ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?


Team Udayavani, Jul 27, 2021, 6:30 AM IST

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

ಭೂಕಂಪ ಆದ ಬಳಿಕ ಕೆಲಕಾಲ ಕಂಪನಗಳಿರುತ್ತವೆ. ಅದರಂತೆ ರಾಜಕೀಯದಲ್ಲಿ ಪ್ರಭಾವಶಾಲಿ ನಾಯಕರು ಅಧಿಕಾರದಿಂದ ಕೆಳಗಿಳಿದಾಗ ರಾಜಕೀಯ ಕಂಪನಗಳೂ ಆಗುತ್ತವೆ. ಜತೆಗೆ ಅನುಕಂಪವೂ…

ರಾಜ್ಯ ಕಂಡ ಪ್ರಭಾವಿ ಜನನಾಯಕರಲ್ಲಿ ಒಬ್ಬರಾದ ಬಿ.ಎಸ್‌.ಯಡಿಯೂರಪ್ಪ ಅಕಾಲಿಕ ಅಧಿಕಾರಾಂತ್ಯ ಕಂಡಿದ್ದಾರೆ. ಆದರೆ, ಸ್ವತಃ ಯಡಿಯೂರಪ್ಪನವರೇ ಹೇಳಿದಂತೆ ಅವರ ರಾಜಕಾರಣ ಇನ್ನೂ ಮುಂದುವರಿಯುತ್ತದೆ!

ದಶಕದ ಬಳಿಕ ಮತ್ತೆ ಅಷಾಢ ಮಾಸ ದಲ್ಲಿ ಅವರ ಅಧಿಕಾರ ರಾಜಕಾರಣ ಅಂತ್ಯವಾದರೂ, ಈಗ ಆಷಾಢ ಸ್ಥಿತ್ಯಂತರದಲ್ಲಿ ಅವರ ರಾಜಕಾರಣ ಇನ್ನೊಂದು ದಿಕ್ಕಿನಲ್ಲಿ ಸಾಗುವುದು ಖಚಿತ. ಅವರು ತಮ್ಮ ಭಾವಪೂರ್ಣ “ಎರಡನೇ ವರ್ಷದ ಸಂಭ್ರಮ’ದ ಕೊನೆಗೆ ರಾಜೀನಾಮೆ ಘೋಷಣೆ ಮಾಡಿ ಹೇಳಿದ ವಿದಾಯ ವಾಕ್ಯಗಳಲ್ಲಿ ಪಕ್ಷದ ಒಳಗಿದ್ದುಕೊಂಡೇ ಪಕ್ಷ ಕಟ್ಟುವ ಮಾತಾಡಿದ್ದಾರೆ. ಹಾಗೆಂದು ಅಟಲ್‌ ಬಿಹಾರಿ ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವನಾಗುವ ಅವಕಾಶವಿದ್ದರೂ, ಕರ್ನಾಟಕ ರಾಜಕಾರಣದಲ್ಲೇ ಇರುವುದಾಗಿ ಸ್ಪಷ್ಟವಾಗಿ ಹೇಳಿದ್ದೆ ಎನ್ನುವ ಮೂಲಕ ದೆಹಲಿ ರಾಜಕಾರಣ ಮಾಡುವ ಇರಾದೆ ಇಲ್ಲ ಹೇಳಿ ದ್ದಾರೆ. ರಾಜ್ಯಪಾಲರಾಗಿ ಹೋಗುವ ವಿಚಾರವನ್ನೂ  ಖಂಡಿತವಾಗಿ ನಿರಾಕರಿಸಿದ್ದಾರೆ.

ಸಾಮ್ಯತೆ!: 2011ರಲ್ಲಿ ಅನಿವಾರ್ಯತೆಯಿಂದ ರಾಜೀನಾಮೆ ಕೊಡಬೇಕಾಯಿತು.  ಹತ್ತು ವರ್ಷಗಳ ಬಳಿಕ ಅದೇ ರೀತಿಯ “ಅನಿವಾರ್ಯತೆ’ಯಿಂದ ಮತ್ತೆ ರಾಜೀನಾಮೆ ನೀಡಿದ್ದಾರೆ.  ಇದು ಆಗಿನ- ಈಗಿನ ಸಾಮ್ಯತೆ! ಆದರೆ ಸಾಮ್ಯತೆ ಇಲ್ಲದಿರುವುದು ಅವರ ರಾಜಕೀಯ ನಡೆಯಲ್ಲಿ!

ಈ ಬಾರಿಯ ಅವರ ವಿದಾಯ ಭಾಷಣ ಭಾವ ಪೂರ್ವಕವಾಗಿದ್ದರೂ, ಅದರ ತೆರೆಮರೆಯಲ್ಲಿ ರಾಜ ಕೀಯ ಜಾಣ್ಮೆ ಇರುವುದನ್ನು ಗಮನಿಸಬಹುದು. ಅಂದರೆ, ಈ ಬಾರಿ ಯಡಿಯೂರಪ್ಪ ನಡೆಯೇ ಬೇರೆ!  ಮೇಲಾಗಿ ದೆಹಲಿ ರಾಜಕಾರಣ, “ರಾಜ್ಯಪಾಲರಾಗುವ ಮೂಲಕ ನಿವೃತ್ತಿ’ ಜೀವನ ವನ್ನೂ ಒಲ್ಲೆ ಎಂದಿದ್ದಾರೆ.

ಮುಂದೇನು?: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇ ಗೌಡರಂತೆ ಪಕ್ಷದ ಬೆನ್ನ ಹಿಂದೆ ನಿಂತು ಸಲಹೆ ಸಹಕಾರ  ನೀಡುತ್ತಾ ರಾಜ್ಯ ಬಿಜೆಪಿಯನ್ನು ನಿಯಂತ್ರಿಸುವುದೆ?  ತಮ್ಮ ಪುತ್ರರಾದ ವಿಜ ಯೇಂದ್ರ ಮತ್ತು ರಾಘವೇಂದ್ರ ಅವರ  ಭವಿತವ್ಯ,  ತಮ್ಮ ಆಪ್ತ ಶಾಸಕರ ಬೆಂಗಾವಲಿಗೆ ನಿಲ್ಲು ವುದೇ?  ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇ ಕಾದರೆ, ಮುಂದಿನ ಸಂಸತ್‌ ಚುನಾವಣೆಯಲ್ಲಿ  ಪ್ರಧಾನಿ ಮೋದಿ ನಾಯಕತ್ವಕ್ಕೆ ಹೆಚ್ಚಿನ ಸಂಸದರನ್ನು ರಾಜ್ಯದಿಂದ ಮತ್ತೆ ಒದಗಿಸಬೇಕಾದರೆ ತಮ್ಮ  ರಾಜಕೀಯ ಇರುವಿಕೆ ಅಗತ್ಯ ಎಂಬುದನ್ನು ಮತ್ತೆ ಮನದಟ್ಟು ಮಾಡುವುದೇ? ಹೀಗೆ… ಒಂದೊಂದು ಆಯ್ಕೆಗಳು ಅವರ ಮುಂದಿರುವ ಸಾಧ್ಯತೆಗಳಿವೆ. ಆ ಮೂಲಕ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಂತೆ ಪವರ್‌ಫ‌ುಲ್‌ ರಾಜಕಾರಣಿ ಆಗುವುದು ಅವರ ಉದ್ದೇಶ ವಿರಬಹುದು!

ಬಿಜೆಪಿಯಲ್ಲಿ ಹೊಸ ರಾಜಕೀಯ ರಕ್ತಕ್ಕೆ ಅವಕಾಶ ಸೃಷ್ಟಿಸುವ ಉದ್ದೇಶವಿರಬ ಹುದು. ಆದರೆ, ಯಡಿ ಯೂರಪ್ಪ ಹೊರತಾಗಿ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟು ಸುಲಭವಲ್ಲ

ಎಂದೂ ಆ ಪಕ್ಷದ ವರಿಷ್ಠರಿಗೆ ಗೊತ್ತಿಲ್ಲದ ವಿಷಯ ವಲ್ಲ. ಹಾಗಾಗಿ ಯಡಿಯೂರಪ್ಪ ಅವರ ಬೆಂಬಲ ಇಟ್ಟುಕೊಂಡೇ ಪಕ್ಷ, ಸರ್ಕಾರ ನಡೆಸಬೇಕಾದ ಅನಿವಾರ್ಯತೆ ಇರಬಹುದು. ಯಡಿಯೂರಪ್ಪ ಎದುರಿಸುತ್ತಿರುವ ಕೆಲವು  ಕಾನೂನು ತೊಡಕುಗಳು ಅವರನ್ನು ಕಟ್ಟಿಹಾಕಬಹುದೆನ್ನುವ ಲೆಕ್ಕಾಚಾರವೂ ಇದೆ. ಸಕ್ರಿಯ ರಾಜಕಾರಣದಲ್ಲಿರುವುದನ್ನು  ಘಂಟಾ ಘೋಷವಾಗಿ ಹೇಳಿರುವ ಯಡಿಯೂರಪ್ಪ ಅವುಗಳೆಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲಗಳೂ ಇವೆ.

ಲಿಂಗಾಯತ ನಾಯಕ: ಮಾಸ್‌ಲೀಡರ್‌ ಆಗಿರುವ ಬಿಎಸ್‌ವೈ , ಲಿಂಗಾಯತ ಮುಖಂಡ ಎಂದು ಗಟ್ಟಿ ಯಾಗಿ ಗುರುತಿಸಿಕೊಂಡಿದ್ದು, ಕುಮಾರಸ್ವಾಮಿ ನೇತೃ ತ್ವದ 20-20 ಸರ್ಕಾರದಲ್ಲಿ ಡಿಸಿಎಂ ಆದ ಬಳಿಕ.

ಈಗ ಯಡಿಯೂರಪ್ಪ ರಾಜೀನಾಮೆ ಬಳಿಕ ಲಿಂಗಾಯತರು ಯಾರನ್ನು ತಮ್ಮ ಮುಖಂಡನನ್ನಾಗಿ ನೋಡುತ್ತಾರೆ ಎನ್ನುವುದು ಬಿಜೆಪಿಯ ಚಿಂತೆ. ಯಡಿಯೂರಪ್ಪ ಅವರೇ ಆ ಸ್ಥಾನದಲ್ಲಿ ಇರುತ್ತಾರೆಯೇ ಅಥವಾ ಅವರ ಪ್ರಯತ್ನದಂತೆ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಲಿಂಗಾಯತ ಮುಖಂಡನಾಗುವಂತೆ ಬೆಳೆಸುತ್ತಾರೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.

ಎಂ. ಬಿ. ಪಾಟೀಲ್‌: ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಬೇಕೆಂಬ ಹಠದಲ್ಲಿರುವ ಕಾಂಗ್ರೆಸ್‌, ತನ್ನದೇ ರೀತಿಯಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ. ತನ್ನ ಲಿಂಗಾಯತ ಮುಖಂಡರಾದ ಎಂ.ಬಿ. ಪಾಟೀಲ ಮತ್ತು ಶಾಮನೂರು ಶಿವಶಂಕರಪ್ಪ ಅವರನ್ನು “ರಾಜೀನಾಮೆ ವದಂತಿ’ ಸಂದರ್ಭದಲ್ಲೇ ಯಡಿ ಯೂರಪ್ಪ ಅವರ ಭೇಟಿ ಮಾಡಿಸಿ ಲಿಂಗಾಯತ ಮತ ಬ್ಯಾಂಕಿಗೆ ಕೈಹಾಕಲು ಹೊರಟಿರುವುದು ಬಿಜೆಪಿ ನಾಯಕರಿಗೆ ತಿಳಿಯದ ವಿಷಯ ವಲ್ಲ. ಅಲ್ಲದೆ, ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರು ಕಾಂಗ್ರೆಸ್‌ ಸೇರುವ ಸಾಧ್ಯತೆಯಿದೆ ಎಂಬ ಹೇಳಿಕೆಯನ್ನು ಪಾಟೀಲ್‌ ನೀಡಿರುವ ಹಿನ್ನೆಲೆ ಏನೆಂಬುದು ಎಲ್ಲರಿಗೂ ತಿಳಿದ ವಿಷಯ.

ಹಾಗಾಗಿ… ಈ ಎಲ್ಲಾ ಬೆಳವಣಿಗೆಗಳು  ರಾಜ್ಯ ರಾಜಕೀಯದ ಇನ್ನೊಂದು ದಿಕ್ಕಿನ ಸೂಚನೆ.

 

ನವೀನ್‌ ಅಮ್ಮೆಂಬಳ

 

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.