ಒಂದು ಗುಂಗಿನ ಒಳಗೆ  ಒಂದಲ್ಲ; ನೂರಾರು ಸ್ವರಗಳು!


Team Udayavani, Jun 19, 2021, 10:43 PM IST

desiswara

ಅಲ್ಲಿ ನೂರಾರು ಕೊಠಡಿಗಳು. ಒಂದೊಂದು ಸಾಲಿನಲ್ಲೂ ಪ್ರತಿ ಹತ್ತು ಕೊಠಡಿಗಳನ್ನು ಕಾಣಬಹುದು. ಈ ಕೊಠಡಿಗಳಿಗೆ ಹತ್ತಿರದ ಊರಿನ ಹೆಸರುಗಳನ್ನು ಇಡಲಾಗಿದೆ. ಅಲ್ಲಲ್ಲಿ ಪುಟ್ಟ ಪುಟ್ಟ ಸಭಾಂಗಣಗಳು. ಎಲ್ಲ ಮೂಲೆಯಲ್ಲಿಯೂ ಒಬ್ಬೊಬ್ಬ ವಯಸ್ಸಾದವರು ಕುಳಿತಿದ್ದಾರೆ. ಅವರದ್ದೇ ಲೋಕದಲ್ಲಿದ್ದಾರೆ. ಕೆಲವರಿಗೆ ಕಣ್ಣು ಕಾಣದು, ಹಲವರಿಗೆ ಕಿವಿ ಕೇಳದು, ಇನ್ನು ಕೆಲವರು ನಡೆಯಲು ಕಷ್ಟ ಪಡುತಿಹರು, ಕೆಲವರಿಗೆ ಎಲ್ಲದ ರಲ್ಲೂ ಅನಾಸಕ್ತಿ. ಹೀಗೆ ಬದುಕಿನ ವಿಶ್ವರೂಪದರ್ಶನವಾಗಿತ್ತು.

ಸಂಗೀತ ಒಂದು ಧ್ಯಾನ. ಸ್ವರಗಳ ಸಂಭಾಷಣೆಯನ್ನು ಅರಿತು, ಅದನ್ನು ತನ್ನ ಧ್ವನಿಯಲ್ಲಿ ಅಥವಾ ಒಂದು ವಾದ್ಯದಿಂದ ಹೊರತರುವ ಪ್ರಕ್ರಿಯೆ ಒಂದು ಸುಂದರ ಅನುಭವ. ಇದನ್ನು ಅನುಭವಿಸಲಿಕ್ಕೆ  ಸ್ವರಗಳನ್ನು ವರ್ಷಗಟ್ಟಲೆ ಅರಿತು, ಕಲಿತು ಹೊರತರುವುದು ಮುಖ್ಯವಾದರೆ, ಸುಮ್ಮನೆ ಹಾಡುಗಳನ್ನು ಸಮಚಿತ್ತವಾಗಿ ಕೇಳಿಸಿಕೊಂಡರೂ ಸಾಕು ಅದು ಅನುಭವಕ್ಕೆ ಸಿಗುತ್ತದೆ. ಹೀಗೆ ಕೇಳುವಾಗ ಅದು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿ, ಮನಸ್ಸು ನೆಮ್ಮದಿಯಿಂದಿರುತ್ತದೆ ಹಾಗೂ ಪ್ರತಿಕ್ಷಣವನ್ನೂ ಅನುಭವಿಸಲು ಸಿದ್ಧವಾಗುತ್ತದೆ.

ಪಾಶ್ಚಾತ್ಯ ದೇಶಗಳಲ್ಲಿ ಸಂಗೀತದ‌ ಒಲವು ಹೆಚ್ಚು. ಅದರಲ್ಲೂ ಮನಸ್ಸಿನ ಮೇಲೆ ಸಂಗೀತದ ಅನುಕೂಲಗಳು ಹೆಚ್ಚು ಎಂದು ವಿಜ್ಞಾನ ತೋರಿಸಿ ಕೊಟ್ಟಿರುವುದರಿಂದ ಎಲ್ಲ ದೇಶಗಳಲ್ಲೂ ಸಣ್ಣ ವಯಸ್ಸಿಗೇ ಸಂಗೀತವನ್ನು ಪರಿಚಯಿಸಲಾಗುತ್ತದೆ. ಇದರಿಂದಾಗಿ ಇತ್ತೀಚೆಗೆ “ಮ್ಯೂಸಿಕ್‌ ಥೆರಪಿ’ಯೂ ಬಹುಬೇಡಿಕೆಯಲ್ಲಿದೆ. ಈ ಥೆರಪಿಗೆ ನಮ್ಮ ವಾಕ್‌ ಚಿಕಿತ್ಸೆಯ ಹಾಗೆ ವಯೋಮಿತಿಯಿಲ್ಲ. ಪುಟ್ಟ ಮಗುವಿನಿಂದ ಹಿಡಿದು, ದೊಡ್ಡವರ ತನಕ ಎಲ್ಲರೂ ಸಂಗೀತದ, ನಾದದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ನಾನು ಕೆಲಸ ಮಾಡುತ್ತಿರುವ ಕ್ಲಿನಿಕ್‌ನಲ್ಲೂ ಈ ಥೆರಪಿಯೂ ಲಭ್ಯವಿರುವ ಕಾರಣ ನನಗೆ ಇದರ ಲಾಭವನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿತು. ಸಂಗೀತವನ್ನು ಕೆಲವರು ಜೀವನ ಪರ್ಯಂತ ಅಭ್ಯಾಸ ಮಾಡುತ್ತಾರೆ. ಇದೊಂದು ಆಳವಾದ ಸಮುದ್ರದ ಹಾಗೆ. ಎಷ್ಟೇ ಈಜಿದರೂ, ಎಷ್ಟೇ ಆಳಕ್ಕೆ ಧುಮುಕಿದರೂ ಅದಕ್ಕೊಂದು ಕೊನೆಯೇ ಇಲ್ಲ ಎನ್ನುವ ಭಾವ ಕಾಡುತ್ತದೆ. ಇನ್ನೂ ಕಲಿಯಬೇಕು, ನನ್ನ ಮನಸ್ಸನ್ನು ಸಂಗೀತ ಸಾಗರದಲ್ಲಿ ಮುಳುಗಿಸಲೇಬೇಕು ಎಂಬ ಹಠ ಹೆಚ್ಚುತ್ತಲೇ ಹೋಗುತ್ತದೆ. ಈ ಸಂಗೀತದ ಬೇರೊಂದು ಮುಖ ನನಗೆ ಇತ್ತೀಚೆಗೆ ಅರ್ಥವಾದದ್ದು ಸಂಗೀತ ಥೆರಪಿಯ ನೋಡಲು ಹೋದಾಗ.

ಆಸ್ಟ್ರೇಲಿಯದಲ್ಲಿ ಬೇರೆ ದೇಶಗಳಿಂದ ಎಷ್ಟೋ ವರ್ಷಗಳ ಹಿಂದೆ ವಲಸೆ ಬಂದವರು ಹೆಚ್ಚು. ಹೀಗೆ ಬಂದವರೆಲ್ಲರೂ ಇಲ್ಲಿಯ ವ್ಯವಸ್ಥೆಗಳನ್ನು ನೋಡಿ ತಮ್ಮ ದೇಶಕ್ಕೆ ವಾಪಸ್ಸಾಗದೆ ಇಲ್ಲಿಯವ

ರಾಗಿಯೇ ಉಳಿದುಬಿಡುತ್ತಾರೆ. ಇಲ್ಲಿ ಇವರಿಗೆ ವಯಸ್ಸಾದಾಗ ಆರಾಮವಾಗಿ ಇರಲೆಂದೇ ಸರಕಾರ  ಬಹಳಷ್ಟು “ಏಜ್‌x ಕೇರ್‌’ಗಳನ್ನು ನಿರ್ಮಿಸಿದೆ. ಇದು ಯಶಸ್ವಿಯಾಗಿದೆ ಕೂಡ. ನಾನು ಮೊದಲನೇ ದಿನ ನಮ್ಮ ಮ್ಯೂಸಿಕ್‌ ಥೆರಪಿಸ್ಟಿನ ಜತೆ ಒಂದು ಏಜ್‌x ಕೇರ್‌ಗೆ ಹೋಗಿದ್ದು ಅದೊಂದು ಮರೆಯಲಾರದ ಅನುಭವ.

ಅಲ್ಲಿ ನೂರಾರು ಕೊಠಡಿಗಳು. ಪ್ರತೀ ಹತ್ತು ಕೊಠಡಿಗಳನ್ನು ಒಂದೊಂದು ಸಾಲಲ್ಲಿ ಕಾಣಬಹುದು. ಈ ಕೊಠಡಿಗಳಿಗೆ ಹತ್ತಿರದ ಊರಿನ ಹೆಸರುಗಳನ್ನು ಇಡಲಾಗಿದೆ. ಅಲ್ಲಲ್ಲಿ ಪುಟ್ಟ ಪುಟ್ಟ ಸಭಾಂಗಣಗಳು. ಎಲ್ಲ ಮೂಲೆಯಲ್ಲಿಯೂ ಒಬ್ಬೊಬ್ಬ ವಯಸ್ಸಾದವರು ಕುಳಿತಿದ್ದಾರೆ. ಅವರದ್ದೇ ಲೋಕದಲ್ಲಿದ್ದಾರೆ. ಕೆಲವರಿಗೆ ಕಣ್ಣು ಕಾಣದು, ಹಲವರಿಗೆ ಕಿವಿ ಕೇಳದು, ಇನ್ನು ಕೆಲವರು ನಡೆಯಲು ಕಷ್ಟ ಪಡುತಿಹರು, ಕೆಲವರಿಗೆ ಎಲ್ಲದರಲ್ಲೂ ಅನಾಸಕ್ತಿ. ಹೀಗೆ ವಿಶ್ವರೂಪದರ್ಶನವಾಗಿತ್ತು.

ಇನ್ನು ಎಲ್ಲ ಕೊಠಡಿಯ ಬಾಗಿಲ ಮೇಲೆ ಅಲ್ಲಿಯ ನಿವಾಸಿಯ ಭಾವಚಿತ್ರ ಅಂಟಿಸಿದ್ದರು. ಜತೆಗೊಂದು ಪುಟ್ಟ ಪರಿಚಯ ಪತ್ರ. ಅದು ಅವರವರ ಧ್ವನಿಯಲ್ಲಿತ್ತು. ಒಟ್ಟಾರೆಯಾಗಿ ಅವರ ಪರಿಚಯ, ಅವರ ಇಷ್ಟ-ಕಷ್ಟ, ಹವ್ಯಾಸಗಳು, ಇಷ್ಟದ ಹಾಡುಗಳು ಎಲ್ಲವು ಇದ್ದವು. ಹಾಗಾಗಿ ಯಾರೇ ಹೊಸಬರು ಬಂದರೂ ಅವರಲ್ಲಿ ಹೊಸದಾಗಿ ಪರಿಚಯ ಕೇಳುವ ಪ್ರಮೇಯ ಬರುವುದಿಲ್ಲ. ಇನ್ನು ಕೊಠಡಿಯ ಒಳ ಹೋದರೆ, ಪ್ರತಿಯೊಬ್ಬರ ಜೀವನದ ಚಿತ್ರ ಅಲ್ಲಿ ದಾಖಲಾಗಿರುತ್ತದೆ. ಅಂದರೆ, ಅವರ ಕುಟುಂಬದವರ ಚಿತ್ರ, ಮೊಮ್ಮಕ್ಕಳು ಅಜ್ಜ  ಅಜ್ಜಿಗೆ ಪ್ರೀತಿಯಿಂದ ಬರೆದು ಕಳಿಸಿದ ಚಿತ್ರಗಳು, ಗೊಂಬೆಗಳು, ಹೀಗೆ ಕೊಠಡಿ ತುಂಬೆಲ್ಲ ಇಲ್ಲಿ ಯಾರು ವಾಸಿಸುತ್ತಿದ್ದಾರೆ ಅವರ ಜೀವನವನ್ನು ಜಗತ್ತಿಗೆ ಹೇಳ್ಳೋ ಚಿತ್ರಗಳು. ಇನ್ನು ಇಲ್ಲಿಯ ನಿವಾಸಿ ಕೊಠಡಿಯ ಮೂಲೆಯಲ್ಲೆಲ್ಲೋ ಮಲಗಿರುತ್ತಾರೆ, ಕುಳಿತು ಕನಸು ಕಾಣುತ್ತಿರುತ್ತಾರೆ ಅಥವಾ ಯಾರಧ್ದೋ ನಿರೀಕ್ಷೆಯಲ್ಲಿ ಚಡಪಡಿಸುತ್ತಿರುತ್ತಾರೆ.

ಅಂದು “ಜೋಯನ’ (ಹೆಸರು ಬದಲಿಸಿದೆ) ಎಂಬವರನ್ನು  ನೋಡಲು ಹೋಗಿದ್ದೆವು. ಅವರಿಗೆ 87 ವರ್ಷ. ನಮ್ಮನ್ನು ನೋಡಿದ ತತ್‌ಕ್ಷಣ ಬಂದು “ನನಗೊಂದು ಸಹಾಯ ಮಾಡುತ್ತೀರ? ನಿಮ್ಮ ಬಳಿ ಇರುವ ಫೋನ್‌ ಕೊಡಿ, ನನ್ನ ಮೊಮ್ಮಗಳೊಡನೆ ಮಾತನಾಡಬೇಕು. ದಿನಾ ಇಷ್ಟೇ ಹೊತ್ತಿಗೆ ಫೋನ್‌ ಮಾಡುತ್ತಿದ್ದಳು. ಇಂದು ಮಾಡಿಲ್ಲ ಎಂದು ಚಡಪಡಿಸುತ್ತಿದ್ದರು. ನಾವು ಥೆರಪಿಗೆ ಹೋಗಿದ್ದ ಕಾರಣ, ಜೋಯಾನ ಅವರನ್ನು ಸಮಾಧಾನ ಪಡಿಸಿ, ಅವರಿಗಿಷ್ಟವಾದ ಹಾಡುಗಳನ್ನು ನುಡಿಸಿ ಹಾಡಲಾರಂಭಿಸಿದೆವು. ಯಾವುದೋ ಲೋಕದಲ್ಲಿರುವ ಹಾಗೆ ಅವರು ಐದು ನಿಮಿಷದಲ್ಲಿ ಚಡಪಡಿಕೆ ಎಲ್ಲವನ್ನು ಮರೆತು ಮಗುವಿನಂತೆ ಮುಗ್ಧತೆಯನ್ನು ತೋರುತ್ತ ನಮ್ಮೆದುರಿಗೆ ಕುಳಿತರು. ಹಾಡಿದ ಹಾಡು ಅವರನ್ನು ಅವರ ಹಳೆಯ ಜೀವನಕ್ಕೆ ಕರೆದುಕೊಂಡು ಹೋಗಿತ್ತು. ಕೆಲವು ಹಾಡುಗಳನ್ನು ಕೇಳಿ ನಕ್ಕರು. ಇನ್ನು ಕೆಲವಕ್ಕೆ ಜೋರಾಗಿ ಅತ್ತರು. ಇಷ್ಟಾಗುವಷ್ಟರಲ್ಲಿ ಅವರು ಮೆಲ್ಲನೆ ನಿದ್ದೆಗೆ ಜಾರಿದ್ದರು. ಮಗುವಿನಂತೆ ನಿದ್ದೆಯಲ್ಲಿ ನಗುತ್ತಿದ್ದರು. ನಿದ್ದೆಯಲ್ಲಿ ತನ್ನ ಕನಸನ್ನು ಬಾಯಿಬಿಟ್ಟು ಹೇಳತೊಡಗಿದ್ದರು. ಇನ್ನೇನು ಹೊರಡಬೇಕು ಎಂದುಕೊಂಡಿದ್ದ ನಾವು ಅವರ‌ ಕಥೆ ಕೇಳ್ಳೋಣ ಎಂದು ನಿಂತೆವು. ಅವರು ಹಾಡಿನ ಕೆಲವು ಸಾಲುಗಳನ್ನು ಹೇಳಿದರು, ತನ್ನ ಇನಿಯನ ನೆನಪು ಕೂಡ ಮಾಡಿಕೊಂಡರು. ಸಂಗೀತದ ಮಾಯೆ ಎಂದರೆ ಏನು? ಬದುಕಬೇಕೆಂಬ ಆತುರದಲ್ಲಿ ಎಲ್ಲೋ ಕಳೆದು ಹೋಗಿದ್ದ, ನಮ್ಮಲ್ಲೇ ಅಡಗಿಕೊಂಡ ಬಾಲ್ಯವನ್ನು, ಬಾಲಿಶತನವನ್ನು ಎಚ್ಚರಿಸುವುದೇ…?

ಸ್ಫೂರ್ತಿ,  ತಸ್ಮೇನಿಯಾ

ಟಾಪ್ ನ್ಯೂಸ್

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.