ವಿದುಷಿ ಪಂಚಮಿ ಫಡ್ಕೆ ಅವರಿಂದ ನೃತ್ಯ ಸುಧಾ
Team Udayavani, Apr 10, 2021, 6:24 PM IST
ಇಲ್ಲಿನ ಕರ್ನಾಟಕ ಸಾಂಸ್ಕೃತಿಕ ಸಂಘದ “ನಿಮ್ಮಲ್ಲಿಗೆ ಕನ್ನಡ ಕೂಟ’ ಕಾರ್ಯಕ್ರಮದಲ್ಲಿ ವಿದುಷಿ ಪಂಚಮಿ ಫಡ್ಕೆ ಅವರಿಂದ ನೃತ್ಯ ಸುಧಾ- ಭರತನಾಟ್ಯ ಪ್ರದರ್ಶನ ಮಾ. 25ರಂದು ವರ್ಚುವಲ್ ಮೂಲಕ ನಡೆಯಿತು.
ಕಾರ್ಯಕ್ರಮ ನಿರೂಪಿಸಿದ ಧರಣಿ ದೀಕ್ಷಿತ್ ಅವರು, ಸದಸ್ಯತ್ವ ನೋಂದಣಿ ನವೀಕರಣಗೊಳಿಸಲು ಸೂಚಿಸಿದರು. ಅಕ್ಷಯಪಾತ್ರೆ ದೇಣಿಗೆ ಸಂಗ್ರಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದರು.
ಅನುರಾಧಾ ಮೇಲ್ಕೋಟೆ ಅವರು ಪಂಚಮಿ ಫಡ್ಕೆ ಅವರನ್ನು ಪರಿಚಯಿಸಿದರು. ವಿಜಯೇಂದ್ರ ರಾವ್ ಅವರು ನೃತ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಗುರುಪ್ರಸಾದ್ ರಾವ್ ಅವರು ಧನ್ಯವಾದ ಸಲ್ಲಿಸಿದರು.
ಸಿಂಗಾಪುರ ಕನ್ನಡ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ :
ಕನ್ನಡ ಸಂಘ ಸಿಂಗಾಪುರದ 2021- 23ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ವೆಂಕಟರತ್ನಯ್ಯ, ಉಪಾಧ್ಯಕ್ಷರಾಗಿ ಸತೀಶ್ ಆರ್.ಎಲ್., ಗೌರವ ಕಾರ್ಯದರ್ಶಿಯಾಗಿ ಶಿವ ಕುಮಾರ್ ವಿಜಯ ಕುಮಾರ್, ಖಜಾಂಚಿಯಾಗಿ ಸುದೀಪ್ ಪೆರ್ಡೂರ್, ಸಹ ಖಜಾಂಚಿಯಾಗಿ ಪ್ರೇಮ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಲಕ್ಷ್ಮೀ ಶ್ರೀ ಬಿ.ಆರ್. ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಮಂತ್ ಯಾದವ್ ಕೃಷ್ಣಮೂರ್ತಿ, ರಮ್ಯಾ ಎಸ್.ವೈ., ಶ್ರೀಕಾಂತ ಪುರುಷೋತ್ತಮ, ಶ್ರೀನಿಧಿ ಅಶೋಕ್ ರಾವ್, ಚಂದ್ರಶೇಖರ್ ಗೌಡ ಆಯ್ಕೆಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ