ಹಿಪೋಕ್ರ್ಯಾಟಿಕ್‌ನಿಂದ ಚರಕ ಶಪಥದ ಕಡೆಗೆ


Team Udayavani, Feb 13, 2022, 7:50 AM IST

ಹಿಪೋಕ್ರ್ಯಾಟಿಕ್‌ನಿಂದ ಚರಕ ಶಪಥದ ಕಡೆಗೆ

ಸದ್ಯದಲ್ಲೇ ಭಾರತೀಯ ವೈದ್ಯರ “ಸಾಂಪ್ರದಾಯಿಕ ಪ್ರತಿಜ್ಞೆೆ’ಯಿಂದ ಗ್ರೀಸ್‌ ವೈದ್ಯ ಹಿಪೋಕ್ರ್ಯಾಟ್‌ ಹೆಸರು ಮಾಯವಾಗಲಿದೆ. ಜಗತ್ತಿನಾದ್ಯಂತ ಚಾಲ್ತಿಯಲ್ಲಿರುವ “ಹಿಪೋಕ್ರ್ಯಾಟಿಕ್‌ ಓತ್‌’ ಅನ್ನು ಬದಲಿಸಿ, ಆ ಜಾಗಕ್ಕೆ “ಚರಕ ಶಪಥ’ವನ್ನು ತರಲು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಶಪಥಗಳ ಬಗ್ಗೆ ಮಾಹಿತಿ ಇಲ್ಲಿದೆ.

ಹಿಪೋಕ್ರ್ಯಾಟಿಕ್‌ ಓತ್‌ ಎಂದರೇನು? :

ಜಗತ್ತಿನಾದ್ಯಂತ ವೈದ್ಯರು ಕೈಗೊಳ್ಳುವ ನೈತಿಕ ಪ್ರತಿಜ್ಞೆಯನ್ನು “ಹಿಪ್ಪೋಕ್ರ್ಯಾಟಿಕ್‌ ಓತ್‌’ ಎಂದು ಕರೆಯುತ್ತಾರೆ. ಗ್ರೀಸ್‌ ವೈದ್ಯ ಹಿಪೋಕ್ರೇಟ್ಸ್‌ ಬರೆದಿರುವ ಸಂಹಿತೆಯಿದು. ವೈದ್ಯ ವಿದ್ಯಾರ್ಥಿಗಳು ಪ್ರೀ-ಕ್ಲಿನಿಕಲ್‌ ಅಧ್ಯಯನ ಮುಗಿಸಿ ಕ್ಲಿನಿಕಲ್‌ ಅಧ್ಯಯನಕ್ಕೆ ಪ್ರವೇಶ ಪಡೆಯುವಾಗ (ವೈಟ್‌ ಕೋಟ್‌ ಸಮಾರಂಭ) ಈ ಶಪಥವನ್ನು ಮಾಡುತ್ತಾರೆ. “ತಾವು ನಿರ್ದಿಷ್ಟ ನೈತಿಕ ಮಾನದಂಡಗಳನ್ನು ಅನುಸರಿಸುತ್ತೇನೆ’ ಎಂದು ರೋಗಗಳನ್ನು ಉಪಶಮನಗೊಳಿಸುವ ಹಲವಾರು ದೇವ- ದೇವತೆಗಳ ಹೆಸರಿನಲ್ಲಿ ಪ್ರಮಾಣ ಮಾಡುವುದನ್ನೇ “ಹಿಪ್ಪೋಕ್ರ್ಯಾಟಿಕ್‌ ಓತ್‌’ ಎನ್ನುತ್ತಾರೆ.

ಚರಕ ಶಪಥ ಎಂದರೇನು? :

ಪ್ರಾಚೀನ ಆಯುರ್ವೇದ ವಿಜ್ಞಾನದ ಪಿತಾಮಹ ಹಾಗೂ “ಚರಕ ಸಂಹಿತೆ’ಯ ಕತೃì ಆಗಿರುವ ಮಹರ್ಷಿ ಚರಕ ಅವರನ್ನು ಗೌರವಿಸುವ ಶಪಥ ಇದಾಗಿದೆ. ಇದನ್ನು ಮೂಲತಃ ಸಂಸ್ಕೃತದಲ್ಲಿ ಬರೆಯಲಾಗಿದೆ. ಆದರೆ ಈಗ ಹಿಂದಿ ಮತ್ತು ಆಂಗ್ಲ ಭಾಷೆಗೂ ತರ್ಜುಮೆಯಾಗಿದೆ.

ಚರಕ ಶಪಥದಲ್ಲೇನಿದೆ? :

“ನನಗಾಗಿ ಅಲ್ಲ, ಯಾವುದೇ ಭೌತಿಕ ಆಸೆ ಅಥವಾ ಲಾಭದ ಉದ್ದೇಶಕ್ಕಾಗಿಯೂ ಅಲ್ಲ. ಬದಲಿಗೆ ನೋವಿನಲ್ಲಿರುವ ಮಾನವತೆಯ ಅಭ್ಯುದಯದ ಏಕೈಕ ಉದ್ದೇಶದಿಂದ, ನಾನು ನನ್ನ ರೋಗಿಗೆ ಚಿಕಿತ್ಸೆ ನೀಡುತ್ತೇನೆ’ ಎಂಬ ಅಂಶ ಚರಕ ಶಪಥದಲ್ಲಿದೆ. “ಚರಕವು ನಮ್ಮ ತಾಯಿನಾಡಿಗೆ ಸಂಬಂಧಿಸಿದ್ದು. ಹೀಗಾಗಿ ವೈಟ್‌ ಕೋಟ್‌ ಕಾರ್ಯಕ್ರಮದ ವೇಳೆ ಯಾವುದೋ ಗ್ರೀಸ್‌ ವೈದ್ಯನ ಪ್ರತಿಜ್ಞೆೆಯನ್ನು ಓದುವ ಬದಲು, ಸ್ಥಳೀಯ ಭಾಷೆಗಳಲ್ಲಿ ಚರಕ ಶಪಥ ಮಾಡುವುದು ಸೂಕ್ತ’ ಎನ್ನುವುದು ರಾಷ್ಟ್ರೀಯ ವೈದ್ಯಕೀಯ ಆಯೋಗದ ವಾದ.

ಪರ-ವಿರೋಧ ಚರ್ಚೆ :

ಆಯೋಗದ ಪ್ರಸ್ತಾವದ ಬೆನ್ನಲ್ಲೇ ಈ ಕುರಿತು ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಕೆಲವು ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಇದೊಂದು ಉತ್ತಮ ನಡೆ ಎಂದು ಹೇಳಿದ್ದರೆ, ಮತ್ತೆ ಕೆಲವರು “ಇದರ ಅಗತ್ಯವಿರಲಿಲ್ಲ’ ಎಂದಿದ್ದಾರೆ. “ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಹೇಳುವ ಪದಗಳಿಗಿಂತಲೂ ನಮ್ಮ ಹೃದಯದಲ್ಲಿರುವ ಭಾವನೆಯಷ್ಟೇ ಮುಖ್ಯವಾಗುತ್ತದೆ. ಶಪಥವು ಸ್ಥಳೀಯ ಭಾಷೆಯಲ್ಲಿರುವುದು ಒಳ್ಳೆಯ ಯೋಚನೆ’ ಎಂದು ತಮಿಳುನಾಡಿನ ವಿದ್ಯಾರ್ಥಿನಿ ಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. “ಶ್ರೀಮಂತ ವೈದ್ಯಕೀಯ ಇತಿಹಾಸವಿರುವ ನಮ್ಮ ದೇಶದಲ್ಲಿ ನಾವೇಕೆ ಗ್ರೀಸ್‌ ವೈದ್ಯನ ಹೆಸರಲ್ಲಿ ಶಪಥ ಮಾಡಬೇಕು’ ಎಂದೂ ಕೆಲವರು ಪ್ರಶ್ನಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘವು ಈ ಪ್ರಸ್ತಾವ‌ಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆಧುನಿಕ ವೈದ್ಯರಿಗೆ ಚರಕ ಶಪಥವು ಹೊಂದಾಣಿಕೆ ಯಾಗುವುದಿಲ್ಲ ಎಂದಿದೆ.

ಪ್ರತಿಜ್ಞೆೆಯಲ್ಲಿ ಏನಿರುತ್ತದೆ? :

  • ವೈದ್ಯ ವಿದ್ಯಾರ್ಥಿಗಳಿಗೆ ಕಲಿಸುವಂಥ ಗುರು(ವೈದ್ಯ)ವಿನ ಹೊಣೆಗಾರಿಕೆಗಳು
  • ಗುರುಗಳಿಗಾಗಿ ವಿದ್ಯಾರ್ಥಿಗಳು ಮಾಡಬೇಕಾದ ಕರ್ತವ್ಯಗಳು
  • ತನ್ನ ಸಾಮರ್ಥ್ಯಕ್ಕನುಗುಣವಾಗಿ ರೋಗಿಗೆ ಅನುಕೂಲವಾಗುವ ಚಿಕಿತ್ಸೆಯನ್ನೇ ನೀಡುತ್ತೇನೆ ಎಂಬ ಶಪಥ ಯಾರಿಗೂ ನೋವು ಅಥವಾ ಹಾನಿ ಉಂಟುಮಾಡುವುದಿಲ್ಲ ಎಂಬ ಪ್ರತಿಜ್ಞೆ
  • ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ಜೀವನ ನಡೆಸುತ್ತೇನೆ ಎಂಬ ಪ್ರಮಾಣ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.