ಬೃಹತ್‌ ಸಾಮ್ರಾಜ್ಯದ ಅಷ್ಟಾಂಗ ಪಂಚಾಂಗ


Team Udayavani, Nov 26, 2022, 5:30 AM IST

ಬೃಹತ್‌ ಸಾಮ್ರಾಜ್ಯದ ಅಷ್ಟಾಂಗ ಪಂಚಾಂಗ

ಕೆಲಸದ ಹಿಂದೆ ಒಳ್ಳೆಯ ದೃಷ್ಟಿ, ಮುದ ನೀಡುವ ಮಾತು, ಯೋಗ್ಯ ನಡವಳಿಕೆ, ನಡೆ- ನುಡಿಗೆ ಏಕಸೂತ್ರತೆ, ಪ್ರಾಮಾಣಿಕ ಪ್ರಯತ್ನ, ಪರಿಶುದ್ಧ ಆಲೋಚನೆಯೇ ಮೊದಲಾದ ಅಷ್ಟಾಂಗ ಮಾರ್ಗಗಳನ್ನು ಗೌತಮ ಬುದ್ಧ ಬೋಧಿಸಿದ್ದ. ಇವುಗಳನ್ನು ಯಮ, ನಿಯಮ ಗಳಲ್ಲಿರಿಸಿ ಅಷ್ಟಾಂಗ ಯೋಗವನ್ನು ಪತಂಜಲಿ ಪ್ರಚುರಪಡಿ
ಸಿದ. ದಶೋಪ ನಿಷತ್ತುಗಳೂ ಇದೇ ಮೂಲ ಸ್ರೋತವನ್ನು ಪ್ರತಿಪಾದಿಸಿದವು.

ಇವೆಲ್ಲದರ ಸಾರಸರ್ವಸ್ವ ದಂತಿರುವ ಭಗವದ್ಗೀತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡ ತೋನ್ಸೆ ಉಪೇಂದ್ರ ಪೈಯವರು (26.11.1895  -13.12.1956) 1920-21ರಲ್ಲಿ ಉಡುಪಿಯಲ್ಲಿ ರಾಷ್ಟ್ರೀಯ ಶಾಲೆಯನ್ನು ಆರಂಭಿಸಿ ಈಗ ಶತಮಾನ ಕಳೆದಿದೆ. ಇದಾದ ಬಳಿಕ ಉಪೇಂದ್ರ ಪೈಯವರು ಸಹೋದರ ಡಾ|ಟಿಎಂಎ ಪೈಯವರ ಜತೆ ಮಣಿಪಾಲಕ್ಕೆ ಬಂದುದು, ಉಪೇಂದ್ರ ಪೈಯವರ ಪ್ರೋತ್ಸಾಹದಲ್ಲಿ ಡಾ| ಟಿಎಂಎ ಪೈಯವರು ಆಧುನಿಕ ಮಣಿಪಾಲ ವನ್ನು ನಿರ್ಮಿಸಲು ಮುಂದಾದದ್ದು, ಈಗ ಕಾಣುತ್ತಿರುವ 50ಕ್ಕೂ ಹೆಚ್ಚು ರಾಷ್ಟ್ರಗಳ ವಿದ್ಯಾರ್ಥಿಗಳು ಕಲಿಯುತ್ತಿರುವ ಮಣಿಪಾಲದ ಬೃಹತ್‌ ಸಾಮ್ರಾಜ್ಯಕ್ಕೆ ಶತಮಾನದ ಹಿಂದೆ ಆರಂಭಿಸಿದ ರಾಷ್ಟ್ರೀಯ ಶಾಲೆಯ ಸದುದ್ದೇಶದ ಪಂಚಾಂಗ ಇರುವುದನ್ನು ಉಪೇಂದ್ರ ಪೈಯವರ ಜನ್ಮದಿನದ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ.

ಉಡುಪಿ-ಮಂಗಳೂರು ಕಾಲ್ನಡಿಗೆ
1920ರ ಆಗಸ್ಟ್‌ 1ರಂದು ಮಹಾತ್ಮಾ ಗಾಂಧೀಜಿಯವರು ಬ್ರಿಟಿಷ್‌ ಸರಕಾರಕ್ಕೆ ಸಹಕಾರ ಕೊಡದೆ ಇರುವ ಅಸಹಕಾರ ಚಳವಳಿಗೆ ಕರೆ ಕೊಟ್ಟು ಆಗಸ್ಟ್‌ 19ರಂದು ಮಂಗಳೂರಿಗೆ ಪ್ರಥಮ ಬಾರಿಗೆ ಭೇಟಿ ಕೊಟ್ಟರು. ಆಗಲೇ ಗಾಂಧೀಜಿಯವರಿಂದ ಪ್ರಭಾವಕ್ಕೆ ಒಳಗಾದ ಉಪೇಂದ್ರ ಪೈಯವರು ತಮ್ಮ ಟಿ.ರಘುನಾಥ ಪೈಯವರ (ಟಿಆರ್‌ಎ ಪೈ) ಜತೆ ಉಡುಪಿಯಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲಿ ಹೋಗುವ ಸಂಕಲ್ಪ ಮಾಡಿ ಅದರಂತೆ ಸಾಗಿದರು. ಹಿಂದಿರುಗಿದವರೇ ಅಸಹಕಾರ ಚಳವಳಿ ಕುರಿತು ಪ್ರಚಾರ ಮತ್ತು ಜಾಗೃತಿ ಆಂದೋಲನ ನಡೆಸಿದರು. ಅಸಹಕಾರ ಚಳವಳಿಯಲ್ಲಿ ಸರಕಾರದ ಶಾಲೆಗಳಲ್ಲಿ ಕಲಿಯು ತ್ತಿರುವವರು ಶಾಲೆ ಬಿಡುವುದೂ ಒಂದಾಗಿತ್ತು. ಉಡುಪಿಯ ಮುಕುಂದ ನಿವಾಸವು ಪೈ ಸಹೋದರರ ನಿವಾಸಸ್ಥಾನವಾಗಿತ್ತು. ಅಲ್ಲಿ ಸಭೆ ಸೇರಿ ಸರಕಾರದ ಶಾಲೆ ಬಿಟ್ಟ ಮಕ್ಕಳಿಗೆ ಪರ್ಯಾಯ ಕಲಿಕೆಗಾಗಿ ರಾಷ್ಟ್ರೀಯ ಶಾಲೆ ಆರಂಭಿಸಲು ನಿರ್ಣಯ ತಳೆದರು. ಇದಕ್ಕೆ ಸಂಪನ್ಮೂಲದ ಕೊರತೆಯಾಗದಂತೆ ಸಂಪೂರ್ಣ ನೇತೃತ್ವವನ್ನು ವಹಿಸಿಕೊಂಡವರು ಉಪೇಂದ್ರ ಪೈಯವರು. ಸ್ವತಃ ಅವರೇ ದೇಶಭಕ್ತಿಯ ಪಾಠ ಮಾಡುತ್ತಿದ್ದರು.

ಸ್ವದೇಶೀವ್ರತ-ಖಾದಿ ಭಂಡಾರ
ಅಸಹಕಾರದ ಇನ್ನೊಂದು ಆಯಾಮ ಸ್ವದೇಶೀ ಆಂದೋಲನ. ಖಾದಿಯನ್ನು ಧರಿಸುತ್ತಿದ್ದ ಪೈಯವರು, ಸ್ವದೇಶೀವ್ರತಕ್ಕೆ ಸ್ಥಳೀಯತೆಯನ್ನು ಅನ್ವಯಿಸಿದರು. ಕೈಮಗ್ಗ ವೃತ್ತಿಯಲ್ಲಿದ್ದ ನೇಕಾರರ ಕಸುಬಿಗೆ ಸಹಕಾರಿ ತಣ್ತೀದ ಸಂಘವನ್ನು ಸ್ಥಾಪಿಸಿದರು. ಉಡುಪಿಯಲ್ಲಿ ಖಾದಿ ಭಂಡಾರವನ್ನು ಪ್ರಥಮವಾಗಿ ಆರಂಭಿಸಿದರು. ಖಾದಿ ಪ್ರಚಾರದಲ್ಲಿ ಇವರಿಗೆ ಕೈಜೋಡಿಸಿದ ಕಾಡಬೆಟ್ಟು ಶ್ರೀನಿವಾಸ ಪೈಯವರ ಖಾದಿ ಭಂಡಾರವನ್ನು 1934ರಲ್ಲಿ ಗಾಂಧೀಜಿಯವರು ಉಡುಪಿಗೆ ಬಂದಾಗ ಉದ್ಘಾಟಿಸಿದರು ಎನ್ನುವುದನ್ನು ಕಣ್ಣಾರೆ ಕಂಡ ಹಿರಿಯ ಪತ್ರಕರ್ತ ದಿ|ಎಂ.ವಿ.ಕಾಮತ್‌ ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರಕ್ಕೆ ನೀಡಿದ ಸಂದರ್ಶನದಲ್ಲಿ ಉಲ್ಲೇಖೀಸಿದ್ದಾರೆ.

ಸ್ವದೇಶೀ ಆರ್ಥಿಕ ನೀತಿ
ಸ್ವದೇಶೀ ಚಿಂತನೆಯಡಿ ಆರಂಭಗೊಂಡ ಬೆಂಗಾಲ್‌ ಕೆಮಿಕಲ್ಸ್‌ ಉತ್ಪನ್ನಗಳಿಗೆ ಕರಾವಳಿಯಲ್ಲಿ ಪ್ರಚಾರ ಕೊಟ್ಟವರು ಉಪೇಂದ್ರ ಪೈಯವರು, ಸ್ವದೇಶೀ ಆರ್ಥಿಕ ವ್ಯವಸ್ಥೆ ನೀತಿಯಡಿ ಡಾ| ಟಿಎಂಎ ಪೈಯವರ ಜತೆ 1925ರಲ್ಲಿ ಕೆನರಾ ಇಂಡಸ್ಟ್ರಿಯಲ್‌ ಬ್ಯಾಂಕಿಂಗ್‌ ಸಿಂಡಿಕೇಟ್‌ (ಸಿಂಡಿಕೇಟ್‌ ಬ್ಯಾಂಕ್‌) ಆರಂಭಿಸಿದರು. ಉಡುಪಿ, ಮಣಿಪಾಲದ ಹಲವು ಹೊಸತುಗಳಿಗೆ ಬೀಜಾಕ್ಷರ ಬರೆದವರೂ ಇವರೆಂದರೆ ತಪ್ಪಲ್ಲ. 1941ರಲ್ಲಿ ರಾಮಕೃಷ್ಣ ಥಿಯೇಟರ್‌ (ಈಗಿನ ಅಲಂಕಾರ್‌ ಥಿಯೇಟರ್‌) ಆರಂಭಿಸಿದರು. ಇದೇ ವೇಳೆ ವಿದ್ಯುತ್‌ ಸರಬರಾಜು, ಟೆಲಿಫೋನ್‌ ಎಕ್ಸ್‌ಚೇಂಜ್‌ ಕೇಂದ್ರ ಸ್ಥಾಪನೆ, ಹೊಟೇಲ್‌ಗ‌ಳ ಸ್ಥಾಪನೆಗೆ ಪ್ರೋತ್ಸಾಹ ನೀಡಿದರು.

ಭಗವದ್ಗೀತೆ ಪ್ರಭಾವ
ಹಿಂದಿ- ಸಂಸ್ಕೃತ ಪ್ರಚಾರಕ್ಕಾಗಿ ಜೀವನ ಮುಡಿ ಪಾಗಿಟ್ಟ ದಿ| ಉದ್ಯಾವರ ಲಕ್ಷ್ಮೀನಾರಾಯಣ ಕಿಣಿ
ಯವರು (ಉ.ಲ.ಕಿಣಿ) ಭಗವದ್ಗೀತೆ ಉಪೇಂದ್ರಪೈಯವರ ಮೇಲೆ ಎಷ್ಟು ಪ್ರಭಾವ ಬೀರಿತ್ತು ಎನ್ನುವುದನ್ನು “ಉಪೇಂದ್ರ ಪೈ ಮತ್ತು ಭಗ ವದ್ಗೀತೆ’ ಕೃತಿಯಲ್ಲಿ ತಿಳಿಸಿದ್ದಾರೆ. ಮಣಿಪಾಲದ ಗೀತಾ ಮಂದಿರದ ತೋಟದಲ್ಲಿದ್ದ ಪಪ್ಪಾಯಿ ಗಿಡದಿಂದ ಹಣ್ಣುಗಳನ್ನು ಕದ್ದು ಹೋಗುತ್ತಿದ್ದ ಮಹಿಳೆ ಯೊಬ್ಬಳಿಗೆ “ಈ ಮರ ನಿನಗೆ ಕೊಟ್ಟಿದ್ದೇನೆ. ಇನ್ನು ಮುಂದೆ ಹಗಲಿನಲ್ಲಿ ಹಣ್ಣುಗಳನ್ನು ತೆಗೆದುಕೊಂಡು ಹೋಗು’ ಎಂದು ಪ್ರೀತಿಯಿಂದಲೇ ಹೇಳಿದ್ದರು ಎಂಬಂತಹ ಅನೇಕ ನಡೆ-ನುಡಿಯ ಏಕಸೂತ್ರತೆ ವಿಚಾರಗಳು ಈ ಕೃತಿಯಲ್ಲಿವೆ.

ಇಂತಹವರ ಕೊನೇ ಕ್ಷಣ ಹೇಗಿರಬಹುದು? ಉ.ಲ.ಕಿಣಿಯವರು ಗೀತಾ ಮಂದಿರದಲ್ಲಿ ಹಿಂದಿ ತರಗತಿ ನಡೆಸುತ್ತಿದ್ದರು. ಆ ದಿನ ಉಪೇಂದ್ರ ಪೈಯವರಿಗೆ ಹುಷಾರಿರಲಿಲ್ಲ. ಕಿಣಿಯವರು ಮಾತನಾಡಿಸಲು ಹೋದಾಗ “ತರಗತಿಗೆ ನಾನೂ ಸೇರಿಕೊಳ್ಳುತ್ತೇನೆ. ಏನೇ ಕೆಲಸ ಮಾಡು ಜನ ಮೆಚ್ಚುವಂತಹ ಕೆಲಸ ಮಾಡು’ ಎಂದು ಹೇಳಿದರು. ಕಿಣಿಯವರು ನಿರ್ಗಮಿಸಿದರು. ಇದಾದ 20 ನಿಮಿಷಗಳಲ್ಲಿ ಡಾ|ಮಾಧವ ಪೈಯವರನ್ನು ಕರೆಯಲು ಸೂಚಿಸಿದ್ದರು. ಡಾ| ಪೈಯವರು ತಮ್ಮೆಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರು. “ಹಾಗೇನಿಲ್ಲವೋ! ಈಗ ಚೆನ್ನಾಗಿದ್ದೇನೆ. ಎದೆ ನೋವೂ ಇಲ್ಲ. ತುಂಬ ಗೆಲುವಾಗಿದ್ದೇನೆ’ ಎಂದು ಒಮ್ಮೆಲೆ ಎದ್ದು ನಿಂತ ಉಪೇಂದ್ರ ಪೈಯವರ ಕಾಲುಗಳು ಥರಥರ ಕಂಪಿಸತೊಡಗಿದವು. ಡಾ| ಪೈಯವರು ಅಣ್ಣನನ್ನು ಆಧರಿಸಲು ಹೋದಾಗ ಗಂಭೀರ ಧ್ವನಿ ಮೊಳಗಿತು: “ಯಾಕೆ ಗಾಬರಿಯಾಗುವೆ? ನನಗೇನೂ ಆಗಿಲ್ಲವೋ, ಆಗುವುದಿಲ್ಲವೋ!’ ಎನ್ನುತ್ತ ಬವಳಿ ಬಂದು ರಾಮಕೃಷ್ಣ ಪರಮಹಂಸರ ಭಾವಚಿತ್ರದ ಮುಂದೆ ದೊಪ್ಪನೆ ಬಿದ್ದುಬಿಟ್ಟರು. ಮಾತು ಸ್ತಬ್ಧವಾಗಿತ್ತು…

ಸಹೋದರತ್ರಯರ ಯೋಗತ್ರಯ
ಟಿ. ರಘುನಾಥ ಪೈಯವರು
(ಟಿಆರ್‌ಎ ಪೈ) ಉಪೇಂದ್ರ ಪೈಯವರ ಕಿರಿಯ ಸಹೋದರ. ಇವರು ಕೆನರಾ ಮ್ಯೂಚುವಲ್‌ ಅಶ್ಯುರೆನ್ಸ್‌ ಲಿ. ಮುಖ್ಯಸ್ಥರಾಗಿದ್ದರು. ಭಗವದ್ಗೀತೆ, ವಿಷ್ಣುಸಹಸ್ರ ನಾಮವನ್ನು ನಿತ್ಯ ಪಠಿಸುತ್ತಿದ್ದ ಅಂಶಗಳೂ ಸೇರಿದಂತೆ ಉಪೇಂದ್ರ ಪೈಯವರ ಕುರಿತು ಹಲವು ಅಪೂರ್ವ ಮಾಹಿತಿಗಳನ್ನೂ ಲೇಖನದ ಮೂಲಕ ದಾಖಲಿಸಿದವರು ಇವರು. ಉಪೇಂದ್ರ ಪೈಯವರಲ್ಲಿ ಭಗವದ್ಗೀತೆಯ ಜ್ಞಾನಯೋಗ, ಡಾ|ಟಿ.ಮಾಧವ ಪೈಯವರಲ್ಲಿ ಕರ್ಮಯೋಗ, ಟಿಆರ್‌ಎ ಪೈಯವರಲ್ಲಿ ಭಕ್ತಿಯೋಗದ ಮಾದರಿಗಳನ್ನು ನೋಡಬಹುದಿತ್ತು ಎಂದು ಕೆನರಾ ಮ್ಯೂಚುವಲ್‌
ಉದ್ಯೋಗಿಯಾಗಿದ್ದ ಉಡುಪಿ ಬಡಗಪೇಟೆ ನಿವಾಸಿ ಅನಂತಕೃಷ್ಣ ರಾವ್‌ ಬೆಟ್ಟು ಮಾಡಿದ್ದರು.

-ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.