ಬಸವಣ್ಣನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ: ಗಂಗಾಬಿಕ ಮಲ್ಲಿಕಾರ್ಜುನ


Team Udayavani, Jun 19, 2021, 8:43 PM IST

desiswara

 ದುಬೈ :ಸಮಾನತೆಯ ಹರಿಕಾರ ಬಸವಣ್ಣ. ಮಹಿಳೆಯರನ್ನು ಅಸಮಾನರು ಅನ್ನುವ ಕಾಲದಲ್ಲೇ ಮಹಿಳೆಯರ ಸಮಾನತೆಯ ಸಲುವಾಗಿ ಕ್ರಾಂತಿ ಮಾಡಿದವರು ಬಸವಣ್ಣ. ನಾವೆಲ್ಲರೂ ಅವರ ತಣ್ತೀಗಳನ್ನು  ಬರಿ ಪ್ರಚಾರಕ್ಕೆ ಸೀಮಿತಗೊಳಿಸದೆ ನಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದ ಶರಣೆ ಗಂಗಾಬಿಕ ಮಲ್ಲಿಕಾರ್ಜುನ ಅವರು ಎಲ್ಲರಿಗೂ ಬಸವ ಜಯಂತಿಯ ಶುಭ ಹಾರೈಸಿದರು.

2020ರ ನ. 1ರಂದು ಔಪಚಾರಿಕವಾಗಿ ಪ್ರಾರಂಭವಾದ  ಜಾಗತಿಕ ಲಿಂಗಾಯತ ಮಹಾಸಭಾ – ಸಾಗರೋತ್ತರ ಘಟಕವು ಇತ್ತೀಚೆಗೆ 888ನೇ ಬಸವ ಜಯಂತಿಯನ್ನು ವಿನೂತನವಾಗಿ, ತಾತ್ತಿ$Ìಕವಾಗಿ, ಸರಳವಾಗಿ ಆನ್‌ಲೈನ್‌ ಮೂಲಕ ನಡೆಸಿ ಜಗತ್ತಿನ ಅನೇಕ ಕನ್ನಡಿಗರನ್ನು, ಬಸವ ಅನುಯಾಯಿಗಳನ್ನು ಒಟ್ಟಿಗೆ ಸೇರಿಸಿ ಸುಮಾರು 3 ತಾಸು ನಿರಂತರವಾಗಿ ಬಸವಣ್ಣನ ತಣ್ತೀಗಳನ್ನು  ನೆನಪಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಸಾಣೇಹಳ್ಳಿ  ವಚನಮೂರ್ತಿ ಶರಣ ಪಂಡಿತಾರಾಧ್ಯ ಶಿವಾಚಾರ್ಯ ಅವರು, ಬಸವಣ್ಣವರ ಬದುಕೇ ಒಂದೇ ಸಂದೇಶ ವಾಗಿದೆ ಎಂದು ಹೇಳುತ್ತಾ, ಸಾಮಾಜಿಕ ಸಂಬಂಧಗಳಲ್ಲಿ ಬಿರುಕು ಮೂಡಿಸಿದ ಶ್ರೇಷ್ಠತೆಯ ವ್ಯಸನವನ್ನು ಅಲ್ಲಗಳೆಯುತ್ತ, ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ “ಹತ್ತಿರವಿದ್ದರು ದೂರ ನಿಲ್ಲುವೆವು’ ಹಾಗೂ ಮಾದಾರಾ ಚೆನ್ನಯ್ಯನವರ ವಚನ ಉತ್ಛರಿಸುತ್ತಾ “ನಡೆ ನುಡಿ ಸಿದ್ಧಾಂತವಾದರೆ, ಕುಲ ಹೊಲೆ, ಸೂತಕವೆಲ್ಲಿ ?’, ಹಾಗೆಯೇ ಬಸವಣ್ಣ ಪ್ರತಿಪಾದಿಸಿದ್ದ ವೈಜ್ಞಾನಿಕವಾದ ಲಿಂಗಾಯತ ಧರ್ಮ ಮತ್ತು ಆದರ್ಶವಾದ ಸಾಮಾಜಿಕ ಜೀವನದ ಕಲ್ಪನೆಯನ್ನು  12ನೇ ಶತಮಾನದಲ್ಲಿ ಮಾಡಿ ತೋರಿಸಿದರು. ಅದಕ್ಕೆ ಸಾಕ್ಷಿ  “ಅನುಭವ ಮಂಟಪ’ ಎಂದು ಹೇಳಿ ಎಲ್ಲ ಪ್ರೇಕ್ಷಕ ಶರಣ ಶರಣೆಯರ ಕಿವಿಯಲ್ಲಿ ಬಸವಣ್ಣನ ಕೀರ್ತಿ, ಮನದಲ್ಲಿ ಸಮ ಸಮಾಜದ ಮೌಲ್ಯಗಳನ್ನು  ತುಂಬಿದರು. ವಚನಗಳೇ ಲಿಂಗಾಯತರ ಸಂವಿಧಾನ. ಆ ಮೌಲ್ಯಗಳನ್ನು ಅಳವಡಿಸಿಕೊಂಡು ಮೌಡ್ಯವನ್ನು ಅಳಿಸಬೇಕೆಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಐ.ಎ.ಎಸ್‌. ಅಧಿಕಾರಿ, ಜಾಗತಿಕ ಲಿಂಗಾಯಿತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ, ಶರಣ ಶಿವಾನಂದ ಜಾಮದರ ಅವರು ಮಾತನಾಡಿ, ಮಹಾಮಾರಿ ಮಾಯವಾಗಲಿ ಅಂತ ಪ್ರಾರ್ಥನೆ ಮಾಡೋಣ. ಮುಂಬರುವ ದಿನಗಳಲ್ಲಿ ಭೌತಿಕವಾಗಿ ಬಸವ ಜಯಂತಿಯನ್ನು ಆಚರಿಸೋಣ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ – ಸಾಗರೋತ್ತರ ಘಟಕವು ಇನ್ನಷ್ಟು ಬೆಳೆಯಲಿ. ತಣ್ತೀ ಪ್ರಚಾರಕ್ಕೆ  ಪೂರಕವಾದ ಯೋಜನೆಗಳನ್ನು ಹಾಕಿಕೊಳ್ಳಿ ಎಂದು ಹೇಳಿ, ಮಾಜಿ ಮಹಾಪೌರ ಶರಣೆ ಗಂಗಾಬಿಕೆ ಮಲ್ಲಿಕಾರ್ಜುನ ಅವರ ಕೆಲಸಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರ‌ು.

ಚಿಂತಕರಾದ ಡಾ| ಜೆ.ಎಸ್‌. ಪಾಟೀಲ್‌, ನಟ ಲೋಹಿತಾಶ್ವ, ಸಾಹಿತಿ ಡಾ| ವೀರಣ್ಣ ರಾಜೂರು, ಪುರುಷೋತ್ತಮ ಬಿಳಿನೆಲೆ, ನಟ, ವಚನ ಗಾಯಕರಾದ ಶರತ್‌ ಲೋಹಿತಾಶ್ವ ಮೊದಲಾದವರು ಬಸವ ಜಯಂತಿ ಪ್ರಯುಕ್ತ ಕಳುಹಿಸಿರುವ  ಸಂದೇಶಗಳನ್ನು ಪ್ರಸಾರ ಮಾಡಲಾಯಿತು.

ಜಾಗತಿಕ ಲಿಂಗಾಯಿತ ಮಹಾಸಭಾದ ಸಾಗರೋತ್ತರ ಘಟಕದ ಮಸ್ಕತ್‌ ಅಧ್ಯಕ್ಷರಾದ ಪ್ರಕಾಶ್‌ ಉಳ್ಳೇಗಡ್ಡಿ  ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಘಟಕ ಹಾಕಿಕೊಂಡಿರುವ ಯೋಜನೆಗಳನ್ನು  ತಿಳಿಸಿದರು.

ಸಮಿತಿಯ ಉಪಾಧ್ಯಕ್ಷರಾದ ರಾವುಂದುರು ಶಿವಕುಮಾರ್‌ ಸಿಡ್ನಿಯಿಂದ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ಲಿಂಗದಳ್ಳಿ  ಯುಎಇಯಿಂದ, ಸಮನ್ವಯ ಮತ್ತು ಸಂವಹನ ಸಮಿತಿಯ ಭೀಮ ಹಂಗರಗೆ,  ಮಸ್ಕತ್‌ನಿಂದ, ಕಾರ್ಯದರ್ಶಿ ಸಂತೋಷ ಕೆ. ಸ್ಯಾನ್‌ಫ್ರಾನ್ಸಿಸ್ಕೋದಿಂದ ಪಾಲ್ಗೊಂಡಿದ್ದರು.

ಘಟಕದ ಲಂಡನ್‌ನ ಖಜಾಂಚಿ ಬಸವ ಪಾಟೀಲ್‌ ಅವರು ಜಾಗತಿಕ ಲಿಂಗಾಯಿತ ಮಹಾಸಭಾ – ಸಾಗರೋತ್ತರ ಘಟಕದ ಕಿರು ಪರಿಚಯ ಮಾಡಿಕೊಟ್ಟರು.

ಬೆಲ್ಜಿಯಂನ ಮಂಜುನಾಥ ವಣಗೆರೆ ವಂದಿಸಿದರು. ಬಳಿಕ ಬೆಂಗಳೂರಿನ ಆದರ್ಶ ಸುಗಮ ಸಂಗೀತ ತಂಡದಿಂದ ವಚನ ಗಾಯನ ನಡೆಯಿತು.

ಕಾರ್ಯಕ್ರಮದಲ್ಲಿ ಬಸವ ಸಮಿತಿ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ದುಬೈ, ಬಹರೈನ್‌, ವಚನ ಮಂಟಪ ವೇದಿಕೆ, ಮಸ್ಕತ್‌, ಓಮನ್‌, ಗ್ಲೋಬಲ್‌ ಬಸವ ಫೌಂಡೇಶನ್‌, ಇಟಲಿ ಕನ್ನಡ ಸಂಘ, ವಚನ ಕೂಟ, ಸಿಂಗಾಪುರ, ಸಾಗರೋತ್ತರ ಕನ್ನಡಿಗರು, ಯು.ಕೆ. ಸಂಘಟನೆ ಪ್ರಮುಖರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.