ಕೋವಿಡ್: ಅಪಾಯ ಇನ್ನೂ ಹೆಚ್ಚಾಗಲಿದೆಯೇ?


Team Udayavani, May 26, 2020, 1:51 PM IST

ಕೋವಿಡ್: ಅಪಾಯ ಇನ್ನೂ ಹೆಚ್ಚಾಗಲಿದೆಯೇ?

ಕೋವಿಡ್ ವೈರಸ್‌ ತಡೆಗೆ ಅತ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡಿದ ದೇಶಗಳಲ್ಲಿ ಭಾರತವೂ ಒಂದು. ಆದರೆ ಲಾಕ್‌ಡೌನ್‌ನ ನಾಲ್ಕನೇ ಚರಣದಿಂದ ನಿರ್ಬಂಧಗಳನ್ನು ಸಡಿಲಿಸುತ್ತಾ ಹೋಗುತ್ತಿದ್ದಂತೆಯೇ, ಹಠಾತ್ತನೆ ದೇಶದಲ್ಲಿ ಸೋಂಕಿತರ ಸಂಖ್ಯೆ ಏರುತ್ತಾ ಸಾಗಿದೆ. ಈಗ ಪ್ರಪಂಚದ ಟಾಪ್‌ ಟೆನ್‌ ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಭಾರತವೂ ಒಂದು. ಮೇ 2ನೇ ವಾರದಿಂದೀಚೆಗೆ ನಮ್ಮ ದೇಶವು ಅತಿಹೆಚ್ಚು ನಿತ್ಯ ಸೋಂಕು ಪ್ರಕರಣಗಳನ್ನು ದಾಖಲಿಸುತ್ತಿರುವ 5 ದೇಶಗಳಲ್ಲಿ ಒಂದಾಗಿದೆ! ರವಿವಾರದಿಂದ ಸೋಮವಾರದೊಳಗೆ ದೇಶದಲ್ಲಿ 7 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿ ಕಳವಳ ಹುಟ್ಟಿಸುತ್ತಿದೆ. ದೇಶದ ಕೊರೊನಾ ಹಾಟ್‌ಸ್ಪಾಟ್‌ ಆಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯೀಗ 50 ಸಾವಿರದ ಗಡಿ ದಾಟಿದೆ. ಸದ್ಯಕ್ಕಂತೂ ದೇಶಾದ್ಯಂತ ಕೊರೊನಾ ಹಾವಳಿ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲ…

ಅಧಿಕವಿದೆ ಭಾರತದ R-Naught
R-Naught or R-Zero ಎನ್ನುವುದು ರೋಗ ಪತ್ತೆಯ ಒಂದು ಮಾಪನ. ಇದನ್ನು ” R0′ ಎಂದು ಬರೆಯಲಾಗುತ್ತದೆ. ಒಂದು ಸಾಂಕ್ರಾಮಿಕದ ತೀವ್ರತೆ ಎಷ್ಟಿದೆ ಎನ್ನುವುದನ್ನು R0 ದಿಂದ ಅಳೆಯಲಾಗುತ್ತದೆ. ಉದಾಹರಣೆಗೆ R0 ತೀವ್ರತೆ 2 ಇದ್ದರೆ, ಒಬ್ಬ ಸೋಂಕಿತ ಸರಾಸರಿ ಇಬ್ಬರಿಗೆ ಸೋಂಕು ಹರಡಬಲ್ಲ ಎಂದರ್ಥ. R0 ಪ್ರಮಾಣ 1ಕ್ಕಿಂತಲೂ ಕಡಿಮೆಯಾದರೆ, ಸೋಂಕು ಹರಡುವುದಿಲ್ಲ ಎಂದರ್ಥ. ಭಾರತದಲ್ಲಿ R0 ಈಗ 1ಕ್ಕಿಂತಲೂ ಅಧಿಕವಿದೆ.

ಲಾಕ್‌ಡೌನ್‌ಗೂ ಮುನ್ನ ಎಷ್ಟಿತ್ತು?
ಮಾರ್ಚ್‌ 23ಕ್ಕೆ, ಅಂದರೆ ದೇಶವು ಲಾಕ್‌ಡೌನ್‌ಗೆ ಒಳಗಾಗುವ ಮುನ್ನ R0 3.36 ರಷ್ಟಿತ್ತು. ಅಂದರೆ ಒಬ್ಬ ಸೋಂಕಿತನಲ್ಲಿ ಸಾಂಕ್ರಾಮಿಕದ ತೀವ್ರತೆ, ಆತ ಮೂರಕ್ಕಿಂತ ಹೆಚ್ಚು ಜನರಿಗೆ ಸೋಂಕು ಹರಡುವಷ್ಟಿತ್ತು ಮೊದಲ ಲಾಕ್‌ಡೌನ್‌ ಅಂತ್ಯವಾಗುವ ವೇಳೆಗೆ, ಅಂದರೆ ಎ.14ರ ವೇಳೆಗೆ R0 1.71ಕ್ಕೆ ಇಳಿಯಿತು. ಎರಡನೇ ಲಾಕ್‌ಡೌನ್‌ ಚರಣ ಅಂತ್ಯವಾಗುವ ವೇಳೆಗೆ, ಅಂದರೆ ಮೇ 3ಕ್ಕೆ R0 1.46ಕ್ಕೆ ಇಳಿಯಿತು. ಮೇ 16ಕ್ಕೆ R0 1.27ಕ್ಕೆ ಇಳಿಯಿತು.

ಭಾರತದಲ್ಲಿ ಎಷ್ಟಿದೆ?
ಕೋವಿಡ್‌-19 ಸ್ಟಡಿ ಗ್ರೂಪ್‌, ಯೂನಿವರ್ಸಿಟಿ ಆಫ್ ಮಿಚಿಗನ್‌ ಭಾರತದಲ್ಲಿ ವೈರಸ್‌ನ R0 ಲೆಕ್ಕ ಹಾಕಿದ್ದು, ಭಾರತದಲ್ಲಿ R0 ದರ ಈಗ 1ಪ್ರತಿಶತಕ್ಕೂ ಅಧಿಕವಿದೆ ಎನ್ನುವುದು ಪತ್ತೆಯಾಗಿದೆ. ಇಲ್ಲಿ ನೆನಪಿಡಲೇಬೇಕಾದ ಅಂಶವೆಂದರೆ, ಒಂದು ರಾಜ್ಯದಲ್ಲಿ R0 ದರ ಅಧಿಕವಿದೆ ಎಂದಾಕ್ಷಣ ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಿರುತ್ತದೆ ಎಂದಲ್ಲ. ಬದಲಾಗಿ, ಸಾಂಕ್ರಾಮಿಕದ ಅಪಾಯ ಅಧಿಕವಿರುತ್ತದೆ ಎಂದಷ್ಟೇ ಅರ್ಥ. ಮೇ 17ರ ವೇಳೆಗೆ ಕರ್ನಾಟಕದ ಸರಾಸರಿ R0 1.60ರಷ್ಟಿದ್ದರೆ, ಮಹಾರಾಷ್ಟ್ರದ ಸರಾಸರಿ R0 1.34 ದಾಖಲಾಗಿದೆ.

ಇಪ್ಪತ್ತು ಲಕ್ಷವಿರುತ್ತಿತ್ತೇ?
ಕೇಂದ್ರ ಸರ್ಕಾರದ ಕಾರ್ಯಕ್ರಮ ಅನುಷ್ಠಾನ ಹಾಗೂ ಸಾಂಖೀಕ ಸಚಿವಾಲಯದ ಅಧ್ಯಯನವು ಲಾಕ್‌ಡೌನ್‌ ಅನುಷ್ಠಾನದಿಂದಾಗಿ 20 ಲಕ್ಷಕ್ಕೂ ಅಧಿಕ ಪ್ರಕರಣಗಳು ಮತ್ತು 54,000ಕ್ಕೂ ಅಧಿಕ ಮರಣಗಳನ್ನು ತಪ್ಪಿಸಿದಂತಾಗಿದೆ ಎಂದು ಹೇಳುತ್ತಿದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಒಂದು ವೇಳೆ ಭಾರತದಲ್ಲಿ ಲಾಕ್‌ಡೌನ್‌ಗೂ ಮುನ್ನ ಇದ್ದಷ್ಟೇ ಆರ್‌ ಝೀರೋ(R0) ಇದ್ದರೆ ದೇಶದಲ್ಲಿನ ಮರಣ ಹಾಗೂ ಸೋಂಕಿತರ ಪ್ರಮಾಣ ಅಪಾರವಾಗಿ ಇರುತ್ತಿತ್ತು. ಅದಾಗ್ಯೂ, ಈಗಲೂ R0 ಸರಾಸರಿ 1ಕ್ಕಿಂತಲೂ ಅಧಿಕವಿರುವುದು ಅಪಾಯಕಾರಿಯೇ ಸರಿ. ಎಲ್ಲಕ್ಕಿಂತ ಲಾಕ್‌ಡೌನ್‌ನ ನಾಲ್ಕನೇ ಚರಣದಲ್ಲಿ ನಿರ್ಬಂಧಗಳ ಸಡಿಲಿಕೆ ಯಿಂದಾಗಿ ಸೋಂಕಿತರ ಕಳೆದೊಂದು ವಾರದಿಂದ ನಿತ್ಯ ಸರಾಸರಿ 5 ಸಾವಿರಕ್ಕೂ ಅಧಿಕ ದಾಖಲಾಗುತ್ತಿದ್ದು, ಆರ್‌ಝೀರೋ ಸರಾಸರಿ ಮತ್ತೆ ಏರಿಕೆಯಾಗುವ ಅಪಾಯವೂ ಇದೆ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.