ಪರಿಸರ ಕೌತುಕದ ಕರ್ವಾಲೊ


Team Udayavani, Nov 6, 2020, 4:57 AM IST

ಪರಿಸರ ಕೌತುಕದ ಕರ್ವಾಲೊ

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

ಒಂದೇ ಸಾಲಿನಲ್ಲಿ ಹೇಳುವುದಾದರೆ “ಕರ್ವಾಲೊ’ ಸೃಜನಶೀಲವಾಗಿದೆ. ನಿರೂಪಣೆ, ವಸ್ತುವಿನ ಆಯ್ಕೆ-ಹೀಗೆ ಎಲ್ಲದರಲ್ಲೂ ಲೇಖಕ ರಾದ ತೇಜಸ್ವಿಯವರು ತೋರಿಸಿರುವ ಸೃಜನ ಶೀಲತೆ ಪ್ರಶಂಸನೀಯ. ಬದುಕಿನ ಅನುಭವ ಗಳನ್ನೇ ಕಾದಂಬರಿಯ ರೂಪಕ್ಕಿಳಿ ಸಿರುವ ರೀತಿ ಗಮನಾರ್ಹ. ತಮಾಷೆಯಲ್ಲೇ ಸಾಗುವ “ಕರ್ವಾಲೊ’ ಪಯಣ ಕೊನೆ ಕೊನೆಗೆ ವೈಜ್ಞಾನಿ ಕತೆ ಮತ್ತು ವೈಚಾರಿಕತೆಯ ವಿವಿಧ ಮಜಲುಗಳಿಗೆ ತೆರೆ ದುಕೊಳ್ಳುತ್ತದೆ. ಮನುಷ್ಯ, ಪರಿಸರ ಉಳಿಸಿಕೊಂಡಿರುವ ಅಚ್ಚರಿಗಳು, ಜೈವಿಕ ಪ್ರಭೇ ದಗಳು, ಹಳ್ಳಿ ಸೊಗಡು, ಸಾಮಾನ್ಯರಲ್ಲಿ ಸಾಮಾನ್ಯರ ಜೀವನಶೈಲಿ.. ಹೀಗೆ ಜೀವ ನಕ್ಕೆ ಹತ್ತಿರವಾದ ಹಲವಾರು ವಿಷಯಗಳ ರಸಾಯನವಾಗಿ ಕರ್ವಾಲೊ ಮೈದಳೆದಿದೆ.

ಪೂರ್ಣಚಂದ್ರ ತೇಜಸ್ವಿಯವರು ಕಾದಂಬ ರಿಯ ನಾಯಕ ಮತ್ತು ನಿರೂಪಕ. ಅವರು ಆರಂಭದಲ್ಲಿ ಜೇನುತುಪ್ಪ ಖರೀದಿಸಲೆಂದು ಹೋದಾಗ ಆಗುವ ಅನಿರೀಕ್ಷಿತ ಗೆಳೆತನವನ್ನು ಕಥೆಗಿಳಿಸುವುದು ಮೊದಲ ಹೆಜ್ಜೆ. ಮಳಿಗೆಯಲ್ಲಿ ಕೆಲಸ ಮಾಡುವ ಲಕ್ಷ್ಮಣ ಮತ್ತು ಮಂದಣ್ಣ ಎಂಬ ಇಬ್ಬರು ಅಂದಿನ ಕಾಲದಲ್ಲೇ ಸೆಲೆಬ್ರಿಟಿ ಯಾಗಿದ್ದ ತೇಜಸ್ವಿಯವರಿಗೆ ಕಡಿಮೆ ಬೆಲೆಗೆ ಹೆಚ್ಚು ಜೇನುತುಪ್ಪವನ್ನು ಮಾರುತ್ತಾರೆ.

ವ್ಯವಹಾರದಲ್ಲಿ ಮೋಸವಿರುವ ಗುಮಾನಿಯಿ ದ್ದರೂ ತೇಜಸ್ವಿಯವರು ಅದನ್ನು ಕೊಳ್ಳುತ್ತಾರೆ. ಮನೆಗೆ ಹೋಗಿ ನೋಡಿದಾಗ ಕೊಬ್ಬರಿ ಎಣ್ಣೆಯಂತೆ ಕಾಣುತ್ತಿದೆ ಎಂದು ಕೆಲಸದಾಳು ಪ್ಯಾರಾ ಹೇಳುತ್ತಾನೆ. ಇದರಿಂದ ತೇಜಸ್ವಿಗೆ ಕೋಪವೂ ಬರುತ್ತದೆ.

ಜೇನು ಖರೀದಿಸಿ ಬಂದಿದ್ದ ತೇಜಸ್ವಿ ಸ್ವಲ್ಪ ಹಣ ವನ್ನು ಬಾಕಿ ಇರಿಸಿಕೊಂಡಿದ್ದರು. ನಕಲಿ ತುಪ್ಪ ನೀಡಿ ವಂಚಿಸಿದ್ದ ಕೋಪದಲ್ಲೇ ಅವರು ಬಾಕಿ ಹಣವನ್ನು ನೀಡಲು ಹೋದರು. ಆಗ ಮಂದಣ್ಣ ವಿವಿಧ ಜೇನುಹುಳುಗಳ ಕುರಿತು ತಿಳಿಸುತ್ತಾನೆ. ಮೊದಲಿಗೆ ಕೇವಲ ಜೇನು ತುಪ್ಪ ವನ್ನು ಖರೀದಿಸಲು ಹೋಗಿದ್ದ ಲೇಖಕರು ಮಂದಣ್ಣನ ವಿವರಣೆಯಿಂದಾಗಿಯೋ ಅಥವಾ ತಮ್ಮ ಪರಿಸರದೆಡೆಗಿನ ಅದಮ್ಯ ಅಚ್ಚರಿಗಳಿಂದಲೋ ಅವನ ಉಸ್ತುವಾರಿಯಲ್ಲಿ ಕೊನೆಗೆ ಜೇನನ್ನು ಸಾಕುವ ಸಾಹಸಕ್ಕೇ ಕೈ ಹಾಕುತ್ತಾರೆ.

ಇಲ್ಲಿ ನಾಯಕ ತೇಜಸ್ವಿಯವರಾದರೂ ಮಂದ ಣ್ಣನೂ ಅಷ್ಟೇ ಮುಖ್ಯವೆನಿಸುತ್ತಾನೆ. ತಮಾಷೆ ಯಿಂದ ಶುರುವಾಗಿ ಲೇಖಕರನ್ನು ಜೀವವಿಕಾಸ ದೆಡೆಗೆ ಕರೆದೊಯ್ದುದರಲ್ಲಿ ಅವನ ಪಾತ್ರ ದೊಡ್ಡದು. ಜೀವವಿಕಾಸ, ಜೇನುತುಪ್ಪ ಮಾತ್ರವಲ್ಲದೇ ಸಮಾಜದ ಓರೆಕೋರೆಗಳ ಬಗ್ಗೆಯೂ ಮುಕ್ತವಾಗಿ ಬರೆದಿ¨ªಾರೆ. ಮದುವೆ ಮತ್ತು ಅದಕ್ಕೆ ಅಂಟಿಕೊಂಡಿರುವ ಕೊಂಡಿ ಗಳು, ದೊಡ್ಡವರ ಸಣ್ಣತನ, ಕೃಷಿ, ಕಳ್ಳಭಟ್ಟಿ, ಪೊಲೀಸರು ಸಹಿತ ಹತ್ತು ಅನೇಕ ವಿಷಯಗಳು ಕಾದಂಬರಿ ಯಲ್ಲಿವೆ. ಲೇಖಕರ ನೆಚ್ಚಿನ ನಾಯಿಯಾದ ಕಿವಿ, ಬಿರಿಯಾನಿ ಕರಿಯಪ್ಪ , ಪ್ರಭಾಕರ ಮತ್ತು ಇತರ ಪಾತ್ರಗಳು ಕಾದಂಬ ರಿಯ ಓಘಕ್ಕೆ ಸಹಕರಿಸಿವೆ.

ಈ ಪಾತ್ರಗಳು ಸಹ್ಯಾದ್ರಿಯ ತಪ್ಪಲಿನಲ್ಲಿ ಏನ ನ್ನೋ ಹುಡುಕಲು ಹೋಗುತ್ತವೆ. ಆ ಸನ್ನಿವೇಶ ದಲ್ಲಿ ಸೃಷ್ಟಿಯೆಂಬುದು ಮಾಯೆಯೋ ಅಲ್ಲವೋ, ಎಲ್ಲವೂ ವೈಜ್ಞಾನಿಕವೋ, ಪ್ರಾಕೃತಿಕ ವೋ, ಅನ್ವೇಷಣೆಯ ಬೆನ್ನೇರುವುದೋ ಅಥವಾ ತೀರಾ ಸಾಮಾನ್ಯನ ಬದುಕೇ ಚಂದ ಎಂದುಕೊಳ್ಳುವುದೋ ಮುಂತಾದ ಪ್ರಶ್ನೆಗಳು ಮೂಡುತ್ತವೆ. ಇದನ್ನು ಓದುಗರಿಗೆ ವರ್ಗಾ ಯಿಸಿರುವ ಬಗೆ ವಿಶೇಷವಾಗಿದೆ.

ಅನೇಕ ದೃಶ್ಯಗಳು ನಗು ತರಿಸಿದರೂ ಓದು ಗನನ್ನು ಅಗಾಧ ಚಿಂತನೆಗೆ ಒಡ್ಡುತ್ತವೆ. ಮೇಲ್ನೋಟಕ್ಕೆ ಹಗುರವಾಗಿ ಕಂಡರೂ ಓದಿನ ಬಳಿಕ ಇಡೀ ಕೃತಿ ಬಹಳವಾಗಿ ಕಾಡುತ್ತದೆ.  ಅಂದ ಹಾಗೆ, ಕರ್ವಾಲೊ ಎಂದರೆ ಏನು? ಸಹ್ಯಾದ್ರಿಯಲ್ಲಿ ಹುಡುಕಲು ಹೊರಟ ಸಂಜೀವಿನಿಯ ಹೆಸರಾ? ಕೃತಿಯನ್ನು ಓದಿ ಆ ಕೌತುಕವನ್ನು ತಣಿಸಿಕೊಳ್ಳಿ.

-ಅಭಿಷೇಕ್‌ ಎಸ್‌., ಬೆಂಗಳೂರು

 

ಟಾಪ್ ನ್ಯೂಸ್

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.