್ರಕ್ಕೆ ಉಳಿದ ಪ್ರಾಣಿ

ಗಳಿಗೆ ಈ ಶಕ್ತಿ ಇಲ್ಲ ಎಂದಲ್ಲ.   ಬುದ್ಧಿಮತ್ತೆ ಯಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಮಾನವ ನಿಗೆ ಸಾಧ್ಯವಿದೆ. ಇನ್ನು ಮಾತು ಮಾನವನಿಗೆ ದೇವರು ನೀಡಿರುವ ಇನ್ನೊಂದು ಮಹತ್ವದ ಕೊಡುಗೆ. ಆದರೆ ಮಾತು ಎಷ್ಟು ಅಮೂಲ್ಯವೋ ಅಷ್ಟೇ ಅಪಾಯಕಾರಿಯೂ ಹೌದು. ಈ ಅದ್ಭುತ ಶಕ್ತಿಯ ಕಾರಣದಿಂದಾಗಿಯೇ ಮನುಷ್ಯನು ಸೃಷ್ಟಿಯ ಉಳಿದ ಪ್ರಾಣಿಗಳಿ ಗಿಂತ ಭಿನ್ನನಾಗಿರುವುದು. ಮಾತಿನಿಂದಲೇ ಓರ್ವನ ವ್ಯಕ್ತಿತ್ವವನ್ನು ನಿರ್ಧರಿಸಬಹುದು. ಮಾನವ ಮೀನಿನಂತೆ ಈಜುವುದನ್ನು, ಹಕ್ಕಿಯಂತೆ ಹಾರುವುದನ್ನು, ಗ್ರಹಗಳ ಲೋಕದಲ್ಲಿ ತೇಲುವುದನ್ನು ಕಲಿತ. ಆದರೆ ಯಾರೊಡನೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯುವಲ್ಲಿ ಸೋತ ಎಂದು ಎಷ್ಟೋ ಬಾರಿ ನಮಗೆ ಅನಿಸುವುದಿದೆ. ಮಾತುಗಾರಿಕೆ ಎಲ್ಲರಿಗೂ ಸಿದ್ಧಿಸಲಾರದು. ಅದೂ ಒಂದು ಕಲೆ.

“ನಾಲಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು’ ಎನ್ನುವ ಹಾಗೆ ನಾವಾಡುವ ಒಂದು ಮಾತು ಒಳ್ಳೆಯ ಸಂಬಂಧವನ್ನು ಬೆಸೆಯಲೂಬಹುದು. ಒಂದು ಮಧುರವಾದ ಸಂಬಂಧವನ್ನು ಮುರಿಯಲೂಬಹುದು. ನಾವಾಡುವ ಒಂದು ಪ್ರೇರಣೆಯ ಮಾತು ಎಲ್ಲವನ್ನೂ ಕಳೆದುಕೊಂಡು ಹತಾಶನಾದ ಒಬ್ಬ ವ್ಯಕ್ತಿಯಲ್ಲಿ ಆಶಾಭಾವನೆಯನ್ನು ಮೂಡಿಸಬಹುದು, ಅದೇ ಒಂದು ಕುಹಕದ ಮಾತು ಗೆಲುವಿನ ತುತ್ತ ತುದಿಯಲ್ಲಿ ಇದ್ದವನನ್ನೂ ಪಾತಾಳಕ್ಕೆ ತಳ್ಳಬಹುದು.

ಮಂಥರೆಯ ಚಾಡಿಮಾತು ರಾಮಾಯಣವನ್ನೇ ಸೃಷ್ಟಿಸಿತು, ಕೃಷ್ಣನ ನೀತಿಮಾತು ಪಾಂಡವರನ್ನು ಗೆಲುವಿನ ದಡ ಸೇರಿಸಿತು. ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಹಲವು ಸಾಮ್ರಾಜ್ಯಗಳ ಅಳಿವು-ಉಳಿವಿಗೆ ಮಾತೇ ಕಾರಣವಾಗಿದ್ದನ್ನು ತಿಳಿಯಬಹುದು. ಧನನಂದನ ಒಂದು ಮಾತು ಚಾಣಕ್ಯನಿಂದ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ನಾಂದಿಯಾಯಿತು. ಶಕುನಿಯ ಕುಹಕದ ಮಾತು ದುರ್ಯೋಧನನ ವಿನಾಶಕ್ಕೆ ಕಾರಣವಾದರೆ ಅದೇ ಗೌತಮನ ಪ್ರೀತಿಯ ಮಾತು ಅಂಗುಲಿಮಾಲನ ಮನಃಪರಿವರ್ತನೆಗೆ ಕಾರಣವಾಯಿತು. ನಾವಾಡುವ ಒಂದು ಮಾತು ಐಸ್‌ ಕ್ರೀಂ ತಿಂದಷ್ಟೇ ಮನಸ್ಸಿಗೆ ತಂಪಾಗಲೂಬಹುದು ಇಲ್ಲವೆ ಸೂಜಿಯ ಮೊನೆ ಚುಚ್ಚಿದ ಅನುಭವವನ್ನು ನೀಡಬಹುದು.

ನಾವಾಡುವ ಮಾತು ಹಿತವಾಗಿ ರಬೇಕು, ಮಿತವಾಗಿರಬೇಕು ಹದವಾದ ತೂಕದಿಂದ ಕೂಡಿರಬೇಕು. ಮಾತು ಹಗುರವಾಗಿರಲೂ ಬಾರದು, ಭಾರವಾಗಿರಲೂ ಬಾರದು. ಯಾರೊಂದಿಗೆ, ಯಾವಾಗ, ಎಲ್ಲಿ, ಎಷ್ಟು ಮಾತನಾಡಬೇಕು ಎಂಬುದನ್ನು ತಿಳಿದಿರಬೇಕು. ಮಾತು ಅತಿಯಾದರೆ ವಾಚಾಳಿ, ಬಾಯಿ ಚಪಲ ಎನ್ನುತ್ತಾರೆ. ಕಡಿಮೆಯಾ ದರೆ ಮೂಕ ಎನ್ನುತ್ತಾರೆ. ಕೆಲವರು ಕಠಿನ ಹೃದಯಿಗಳಾದರೂ ತಮ್ಮ ನಾಜೂಕಿನ ಮಾತಿನ ಮೂಲಕ ಒಳ್ಳೆಯವರೆಂದೆನಿಸಿ ಕೊಳ್ಳುತ್ತಾರೆ. ಇನ್ನು ಕೆಲವರು ಮೃದು ಮನಸ್ಸಿನವರಾದರೂ ಮಾತನಾಡಲು ಬಾರದೆ ಕೆಟ್ಟವರಾಗಿಬಿಡುತ್ತಾರೆ.

ಮಾತನಾಡುವುದು ಒಂದು ಕಲೆ, ಅದು ಎಲ್ಲರಿಗೂ ಸುಲಭವಾಗಿ ಸಿದ್ದಿಸದು. “ಎಲುಬಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂದು ದಾಸ ಶ್ರೇಷ್ಠರು ಹೇಳಿದ ಹಾಗೆ ಕೆಲವು ಸಂದರ್ಭಗಳಲ್ಲಿ ಮೂಕನೆನಿಸಿದರೂ ಪರವಾಗಿಲ್ಲ. ಪರರ ಮನಸ್ಸಿಗೆ ನೋವುಂಟು ಮಾಡುವಂತೆ ಮಾತನಾಡಬಾರದು. ಬಾಯಿಯಿಂದ ಹೊರಬಿದ್ದ ಮಾತು ಮತ್ತು ಬಿಲ್ಲಿನಿಂದ ಹೊರಟ ಬಾಣ ಹಿಂದಿರುಗಿಬಾರದು. ಮಾತನಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಮಾತನಾಡಬೇಕು. ಕೆಲವರು ಮಾತನ್ನೇ ಬಂಡವಾಳವಾಗಿ ಮಾಡಿಕೊಂಡಿರುತ್ತಾರೆ “ಮಾತೆ ಸಕಲಸಂಪದವು’ ಎಂಬಂತೆ ಮೋಹಕ ಮಾತಿನಿಂದಲೇ ಎಲ್ಲವನ್ನು ಸಂಪಾದಿಸಿ ಕೊಳ್ಳುತ್ತಾರೆ. ಅದೇ ಮಾತಿನಿಂದಲೆ ಸಕಲವನ್ನು ಕಳೆದುಕೊಂಡದ್ದೂ ಇದೆ. ಕೇವಲ ಒಂದು ಮಾತು ಜೀವಕ್ಕೆ ಕುತ್ತು ತಂದ ಹಲವು ಘಟನೆಗಳನ್ನು ನೋಡಬಹುದು. ಅದಕ್ಕೆ ಹೇಳುವುದು “ಮಾತೇ ಮುತ್ತು, ಮಾತೇ ಮೃತ್ಯು’ ಎಂದು. ಮಾತು ಹಿತಮಿತವಾಗಿದ್ದರೆ ಆರೋಗ್ಯಕ್ಕೂ ಒಳ್ಳೆಯದು, ಸಂಬಂಧಕ್ಕೂ ಒಳ್ಳೆಯದು. ಮಾತಿನ ಮೂಲಕ ಒಳ್ಳೆಯ ಸಂಬಂಧಗಳನ್ನು ಬೆಸೆಯೋಣ.

 

- ಭಾಸ್ಕರ ಪೂಜಾರಿ, ನಡೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.