ಪ್ರಕೃತಿ ಪ್ರಿಯರಿಗೂ, ಸಾಹಸಪ್ರಿಯರಿಗೂ ರಸದೌತಣ ನೀಡುವ ನೇಚರ್ ಕ್ಯಾಂಪ್
Team Udayavani, Sep 27, 2020, 12:29 PM IST
ನಾವು ಇತ್ತೀಚೆಗೆ ಭೀಮೇಶ್ವರಿ ಸಾಹಸ ಮತ್ತು ಪ್ರಕೃತಿ ಶಿಬಿರಕ್ಕೆ ಭೇಟಿ ನೀಡಿದ್ದೇವೆ. ಇದು ನನ್ನ ಜೀವನದ ಅತ್ಯಂತ ಸುಂದರವಾದ ಪ್ರವಾಸವಾಗಿದೆ.
ಬೆಂಗಳೂರು ನಗರಕ್ಕೆ ಬಹಳ ಹತ್ತಿರದಲ್ಲಿರುವ ಭೀಮೇಶ್ವರಿ ಸಾಹಸ ಶಿಬಿರವು ಕಾವೇರಿ ನದಿಯ ತೀರದಲ್ಲಿ ಸ್ಥಾಪಿಸಲಾದ ಪ್ರಕೃತಿ ಶಿಬಿರ ಬಹಳ ಸುಂದರವಾಗಿದೆ. ಇದು ಮಂಡ್ಯ ಜಿಲ್ಲೆಯ ಮಲಾವಳ್ಳಿ ತಾಲ್ಲೂಕಿನ ಹಲಗುರ್ ಹೋಬಳಿಯಲ್ಲಿದೆ. ಬೆಂಗಳೂರಿನಿಂದ ಕೇವಲ 2.5 ಗಂಟೆಗಳ ಪ್ರಯಾಣವಷ್ಟೇ.
ಇಲ್ಲಿ ಕಮರಿಗಳು, ಜಲಪಾತಗಳು, ದಟ್ಟವಾದ ಕಾಡುಗಳಿದ್ದು, ಪ್ರಾಕೃತಿಕವಾಗಿ ಶ್ರೀಮಂತವಾಗಿದೆ.
ಇದು ಸಾಹಸ ಪ್ರವೃತ್ತಿಯವರಿಗೂ ಮತ್ತು ಪ್ರಕೃತಿಯೊಂದಿಗೆ ಬೆರೆಯಲು ಒಂದು ಉತ್ತಮ ಅವಕಾಶವಾಗದೆ. ಜಿಪ್ ಲೈನ್, ಹಗ್ಗದ ನಡಿಗೆ, ಕಯಾಕಿಂಗ್, ಇತ್ಯಾದಿಗಳಿದ್ದು ಹಲವಾರು ಸಾಹಸ ಚಟುವಟಿಕೆಗಳನ್ನು ಇಲ್ಲಿ ನಾವು ಪ್ರಯತ್ನಿಸಬಹುದು.
ಈ ಭಾಗಗಳಲ್ಲಿ ಕಂಡು ಬರುವ ವನ್ಯಜೀವಿಗಳಲ್ಲಿ ಆನೆಗಳು, ಜಿಂಕೆ, ಮೊಸಳೆ, ಆಮೆ, ಹಾವು ಮತ್ತು ಸುಮಾರು ಇನ್ನೂರು ಪಕ್ಷಿ ಪ್ರಭೇದಗಳಿವೆ. ಅತ್ಯುತ್ತಮ ಜಂಗಲ್ ಕಾಟೇಜ್ ಲಭ್ಯವಿದೆ. ನಮಗೆ ಇಷ್ಟವಾದ ಟ್ರೆಕಿಂಗ್ ಮರೆಯಲು ಸಾಧ್ಯವಿಲ್ಲ.
ನೀವು ಖಂಡಿತವಾಗಿಯೂ ಇಲ್ಲಿನ ಆಹಾರವನ್ನು ಆನಂದಿಸುವಿರಿ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ಲಭ್ಯವಿದೆ.
ವೈಶಾಲಿ ಸಂಜಯ್
ಬೆಳ್ಳಂದೂರ್, ಬೆಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ