“ಶಹಬ್ಟಾಸ್ ಯಡಿಯೂರಪ್ಪ’
Team Udayavani, Jul 27, 2021, 6:00 AM IST
ಪತ್ರಿಯೊಬ್ಬ ವ್ಯಕ್ತಿಗೂ ಅವರದೇ ಆದ ಕೆಲವೊಂದು ವ್ಯಕ್ತಿ ವೈಶಿಷ್ಟéತೆಗಳಿರುತ್ತವೆ. ಹಾಗೆಯೇ ಯಡಿಯೂರಪ್ಪರಿಗೂ ಇದ್ದಾವೆ. ಬಿ.ಎಸ್. ಯಡಿಯೂರಪ್ಪ ಅಂದರೆ, ಒಬ್ಬ ಛಲಗಾರ, ಹಠಗಾರ, ಯಾರಿಗೂ- ಯಾವುದಕ್ಕೂ ಹೆದರಲ್ಲ, ಜಗ್ಗಲ್ಲ-ಬಗ್ಗಲ್ಲ. ಅವರ ಕೋಪ, ಮುಂಗೋಪ ಅನ್ಯಾಯ ಕಂಡರೆ ಸಿಡಿದೇಳುವ ಗುಣ. ಆರಂಭದಿಂದ ಹೀಗೆಯೇ ಬೆಳೆದು ಬಂದ ಅವರು, ವಿದಾಯವನ್ನೂ ಅದೇ ರೀತಿ ಹೇಳಿದರು……
“ಬಿ.ಎಸ್. ಯಡಿಯೂರಪ್ಪ ಮತ್ತು ನನ್ನ ಸಂಬಂಧ ಬಹಳ ಹಳೆಯದು. ಅವರು ಶಿಕಾರಿಪುರಕ್ಕೆ ಬಂದು ನೆಲೆಸಿದ ನಂತರದಿಂದ ಅವರ ಮತ್ತು ನನ್ನ ಒಡನಾಟ ಆರಂಭವಾ ಯಿತು. ನಾವಿಬ್ಬರು ಸಂಘಪರಿವಾರದ ಸಿದ್ಧಾಂತಕ್ಕೆ ಆಕ ರ್ಷಿತರಾಗಿ ಸ್ವಯಂಸೇವಕರಾಗಿ ದುಡಿದವರು. ಜನಸಂಘ ಪಾರ್ಟಿ ಸ್ಥಾಪನೆಯಾದ ನಂತರ ಅದರ ಧ್ವಜವನ್ನು ಹಿಡಿದು, ರೈತರು, ಕೂಲಿಕಾರ್ಮಿಕರು, ಜೀತದಾಳುಗಳು, ಬಡವರು. ದಲಿತರು ಸಮಸ್ಯೆಗಳಿಗೆ ಹೋರಾಟ ಮಾಡಿ ಅದಕ್ಕೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದ್ದೆವು.
ಹೋರಾಟಕ್ಕೆ ಹಲವು ವಿಧಾನಗಳನ್ನು ಅನುಸರಿಸು ತ್ತಿದ್ದೆವು. ಶಿಕಾರಿಪುರ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಯಡಿಯೂರಪ್ಪನವರು ಸೈಕಲ್ನಲ್ಲಿ ಸುತ್ತಿದರು. ಜೀತ ದಾಳುಗಳ ಸಮಸ್ಯೆ ಬಗ್ಗೆ ಶಿಕಾರಿಪುರದಿಂದ ಶಿವಮೊಗ್ಗದ ವರೆಗೆ ಜೀತದಾಳು ಗಳನ್ನು ಪಾದಯಾತ್ರೆ ಮೂಲಕ ಕರೆದುಕೊಂಡು ಬಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆ ಕಾಲಕ್ಕೆ ಅದೊಂದು ದೊಡ್ಡ ಸಾಧನೆ ಯಾ ಗಿತ್ತು. ಇಡೀ ಜಿಲ್ಲೆಯ ಜೀತದಾಳುಗಳ ಸಮಸ್ಯೆ ಗಳಿಗೆ ಪರಿಹಾರ ಸಿಕ್ಕಿತ್ತು.
ಜನಪರ ಹೋರಾಟಗಳ ಜೊತೆಗೆ ಸಂಘಟನಾ ವಿಷಯಗಳಲ್ಲೂ ನಾವಿಬ್ಬರು ಒಂದಾಗಿ ಹೋಗುತ್ತಿದ್ದೇವು. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮೊದಲ ಬಾರಿಗೆ ನಡೆದ ಕರಸೇವೆಯಲ್ಲಿ ನಾವಿಬ್ಬರೂ ಜೊತೆಗೆ ಹೋಗಿದ್ದೆವು. ಆಗಿನ ಮುಲಾಯಂ ಸಿಂಗ್ ಸರ್ಕಾರ ನಮ್ಮ ಮೇಲೆ ಗೋಲಿಬಾರ್ ನಡೆಸಿತು. ಪಕ್ಕದಲ್ಲಿದ್ದ ಕೋಲ್ಕತ್ತಾದಿಂದ ಬಂದಿದ್ದ ಇಬ್ಬರು ಕರಸೇವಕರು ಹುತಾತ್ಮರಾದರು. ಬಳಿಕ ನಮ್ಮನ್ನು ಒಂದು ಕಾಡಿಗೆ ಬಿಡಲಾಯಿತು. ಹೇಗೋ ಅಲ್ಲಿಂದ ಬಂದೆವು.
“ತಾಯಿ ಎದೆ ಹಾಲು ಕುಡಿದವರು ಧೈರ್ಯವಿದ್ದರೆ ಇಲ್ಲಿಗೆ ಬಂದು ತ್ರಿವರ್ಣ ಧ್ವಜ ಹಾರಿಸಿ’ ಎಂದು ಶ್ರೀನಗರದಲ್ಲಿ ಒಂದು ಬ್ಯಾನರ್ ಹಾಕಲಾಗಿತ್ತು. ಅದನ್ನು ನಮ್ಮ ಪಕ್ಷ ಸವಾಲಾಗಿ ಸ್ವೀಕರಿಸಿ ಮುರಳಿ ಮನೋಹರ್ ಜೋಷಿ ನೇತೃತ್ವದಲ್ಲಿ ಯಾತ್ರೆ ನಡೆಸಲಾಯಿತು. ಅದರಲ್ಲಿ ನಾನು ಮತ್ತು ಯಡಿಯೂರಪ್ಪ ಹೋಗಿದ್ದೇವು. ಧ್ವಜದ ಹಾರಿಸುವ ಜಾಗಕ್ಕೆ ಹೋಗಲು ಒಂದು ರಾಜ್ಯದಿಂದ ಒಬ್ಬರಿಗೇ ಮಾತ್ರ ಅವಕಾಶ ಇತ್ತು. ಆಗ ಯಡಿಯೂರಪ್ಪ ನವರೇ ಹೋದರು. ಹೋಗುವಾಗ, ಧ್ವಜ ಹಾರಿಸಲು ಹೋದಾಗ ಏನಾಗುತ್ತದೋ, ಎಲ್ಲಿ ಬಾಂಬ್ ಬೀಳುತ್ತದೋ, ಯಾರು ಗುಂಡು ಹಾರಿಸುತ್ತಾರೆ ಗೊತ್ತಿಲ್ಲ, ನಾನೇನಾಗುತ್ತೇನೆ ಗೊತ್ತಿಲ್ಲ. ನನ್ನ ಮಕ್ಕಳು ಚಿಕ್ಕವರು, ನನಗೆ ಏನಾದರೂ ಆದರೆ, ಮಕ್ಕಳನ್ನು ನೀವೇ ನೋಡಿಕೊಳ್ಳಿ’ ಎಂದು ಯಡಿಯೂರಪ್ಪ ಹೇಳಿದ್ದು ಈಗಲೂ ನನಗೆ ನೆನಪಿದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು. ನಾನು ಅವರ ಮಂತ್ರಿಮಂಡಳದಲ್ಲಿ ಸಚಿವನಾಗಿ ಕೆಲಸ ಮಾಡಿದೆ. ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಅನೇಕ ಉತ್ತಮ ಕೆಲಸಗಳನ್ನು ಮಾಡಿದರು. ಗೋಹತ್ಯೆ ನಿಷೇಧ ಕಾಯ್ದೆ, ಪ್ರೌಢಶಾಲಾ ಮಕ್ಕಳಿಗೆ ಬೈಸಿಕಲ್, ಭಾಗ್ಯಲಕ್ಷ್ಮೀ ಯೋಜನೆ ಇತ್ಯಾದಿ ಜಾರಿಗೆ ತಂದರು. ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿದರು.
ಎರಡನೇ ಬಾರಿಗೆ ಮುಖ್ಯಮಂತ್ರಿ ಆದಾಗ ಆರಂಭದಲ್ಲೇ ಪ್ರವಾಹ ಬಂತು, ನಂತರ ಕೊರೊನಾ ಮೊದಲ ಮತ್ತು 2ನೇ ಅಲೆ, ಈಗ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಸವಾಲುಗಳನ್ನು ಸಮರ್ಥವಾಗಿ ಅವರು ಎದುರಿಸಿದ್ದಾರೆ. ಆರಂಭದಲ್ಲಿ ಪ್ರವಾಹ ಬಂದಾಗ ಒಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಜಾರಿಗೆ ಕ್ರಮ ಕೈಗೊಂಡರು. 3.5 ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಿರುವುದು ಬಹುದೊಡ್ಡ ಸಾಧನೆ.
ಅವರ ವಿದಾಯ ಭಾಷಣದಲ್ಲಿ ಕಣ್ಣೀರು ಹಾಕಿದ್ದು ಅದು ದುಖ:ದಿಂದ ಅಲ್ಲ. ಸಮಾಧಾನದಿಂದ ಬಂದ ಕಣ್ಣೀರು. ಪಕ್ಷದ ನೀತಿಯಂತೆ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ಸಿಂಗ್ ಮತ್ತಿತರರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ನನಗೂ 78 ವರ್ಷ ವಯಸ್ಸಾಗಿದೆ, ಪಕ್ಷ ಹೇಳುವುದಕ್ಕಿಂತ ಮೊದಲೇ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ನಾನೇ ಹೇಳಿಬಿಟ್ಟೆ. ಅದೇ ರೀತಿ ಯಡಿಯೂರಪ್ಪನವರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಭಾವೋದ್ವೇಗ ಸಹಜ. ಆದರೆ, ಧನ್ಯತೆಯಿಂದ ಬಂದ ಕಣ್ಣೀರು. ಅದು ಸಿಟ್ಟೂ ಅಲ್ಲ, ನೋವು ಅಲ್ಲ. ಸಮಾಧಾನ ಮತ್ತು ಸಾಮಾನಚಿತ್ತದಿಂದ ವಿದಾಯ ಹೇಳಿ, ಮುಂದಿನ 10-15 ವರ್ಷ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ…..”ಶಹಬ್ಟಾಸ್ ಯಡಿಯೂರಪ್ಪ’
ಡಿ.ಎಚ್. ಶಂಕರಮೂರ್ತಿ,
ವಿಧಾನಪರಿಷತ್ ಮಾಜಿ ಸಭಾಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ