4.37 ಲಕ್ಷಕ್ಕೆ ಮಾರಾಟವಾಯ್ತು ಈ ಸಣ್ಣ ಹಾವಿನ ಮರಿ : ವಿಶೇಷ ಏನಿದೆ ಗೊತ್ತಾ?
ಇದು ಅಪರೂಪದ ಹೆಬ್ಬಾವಿನ ಮರಿ..
Team Udayavani, Mar 10, 2021, 5:28 PM IST
ಪ್ರಕೃತಿಯೇ ಹಾಗೆ ತನ್ನ ಮಡಿಲಲ್ಲಿ ಚಿತ್ರ ವಿಚಿತ್ರವಾದ ಜೀವಿಗಳನ್ನು ಇಟ್ಟುಕೊಂಡಿದೆ. ನಾವು ಯಾವತ್ತೂ ನೋಡದ ರೀತಿಯ ಪ್ರಾಣಿಗಳು ಈ ಭೂಮಿಯ ಮೇಲೆ ಇವೆ. ಇನ್ನು ಹಾವುಗಳ ವಿಚಾರವನ್ನು ಹೇಳುವುದಾದರೆ ನೂರಾರು ಬಗೆಯ ಹಾವುಗಳ ಪ್ರಭೇದಗಳು ಈ ಭೂಮಿಯ ಮೇಲೆ ನಾವು ಕಾಣಬಹುದು.
ಇನ್ನು ಕೆಲವರು ಹಾವುಗಳನ್ನು ಸಾಕುವ ಮತ್ತು ಮಾರಾಟ ಮಾಡುವ ಕೆಲಸವನ್ನೇ ಮಾಡುತ್ತಿದ್ದಾರೆ. ಹೀಗೆ ಅಮೆರಿಕಾದ ಜೆಸ್ಟಿನ್ ಎಂಬುವವರು ಹಾವುಗಳನ್ನು ಸಾಕಾಣೆ ಮಾಡುತ್ತಿದ್ದು ಅಪರೂಪದ ತಳಿಯ ಹಾವಿನ ಮರಿಗಳನ್ನು ಬ್ರೀಡ್ ಮಾಡಿಸಿದ್ದಾರೆ. ಈ ಹಾವು ಸದ್ಯ ನೆಟ್ಟಿಗರಿಗೆ ಆಕರ್ಷಕವಾಗಿದೆ.
ಹೌದು ಈ ಜೆಸ್ಟಿನ್ ಎಂಬ ವ್ಯಕ್ತಿ ಕಳೆದ 20 ವರ್ಷಗಳಿಂದ ಹೆಬ್ಬಾವಿನ ಮರಿಗಳನ್ನು(ಪೈಥಾಣ್) ಸಾಕಿ ಮಾರಾಟ ಮಾಡುವ ಕೆಲಸದಲ್ಲಿ ಇದ್ದಾರೆ. ಇದೀಗ ಬಾಲ್ ಪೈಥಾನ್ ಎಂಬ ಹಾವಿನ ಮರಿಯನ್ನು ಬ್ರೀಡ್ ಮಾಡಿದ್ದು, ಅದು ಹಳದಿ ಮತ್ತು ಬಿಳಿಯ ಬಣ್ಣದಿಂದ ಕೂಡಿದೆ.
View this post on Instagram
ಅರೇ.. ಅದರಲ್ಲೇನಿದೆ ವಿಶೇಷ ಅಂದ್ರಾ.. ವಿಶೇಷತೆ ಇದೆ. ಆ ಹೆಬ್ಬಾವು ಮರಿಯ ಚರ್ಮದ ಮೇಲೆ ಮೂರು ಸ್ಮೈಲಿ ಎಮೋಜಿಗಳು ಇವೆ. ಇದನ್ನು ನೋಡಿದ ಸ್ವತಃ ಜೆಸ್ಟಿನ್ ಆಶ್ಚರ್ಯಗೊಂಡಿದ್ದಾರೆ.
ಇಷ್ಟೆ ಅಲ್ಲದೆ ಈ ಹಳದಿ ಮತ್ತು ಬಿಳಿ ಬಣ್ಣದ ಬಾಲ್ ಪೈಥಾನ್ ಹಾವಿನ ಚರ್ಮದ ಮೇಲೆ ನಾನಾ ರೀತಿ ಚಿತ್ರಗಳು ಇವೆ. ಇದು ನೋಡಲು ಆಕರ್ಷಕವಾಗಿದ್ದು, ಬರೋಬ್ಬರಿ 4.37 ಲಕ್ಷಕ್ಕೆ ಮಾರಾಟವಾಗಿದೆ.
ಹಾವು ಸಾಕಾಣೆ ಮಾಡುವ ಜೆಸ್ಟಿನ್ ಹೇಳುವ ಹಾಗೆ, ಈ ರೀತಿಯ ಸ್ಮೈಲಿ ಎಮೋಜಿಗಳು ಅಪರೂಪಕ್ಕೆ ಒಂದರಂತೆ ಹಾವಿನ ಮರಿಗಳಲ್ಲಿ ಕಾಣುತ್ತಿದ್ದವು. ಆದ್ರೆ ಈ ಒಂದು ಹಾವಿನ ಮರಿ ಮೇಲೆ ಮೂರು ಸ್ಮೈಲಿ ಎಮೋಜಿಗಳು ಇರುವುದು ತುಂಬಾ ವಿಶೇಷವಾಗಿದೆ ಎಂದಿದ್ದಾರೆ.
ಸದ್ಯ ಈ ಬಾಲ್ ಪೈಥಾನ್ ಮರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆನಂದಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್